Jaya Karnataka Janapara Vedike

Jaya Karnataka Janapara Vedike JKJV Jaya Karnataka Janapara Vedike (JKJV) is a nonprofit organization that aims at improving the quality of life for the people of Karnataka.

A truly democratic, non-political organization that has originated in response to the ever increasing problems of the people of this state. The list of woes is endless, such as, disparities in our society, the widening gap between the rich and the poor, corruption and inefficiency in our political system, an administrative system that has ignored the cries of the common man, the farmers, the stude

nts, homeless labourers, deprivation of women's rights, commercialisation of education and medical sector, food adulteration, the list is endless. The solution is when every single person in the government machinery is held accountable. JKJV aims to be a transparent bridge between the government and the common man. We also strongly believe in the principle, "Of the People, By the People, For the People" and aim at empowering the common man to fight for his rights, to say NO to corruption, NO to exploitation, to demand and get what rightfully belongs to him. Jaya Karnataka Janapara Vedike
Head Office Address:
# 912, 9th floor, Barton Center, M.G.Road, Bengaluru - 560 001. Contact: +91 9900044299
Email: jayakarnatakajanaparavedike@gmail.com, jayakarnatakajv@gmail.com

ಜಯ ಕರ್ನಾಟಕ ಜನಪರ ವೇದಿಕೆಯ ಹೋರಾಟದ ಫಲಶೃತಿ;ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕೀಲು ಮೂಳೆ ತಜ್ಞ ವೈದ್ಯರ ನೇಮಕಆತ್ಮೀಯರೆ,ಜಯಕರ್ನಾಟಕ ಜನಪರ ವೇದ...
09/08/2025

ಜಯ ಕರ್ನಾಟಕ ಜನಪರ ವೇದಿಕೆಯ ಹೋರಾಟದ ಫಲಶೃತಿ;
ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕೀಲು ಮೂಳೆ ತಜ್ಞ ವೈದ್ಯರ ನೇಮಕ

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ,
ರಾಜ್ಯಾಧ್ಯಕ್ಷರಾದ ಶ್ರೀಯುತ ಜೆ.ಶ್ರೀನಿವಾಸ್ ಅವರ ಸಹಕಾರದೊಂದಿಗೆ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರಘುವೀರ್ ಸಿಂಗ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಶಿವಯ್ಯ ಅವರ ಅಧ್ಯಕ್ಷತೆಯಲ್ಲಿ,

ಶಿಕಾರಿಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ತಜ್ಞ ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ರೋಗಿಗಳು ಸುಮಾರು ಎರಡು ವರ್ಷಗಳಿಂದ ಹೊರ ಜಿಲ್ಲೆಗಳಿಗೆ ಮತ್ತು ಶಿವಮೊಗ್ಗಕ್ಕೆ ತೆರಳಬೇಕಾದ ಪರಿಸ್ಥಿತಿ ಒದಗಿ ಬಂದಿರುವ ವಿಚಾರವಾಗಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕೀಲು ಮೂಳೆ ತಜ್ಞ ವೈದ್ಯರ ನೇಮಕವಾಗುವಂತೆ ಒತ್ತಾಯಿಸಿ ಅನೇಕ ಬಾರಿ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಸಚಿವರು ಸೇರಿದಂತೆ ತಾಲೂಕಿನ ಜನ ಪ್ರತಿನಿಧಿಗಳ ಗಮನ ಕೂಡ ಸೆಳೆಯಲಾಗಿತ್ತು.

ಕೊನೆಗೆ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ಉಪಾಸ ಸತ್ಯಾಗ್ರಹ ನಡೆಸುವ ಸಿದ್ಧತೆ ಕೈಗೊಂಡ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ಆಡಳಿತದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ನೂತನವಾಗಿ ಕೀಲು ಮೂಳೆ ರೋಗ ತಜ್ಞ ವೈದ್ಯರನ್ನು ನೇಮಕ ಮಾಡಿದ್ದು ಸಾರ್ವಜನಿಕರ ಪರವಾಗಿ ಎಂದು ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ನೂತನ ವೈದ್ಯ ರಾಕೇಶ್ ರವರಿಗೆ ಸ್ವಾಗತ ಕೋರಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣಮೂರ್ತಿ ಮಾತನಾಡಿ ಸತತ ಹೋರಾಟದ ಪ್ರತಿಫಲವಾಗಿ ಇಂದು ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ರೋಗ ತಜ್ಞರನ್ನು ಸರ್ಕಾರ ನೇಮಿಸಿದೆ.

ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿರವರು ಮಾತನಾಡಿ ತಾಲೂಕಿನ ಜನತೆ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ಹಳ್ಳಿಗಳ ಆಗಮಿಸುವ ರೋಗಿಗಳಿಗೆ ವೈದ್ಯರ ಕೊರತೆಯಿಂದಾಗಿ ಅನ್ಯ ಜಿಲ್ಲೆಗಳನ್ನು ಅವಲಂಬಿಸಬೇಕಾಗಿತ್ತು, ಆದರೆ ಸಂಘಟನೆಯ ಸತತ ಎರಡು ವರ್ಷಗಳ ಹೋರಾಟದ ಪ್ರತಿಫಲವಾಗಿ ಈಗಲಾದರೂ ಸರ್ಕಾರ ಎಚ್ಚೆತ್ತು ವೈದ್ಯರ ಕೊರತೆ ನೀಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹಾಗೂ ಶಿವಮೊಗ್ಗ ಡಿಎಚ್ಒ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಜಯಕರ್ನಾಟಕ ಜನಪರ ವೇದಿಕೆ ಕುಟುಂಬ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ.

ಹಾಗೆಯೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಅರುಣ್ ಕುಮಾರ್ ರವರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಇಮ್ರಾನ್, ಮತ್ತಿಕೋಟೆ ಮಾಲತೇಶ್, ತಾಲೂಕು ಗೌರವ ಅಧ್ಯಕ್ಷ ಹುಸೇನ್ ಸಾಬ್, ಆನಂದ್, ಹೋಟೆಲ್ ಉದ್ಯಮಿ ಅಕ್ಬರ್ ಆಲಿ, ಹರೀಶ್, ರಮೇಶ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ 2025ರ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.ಶ್ರೀವರಮಹಾಲಕ್ಷ್ಮಿ ದೇವಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ...
08/08/2025

ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ 2025ರ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಶ್ರೀವರಮಹಾಲಕ್ಷ್ಮಿ ದೇವಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕರುಣಿಸಲಿ..

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಬೆಳಗಾವಿ ತಾಲ್ಲೂಕು ಘಟಕ ಮತ್ತು  ಶಾಹು ನಗರ ಘಟಕ ಉದ್ಘಾಟನೆಆತ್ಮೀಯರೆ,ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್...
04/08/2025

ಬೆಳಗಾವಿ ತಾಲ್ಲೂಕು ಘಟಕ ಮತ್ತು ಶಾಹು ನಗರ ಘಟಕ ಉದ್ಘಾಟನೆ

ಆತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವರೆಡ್ಡಿ ಅವರ ಅಧ್ಯಕ್ಷತೆಯಲ್ಲಿ,

ಜಯಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ತಾಲ್ಲೂಕು ಘಟಕ ಮತ್ತು ಶಾಹುನಗರ ಘಟಕದ ಉದ್ಘಾಟನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳಾದ ಶಿವಣ್ಣಗೌಡ ಪಾಟೀಲ್, ಜಂಗ್ಲಿಸಾಬ್ ಸರ್ಕಾವಸ್, ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಹಸ್ಣೇಕರ್, ಬೆಳಗಾವಿ ತಾಲ್ಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ ಸುಣಕುಪ್ಪಿ, ಶಾಹುನಗರ ಘಟಕ ಅಧ್ಯಕ್ಷರಾದ ಶಶಿಕಾಂತ್ ಗೌಡರ, ಸಿದ್ದಪ್ಪ ಮಾಳಗಿ, ಮೂಡಲಗಿ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಣ ಮೆಳ್ಳಿಗಿರಿ, ಗೋಕಾಕ್ ತಾಲ್ಲೂಕು ಅಧ್ಯಕ್ಷರಾದ ಹಜೀಜ್ ಮುಕಾಶಿ, ರಾಯಭಾಗ್ ತಾಲ್ಲೂಕು ಅಧ್ಯಕ್ಷರಾದ ಮಾರುತಿ ಮನ್ನಿಕೆರೆ, ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಕುಂದಾನಗರಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಬೆಳಗಾವಿ ಜಿಲ್ಲಾ ಘಟಕಆತ್...
03/08/2025

ಕುಂದಾನಗರಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಬೆಳಗಾವಿ ಜಿಲ್ಲಾ ಘಟಕ

ಆತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ಕರ್ನಾಟಕ ಕುಸ್ತಿ ಸಂಘ(ರಿ) ಮತ್ತು ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 23 ವರ್ಷದೊಳಗಿನ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ತೆರಳುವ ವೇಳೆ,

ಕುಂದಾನಗರಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವರೆಡ್ಡಿ ಅವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಪದಾಧಿಕಾರಿಗಳು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜೆ.ಶ್ರೀನಿವಾಸ್ ಅವರನ್ನು ಕುಂದಾನಗರಿಗೆ ಪ್ರೀತಿಯಿಂದ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಕೇಂದ್ರ ಕಛೇರಿಯ ಮುಖ್ಯ ವ್ಯವಸ್ಥಾಪಕರಾದ ನಾಗೇಶ್.ಎಸ್, ಬೆಳಗಾವಿ ಜಿಲ್ಲಾ ಪದಾಧಿಕಾರಿಗಳಾದ ಶಿವಣ್ಣಗೌಡ ಪಾಟೀಲ್, ಜಂಗ್ಲಿಸಾಬ್ ಸರ್ಕಾವಸ್, ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಹಸ್ಣೇಕರ್, ಮೂಡಲಗಿ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಣ ಮೆಳ್ಳಿಗಿರಿ, ಗೋಕಾಕ್ ತಾಲ್ಲೂಕು ಅಧ್ಯಕ್ಷರಾದ ಹಜೀಜ್ ಮುಕಾಶಿ, ರಾಯಭಾಗ್ ತಾಲ್ಲೂಕು ಅಧ್ಯಕ್ಷರಾದ ಮಾರುತಿ ಮನ್ನಿಕೆರೆ, ಬೆಳಗಾವಿ ತಾಲ್ಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ ಸುಣಕುಪ್ಪಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಕಲಬುರಗಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಟಗೊಳಿಸಲು ಒತ್ತುಆತ್ಮೀಯರೆ,ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾ...
03/08/2025

ಕಲಬುರಗಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಟಗೊಳಿಸಲು ಒತ್ತು

ಆತ್ಮೀಯರೆ,
ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರ ಆಶೀರ್ವಾದದಿಂದ, ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಸಲಹೆಗಾರರಾದ ಶ್ರೀ ಉಮೇಶ್ ಬಿರಬಿಟ್ಟೆ ಅವರ ಘನ ಉಪಸ್ಥಿತಿಯಲ್ಲಿ,

ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಕೊರಳ್ಳಿ ಅವರ ಅಧ್ಯಕ್ಷತೆಯಲ್ಲಿ,

ಕನ್ನಡ ನಾಡು, ನುಡಿ, ಜಲ, ಗಡಿ ಸಂರಕ್ಷಣೆ, ಪರಿಸರ, ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಜಯಕರ್ನಾಟಕ ಜನಪರ ವೇದಿಕೆಯನ್ನು ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ಬಲಿಷ್ಠಗೊಳಿಸಲು ಒತ್ತು ನೀಡುವುದರ ಜೊತೆಗೆ ಮುಂದಿನ ಯೋಜನೆಗಳನ್ನು ರೂಪಿಸುವ ವಿಚಾರವಾಗಿ ಕಲಬುರಗಿ ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕು ಅಧ್ಯಕ್ಷರ ಸಭೆಯನ್ನು ನಡೆಸಿ ಕೆಲವು ಮಹತ್ವವಾದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅರುಣ ನಾಮದಾರ, ಜಿಲ್ಲಾ ಪದಾಧಿಕಾರಿಗಳಾದ
ಶರಣು ಕುಲಕರ್ಣಿ, ರಾಹುಲ್ ಹಂಚಾಟಿ, ಆಳಂದ ತಾಲ್ಲೂಕು ಅಧ್ಯಕ್ಷರಾದ ನಾಗರಾಜ್ ಗೋಡಕ್ಕೆ , ಆಫಜಲಪುರ ತಾಲ್ಲೂಕು ಅಧ್ಯಕ್ಷರಾದ ಸದಾನಂದ ಕ್ಷತ್ರಿಯ, ಜೇವರ್ಗಿ ತಾಲ್ಲೂಕು ಅಧ್ಯಕ್ಷರಾದ ಸತೀಶ್, ಕಲ್ಬುರ್ಗಿ ತಾಲ್ಲೂಕು ಅಧ್ಯಕ್ಷರಾದ ಸಂದೀಪ್, ಸೇಡಂ ತಾಲ್ಲೂಕು ಅಧ್ಯಕ್ಷರಾದ ಅಶೋಕ್, ಯಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಮಡಿವಾಳ ಹಾಗೂ ಅಫಜಲಪುರ ಕಾನೂನು ಘಟಕನ ಅಧ್ಯಕ್ಷರಾದ ದಯಾನಂದ್ ಪಾಟೀಲ್ ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ರಸಗೊಬ್ಬರ ವಿತರಣೆಯಲ್ಲಿ  ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಅನುಕೂಲ ಕಲ್ಪಿಸಿ: ಸುರಪುರ ತಾಲ್ಲೂಕು ಘಟಕ ಮನವಿಆತ್ಮೀಯರೆ,ಜಯಕರ್ನಾಟಕ ಜನಪರ...
02/08/2025

ರಸಗೊಬ್ಬರ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಅನುಕೂಲ ಕಲ್ಪಿಸಿ: ಸುರಪುರ ತಾಲ್ಲೂಕು ಘಟಕ ಮನವಿ

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ, ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ತೇಜರಾಜ್ ರಾಠೋಡ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ರೆಡ್ಡಿ ತುಳೇರ ಅವರ ಸಹಕಾರದೊಂದಿಗೆ,

ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ರವಿನಾಯಕ ಭೈರಿಮಡಿ ನೇತೃತ್ವದಲ್ಲಿ, ಸುರಪುರ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ ಅವರ ಅಧ್ಯಕ್ಷತೆಯಲ್ಲಿ,

ಸುರಪುರ ನಗರದಲ್ಲಿ ದಲ್ಲಾಳಿಗಳ ಹಾವಳಿಂದ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ತಲುಪುತ್ತಿಲ್ಲ. ಕೆಲವು ಕಡೆ ಮಧ್ಯವರ್ತಿಗಳು ರೈತರಿಂದ ದರಕ್ಕಿಂತ ಹೆಚ್ಚಿನ ಹಣ ಪಡೆದು ರಸಗೊಬ್ಬರ ನೀಡುತ್ತಾರೆ. ಆದರಿಂದ ಈ ಕೂಡಲೇ ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕಿನ
ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿ ಗೌರವಾಧ್ಯಕ್ಷ ಶಿವರಾಜನಾಯಕ ಮಕಾಶಿ, ಕಾರ್ಯಾಧ್ಯಕ್ಷ ಮೌನೇಶ ದಳಪತಿ, ರಾಘವೇಂದ್ರ ಸಗರ, ಬಸವರಾಜ ಪಾಟೀಲ, ರವಿಕಿರಣ ಹೊಸಸಿದ್ದಾಪುರ, ಹುಲಿರಾಜ್ ಹುಲಕಲ್ಲ್, ದ್ಯಾವಪ್ಪ ದೇವಿಕೇರಿ, ನಿಂಗಣ್ಣ ದುಸ್ತಾರಿ ದೇವಿಕೇರಿ, ಭೀಮಣ್ಣ ಗಡ್ಡಿಮನಿ, ಕೃಷ್ಣನಾಯಕ ಸತ್ಯಂಪೇಟ, ಶಿವಮೂರ್ತಿ ದೀವಳಗುಡ್ಡ, ಬಸಪ್ಪ ಯಾಳವಾರ, ಮರೆಪ್ಪ ಕೋಮಾರಿ, ಇತರರು ಭಾಗವಹಿಸಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಗದಗ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆಆತ್ಮೀಯರೇ,ಪರಿಸರವ...
02/08/2025

ಗದಗ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

ಆತ್ಮೀಯರೇ,
ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಹಾಲಪ್ಪ ವರವಿ ಅವರ ನೇತೃತ್ವದಲ್ಲಿ, ಗದಗ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ವಳಗೇರ ಅವರ ಅಧ್ಯಕ್ಷತೆಯಲ್ಲಿ,

ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಮಾಲತೇಶ್ ರಗಟಿ, ಶಿರಹಟ್ಟಿ ತಾಲೂಕು ಅಧ್ಯಕ್ಷರಾದ ಸಂತೋಷ್ ವಡ್ದರ, ಬೆಳ್ಳಟ್ಟಿ ಶಹರ ಘಟಕ ಅಧ್ಯಕ್ಷರಾದ ನಾಗರಾಜ್ ಹಮ್ಮೀಗಿ ಅವರುಗಳ ಸಮ್ಮುಖದಲ್ಲಿ,

ಗದಗ ಜಿಲ್ಲಾ ಸಮಿತಿ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲ್ಲೂಕು ವತಿಯಿಂದ ಜಯಕರ್ನಾಟಕ ಜನಪರ ವೇದಿಕೆಯ
ರಾಜ್ಯಾಧ್ಯಕ್ಷರಾದ ಶ್ರೀ ಜೆ ಶ್ರೀನಿವಾಸ್ ಅವರ ಹುಟ್ಟು ಹಬ್ಬವನ್ನು ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇವೇಳೆ ಲಕ್ಷ್ಮೇಶ್ವರ ತಾಲ್ಲೂಕಿನ ಆದರಹಳ್ಳಿ ಗ್ರಾಮ ಘಟಕದ ವತಿಯಿಂದ ಗ್ರಾಮ ದೇವತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದವರು, ಜಯಕರ್ನಾಟಕ ಜನಪರ ವೇದಿಕೆಯ ಗದಗ
ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಹಳೆಮ್ಮನವರ, ಹನುಮಂತ ವಳೆಗೇರಿ, ಅರ್ಜುನ್ , ಲಕ್ಷ್ಮಣ್,ಗೌರೇಶ, ವೆಂಕಟೇಶ್, ಶರೀಫ್, ಇಮಾಮ್, ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಬಳ್ಳಾರಿ ಜಿಲ್ಲಾ ಘಟಕದಿಂದ ಸೂರ್ಯನಿವಾಸ ವೃದ್ದಾಶ್ರಮದಲ್ಲಿ ಹುಟ್ಟು ಹಬ್ಬ ಆಚರಣೆಆತ್ಮೀಯರೇ,ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ...
02/08/2025

ಬಳ್ಳಾರಿ ಜಿಲ್ಲಾ ಘಟಕದಿಂದ ಸೂರ್ಯನಿವಾಸ ವೃದ್ದಾಶ್ರಮದಲ್ಲಿ ಹುಟ್ಟು ಹಬ್ಬ ಆಚರಣೆ

ಆತ್ಮೀಯರೇ,

ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ. ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಶಂಕರ್ ಬಸಪ್ಪ ಅವರ ನೇತೃತ್ವದಲ್ಲಿ,

ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಜಯಕರ್ನಾಟಕ ಜನಪರ ವೇದಿಕೆಯ
ರಾಜ್ಯಾಧ್ಯಕ್ಷರಾದ ಶ್ರೀ ಜೆ ಶ್ರೀನಿವಾಸ್ ಅವರ ಹುಟ್ಟು ಹಬ್ಬವನ್ನು ಬಳ್ಳಾರಿ ನಗರದಲ್ಲಿರುವ ಸೂರ್ಯನಿವಾಸ ವೃದ್ದಾಶ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಜೊತೆಗೂಡಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಬಳ್ಳಾರಿ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆಆತ್ಮೀಯರೇ,ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ...
02/08/2025

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಆತ್ಮೀಯರೇ,

ಪರಿಸರವಾದಿಗಳು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯುತ ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಜಿಲ್ಲಾಧ್ಯಕ್ಷರಾದ ತೇಜರಾಜ್ ರಾಠೋಡ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ರೆಡ್ಡಿ ತುಳೇರ ಅವರ ಸಹಕಾರದೊಂದಿಗೆ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಬೈರಿಮರಡಿ ಅವರ ಉಪಸ್ಥಿತಿಯಲ್ಲಿ, ಸುರಪುರ ತಾಲೂಕು ಅಧ್ಯಕ್ಷರಾದ ಗೋಪಾಲ ನಾಯಕ ಸತ್ಯಂಪೇಟ್ ಅವರ ನೇತೃತ್ವದಲ್ಲಿ,

ರಾಜ್ಯಾಧ್ಯಕ್ಷರಾದ ಶ್ರೀ ಜೆ ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಅಂಗವಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಗೌರವಾಧ್ಯಕ್ಷ ಶಿವರಾಜ್ ಮಕ್ಕಾಶಿ ಸತ್ಯಂಪೇಟೆ, ವಾಸುದೇವ ನಾಯಕ ಬೈರಿಮರಡಿ, ಕಾರ್ಯಧ್ಯಕ್ಷ ಮೌನೇಶ್ ದಳಪತಿ ಶಾಖಾಪುರ, ಉಪಾಧ್ಯಕ್ಷರಾದ ರಾಘವೇಂದ್ರ ಸಗರ ಲಕ್ಷ್ಮೀಪುರ, ಬಸವರಾಜ ಪಾಟೀಲ್ ಶಖಾಪುರ, ರವಿ ಹುಲಕಲ್ಲ್, ಮಲ್ಲು ನಾಯಕ ನರಸಿಂಗಪೇಟ್, ದೇವು ನಾಯಕ ಕಲ್ಲೋಡಿ, ಸಂಘಟನಾ ಕಾರ್ಯದರ್ಶಿ ರವಿಕಿರಣ್ ಹೊಸ ಸಿದ್ದಾಪುರ, ಪ್ರಧಾನ ಸಂಚಾಲಕ ದ್ಯಾವಪ್ಪ ವಾಯ್ ದೇವಿಕೇರಿ, ಸಂಚಾಲಕ ನಿಂಗಣ್ಣ ದುಸ್ತಾರಿ ಯಾದವ್ ದೇವಿಕೇರಾ, ಕಾರ್ಯದರ್ಶಿ ಭೀಮಣ್ಣ ಗಡ್ಡಿಮನಿ ಲಕ್ಷ್ಮಿಪುರ ಕೃಷ್ಣ ನಾಯಕ ಸತ್ಯಂಪೇಟ್, ಸಹ ಕಾರ್ಯದರ್ಶಿ ಶಿವಮೂರ್ತಿ ದೀವಳಗುಡ್ಡ, ಖಚಾಂಚಿ ಬಸಪ್ಪ ಹೆಳವಾರ ಸಹ ಖಜಾಂಚಿ ಮರೆಪ್ಪ ಕೊಮಾರಿ ರಾಘವೇಂದ್ರ ಕುಲಕರ್ಣಿ ದೇವಿಕೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಆತ್ಮೀಯರೆ,ಪರಿಸರವಾದಿಗಳು, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಮ್ಮೆಲ್ಲರ ಹೆಮ್ಮೆಯ ನಾಯಕರಾದ ಶ್ರೀ ಬಿ‌.ಗುಣರಂಜನ್ ಶೆಟ್ಟಿ...
02/08/2025

ಆತ್ಮೀಯರೆ,

ಪರಿಸರವಾದಿಗಳು, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಮ್ಮೆಲ್ಲರ ಹೆಮ್ಮೆಯ ನಾಯಕರಾದ ಶ್ರೀ ಬಿ‌.ಗುಣರಂಜನ್ ಶೆಟ್ಟಿಯವರು,

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ನಮ್ಮೆಲ್ಲರ ಪ್ರೀತಿಯ ಜೆ.ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸಂಘಟನೆ ಮುಖಂಡರೊಂದಿಗೆ ಭಾಗವಹಿಸಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ, ಜಿಲ್ಲಾ, ತಾಲ್ಲೂಕು, ಕ್ಷೇತ್ರ, ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ಅಕ್ರಮ ಗಣಿಗಾರಿಕೆ ತಡೆಹಿಡಿಯುವಂತೆ ಸುರಪುರ ತಾಲ್ಲೂಕು ಘಟಕ ಮನವಿಆತ್ಮೀಯರೆ,ಜಯಕರ್ನಾಟಕ ಜನಪರ ವೇದಿಕೆಯರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಅವರ ಮ...
29/07/2025

ಅಕ್ರಮ ಗಣಿಗಾರಿಕೆ ತಡೆಹಿಡಿಯುವಂತೆ ಸುರಪುರ ತಾಲ್ಲೂಕು ಘಟಕ ಮನವಿ

ಆತ್ಮೀಯರೆ,
ಜಯಕರ್ನಾಟಕ ಜನಪರ ವೇದಿಕೆಯ
ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ತೇಜರಾಜ್ ರಾಥೋಡ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಗಾದ ವೆಂಕಟೇಶ್ ರೆಡ್ಡಿ ಅವರ ಸಹಕಾರದೊಂದಿಗೆ, ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷರಾದ ರವಿಕುಮಾರ್ ನಾಯಕ ಬೈರಮರಡಿ ಅವರ ಉಪಸ್ಥಿತಿಯಲ್ಲಿ, ಸುರಪುರ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ ಅವರ ಅಧ್ಯಕ್ಷತೆಯಲ್ಲಿ,

ಸುರಪುರ ನಗರಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಹಿಡಿಯುವಂತೆ ಮತ್ತು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯವನ್ನು ನಿರ್ಮಿಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುರಪುರ ತಾಲ್ಲೂಕು ಪದಾಧಿಕಾರಿಗಳಾದ ವೆಂಕಟೇಶ ನಾಯಕ ಸುಬೇದಾರ್, ದೇವು ನಾಯಕ, ರಾಘವೇಂದ್ರ, ರವಿಕಿರಣ್, ಮೌನೇಶ್, ಬಸವರಾಜ್ ಪಾಟೀಲ್, ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇಂತಿ:
ಜಯಕರ್ನಾಟಕ
ಜನಪರ ವೇದಿಕೆ.

ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳುಶಿವನ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ದುಷ್ಟದ ದೃಷ್ಟಿಯಿಂದ ನಿಮ್ಮನ್ನು ದೇವರು ಕಾಪಾಡಲಿ.ನ...
29/07/2025

ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶಿವನ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ದುಷ್ಟದ ದೃಷ್ಟಿಯಿಂದ ನಿಮ್ಮನ್ನು ದೇವರು ಕಾಪಾಡಲಿ.
ನಮ್ಮ ಸಂಸ್ಕೃತಿ, ನಂಬಿಕೆ ಮತ್ತು ನಿಸರ್ಗದ ಈ ಪವಿತ್ರ ದಿನವನ್ನು ಶ್ರದ್ಧೆಯಿಂದ ಆಚರಿಸೋಣ.

- ಜಯ ಕರ್ನಾಟಕ ಜನಪರ ವೇದಿಕೆ

#ನಾಗರಪಂಚಮಿ #ಜಯಕರ್ನಾಟಕ

Address

JAYA KARNATAKA JANAPARA VEDIKE (Regd. ) #912, 9th Floor, Barton Center, M. G. Road
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Alerts

Be the first to know and let us send you an email when Jaya Karnataka Janapara Vedike posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jaya Karnataka Janapara Vedike:

Share