Udupinumerology

Udupinumerology Contact information, map and directions, contact form, opening hours, services, ratings, photos, videos and announcements from Udupinumerology, No-05 , 1st D Cross, LIC Colony, Yeshwanthpur, Bangalore.

*ಕಾರ್ತೀಕ_ಶುದ್ಧ_ದ್ವಾದಶಿ.**" ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.*ತನ್ನಿಮಿತ್ತ ನಿಮಗೆ ತುಲಸಿಯ ಕತೆ.ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವ...
27/11/2020

*ಕಾರ್ತೀಕ_ಶುದ್ಧ_ದ್ವಾದಶಿ.*

*" ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.*
ತನ್ನಿಮಿತ್ತ ನಿಮಗೆ ತುಲಸಿಯ ಕತೆ.

ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.
ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.
ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.

*ಉತ್ಥಾನದ್ವಾದಶಿ_ತುಲಸೀ_ವಿವಾಹ*

ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.
ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.
ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.

ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸಿ.
ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.
ಇದು ತುಳಸಿಯ ಶಕ್ತಿ.
ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.

ಜಲಂಧರಾಸುರನು ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣುವು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.
ಬೃಂದಾಳ ಪಾತಿವ್ರತ್ಯವನ್ನು ಜಲಂಧರನ ರೂಪಧರಿಸಿ ಮೋಸದಿಂದ ಭಂಗ ಮಾಡಿ,ಅವಳೊಂದಿಗೆ ಸುಖಿಸಿ ಶೀಲಹರಣ ಮಾಡಿದ್ದರಿಂದ ಕುಪಿತಳಾದ ಬೃಂದೆಯು,
*ನನಗೆ ಪತಿಯೊಂದಿಗೆ ಸಮಾಗಮಕ್ಕೆ ಅನರ್ಹಳಾಗುವಂತೆ ಮಾಡಿ ಪತಿ ಸಂಗಮ ಸುಖ ವಂಚಿತಳಾಗಿಸಿದ ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ" ಎಂದು ವಿಷ್ಣುವಿಗೆ ಶಾಪವಿತ್ತಳು.
ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ.ಪವಿತ್ರ ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು.
ಇದರ ಕುರುಹಾಗಿ ತುಲಸಿಕಟ್ಟೆಗೆ *ಬೃಂದಾವನ* ಎಂಬ ಹೆಸರು,
ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.
ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆನೆಲ್ಲಿಕಾಯಿಗೆ ಅಶೌಚ.
ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.

ತುಲಸಿಯು ಔಷಧೀಯ ಸಸ್ಯ.
ಜಲಮಾಲಿನ್ಯ,ಅರ್ಬುದ,ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,
ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.

ತುಳಸಿಯಲ್ಲಿ ಬಿಳಿ ಮತ್ತು ಕರಿ_ತುಳಸಿ ಎಂದು ಎರಡು ಪ್ರಭೇದಗಳಿವೆ.
*ರಾಮತುಳಸಿ,ಕೃಷ್ಣತುಳಸಿ* ಎಂಬ ಹೆಸರುಗಳೂ ಇವೆ.
ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.
ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.
ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.
ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ" ಯ ದಿನ.
ಹಾಗಾಗಿ *ಮಥನ_ದ್ವಾದಶಿ,ಕ್ಷೀರಾಬ್ಧಿ_ವ್ರತ*" ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.

ನಮಸ್ತುಲಸಿ ಕಲ್ಯಾಣೀ
ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ
ನಮಃ ಸಂಪತ್ಪ್ರದಾಯಿನೀ ||

ತುಲಸಿಯ ಬಗ್ಗೆ ಇನ್ನೊಂದು ಕತೆ ಇದೆ.

" ತುಲಸೀ "

ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.
ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು.
ಬ್ರಹ್ಮನು "ನಿನ್ನ ಕೋರಿಕೆ ಈಡೇರುತ್ತದೆ.
ಆದರೆ ನೀನು ಗಿಡವಾಗುವೆ" ಎಂದನು.

ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.
ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,
ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.
ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.
ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.
ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,
ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದ್ದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.

ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.
ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.

14/11/2020
11/11/2020

ಪ್ರಪಂಚಕ್ಕೆ ಸಿಹಿ ಸುದ್ಧಿ

20.11.20 ರಂದು ಗುರು
ಮಕರ ರಾಶಿ ಪ್ರವೇಶ

ಲೋಕ ಕಲ್ಯಾಣಕ್ಕಾಗಿ 59 ವರ್ಷಗಳ ನಂತರ ಗುರು ಮತ್ತು ಶನಿ ಒಂದು ವರ್ಷ ಒಟ್ಟಿಗೆ ಮಕರದಲ್ಲಿ

ಕರ್ಮ ಸ್ಥಾನವಾದ ಮಕರದಲ್ಲಿ ಗುರು ನೀಚನಾಗಿ ಮತ್ತು ಶನಿಯ ಜೋತೆಯಲ್ಲಿ ಇರುವದರಿಂದ ನೀಚಭಂಗವಾಗಿ ರಾಜಯೋಗ ಕೊಡುವನು ಮತ್ತು ಜಗತ್ ಪುರ್ನನಿರ್ಮಾಣಕ್ಕೆ ನಾಂದಿಯಾಗುವದು.

ಗುರು ವೈಧ್ಯಕಾರಕರು, ವೈಧ್ಯೋ ನಾರಾಯಣೋ ಹರಿ ಅನ್ನುವಹಾಗೆ, ಗುರು ವೈಧ್ಯರಾಗಿ ಪ್ರಪಂಚಕ್ಕೆ ಧಾರಿ ದೀಪವಾಗುವರು.
ಜೈ ಗುರುದೇವ🙏🙏

03/11/2020

ಅತ್ಯಂತ ಸ್ನೇಹಮಯ ರಾಶಿಗಳು

♌️ಸಿಂಹ
♎️ ತುಲಾ
♐️ಧನಸ್ಸು
♒️ಕುಂಭ
♓️ಮೀನ

UDUPI NUMEROLOGY near karumaremma Arch opposite to chowdeshwari bus stop, JP Park, Mathikere Bangalore-560022

UDUPI NUMEROLOGY near karumaremma Arch opposite to chowdeshwari bus stop, JP Park ,Mathikere Bangalore
28/10/2020

UDUPI NUMEROLOGY near karumaremma Arch opposite to chowdeshwari bus stop, JP Park ,Mathikere Bangalore

22/10/2020

🦈 🏺

ಮೀನ ಮತ್ತು ಕುಂಭ ರಾಶಿ ಜನಿತರಿಗೆ ಬಾಲ್ಯ-ಯವ್ವನದಲ್ಲಿ ಅಡಚನೆಗಳು ಹಾಗು ಸ್ವಲ್ಪ ಕೌಟುಂಬಿಕ ಸವಾಲುಗಳು ಕರ್ಮಫಲದಿಂದ ಒದಗಿದರು, ವಸ್ಸಾದಂತೆ ನೈಸರ್ಗಿಕ ಸಮತೋಲನದಿಂದ ಸಾಕಷ್ಟು ಜನರಿಗೆ ಶ್ರೀಮಂತಿಕೆ ದೊರೆಯುತ್ತದೆ.

*ಓಂ ಗಂ ಗಣಪತಿ ನಮಃ* *ಗಣೇಶ ಚತುರ್ಥಿ ಹಬ್ಬದ* *ಶುಭಾಶಯಗಳು...* 🌹🌹⚜️🌹🌹⚜️🌹🌹ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ ||ಓಂ ಗಕಾರರೂಪಾಯ ನಮಃಓಂ ಗಂಬೀ...
22/08/2020

*ಓಂ ಗಂ ಗಣಪತಿ ನಮಃ*
*ಗಣೇಶ ಚತುರ್ಥಿ ಹಬ್ಬದ* *ಶುಭಾಶಯಗಳು...*
🌹🌹⚜️🌹🌹⚜️🌹🌹

ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ ||

ಓಂ ಗಕಾರರೂಪಾಯ ನಮಃ
ಓಂ ಗಂಬೀಜಾಯ ನಮಃ
ಓಂ ಗಣೇಶಾಯ ನಮಃ
ಓಂ ಗಣವಂದಿತಾಯ ನಮಃ
ಓಂ ಗಣಾಯ ನಮಃ
ಓಂ ಗಣ್ಯಾಯ ನಮಃ
ಓಂ ಗಣನಾತೀತಸದ್ಗುಣಾಯ ನಮಃ
ಓಂ ಗಗನಾದಿಕಸೃಜೇ ನಮಃ
ಓಂ ಗಂಗಾಸುತಾಯ ನಮಃ
ಓಂ ಗಂಗಾಸುತಾರ್ಚಿತಾಯ ನಮಃ
ಓಂ ಗಂಗಾಧರಪ್ರೀತಿಕರಾಯ ನಮಃ
ಓಂ ಗವೀಶೇಡ್ಯಾಯ ನಮಃ
ಓಂ ಗದಾಪಹಾಯ ನಮಃ
ಓಂ ಗದಾಧರಸುತಾಯ ನಮಃ
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ
ಓಂ ಗಜಾಸ್ಯಾಯ ನಮಃ
ಓಂ ಗಜಲಕ್ಷ್ಮೀಪತೇ ನಮಃ
ಓಂ ಗಜಾವಾಜಿರಥಪ್ರದಾಯ ನಮಃ
ಓಂ ಗಂಜಾನಿರತಶಿಕ್ಷಾಕೃತಯೇ ನಮಃ
ಓಂ ಗಣಿತಙ್ಞಾಯ ನಮಃ
ಓಂ ಗಂಡದಾನಾಂಚಿತಾಯ ನಮಃ
ಓಂ ಗಂತ್ರೇ ನಮಃ
ಓಂ ಗಂಡೋಪಲಸಮಾಕೃತಯೇ ನಮಃ
ಓಂ ಗಗನವ್ಯಾಪಕಾಯ ನಮಃ
ಓಂ ಗಮ್ಯಾಯ ನಮಃ
ಓಂ ಗಮನಾದಿವಿವರ್ಜಿತಾಯ ನಮಃ
ಓಂ ಗಂಡದೋಷಹರಾಯ ನಮಃ
ಓಂ ಗಂಡಭ್ರಮದ್ಭ್ರಮರಕುಂಡಲಾಯ ನಮಃ
ಓಂ ಗತಾಗತಙ್ಞಾಯ ನಮಃ
ಓಂ ಗತಿದಾಯ ನಮಃ
ಓಂ ಗತಮೃತ್ಯವೇ ನಮಃ
ಓಂ ಗತೋದ್ಭವಾಯ ನಮಃ
ಓಂ ಗಂಧಪ್ರಿಯಾಯ ನಮಃ
ಓಂ ಗಂಧವಾಹಾಯ ನಮಃ
ಓಂ ಗಂಧಸಿಂಧುರಬೃಂದಗಾಯ ನಮಃ
ಓಂ ಗಂಧಾದಿಪೂಜಿತಾಯ ನಮಃ
ಓಂ ಗವ್ಯಭೋಕ್ತ್ರೇ ನಮಃ
ಓಂ ಗರ್ಗಾದಿಸನ್ನುತಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರಭಿದೇ ನಮಃ
ಓಂ ಗರ್ವಹರಾಯ ನಮಃ
ಓಂ ಗರಳಿಭೂಷಣಾಯ ನಮಃ
ಓಂ ಗವಿಷ್ಠಾಯ ನಮಃ
ಓಂ ಗರ್ಜಿತಾರಾವಾಯ ನಮಃ
ಓಂ ಗಭೀರಹೃದಯಾಯ ನಮಃ
ಓಂ ಗದಿನೇ ನಮಃ
ಓಂ ಗಲತ್ಕುಷ್ಠಹರಾಯ ನಮಃ
ಓಂ ಗರ್ಭಪ್ರದಾಯ ನಮಃ
ಓಂ ಗರ್ಭಾರ್ಭರಕ್ಷಕಾಯ ನಮಃ
ಓಂ ಗರ್ಭಾಧಾರಾಯ ನಮಃ
ಓಂ ಗರ್ಭವಾಸಿಶಿಶುಜ್ಞಾನಪ್ರದಾಯ ನಮಃ
ಓಂ ಗರುತ್ಮತ್ತುಲ್ಯಜವನಾಯ ನಮಃ
ಓಂ ಗರುಡಧ್ವಜವಂದಿತಾಯ ನಮಃ
ಓಂ ಗಯೇಡಿತಾಯ ನಮಃ
ಓಂ ಗಯಾಶ್ರಾದ್ಧಫಲದಾಯ ನಮಃ
ಓಂ ಗಯಾಕೃತಯೇ ನಮಃ
ಓಂ ಗದಾಧರಾವತಾರಿಣೇ ನಮಃ
ಓಂ ಗಂಧರ್ವನಗರಾರ್ಚಿತಾಯ ನಮಃ
ಓಂ ಗಂಧರ್ವಗಾನಸಂತುಷ್ಟಾಯ ನಮಃ
ಓಂ ಗರುಡಾಗ್ರಜವಂದಿತಾಯ ನಮಃ
ಓಂ ಗಣರಾತ್ರಸಮಾರಾಧ್ಯಾಯ ನಮಃ
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ
ಓಂ ಗರ್ತಾಭನಾಭಯೇ ನಮಃ
ಓಂ ಗವ್ಯೂತಿದೀರ್ಘತುಂಡಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗರ್ಹಿತಾಚಾರದೂರಾಯ ನಮಃ
ಓಂ ಗರುಡೋಪಲಭೂಷಿತಾಯ ನಮಃ
ಓಂ ಗಜಾರಿವಿಕ್ರಮಾಯ ನಮಃ
ಓಂ ಗಂಧಮೂಷವಾಜಿನೇ ನಮಃ
ಓಂ ಗತಶ್ರಮಾಯ ನಮಃ
ಓಂ ಗವೇಷಣೀಯಾಯ ನಮಃ
ಓಂ ಗಹನಾಯ ನಮಃ
ಓಂ ಗಹನಸ್ಥಮುನಿಸ್ತುತಾಯ ನಮಃ
ಓಂ ಗವಯಚ್ಛಿದೇ ನಮಃ
ಓಂ ಗಂಡಕಭಿದೇ ನಮಃ
ಓಂ ಗಹ್ವರಾಪಥವಾರಣಾಯ ನಮಃ
ಓಂ ಗಜದಂತಾಯುಧಾಯ ನಮಃ
ಓಂ ಗರ್ಜದ್ರಿಪುಘ್ನಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಗಜಚರ್ಮಾಮಯಚ್ಛೇತ್ರೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಗಣಾರ್ಚಿತಾಯ ನಮಃ
ಓಂ ಗಣಿಕಾನರ್ತನಪ್ರೀತಾಯ ನಮಃ
ಓಂ ಗಚ್ಛತೇ ನಮಃ
ಓಂ ಗಂಧಫಲೀಪ್ರಿಯಾಯ ನಮಃ
ಓಂ ಗಂಧಕಾದಿರಸಾಧೀಶಾಯ ನಮಃ
ಓಂ ಗಣಕಾನಂದದಾಯಕಾಯ ನಮಃ
ಓಂ ಗರಭಾದಿಜನುರ್ಹರ್ತ್ರೇ ನಮಃ
ಓಂ ಗಂಡಕೀಗಾಹನೋತ್ಸುಕಾಯ ನಮಃ
ಓಂ ಗಂಡೂಷೀಕೃತವಾರಾಶಯೇ ನಮಃ
ಓಂ ಗರಿಮಾಲಘಿಮಾದಿದಾಯ ನಮಃ
ಓಂ ಗವಾಕ್ಷವತ್ಸೌಧವಾಸಿನೇ ನಮಃ
ಓಂ ಗರ್ಭಿತಾಯ ನಮಃ
ಓಂ ಗರ್ಭಿಣೀನುತಾಯ ನಮಃ
ಓಂ ಗಂಧಮಾದನಶೈಲಾಭಾಯ ನಮಃ
ಓಂ ಗಂಡಭೇರುಂಡವಿಕ್ರಮಾಯ ನಮಃ
ಓಂ ಗದಿತಾಯ ನಮಃ
ಓಂ ಗದ್ಗದಾರಾವಸಂಸ್ತುತಾಯ ನಮಃ
ಓಂ ಗಹ್ವರೀಪತಯೇ ನಮಃ
ಓಂ ಗಜೇಶಾಯ ನಮಃ
ಓಂ ಗರೀಯಸೇ ನಮಃ
ಓಂ ಗದ್ಯೇಡ್ಯಾಯ ನಮಃ
ಓಂ ಗತಭಿದೇ ನಮಃ
ಓಂ ಗದಿತಾಗಮಾಯ ನಮಃ
ಓಂ ಗರ್ಹಣೀಯಗುಣಾಭಾವಾಯ ನಮಃ
ಓಂ ಗಂಗಾದಿಕಶುಚಿಪ್ರದಾಯ ನಮಃ
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ

|| ಇತಿ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ..

ಮಂತ್ರ 1. ಓಂ ಹೇ ಗೌರಿ ಶಂಕರಾರ್ಧಾಗಿ ಯಥಾತ್ವಂ  ಶಂಕರಪ್ರಿಯೆ | ತಥಾಮಾಂ ಕುರು ಕಳ್ಯಾಣೀ ಕಾಂತ ಕಾಂತಂ ಸುದುರ್ಲಭಂ || ಈ ದಿನ ಗೌರಿ ಪೂಜೆಮಾಡಿ ,ಮ...
21/08/2020

ಮಂತ್ರ 1.

ಓಂ ಹೇ ಗೌರಿ ಶಂಕರಾರ್ಧಾಗಿ ಯಥಾತ್ವಂ ಶಂಕರಪ್ರಿಯೆ |

ತಥಾಮಾಂ ಕುರು ಕಳ್ಯಾಣೀ ಕಾಂತ ಕಾಂತಂ ಸುದುರ್ಲಭಂ ||

ಈ ದಿನ ಗೌರಿ ಪೂಜೆಮಾಡಿ ,ಮದುವೆಯಾಗದ ಹೆಣ್ಣುಮಕ್ಕಳು ದಿನಾ 108 ಸಲ ಈ ಮಂತ್ರ ಜಪಿಸುತ್ತಿದ್ದರೆ , ಮಂತ್ರ ಬಲದಿಂದ ಉತ್ತಮ ಪತಿ ದೊರಕುವನು.

ಮಂತ್ರ2.

ಓಂ ಜೀವಯಾಮಾಸ ಭರ್ತಾರಂ ಮೃತಂ ಸತ್ಯಾಹಿ ಮೃತ್ಯುಹಾ |

ಮೃತ್ಯಂಜಯ ಸುಯೋಗೀಂದ್ರ ಸೌಭಾಗ್ಯಂ ಮೇ ಪ್ರಯಚ್ಛತು ||

ಈ ದಿನ ಗೌರಿ ಪೂಜೆ ಮಾಡಿ ಮದುವೆಯಾದ ಸ್ತ್ರಿಯರು ಈ ಮಂತ್ರ ಪ್ರತಿದಿನಾ 108 ಸಲ ಜಪಿಸುತ್ತಿದ್ದರೆ ,ಗಂಡನಿಗೆ ಆಯುರ್ ಆರೋಗ್ಯ ವೃದ್ದಿಯಾಗಿ ಸ್ತ್ರೀಸೌಭಾಗ್ಯ ವರ್ದನೆಯಾಗುವದು.

ಮಂತ್ರ3.

ಓಂ ನಮಸ್ತೇ ದೆವಿ ಕಾವೇರಿ ನಮಸ್ತೇ ಕಲಿನಾಶಿನಿ |

ನಮಸ್ತೇ ಸರ್ವ ತೀರ್ಥಾಂಗಿ ಮಮ ಪಾಪಂ ವ್ಯಪೋಹತು ||

ಬೆಳಗ್ಗೆ ಸ್ನಾನಮಾಡುವಾಗ ಈ ಮಂತ್ರವನ್ನು ಮನಸ್ಸಿನಲ್ಲೆ ಹೇಳಿಕೊಂಡು ನಂತರ ಪೂಜೆಮಾಡಿ ಮೇಲಿನ ಮಂತ್ರಗಳನ್ನು ಪಠಿಸಿದರೆ ಪೂರ್ಣಫಲ ಲಭಿಸುವದು.

ಜಾತಕದಲ್ಲಿ 2ನೇ ಮನೆ(ಕುಟುಂಬ ಸ್ಥಾನ) , 7ನೇ ಮನೆ (ವಿವಾಹ ಸ್ಥಾನ) ಮತ್ತು 8 ನೇ ಮನೆ (ಮಾಂಗಲ್ಯ ಸ್ಥಾನ) ರಲ್ಲಿ ರಾಹು , ಕೇತು , ರವಿ,ಶನಿ, ಕುಜ ಯಿದ್ದು ಪಾಪಗ್ರಹರ ದೃಷ್ಠಿಯಿದ್ದರೆ ಮದುವೆಗೆ ತೋಂದರೆ , ವಿವಾಹ ಜೀವನದಲ್ಲಿ ಹೇಳಿಕೋಳ್ಳಲಾರದ ನೋವಿರುತ್ತದೆ .

ಭಗವಂತನ ಪ್ರೇರಣೆಯಂತೆ
ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ.
ಯಾರ ಹಣೆ ಬರಹನ ಯಾರೂ ಬದಲಿಸಲಾರರು
ಆದರೆ
ನಡೆವ ಹಾದಿ ಸ್ಪಷ್ಟ ಮತ್ತು ಮಾಡುವ ಪ್ರಯತ್ನ ನಿರಂತರವಾಗಿರಬೇಕು.

ಪ್ರಾರ್ಥನೆ ಮತ್ತು ನಂಬಿಕೆ ಎರಡೂ
ಕಣ್ಣಿಗೆ ಕಾಣಿಸದಿರಬಹದು. ಆದರೆ,
ಅಸಾಧ್ಯವಾದುದನ್ನು ಸಾಧ್ಯವಾಗಿಸುವ
ಶಕ್ತಿ ಎರಡಕ್ಕೂ ಇದೆ.

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಭಗವಂತ ನಿಮಗೆ ಆಯುಷ್ಯ ಆರೋಗ್ಯ ಸಂಪತ್ತು ನೀಡಿ ಕರುಣಿಸಲಿ 🙏🙏

UD☂

ಕೃಷ್ಣಂ ವಂದೇ ಜಗದ್ಗುರುಂ...ಕಮರ್ಣ್ಯೇ ವಾದಿಕಾರಸ್ತೇ ಮಾಫಲೇಶು ಕದಾಚನ, ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ ನಿನ್ನ...
12/08/2020

ಕೃಷ್ಣಂ ವಂದೇ ಜಗದ್ಗುರುಂ...
ಕಮರ್ಣ್ಯೇ ವಾದಿಕಾರಸ್ತೇ ಮಾಫಲೇಶು ಕದಾಚನ, ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಮಾಡು, ಪ್ರತಿಫಲವನ್ನು ಅಪೇಕ್ಷಿಸಬೇಡ ಎಂದು ಈ ವಾಕ್ಯದ ಅರ್ಥ. ಕ್ರೋಧಾದ್ಭವತಿ ಸಂಮೋಹ, ಸಂಮೋಹಾತ್ ಸ್ಮ್ರತಿ ವಿಭ್ರಮಃ, ಸ್ಮೃತಿ ಭ್ರಂಶಾತ್ ಬುದ್ಧಿನಾಶೋ, ಬುದ್ಧಿ ನಾಶಾತ್ ವಿನಶ್ಯತಿಃ ಎಂದು ಕೋಪದಿಂದಾಗುವ ಅನರ್ಥದ ಬಗ್ಗೆ ಕೃಷ್ಣ ಹೇಳುತ್ತಾನೆ. ಕೋಪದಿಂದ ಸಂಮೋಹ ಆಗುತ್ತದೆ. ಸಂಮೋಹದಿಂದ ಮನುಷ್ಯನ ಬುದ್ಧಿ ಭ್ರಮೆಯಾಗುತ್ತದೆ, ಬುದ್ಧಿ ಭ್ರಮೆಯಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿ ನಾಶದಿಂದ ಮನುಷ್ಯನ ಇಡೀ ಜೀವನವೇ ನಾಶವಾಗುತ್ತದೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಕವಿವಾಣಿಯಂತೆ ಶ್ರೀ ಕೃಷ್ಣ ಬೇರೆ ಯಾವುದೇ ಯೋಚನೆ ಮಾಡದೆ ನನಗೆ ಶರಣಾಗು, ನಿನ್ನ ಯೋಗಕ್ಷೇಮದ ಜವಾಬ್ದಾರಿ ನನ್ನದು ಎಂದಿದ್ದಾನೆ.

ಮೂರು ಸಾವಿರ ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿದ ಶ್ರೀ ಕೃಷ್ಣನು ಇಡೀ ಜಗತ್ತಿಗೇ ಗುರು ಎಂದು ಗುರುತಿಸಿಕೊಂಡವನು. ಮನುಷ್ಯ ತನ್ನ ಜೀವನದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಭಗವಂತ ಮಹಾಭಾರತದ ರಣರಂಗದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಭಗವದ್ಗೀತೆಯ 18 ಅಧ್ಯಾಯಗಳ ಮೂಲಕ ಉಪದೇಶಿಸಿ ಸರ್ವರಿಗೂ ಮಾರ್ಗದರ್ಶನ ಮಾಡಿದ್ದಾನೆ. ಗುರುಗಳಿಗೆ ಗುರು, ಹಾಗಾಗಿ ಅವನನ್ನು ಕೃಷ್ಣ ವಂದೇ ಜಗದ್ಗುರು ಎಂದು ಕರೆಯುತ್ತಾರೆ. ಅವನಿಗೆ ಸಮರಾದ ಗುರು ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಅರ್ಜುನನ ಮೂಲಕ ಇಡೀ ಜಗತ್ತಿಗೆ ನೀಡಿರುವ ಸಂದೇಶವೇ ಭಗವದ್ಗೀತೆ. ಭಗವದ್ಗಿತೆಯೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ. ಭಗವದ್ಗೀತೆಯನ್ನು ಓದಿ, ಮನನ ಮಾಡಿರಿ. ಗೀತೆಯನ್ನು ಜೀವನದಲ್ಲಿ ಪೂರ್ಣವಾಗಿ ಅಳವಡಿಸಿಕೊಂಡಲ್ಲಿ ಯಶಸ್ಸು, ಕೀರ್ತಿ ಸಂಪತ್ತನ್ನು ನೀವು ಪಡೆಯುವಿರಿ.

ಸರ್ವರಿಗೂ ಶ್ರೀ ಕೃಷ್ಣ ಪರಮಾತ್ಮ ಸರ್ವಮಂಗಲವನ್ನು ನೀಡಲಿ 🙏

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರಧಾಯಿನೆ ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಂ||
27/06/2020

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರಧಾಯಿನೆ ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಂ||

Address

No-05 , 1st D Cross, LIC Colony, Yeshwanthpur
Bangalore
560022

Website

Alerts

Be the first to know and let us send you an email when Udupinumerology posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram