Jaya Karnataka Janapara Vedike

Jaya Karnataka Janapara Vedike JKJV Jaya Karnataka Janapara Vedike (JKJV) is a nonprofit organization that aims at improving the quality of life for the people of Karnataka.

A truly democratic, non-political organization that has originated in response to the ever increasing problems of the people of this state. The list of woes is endless, such as, disparities in our society, the widening gap between the rich and the poor, corruption and inefficiency in our political system, an administrative system that has ignored the cries of the common man, the farmers, the students, homeless labourers, deprivation of women's rights, commercialisation of education and medical sector, food adulteration, the list is endless. The solution is when every single person in the government machinery is held accountable. JKJV aims to be a transparent bridge between the government and the common man. We also strongly believe in the principle, "Of the People, By the People, For the People" and aim at empowering the common man to fight for his rights, to say NO to corruption, NO to exploitation, to demand and get what rightfully belongs to him. Jaya Karnataka Janapara Vedike
Head Office Address:
# 912, 9th floor, Barton Center, M.G.Road, Bengaluru - 560 001. Contact: +91 9900044299
Email: jayakarnatakajanaparavedike@gmail.com, jayakarnatakajv@gmail.com

ನಾಡಿನ ಸಮಸ್ತ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಶಾಂತಿದೂತ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯ ಶುಭಾಶಯಗಳುಇಂತಿ:ಜಯಕರ್ನಾಟಕಜ...
02/10/2025

ನಾಡಿನ ಸಮಸ್ತ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಶಾಂತಿದೂತ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯ ಶುಭಾಶಯಗಳು

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಜಯಕರ್ನಾಟಕ ಜನಪರ ವೇದಿಕೆಗೆ 5ನೇ ವಾರ್ಷಿಕೋತ್ಸವದ ಸಂಭ್ರಮಆತ್ಮೀಯರೆ,ಪರಿಸರವಾದಿಗಳು ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವ...
02/10/2025

ಜಯಕರ್ನಾಟಕ ಜನಪರ ವೇದಿಕೆಗೆ 5ನೇ ವಾರ್ಷಿಕೋತ್ಸವದ ಸಂಭ್ರಮ

ಆತ್ಮೀಯರೆ,

ಪರಿಸರವಾದಿಗಳು ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆಯ 5ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕಾರಣಕರ್ತರಾದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ, ಜಿಲ್ಲಾ, ತಾಲ್ಲೂಕು, ಘಟಕ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಮುಖಂಡರು, ಸರ್ವ ಸದಸ್ಯರು ಹಾಗೂ ಮಾಧ್ಯಮ ವರ್ಗದ ಸ್ನೇಹಿತರು, ಎಲ್ಲಾ ವರ್ಗದ ಆಡಳಿತ ಅಧಿಕಾರಿಗಳು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ನಮ್ಮ ಆತ್ಮೀಯರಿಗೂ ಹೃದಯಪೂರ್ವಕ ಧನ್ಯವಾದಗಳು.

ಬನ್ನಿ ಕೈಜೋಡಿಸಿ, ಸಮೃದ್ಧ ನಾಡೊಂದನ್ನು ಕಟ್ಟೋಣ.. ಪರಿಸರದ ಸಮತೋಲನವನ್ನು ಕಾಪಾಡೋಣ

ಸದಾ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ, ಪ್ರೋತ್ಸಾಹ, ಬೆಂಬಲವನ್ನು ಬಯಸುವ,

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಶುಭಾಶಯಗಳುಈ ಶುಭ ದಿನದಂದು ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ನಿಮ್ಮ ಮನದ...
01/10/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಶುಭಾಶಯಗಳು

ಈ ಶುಭ ದಿನದಂದು ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ನಿಮ್ಮ ಮನದ ಇಷ್ಟಾರ್ಥಗಳೂ ನೆರವೇರಲಿ...

ನಿಮ್ಮ ಮನೆಯಲ್ಲಿ ಸಕಲ ಸುಖ ಸಂತೋಷಗಳು ತುಂಬಿ ನೆಮ್ಮದಿಯ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇವೆ.

ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆ ನಿಮ್ಮೆಲ್ಲರಿಗೂ ಇರಲಿ

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಅವೈಜ್ಞಾನಿಕವಾಗಿ ಬಡವರ ಮತ್ತು ರೈತರ ಪಡಿತರ ಚೀಟಿಯನ್ನು (ಬಿಪಿಎಲ್ ಕಾರ್ಡ್) ರದ್ದು ಮಾಡಿರುವುದನ್ನು ಖಂಡಿಸಿ, ಈ ಕೂಡಲೇ ರದ್ದು ಮಾಡಿರುವ ರೈತರ ಹ...
27/09/2025

ಅವೈಜ್ಞಾನಿಕವಾಗಿ ಬಡವರ ಮತ್ತು ರೈತರ ಪಡಿತರ ಚೀಟಿಯನ್ನು (ಬಿಪಿಎಲ್ ಕಾರ್ಡ್) ರದ್ದು ಮಾಡಿರುವುದನ್ನು ಖಂಡಿಸಿ, ಈ ಕೂಡಲೇ ರದ್ದು ಮಾಡಿರುವ ರೈತರ ಹಾಗೂ ಬಡವರ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ ಅವರು ರೈತ ಸಂಘದವರ ಜೊತೆಗೂಡಿ ಕನಕಪುರ ತಾಲ್ಲೂಕಿನ ತಹಶಿಲ್ದಾರರ ಮೂಲಕ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಸನ್ಮಾನ್ಯ ಕೆ.ಹೆಚ್.ಮುನಿಯಪ್ಪ ಅವರಿಗೆ ಒತ್ತಾಯದ ಮನವಿಯನ್ನು ಸಲ್ಲಿಸಿದರು.

ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಹಾಗೂ ರೈತ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ

ಕನಕಪುರ ತಾಲ್ಲೂಕು ಕಛೇರಿಯ ಆವರಣದಲ್ಲಿ  ಪದ್ಮಭೂಷಣ, ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ  ಗೌರವ...
26/09/2025

ಕನಕಪುರ ತಾಲ್ಲೂಕು ಕಛೇರಿಯ ಆವರಣದಲ್ಲಿ ಪದ್ಮಭೂಷಣ, ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ, ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ

ಮರೆಯಾದ ಕನ್ನಡದ ಅತ್ಯಮೂಲ್ಯ ಸಾಹಿತ್ಯ ರತ್ನನಾಡು ಕಂಡ ಶ್ರೇಷ್ಠ  ಖ್ಯಾತ ಕಾದಂಬರಿಕಾರರು, ಪದ್ಮಭೂಷಣ, ಸರಸ್ವತಿ ಸನ್ಮಾನ ಪ್ರಶಸ್ತಿ ಪುರಸ್ಕೃತರು, ...
25/09/2025

ಮರೆಯಾದ ಕನ್ನಡದ ಅತ್ಯಮೂಲ್ಯ ಸಾಹಿತ್ಯ ರತ್ನ

ನಾಡು ಕಂಡ ಶ್ರೇಷ್ಠ ಖ್ಯಾತ ಕಾದಂಬರಿಕಾರರು, ಪದ್ಮಭೂಷಣ, ಸರಸ್ವತಿ ಸನ್ಮಾನ ಪ್ರಶಸ್ತಿ ಪುರಸ್ಕೃತರು, ನಮ್ಮ ಕನ್ನಡದ ಹೆಮ್ಮೆ, ಡಾ.ಎಸ್.ಎಲ್. ಭೈರಪ್ಪ ಅವರಿಗೆ ಗೌರವಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ

ನಿಮ್ಮ ಅಗಲಿಕೆಯಿಂದ ಕನ್ನಡ ಸಾಹಿತ್ಯ ಜಗತ್ತು ಬಡವಾಗಿದೆ. ನಿಮ್ಮ ಸಾಹಿತ್ಯ ಸೃಷ್ಟಿಗಳು ಪೀಳಿಗೆಯಿಂದ ಪೀಳಿಗೆಗೆ ಕನ್ನಡಿಗರ ಮನಸ್ಸುಗಳನ್ನು ಬೆಳಗುತ್ತಲೇ ಇರುತ್ತವೆ.

ನಿಮ್ಮ ದಿವ್ಯ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಗೌರವಪೂರ್ವಕವಾಗಿ ಪ್ರಾರ್ಥಿಸುತ್ತೇನೆ. 🙏

ಇಂತಿ:
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ
ಸಂಸ್ಥಾಪಕರು,
ಜಯಕರ್ನಾಟಕ ಜನಪರ ವೇದಿಕೆ

23/09/2025

ಆತ್ಮೀಯರೆ,

2025ರ ಮೈಸೂರು ದಸರಾ ಕುಸ್ತಿ ಕ್ರೀಡೆಯ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಮ್ಮೆಲ್ಲರ ಹೆಮ್ಮೆಯ ನಾಯಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

2025ರ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ನಾಯಕರು ನಮ್ಮ ಹೆಮ್ಮೆಆತ್ಮೀಯರೆ,ಸಾಂಸ್ಕೃತಿಕ ನಗರಿ ಮೈಸೂರಿನ ನಾಡ ದೇವತೆ ಚಾಮುಂಡೇಶ್ವರಿ ದೇ...
23/09/2025

2025ರ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ನಾಯಕರು ನಮ್ಮ ಹೆಮ್ಮೆ

ಆತ್ಮೀಯರೆ,

ಸಾಂಸ್ಕೃತಿಕ ನಗರಿ ಮೈಸೂರಿನ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2025ರ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಹಾಗೂ ಕುಸ್ತಿ ಕ್ರೀಡಾಕೂಟವನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಕ್ರೀಡೆಗಳೊಂದಿಗೆ ಹನ್ನೊಂದು ದಿನಗಳ ಕಾಲ ನಡೆಯುವ ದಸರಾ ಆಚರಣೆಯು ಪ್ರವಾಸಿಗರಿಗೆ ಹೆಚ್ಚಿನ ರಸದೌತಣವನ್ನು ಒದಗಿಸುವುದರ ಜೊತೆಯಲ್ಲಿ ರಾಜಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಕರ್ನಾಟಕ ಸರ್ಕಾರ ನಾಡಹಬ್ಬವಾಗಿ ಆಚರಿಸುವ 2025ರ ಮೈಸೂರು ದಸರಾ ಹಾಗೂ ಕುಸ್ತಿ ಕ್ರೀಡಾಕೂಟದ ಅಭೂತಪೂರ್ವ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಮ್ಮೆಲ್ಲರ ಹೆಮ್ಮೆಯ ನಾಯಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರು ಭಾಗವಹಿಸಿ 2025ರ ಮೈಸೂರು ದಸರಾ ಹಾಗೂ ಕುಸ್ತಿ ಕ್ರೀಡೆ ಯಶಸ್ವಿಯಾಗಿ ನಡೆಯಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿ ಕುಸ್ತಿ ಪಟುಗಳಿಗೆ ಶುಭಕೋರಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಸಾಹಿತಿಗಳು, ಲೇಖಕರು, ಕನ್ನಡಪರ ಚಿಂತಕರು, ಕ್ರೀಡಾಪಟುಗಳು ಸೇರಿದಂತೆ ಕರ್ನಾಟಕ ಕುಸ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಚಾಮರಾಜನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಜಕಾವುಲ್ಲ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಆಯ್ಕೆ ಆತ್ಮೀಯರೆ,ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ...
15/09/2025

ಚಾಮರಾಜನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಜಕಾವುಲ್ಲ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಆಯ್ಕೆ

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ, ಬೆಂಗಳೂರಿನ, ಎಂ.ಜಿ.ರಸ್ತೆಯ, ಬಾರ್ಟನ್ ಸೆಂಟರ್ ನಲ್ಲಿರುವ ಜಯಕರ್ನಾಟಕ ಜನಪರ ವೇದಿಕೆಯ ಕೇಂದ್ರ ಕಛೇರಿಯಲ್ಲಿ ಇಂದು ನಡೆದ ಚಾಮರಾಜನಗರ ಜಿಲ್ಲೆಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯಲ್ಲಿ,

ಚಾಮರಾಜನಗರ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಜಕಾವುಲ್ಲಾ ಅವರನ್ನು ಹಾಗೂ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಹೆಚ್.ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷರಾದ ಕೆ.ಎನ್.ಜಗದೀಶ್ ಹಾಗೂ ಚಾಮರಾಜನಗರ ಜಿಲ್ಲೆಯ ಸದಸ್ಯರು ಉಪಸ್ಥಿತರಿದ್ದರು.

ಚಾಮರಾಜನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಕಾವುಲ್ಲಾ ಹಾಗೂ ಗೌರವಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ್ ಅವರಿಗೆ ಜಯಕರ್ನಾಟಕ ಜನಪರ ವೇದಿಕೆ ಕುಟುಂಬದ ವತಿಯಿಂದ ಹಾರ್ದಿಕ ಶುಭಾಶಯಗಳು

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

10/09/2025

ಆತ್ಮೀಯರೆ,

ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರು ಭಾಗವಹಿಸಿದ ವಿಡಿಯೋ ತುಣುಕು

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಮೂರನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮಆತ್ಮೀಯರೆ,ಜಯ ಕರ್ನಾಟಕ ಜನಪರ ವೇದಿಕೆಯ ಮಹಾಲಕ್ಷ್...
10/09/2025

ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಮೂರನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮ

ಆತ್ಮೀಯರೆ,

ಜಯ ಕರ್ನಾಟಕ ಜನಪರ ವೇದಿಕೆಯ ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಿದ ಮೂರನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮಕ್ಕೆ,

ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರು ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆದು, ಅನ್ನಸಂತರ್ಪಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸರವರು, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ರವರು, ರಾಜ್ಯ ಪ್ರಧಾನ ಸಂಚಾಲಕರಾದ ಟಿ.ಪ್ರಕಾಶ್ ಗೌಡ ರವರು, ರಾಜ್ಯ ಉಪಾಧ್ಯಕ್ಷರಾದ ಬಾಲಚಂದರ್ ರವರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಜಿ.ಎಸ್.ಪುಷ್ಪಲತಾ ರವರು, ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಪಿ.ಲೋಕೇಶ್ ರವರು, ಬೆಂಗಳೂರು ಜಿಲ್ಲಾ ಮಹಿಳಾ‌ ಘಟಕದ ಅಧ್ಯಕ್ಷರಾದ ಶ್ರೀಮತಿ ಸುನಂದಾ ರೆಡ್ಡಿ ರವರು ಸೇರಿದಂತೆ ರಾಜ್ಯ, ಜಿಲ್ಲಾ, ಮಹಿಳಾ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಗಣೇಶ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ
ಬೆಂಗಳೂರು ಜಿಲ್ಲಾ ಪ್ರಧಾನ ಸಂಚಾಲಕರಾದ ಆರ್.ರಾಜೇಶ್, ಮಹಾಲಕ್ಷ್ಮಿಪುರಂ ಕ್ಷೇತ್ರದ ಅಧ್ಯಕ್ಷರಾದ ಪಿ.ವೇಲು, ಗೌರವಾಧ್ಯಕ್ಷರಾದ ತಿಮ್ಮಪ್ಪ(ಶ್ರೀನಿವಾಸ್) ಹಾಗೂ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

2025ರ ಅಸ್ಟೆಮಿದ ಐಸಿರ ತುಳುವರ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂಸ್ಥಾಪಕ ಅಧ್ಯಕ್ಷರುಆತ್ಮೀಯರೆ,ಬೆಂಗಳೂರಿನ ವಿಜಯನಗರದಲ್ಲಿರುವ ...
09/09/2025

2025ರ ಅಸ್ಟೆಮಿದ ಐಸಿರ ತುಳುವರ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂಸ್ಥಾಪಕ ಅಧ್ಯಕ್ಷರು

ಆತ್ಮೀಯರೆ,

ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ತುಳುನಾಡ ಜವನೆರ್ ಬೆಂಗಳೂರು (ರಿ) ವತಿಯಿಂದ ಆಯೋಜಿಸಿದ್ದ 2025ರ ಅಸ್ಟೆಮಿದ ಐಸಿರ ತುಳುವ ತಿರ್ಲ್ ಸಾಸಿರ ಕಾರ್ಯಕ್ರಮದಲ್ಲಿ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರು ಭಾಗವಹಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

Address

JAYA KARNATAKA JANAPARA VEDIKE (Regd. ) #912, 9th Floor, Barton Center, M. G. Road
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Alerts

Be the first to know and let us send you an email when Jaya Karnataka Janapara Vedike posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jaya Karnataka Janapara Vedike:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram