Jaya Karnataka Janapara Vedike

Jaya Karnataka Janapara Vedike JKJV Jaya Karnataka Janapara Vedike (JKJV) is a nonprofit organization that aims at improving the quality of life for the people of Karnataka.

A truly democratic, non-political organization that has originated in response to the ever increasing problems of the people of this state. The list of woes is endless, such as, disparities in our society, the widening gap between the rich and the poor, corruption and inefficiency in our political system, an administrative system that has ignored the cries of the common man, the farmers, the students, homeless labourers, deprivation of women's rights, commercialisation of education and medical sector, food adulteration, the list is endless. The solution is when every single person in the government machinery is held accountable. JKJV aims to be a transparent bridge between the government and the common man. We also strongly believe in the principle, "Of the People, By the People, For the People" and aim at empowering the common man to fight for his rights, to say NO to corruption, NO to exploitation, to demand and get what rightfully belongs to him. Jaya Karnataka Janapara Vedike
Head Office Address:
# 912, 9th floor, Barton Center, M.G.Road, Bengaluru - 560 001. Contact: +91 9900044299
Email: jayakarnatakajanaparavedike@gmail.com, jayakarnatakajv@gmail.com

2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಗಣ್ಯರೊಂದಿಗೆ ಚಾಲನೆ ನೀಡಿದ ಶ್ರೀ ಬಿ.ಗುಣರಂಜನ್ ಶೆಟ್ಟಿರವರುಆತ್ಮೀಯರೆ,ಜನಪ್ರತಿನಿಧಿಗಳು, ಐಎಎಸ್‌-...
22/02/2026

2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಗಣ್ಯರೊಂದಿಗೆ ಚಾಲನೆ ನೀಡಿದ ಶ್ರೀ ಬಿ.ಗುಣರಂಜನ್ ಶೆಟ್ಟಿರವರು

ಆತ್ಮೀಯರೆ,

ಜನಪ್ರತಿನಿಧಿಗಳು, ಐಎಎಸ್‌-ಐಪಿಎಸ್‌ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್‌ವುಡ್ ತಾರೆಯರು ಹಾಗೂ ಪತ್ರಕರ್ತರಿಗಾಗಿ ಆಯೋಜಿಸಿರುವ 2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ರಾಮಲಿಂಗಾ ರೆಡ್ಡಿ, ಶ್ರೀ ಕುಮಾರ್ ಬಂಗಾರಪ್ಪ ರವರು, ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಶ್ರೀ ಕೆ.ವಿ.ಪ್ರಭಾಕರ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಹಾಗೂ ಜಯಕರ್ನಾಟಕ ಜನಪರ‌ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರು ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.

ಈ ಟೂರ್ನಿಯಲ್ಲಿ ಮಾಧ್ಯಮ, ಸಿನಿಮಾ, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಇತರೆ ಕ್ಷೇತ್ರದಿಂದ 120ಕ್ಕೂ ಅಧಿಕ ಆಟಗಾರರ 8 ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಮಹಾ ಶಿವರಾತ್ರಿಯಂದು ವಿಜಯನಗರ ಜಿಲ್ಲಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಯಕರ್ನಾಟಕ ಜನಪರ ವೇದಿ...
09/02/2026

ಮಹಾ ಶಿವರಾತ್ರಿಯಂದು ವಿಜಯನಗರ ಜಿಲ್ಲಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಯಕರ್ನಾಟಕ ಜನಪರ ವೇದಿಕೆ.

ಆತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ಅವರ ಸಲಹೆಯೊಂದಿಗೆ, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಅವರ ನೇತೃತ್ವದಲ್ಲಿ,

ಪವಿತ್ರವಾದ ಮಹಾಶಿವರಾತ್ರಿ ಹಬ್ಬದಂದು ವಿಜಯನಗರ ಜಿಲ್ಲಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ವಿಜಯನಗರ ಜಿಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ರವರು 2026ರ ವಿಶ್ವ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಆತ...
05/02/2026

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ರವರು 2026ರ ವಿಶ್ವ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆತ್ಮೀಯರೆ,

ಕನ್ನಡ ನಾಡು ನುಡಿ ಏಳಿಗೆಗಾಗಿ ಶ್ರಮಿಸುತ್ತಿರುವ ವಿವಿಧ ಕ್ಷೇತ್ರದ ಸಾಧಕರನ್ನು ಭೂಮಿ ಮೀಡಿಯಾ ನೆಟ್‌ವರ್ಕ್ ಸಂಸ್ಥೆಯವರು ಗುರುತಿಸಿ ನೀಡುವ ವಿಶ್ವ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ರವರಿಗೆ ಸಮಸ್ತ ಜಯಕರ್ನಾಟಕ ಜನಪರ ವೇದಿಕೆಯ ಕುಟುಂಬದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ವಿ.ಸೂ: ಫೆಬ್ರವರಿ.8ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟದ ಎದುರುನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

“ಜಿಲ್ಲಾಧಿಕಾರಿ ಹಠಾವೋ – ರೈತ ಬಚಾವೋ”ಆತ್ಮೀಯರೆ,ರೈತರ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಡಳಿತದ ವಿರ...
05/02/2026

“ಜಿಲ್ಲಾಧಿಕಾರಿ ಹಠಾವೋ – ರೈತ ಬಚಾವೋ”

ಆತ್ಮೀಯರೆ,

ರೈತರ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಡಳಿತದ ವಿರುದ್ದವಾಗಿ ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಶ್ರೀಯುತ ಕುಮಾರಸ್ವಾಮಿ ಅವರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಲವಾರು ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ
ಫೆ.4ರಂದು ರಾಮನಗರದಲ್ಲಿ ಕರೆ ನೀಡಿದ್ದ “ಜಿಲ್ಲಾಧಿಕಾರಿ ಹಠಾವೋ – ರೈತ ಬಚಾವೋ” ಎಂಬ ಐತಿಹಾಸಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನಸ್ತೋಮ..

ಧನ್ಯವಾದಗಳೊಂದಿಗೆ,

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಜಯಕರ್ನಾಟಕ ಜನಪರ ವೇದಿಕೆ ತಿಪಟೂರು ತಾಲ್ಲೂಕು ಘಟಕದಿಂದ ಶಾಲಾ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆಆತ್ಮೀಯರೆ,ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್...
05/02/2026

ಜಯಕರ್ನಾಟಕ ಜನಪರ ವೇದಿಕೆ ತಿಪಟೂರು ತಾಲ್ಲೂಕು ಘಟಕದಿಂದ ಶಾಲಾ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ

ಆತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ಅವರ ಸಲಹೆಯೊಂದಿಗೆ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಬಿ.ಟಿ.ಕುಮಾರ್ ಅವರ ನೇತೃತ್ವದಲ್ಲಿ,

ತಿಪಟೂರು ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಹಿಂಭಾಗದಲ್ಲಿರುವ ಕಲ್ಪತರು ಸೇವಾ ಆಶ್ರಮದ ವಿದ್ಯಾರ್ಥಿಗಳಿಗೆ ದಿ.ಕೆ.ಎಲ್.ಪರಮಶಿವಯ್ಯ ಅವರ ಸ್ಮರಣಾರ್ಥ ಉಚಿತ ಶಾಲಾ ಬ್ಯಾಗ್, ನೋಟ್ ಪುಸ್ತಕ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು, ಪತ್ರಕರ್ತರು ಸೇರಿದಂತೆ ಇತರರು ಇದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಅಳವಡಿಸಿರುವ ಗುಟ್ಕಾ ಜಾಹಿರಾತನ್ನು ತೆರವುಗೊಳಿಸಲು ಜಯಕರ್ನಾಟಕ ಜನಪರ ವೇದಿಕೆ ಒತ್ತಾಯ ಆತ್ಮೀಯರೆ,ಜಯಕರ್ನಾಟಕ ಜನ...
04/02/2026

ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಅಳವಡಿಸಿರುವ ಗುಟ್ಕಾ ಜಾಹಿರಾತನ್ನು ತೆರವುಗೊಳಿಸಲು ಜಯಕರ್ನಾಟಕ ಜನಪರ ವೇದಿಕೆ ಒತ್ತಾಯ

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ಅವರ ಸಲಹೆಯೊಂದಿಗೆ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ಅವರ ನೇತೃತ್ವದಲ್ಲಿ,

ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಸಾರಿಗೆ ಬಸ್ ಗಳ ಮೇಲೆ ಗುಟ್ಕಾ ಜಾಹಿರಾತುಗಳನ್ನು ಪ್ರದರ್ಶಸಿದ್ದು ಇದರಿಂದ ಕೇವಲ ಸಾರಿಗೆ ಬಸ್ಸುಗಳ ಸೌಂದರ್ಯವನ್ನು ಕೆಡಸುವುದಲ್ಲದೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗುಟ್ಕಾ ಬಳಕೆಗೆ ಪ್ರಚೋದಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಸಮಾಜದ ಒಳತಿಗಾಗಿ ಬಸ್ಸುಗಳ ಮೇಲಿನ ಗುಟ್ಕಾ ಜಾಹೀರಾತನ್ನು ತೆರವುಗೊಳಿಸಬೇಕೆಂದು ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಒತ್ತಾಯದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಜಗದೀಶ್ ಜಾಧವ, ರಾಜೇಶ್ವರಿ ಹೊಸೂರ, ಅನ್ವರ ನದಾಫ, ರಾಘವೇಂದ್ರ ಮಾನೆ, ಮೋಹನ ಘೋರ್ಪಡೆ, ವಿನೋದ್ ಗೌಡ ಪಾಟೀಲ, ಪ್ರಮೋದ್ ಶೆಟ್ಟಿ, ಗುರುಸಿದ್ದಪ್ಪ ಅವ್ವನವರ, ರೋಹಿತ ಬಾರಕೇರ, ವಿನಾಯಕ ಹಲಗಿ, ಅಶೋಕ ಇಂಗಳೆ, ಮಲಿಕ ಹೊಸೂರ, ರಾಜು ಪಾಟೀಲ, ರವಿಕುಮಾರ ದೇಶಪಾಂಡೆ, ರಾಜು ಸವದತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಫೆಬ್ರವರಿ 4,ವಿಶ್ವ ಕ್ಯಾನ್ಸರ್ ದಿನಈ ವಿಶ್ವ ಕ್ಯಾನ್ಸರ್ ದಿನದಂದು ನಾವೆಲ್ಲರೂ ಒಂದಾಗಿ ಕ್ಯಾನ್ಸರ್ ವಿರುದ್ಧ ಹೋರಾಡೋಣ.  ಕ್ಯಾನ್ಸರ್ ವಿರುದ್ಧದ ...
04/02/2026

ಫೆಬ್ರವರಿ 4,
ವಿಶ್ವ ಕ್ಯಾನ್ಸರ್ ದಿನ

ಈ ವಿಶ್ವ ಕ್ಯಾನ್ಸರ್ ದಿನದಂದು ನಾವೆಲ್ಲರೂ ಒಂದಾಗಿ ಕ್ಯಾನ್ಸರ್ ವಿರುದ್ಧ ಹೋರಾಡೋಣ. ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಸ್ಪೂರ್ತಿದಾಯಕ ವಿಷಯವನ್ನಾಗಿ ಮಾಡೋಣ.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.



ಅತ್ಮೀಯರೆ,ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ...
23/01/2026

ಅತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ಅವರ ಸಹಕಾರದೊಂದಿಗೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರದಾ ಶಿವರೆಡ್ಡಿ ಹುಚರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ 2026ರ ಮೊದಲ ಪೂರ್ವಭಾವಿ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನೂ ಉನ್ನತಮಟ್ಟದಲ್ಲಿ ಕಟ್ಟಿ ಹೋರಾಟ ಮತ್ತು ಕಾರ್ಯಕ್ರಮವನ್ನು ರೂಪಿಸುವ ವಿಚಾರವಾಗಿ ಚರ್ಚಿಸಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಇದೇವೇಳೆ ಜನವರಿ 27ರ ಮಂಗಳವಾರ ಮತ್ತು 28ರ ಬುಧವಾರ ಬೆಂಗಳೂರಿನ ಹೆಗಡೆನಗರದ ಇಬಿಸು ಕನ್ವೆಂಷನ್ ಸೆಂಟರ್ ನಲ್ಲಿ ನಡೆಯುವ ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ್ ಅವರ ಸುಪುತ್ರಿಯ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳಿಗೆ ನೀಡಿ ಮದುವೆಗೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಅನೇಕರು ಇದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

"ಜಯಕರ್ನಾಟಕ ಜನಪರ ವೇದಿಕೆಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪುತ್ಥಳಿಗೆ ಮಾಲಾರ್ಪಣೆ"ಆತ್ಮೀಯರೆ,ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನ...
23/01/2026

"ಜಯಕರ್ನಾಟಕ ಜನಪರ ವೇದಿಕೆಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪುತ್ಥಳಿಗೆ ಮಾಲಾರ್ಪಣೆ"

ಆತ್ಮೀಯರೆ,

ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ, ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನದ ಪ್ರಯುಕ್ತ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಮುತ್ತು ಬೆಳ್ಳಕ್ಕಿ ಅವರ ನೇತೃತ್ವದಲ್ಲಿ,

ಧಾರವಾಡದ ಪಾಲಿಕೆಯ ಆವರಣದಲ್ಲಿರುವ ನೇತಾಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಪಧಾದಿಕಾರಿಗಳಾದ ಜಗದೀಶ ಜಾದವ, ವಿನೋದಗೌಡ ಪಾಟೀಲ, ಪ್ರಶಾದ ಶೆಟ್ಟಿ, ಗುರುಸಿದ್ದಪ್ಪ ಅವ್ವನವರ, ಮಾಂತೇಶ ಪೋಳ, ಮಲ್ಲಿಕ ಹೊಸೂರ, ಸಂಜಯ ಇಂಗಳೆ, ಮುಂತಾದವರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಹದಗೆಟ್ಟಿರುವ ರಸ್ತೆ ಉಬ್ಬುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆಯ ಚಿತ್ರದುರ್ಗ ಜಿಲ್ಲಾ ಘಟಕ ಮನವಿಆತ್ಮೀಯರೆ,ನಮ್ಮ ಜಯಕರ್...
21/01/2026

ಹದಗೆಟ್ಟಿರುವ ರಸ್ತೆ ಉಬ್ಬುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆಯ ಚಿತ್ರದುರ್ಗ ಜಿಲ್ಲಾ ಘಟಕ ಮನವಿ

ಆತ್ಮೀಯರೆ,

ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಹೆಚ್.ರಾಮಚಂದ್ರಯ್ಯ ಅವರ ಸಹಕಾರದೊಂದಿಗೆ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಬಿ.ಟಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ,

ಚಿತ್ರದುರ್ಗ ನಗರದಲ್ಲಿ ವಾಹನ ಸಂಚಾರ ಅಧಿಕವಾಗಿದ್ದು, ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿರುವ ಹಂಪ್ಸ್ ಗಳು ಹದಗೆಟ್ಟಿರುವುದರಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದರ ಜೊತೆಗೆ ಶಾಲಾ- ಕಾಲೇಜುಲಿನ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆ ದಾಟುವಾಗ ಭಯದಿಂದಲ್ಲೇ ಓಡಾಡುವಂತಾಗಿದೆ.

ಆದುದರಿಂದ ವಾಹನ ಸವಾರರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೆ ಹದಗೆಟ್ಟಿರುವ ರಸ್ತೆ ಉಬ್ಬುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆಯ ಚಿತ್ರದುರ್ಗ ಜಿಲ್ಲಾ ಸಮಿತಿಯ ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಪ್ರವೀಣ್, ತಾಲ್ಲೂಕು ಅಧ್ಯಕ್ಷರಾದ ಬಿ. ಅಶೋಕ್, ಕಾರ್ಯಾಧ್ಯಕ್ಷ ನಿರಂಜನ್, ತಾಲ್ಲೂಕು ಉಪಾಧ್ಯಕ್ಷರಾದ ರಂಗನಾಥ್, ಪವನ್, ವರುಣ್ ಹರೀಶ್ ಸೇರಿದಂತೆ ಇತರ ಇದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

|| ಓಂ ಶ್ರೀ ಗುರು ಬಸವ ಲಿಂಗಾಯ ನಮಃ||ಭಕ್ತಿ ಪ್ರಣಾಮಗಳುದಾಸೋಹ ದಿನಜನವರಿ 21ನಡೆದಾಡುವ ದೇವರು, ಕಾಯಕಯೋಗಿ, ಕಲಿಯುಗದ ಬಸವಣ್ಣ, ಪದ್ಮಭೂಷಣ, ಭಾರತ...
21/01/2026

|| ಓಂ ಶ್ರೀ ಗುರು ಬಸವ ಲಿಂಗಾಯ ನಮಃ||
ಭಕ್ತಿ ಪ್ರಣಾಮಗಳು

ದಾಸೋಹ ದಿನ
ಜನವರಿ 21

ನಡೆದಾಡುವ ದೇವರು, ಕಾಯಕಯೋಗಿ, ಕಲಿಯುಗದ ಬಸವಣ್ಣ, ಪದ್ಮಭೂಷಣ, ಭಾರತ ರತ್ನ, ಕರ್ನಾಟಕ ರತ್ನ, ತ್ರಿವಿಧ ದಾಹೋಹ ಜ್ಯೋತಿ, ಶ್ರೀಮನ್ ನಿರಂಜನ ಪ್ರಣವ ಸ್ಚರೂಪಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳವರ ಪುಣ್ಯ ಸ್ಮರಣಾರ್ಥ ನಮ್ಮ ಭಕ್ತಿ ಪೂರ್ವಕ ನಮನಗಳು.

Jan 21
Dasoha Day

Remembering the Indian humanitarian, Spiritual leader and educator, who was the seer of Siddaganga Matha,

Nadedaduva Devaru, Kayaka Yogi, Trivida Daasohi, Abhinava Basavanna, Padmabhushana, Bharatha Rathna, Karnataka Rathna, Paramapoojya Sri Sri Sri Dr. Shivakumara Mahaswamiji On his death anniversary.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಬೆಳೆ ಕಟಾವು, ಹೊಸ ಆರಂಭ ಮತ್ತು ಸಮೃದ್ಧಿಯ ಪ್ರತೀಕವಾದ ಮಕರ ಸಂಕ್ರಾಂತಿ ಹಬ್ಬವು ಎಲ್ಲರ ಜೀವನದಲ್ಲೂ ಆರೋಗ...
15/01/2026

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

ಬೆಳೆ ಕಟಾವು, ಹೊಸ ಆರಂಭ ಮತ್ತು ಸಮೃದ್ಧಿಯ ಪ್ರತೀಕವಾದ ಮಕರ ಸಂಕ್ರಾಂತಿ ಹಬ್ಬವು ಎಲ್ಲರ ಜೀವನದಲ್ಲೂ ಆರೋಗ್ಯ, ಸಂತೋಷ, ಶಾಂತಿ ಹಾಗೂ ಯಶಸ್ಸನ್ನು ತರಲಿ.
ಸಮಾಜದಲ್ಲಿ ಸೌಹಾರ್ದತೆ, ಏಕತೆ ಮತ್ತು ಸಕಾರಾತ್ಮಕ ಬದಲಾವಣೆಗಳಿಗೆ ಈ ಹಬ್ಬ ಪ್ರೇರಣೆಯಾಗಲಿ.

ಎಲ್ಲರಿಗೂ ಸಂತಸಮಯ ಹಾಗೂ ಸಮೃದ್ಧಿಯ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

#ಮಕರಸಂಕ್ರಾಂತಿ #ಹಬ್ಬದಶುಭಾಶಯಗಳು #ಬೆಳೆಹಬ್ಬ #ಹೊಸಆರಂಭ #ಸಮೃದ್ಧಿ #ಸೌಹಾರ್ದತೆ #ಕನ್ನಡಹಬ್ಬ #ಭಾರತೀಯಹಬ್ಬಗಳು

Address

JAYA KARNATAKA JANAPARA VEDIKE (Regd. ) #912, 9th Floor, Barton Center, M. G. Road
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Alerts

Be the first to know and let us send you an email when Jaya Karnataka Janapara Vedike posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jaya Karnataka Janapara Vedike:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram