Ayur Satva

Ayur Satva Ayur Satva gives you the information and knowledge regarding principles of Ayurveda, treatment succ

06/08/2025

ಅನಾರೋಗ್ಯ ಎಂದರೇನು?

ದೋಷಗಳ, ಧಾತುಗಳ, ಮಲಗಳ ಆಧಾರವೇ ಮನುಷ್ಯನ ದೇಹ. ವಾತ, ಪಿತ್ತ ಮತ್ತು ಕಫಗಳೆಂಬುದೇ ತ್ರಿದೋಷಗಳು; ವಸಾ, ರಕ್ತ, ಮಾಂಸ, ಮೇದಸ್ಸು, ಎಲುಬು, ಮಜ್ಜಾ, ಶುಕ್ರ ಇವು ಏಳು ಸಪ್ತಧಾತುಗಳು. ಮಲ, ಮೂತ್ರ, ಬೆವರು ಮೊದಲಾದವುಗಳು ಮಲಗಳು.
ಇವೆಲ್ಲವೂ ಸಾಮ್ಯದಿಂದಿದ್ದರೆ ಆರೋಗ್ಯವೆನಿಸುತ್ತದೆ. ಯಾವುದೊಂದೂ ಹೆಚ್ಚಲೂ ಬಾರದು, ಕಡಿಮೆಯಾಗಲೂ ಬಾರದು; ಸಮತೆಯಿಂದಿರಬೇಕು. ಅದೇ ಆರೋಗ್ಯ. ಇವುಗಳು ಕ್ಷಯ ವೃದ್ಧಿಯಾಗಿ, ವೈಷಮ್ಯದಲ್ಲಿರುವುದೇ ಅನಾರೋಗ್ಯ.

05/08/2025

ಅಡಿಕೆಯ ಉಪಯೋಗಗಳು ಎಷ್ಟಿವೆ ನೋಡಿ |

31/07/2025

ಕಫ ಪ್ರಕೋಪದ ಲಕ್ಷಣಗಳು

ಶರೀರದಲ್ಲಿ ಹೊಳಪು ಉಂಟಾಗುವುದು, ಸಿಹಿ ಕಾಣಿಸುವುದು, ಬೊಜ್ಜು ಕಾಣುವುದು, ಕೆಲಸದಲ್ಲಿ ಚುರುಕುತನ ಕಡಿಮೆಯಾಗುವುದು, ಮೆಲು ನಡೆಯು ಬರುವುದು, ಕೂತಲ್ಲಿಯೇ ಕೂತಿರುವಂತೆ ಮಾಡುವುದು, ಕುಳಿತುಕೊಳ್ಳುವುದರಲ್ಲಿಯೇ ತೃಪ್ತಿಯಾಗುವಂತೆ ತೋರುವುದು, ಮಾಂಸಖಂಡವು ಇಟ್ಟಿರುವಂತೆ ಕಾಣುವುದು, ಉಬ್ಬುವುದು, ತಣ್ಣಗಾಗಿರುವುದು, ಭಾರ ಹೆಚ್ಚಾಗುವುದು, ತುರಿಕೆ ಉಂಟಾಗುವುದು, ಯಾವಾಘಲೂ ನಿದ್ದೆ ಬರುವುದು- ಇವೆಲ್ಲಾ ಕಫ ಪ್ರಕೋಪದ ಲಕ್ಷಣಗಳು; ಈ ಲಕ್ಷಣಗಳು ರೋಗಿಯಲ್ಲಿ ಕಾಣಿಸಿದಾಗ ಕಫ ಪ್ರಕೋಪ ರೋಗವೆಂದು ತಿಳಿಯಬೇಕಾಗಿದೆ.

31/07/2025

‘ಎಸಿ’ ಯಿಂದ ನಮ್ಮ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? |

ಪಿತ್ತ ಪ್ರಕೋಪದ ಲಕ್ಷಣಗಳುಮೈ ಸುಡುವುದು, ಅಂಗಾಲು ಸುಡುವುದು, ಸಿಟ್ಟು ಬರುವುದು, ಹೆಚ್ಚು ಆಶೆ ಉಂಟಾಗುವುದು, ಮೈ ನೋಯುವುದು, ಆಯಾಸವಾಗುವುದು, ಕಾ...
29/07/2025

ಪಿತ್ತ ಪ್ರಕೋಪದ ಲಕ್ಷಣಗಳು

ಮೈ ಸುಡುವುದು, ಅಂಗಾಲು ಸುಡುವುದು, ಸಿಟ್ಟು ಬರುವುದು, ಹೆಚ್ಚು ಆಶೆ ಉಂಟಾಗುವುದು, ಮೈ ನೋಯುವುದು, ಆಯಾಸವಾಗುವುದು, ಕಾರ ಅಥವಾ ಹುಳಿಗಂಧವೇಳುವುದು, ಕೊಳೆತ ದುರ್ಗಂಧದಂತೆ ಮೈ ನಾರುವುದು, ಬೆವರುವುದು, ಮೂರ್ಛೆ ಬರುವುದು, ಅತಿಯಾಗಿ ಬಾಯಾರುವುದು, ಭ್ರಮೆಯಾಗುವುದು, ಮೈ ಹಳದಿಯಾಗುವುದು ಮತ್ತು ಹಸಿರು ಬಣ್ಣ ಕಾಣುವುದು- ಇವೆಲ್ಲಾ ಪಿತ್ತ ಪ್ರಕೋಪದ ಲಕ್ಷಣಗಳು. ರೋಗಿಯಲ್ಲಿ ಈ ಲಕ್ಷಣಗಳು ಕಾಣಿಸಿದಾಗ ಪಿತ್ತ ಕೋಪದಿಂದುಂಟಾದ ರೋಗವೆಂದು ತಿಳಿಯತಕ್ಕದ್ದು.

28/07/2025

ವಾತ ಪ್ರಕೋಪದ ಲಕ್ಷಣಗಳು

ಶರೀರವು ದೊರಗುಬೀಳುವುದು, ಮುರುಟುವುದು; ಅಲ್ಲಲ್ಲಿ ಉಬ್ಬುವುದು, ಅಲ್ಲಲ್ಲಿ ಮರಗಟ್ಟುವುದು, ನಿದ್ದೆ ಬರುವಂತಾಗುವುದು, ಇರುವೆ ಹರಿದಂತಾಗುವುದು, ಪುಳಕ ಉಂಟಾಗುವುದು, ಕ್ಷೀಣಿಸುವುದು, ಕಪ್ಪಾಗುವುದು, ಶಿಥಿಲತೆ ಉಂಟಾಗಿ ಬಲ ಕುಂದುವುದು, ಆಯಾಸ ಹೆಚ್ಚುವುದು – ಇವೆಲ್ಲಾ ವಾತಪ್ರಕೋಪದ ಲಕ್ಷಣಗಳು.
ಈ ಚಿನ್ಹೆಗಳಿದ್ದಾಗ ವಾತಪ್ರಕೋಪದಿಂದ ಉಂಟಾದ ರೋಗವೆಂದು ಹೇಳತಕ್ಕದ್ದು.

27/07/2025

ಮೊಡವೆಗಳ ಸಮಸ್ಯೆ ಪರಿಹಾರಕ್ಕೆ 5 ಸುಲಭ ಸೂತ್ರಗಳು |

27/07/2025

ಧನ್ವಂತರಿ ಸಂಹಿತಾ

ಸಿಹಿ, ಹುಳಿ, ಉಪ್ಪು ಹಾಗೂ ಎಣ್ಣೆ, ತುಪ್ಪ ಮುಂತಾದ ಸ್ನಿಗ್ದ ಪದಾರ್ಥಗಳ ಅಧಿಕ ಸೇವನೆಯಿಂದ, ಘನ, ಜಡ ಹಾಗೂ ಶೀತ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ, ಹೊಸ ಅಕ್ಕಿಯ ಅನ್ನ ಉಣ್ಣುವುದರಿಂದ, ತಿಳಿ ಹಿಡಿದ ಅನ್ನ ಸೇವನೆಯಿಂದ, ಆನೂಪ ಪ್ರಾಣಿಗಳ ಮಾಂಸ ಮುಂತಾದವುಗಳನ್ನು ತಿನ್ನುವುದರಿಂದ ಕೂಡಾ ಹಾಗೂ ವ್ಯಾಯಾಮ ಮಾಡದಿರುವುದರಿಂದ, ಹಗಲು ನಿದ್ದೆಗೈಯುವುದರಿಂದ, ಸುಖಾಸನ ಮತ್ತು ಸುಖ ಶಯ್ಯೆಯಲ್ಲಿ ಬಿದ್ದುಕೊಂಡಿರುವುದರಿಂದ ಕಫವು ಉಲ್ಬಣ ಹೊಂದುವುದು; ಹಾಗೆಯೇ ಉಂಡ ಕೂಡಲೇ ಹಾಗೂ ವಸಂತ ಋತುವಿನಲ್ಲಿ ಕಫವು ಪ್ರಕೋಪಗೊಳ್ಳುವುದು.

ಅಧ್ಯಾಯ 1ರಲ್ಲಿ ಧನ್ವಂತರಿಯು ಶುಶ್ರುತನಿಗೆ ಹೇಳಿದ್ದು..

26/07/2025

ಆಯುರ್ವೇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ನಮ್ಮ ‘ಆಯುರ್ ಸತ್ವ’ ಪೇಜ್ ಫಾಲೋ ಮಾಡಿ.

26/07/2025

ಧನ್ವಂತರಿ ಸಂಹಿತಾ

ಮಳೆ ಬೀಳುವಾಗ, ಅನ್ನವು ಕರಗಿದಾಗ ಮತ್ತು ಸಂಜೆಯ ಹೊತ್ತಿನಲ್ಲಿ ವಾಯು ಪ್ರಕೋಪಗೊಳ್ಳುತ್ತದೆ. ಹೆಚ್ಚು ಬಿಸಿ ಉಣ್ಣುವುದರಿಂದ ಹುಳಿ, ಉಪ್ಪು, ಕ್ಷಾರ ಹೆಚ್ಚು ಸೇವಿಸುವುದರಿಂದ, ಕರಗದಾಗ ಉಣ್ಣುವುದರಿಂದ, ಕಡು ಬಿಸಿಲಿಗೆ ಹೋಗುವುದರಿಂದ ಪಿತ್ತವು ಪ್ರಕುಪಿತವಾಗುತ್ತದೆ.
ಉಂಡು ಕರಗುತ್ತಿರುವಾಗ ಪುನಃ ಉಣ್ಣುವುದರಿಂದ, ಮಧ್ಯಾಹ್ನದಲ್ಲಿ ಹೆಚ್ಚು ಆಹಾರ ಸೇವನೆಯಿಂದ, ಮಳೆ ದೂರ ಸರಿದಾಗ ಹಾಗೂ ಗ್ರೀಷ್ಮ ಋತುವಿನಲ್ಲಿ ಅಥವಾ ಮಧ್ಯರಾತ್ರಿಯಲ್ಲಿಯೂ ಪಿತ್ಥವು ಪ್ರಕೋಪಗೊಳ್ಳುತ್ತದೆ.

ಅಧ್ಯಾಯ 1ರಲ್ಲಿ ಧನ್ವಂತರಿಯು ಶುಶ್ರುತನಿಗೆ ಹೇಳಿದ್ದು..

26/07/2025

ಆಯುರ್ವೇದದ ಹೆಸರಿನಲ್ಲಿ ಜನಸಾಮಾನ್ಯರು ಮಾಡುತ್ತಿರುವ 5 ಮುಖ್ಯ ತಪ್ಪುಗಳು |

Address

Kengeri Satellite Town
Bangalore
560060

Telephone

+919036723369

Website

Alerts

Be the first to know and let us send you an email when Ayur Satva posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayur Satva:

Share