Swasthya.Way2Health

Swasthya.Way2Health There is always a royal way to live healthy staying away from disease, doctor and drugs by pro-nature living without messing up with the mother nature!

We become what we consume;whether it's food Let food or thoughts. Be food be our medicine, pro-nature loving is our lifestyle.

ಹೊಟ್ಟೆ ಭಾಗದ ಬೊಜ್ಜು, ಅಧಿಕ ತೂಕ ಇಳಿಸಿಕೊಳ್ಳುವ ಸಹಜ, ಸುಲಭ ಹಾಗೂ ಸರಳ ವಿಧಾನ! ಉಪವಾಸವಿಲ್ಲ-ಸಪ್ಲಿಮೆಂಟ್ಸ್ ಗಳಿಲ್ಲ-ಕಠಿಣ ವ್ಯಾಯಾಮವಿಲ್ಲ!  ನ...
16/04/2023

ಹೊಟ್ಟೆ ಭಾಗದ ಬೊಜ್ಜು, ಅಧಿಕ ತೂಕ
ಇಳಿಸಿಕೊಳ್ಳುವ ಸಹಜ, ಸುಲಭ ಹಾಗೂ ಸರಳ ವಿಧಾನ!

ಉಪವಾಸವಿಲ್ಲ-ಸಪ್ಲಿಮೆಂಟ್ಸ್ ಗಳಿಲ್ಲ-ಕಠಿಣ ವ್ಯಾಯಾಮವಿಲ್ಲ!

ನಿಮಗ ತಿಳಿದಿರುವಂತೆ ನಮ್ಮಲ್ಲಿ ಬಹಳಷ್ಟು ಜನ ಅಸಹಜ ರೀತಿಯಲ್ಲಿ ದಪ್ಪಗಿರುತ್ತಾರೆ, ಸಣ್ಣಗಿದ್ದವರಲ್ಲೂ ಹೊಟ್ಟೆಯ ಭಾಗ ದಪ್ಪಗಿರುತ್ತದೆ.
ಜೆನೆಟಿಕ್ ಕಾರಣದಿಂದ ಭಾರತೀಯರಲ್ಲಿ ಹೊಟ್ಟೆ ಹಾಗೂ ಮುಖದ ಭಾಗದಲ್ಲಿ, ಅಮೆರಿಕನ್ನರಲ್ಲಿ ಕುಂಡಿಯ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗುತ್ತದೆ.

ಮೂಲ ಕಾರಣವಿಷ್ಟೇ, ನಮ್ಮ ಆಹಾರ ಕ್ರಮ!

ಯಾರನ್ನಾದರೂ ನೀವು ಇಂದು ಏನು ತಿಂದಿರಿ ಕೇಳಿದರೆ, ಸಾಮಾನ್ಯವಾಗಿ ಸಿಗುವ ಉತ್ತರ ಅನ್ನ-ಚಪಾತಿ, ಅನ್ನ-ಅನ್ನ ಮುದ್ದೆ ಎಂದು ಉತ್ತರ ಸಿಗುತ್ತದೆ.
ಅಂದರೆ ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ 2 ಕೆಜಿ ಯಷ್ಟು ಊಟ ಮಾಡಿದರೆ ಅದರ 2/3 ಭಾಗದಷ್ಟು ಅನ್ನ, ಚಪಾತಿ ತಿನ್ನುತ್ತಾನೆ.
ಅಂದರೆ ಹೆಚ್ಚಿನ ಫ್ಯಾಟ್ ಉತ್ಪತ್ತಿ ಮಾಡುವ ಆಹಾರವನ್ನೇ ಪ್ರತಿ ದಿನ ಹೆಚ್ಚು ತಿನ್ನುತ್ತೇವೆ , ಇದೆ ಮೂಲ ಕಾರಣ.

ಹಾಗಾದರೆ ಪರಿಹಾರವೇನು?

ಮೊದಲನೇ ವಿಧಾನ:

ನೀವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಕನಿಷ್ಟ ಅರ್ಧದಷ್ಟು ಭಾಗ ಹಣ್ಣು, ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಇರುವಂತೆ ನೋಡಿಕೊಳ್ಳಿ. ಸೂರ್ಯಾಸ್ಥದ ನಂತರ ಬೆಳಗಿನ ಉಪಹಾರದವರೆಗಿನ ಅಂತರವನ್ನು ಕನಿಷ್ಠ 12 ಗಂಟೆ ಇರುವಂತೆ ನೋಡಿಕೊಳ್ಳಿ ಸಾಕು. ಕೇವಲ ಒಂದು ತಿಂಗಳಲ್ಲಿ ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ.
ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲಾ, ದೇಹದ ಯಾವ ಭಾಗದಲ್ಲಿ ಕೊಬ್ಬು ಹೆಚ್ಚಿದೆಯೋ ಅಲ್ಲೆಲ್ಲಾ ತನ್ನಿಂದ ತಾನೇ ಬೊಜ್ಜು ಕರಗುತ್ತದೆ.

ಎರಡನೆಯ ಪರಿಣಾಮಕಾರಿ ವಿಧಾನ ಡಿ.ಐ.ಪಿ ಡಯಟ್ (DIP):

ಮೂರು ಹಂತದ ಡಿ.ಐ.ಪಿ ಡಯಟ್ (DIP) ಅನುಸರಿಸುವುದು.

ಮೊದಲ ಹಂತ:
ನಿಮ್ಮ ದೇಹದ ತೂಕವನ್ನು ೧೦ ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ನಿಮ್ಮಿಷ್ಟದ ನಾಲ್ಕು ವಿವಿಧ ರೀತಿಯ ಹಣ್ಣುಗಳನ್ನು ಮಧ್ಯಾಹ್ನ 12 ಗಂಟೆಯ ವರಗೆ ತಿನ್ನಬೇಕು. (ಆಯಾ ಋತುಮಾನದ ಸ್ಥಳೀಯ ಹಣ್ಣುಗಳು, 60 ಕೆಜಿ ತೂಕದವರಾದರೆ 600 ಗ್ರಾಂ ನಷ್ಟು ).
ಎರಡೇ ಹಂತ:
ನಿಮ್ಮ ದೇಹದ ತೂಕವನ್ನು 5 ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ( 60 ಕೆಜಿ ತೂಕದವರು 300 ಗ್ರಾಂ ನಷ್ಟು) ನಾಲ್ಕು ರೀತಿಯ ಯಾವುದಾದರೂ ಹಸಿ ತರಕಾರಿಗಳನ್ನು ತಿನ್ನ ಬೇಕು, ನಂತರ ನಿಮ್ಮಿಷ್ಟದ ಏನನ್ನಾದರೂ ತಿನ್ನಬಹುದು.
ನೆನಪಿರಲಿ ಹಸಿ ತರಕಾರಿಗಳನ್ನು ತಿಂದ ನಂತರವೇ ನಿಮ್ಮಿಷ್ಟದ ಊಟ!

ರಾತ್ರಿಯ ಊಟಕ್ಕೂ ಇದೇ ವಿಧಾನ ಅನುಸರಿಸಿ. ಹಸಿ ತರಕಾರಿಗಳು+ನಿಮ್ಮಿಷ್ಟದ ಊಟ. ಗರಿಷ್ಠ 8 ಗಂಟೆಯ ಒಳಗೆ ತಿನ್ನ ಬೇಕು.
ಸಮಯ ಮೀರಿದರೆ ಯಾವ ಆಹಾರವೂ ಬೇಡ!

ಮೂರನೇ ಹಂತ: ಪ್ರಾಣಿಜನ್ಯ ಆಹಾರ ಪದಾರ್ಥಗಳನ್ನು ವರ್ಜಿಸುವುದು.
ಅಂದರೆ, ಮಾಂಸಾಹಾರ, ಮೊಟ್ಟೆ, ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ ಯಾವುದೂ ಬೇಡ. ಹಾಗೆಯೇ ಫ್ಯಾಕ್ಟರಿ, ಬೇಕರಿ ಪದಾರ್ಥಗಳನ್ನು ಈ ಡಯಟ್ ಸಮಯದಲ್ಲಿ ಬಿಟ್ಟು ಬಿಡುವುದು.

ಗಮನಿಸಿ. ಇಲ್ಲಿ ಸೂಚಿಸಿರುವಂತೆ ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಸಿಪ್ಪೆ ತೆಗೆದ ಮೇಲೆ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕೂ ಅಧಿಕ ಪ್ರಮಾಣದಲ್ಲಿ ಹಣ್ಣು- ತರಕಾರಿಗಳನ್ನು ತಿಂದರೆ ಅದು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಸರಿಯಾದ ಪ್ರಮಾಣಕ್ಕಿಂತ ಕಡಿಮೆ ತಿಂದರೆ ಅದು ಕೇವಲ ಆಹಾರವಾಗುತ್ತದೆ.

ಈ ಡಿ.ಐ.ಪಿ ಡಯಟ್ ಮೂರು ಮೂರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನದ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.
(ಸಸ್ಯಾಹಾರ-ಮಾಂಸಾಹಾರ ಆಹಾರ ಕ್ರಮದ ಮೇಲೆ ಅಲ್ಲ!)

ಒಂದು ತಿಂಗಳ ಕಾಲ ಶಿಸ್ತು ಬದ್ದವಾಗಿ ಈ ಡಿ.ಐ.ಪಿ ಡಯಟ್ ಅನ್ನು ಪಾಲಿಸಿದರೆ, ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ. ಮೂಳೆ-ಮಾಂಸಖಂಡಗಳಿಗೆ ಧಕ್ಕೆಯಾಗದಂತೆ ದೇಹದ ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲದೆ ಎಲ್ಲೆಲ್ಲಿ ಹೆಚ್ಚಿನ ಕೊಬ್ಬಿದೆಯೋ ಆಯಾ ಭಾಗದಲ್ಲಿ ಮಾತ್ರ ಕೊಬ್ಬು, ಹೆಚ್ಚಿನ ನೀರಿನ ಅಂಶ ಕರಗಿ ನಿಮ್ಮ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಕಡಿಮೆಯಾಗುತ್ತದೆ.
ಜೊತೆಗೆ ಬಹಳ ಚೈತನ್ಯವೂ ಇರುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ.
ಬಹಳ ಮುಖ್ಯವಾಗಿ ತಪ್ಪಾದ ಜೀವನ ಶೈಲಿಯಿಂದ ಬರುವ ಖಾಯಿಲೆಗಳಾದ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದಯ, ಚರ್ಮ ಸಂಬಂಧಿ ತೊಂದರೆಗಳು, ಖಾಯಿಲೆಗಳು, ಅಜೀರ್ಣ, ಮಲಬದ್ಧತೆ, ಇತ್ಯಾದಿ ಖಾಯಿಲೆಗಳ ವಿಷಯದಲ್ಲಿ ಕೇವಲ ಒಂದು ವಾರದಲ್ಲಿ ಈ ಡಿ.ಐ.ಪಿ ಡಯಟ್ ಅನುಸರಿಸುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸ್ವಾಭಾವಿಕವಾಗಿ ಪ್ರಗತಿ ಕಾಣಬಹುದು.

(ಡಿ.ಐ.ಪಿ ಡಯಟ್ ನ ಸಂಪೂರ್ಣ ವಿವರವನ್ನು ನನ್ನ ಹಿಂದಿನ ಲೇಖನದಲ್ಲಿ ತಿಳಿಸಲಾಗಿದೆ.)

ಇನ್ನೂ ಶೀಘ್ರದಲ್ಲಿ ಫಲಿತಾಂಶ ಪಡೆಯಲು ಅತ್ಯಂತ ಪರಿಣಾಮಕಾರಿ ಮೂರನೇ ವಿಧಾನವಿದೆ.

ಅದು ಹಾಟ್ ವಾಟರ್ ಇಮ್ಮರ್ಶನ್ ಥೆರಫಿ.

ಬಾತ್ ಟಬ್ ನಿಮಗೆ ಗೊತ್ತಿದೆ ಅಲ್ಲವೇ?

ಬಾತ್ ಟಬ್ ತುಂಬಾ ನೀರು ತುಂಬಿಸಿ. 42 ಡಿಗ್ರಿ ಸೆಲ್ಸಿಯಸ್ ನಷ್ಟು ನೀರನ್ನು ಬಿಸಿ ಮಾಡಿ. ಒಂದೇ ಬಾರಿಗೆ ಸುಮಾರು ಎರಡು ಗಂಟೆಯಷ್ಟು ಸಮಯ ಅಥವಾ ಬೆಳಿಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆಯಷ್ಟು ಸಮಯ ಕುತ್ತಿಗೆಯ ಮಟ್ಟಕ್ಕೆ ದೇಹವನ್ನು ಸಂಪೂರ್ಣ ಮುಳುಗಿಸಿ ಕಾಲು ನೀಡಿ ಕುಳಿತುಕೊಳ್ಳುವುದನ್ನು ಸುಮಾರು ಒಂದು ತಿಂಗಳು ಅಭ್ಯಾಸ ಮಾಡಿದರೆ, ನೀವು ಆಶ್ಚರ್ಯ ಪಡುವಷ್ಟು ರೀತಿಯಲ್ಲಿ ಬೊಜ್ಜು ಕರಗುವುದರ ಜೊತೆಗೆ ಗಣನೀಯವಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಎಷ್ಟು ಎಂದರೆ ದಿನಕ್ಕೆ ಸುಮಾರು 500 ಗ್ರಾಂ ನಿಂದ ಅತೀ ತೂಕದವರಿಗೆ 1 ಕೆಜಿ ವರೆಗೆ ಕಡಿಮೆಯಾಗುತ್ತದೆ!

ದೇಹದ ಅನಗತ್ಯ ನೀರಿನಂಶ, ಟ್ಯೂಮರ್, ಸ್ಟೋನ್ ಕರಗುತ್ತದೆ.
ಕಿಡ್ನಿ ಯಲ್ಲಿನ ಹೆಚ್ಚಿನ ಕ್ರೆಟಿನೈನ್, ಕೊಲೆಸ್ಟ್ರಾಲ್, ಯೂರಿಯ, ಪೊಟ್ಯಾಷಿಯಂ, ಸೋಡಿಯಂ, ಯೂರಿಕ್ ಆಸಿಡ್, ಶುಗರ್, ಹೆಚ್ಚಿನ ಫ್ಯಾಟ್ ಎಲ್ಲವೂ ಬೆವರು ಹಾಗೂ ಮೂತ್ರದ ರೂಪದಲ್ಲಿ ದೇಹವು ಸ್ವಾಭಾವಿಕ ರೂಪದಲ್ಲಿ ಹೊರಹಾಕುತ್ತದೆ. ಡಯಾಲಿಸಿಸ್ ಹಂತ ತಲುಪಿದವರಿಗೆ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಹೊಂದಲು ಇದೊಂದು ಪರಿಣಾಮಕಾರಿ ಅಸ್ತ್ರ.

(ಮೇಲಿನ ಮೂರು ವಿಧಾನಗಳಿಗೂ ವಿಜ್ಞಾನದ ಅಡಿಪಾಯವಿದೆ, ಲಕ್ಷಾಂತರ ಗುಣಮುಖರಾದ ಉದಾಹರಣೆಗಳಿವೆ, ಆಯುಷ್ ಇಲಾಖೆ ಡಿ.ಐ.ಪಿ ಡಯಟ್ ಯನ್ನು ಸತತ ಎರಡು ವರ್ಷ ಗಮನಿಸಿ, ಅದರ ಪಲಿತಾಂಶಗಳನ್ನು ಕೂಲಂಕುಷವಾಗಿ ಗಮನಿಸಿ ಅಧಿಕೃತವಾಗಿ ಮಾನ್ಯ ಮಾಡಿದೆ.)

ಧನ್ಯವಾದಗಳು

ಕಾರಂಜಿ ಶ್ರೀಧರ್

Email: swasthya.way2health@gmail.com

ನೀವು ಒಳ್ಳೆಯವರು, ಆದರೂ ಏಕೆ ನಿಮಗೆ ಖಾಯಿಲೆಗಳು ಬರುತ್ತವೆ? ನನ್ನಮ್ಮ ಇದೇ ರೀತಿಯ ಇನ್ನೊಂದು ಪ್ರಶ್ನೆಯನ್ನು ನನಗೆ ಆಗಾಗ ಕೇಳುತ್ತಿರುತ್ತಾರೆ. '...
30/03/2023

ನೀವು ಒಳ್ಳೆಯವರು, ಆದರೂ ಏಕೆ ನಿಮಗೆ ಖಾಯಿಲೆಗಳು ಬರುತ್ತವೆ?

ನನ್ನಮ್ಮ ಇದೇ ರೀತಿಯ ಇನ್ನೊಂದು ಪ್ರಶ್ನೆಯನ್ನು ನನಗೆ ಆಗಾಗ ಕೇಳುತ್ತಿರುತ್ತಾರೆ.

'ಒಳ್ಳೆಯವರಿಗೇ ಏಕೆ ಕಷ್ಟಗಳು ಹೆಚ್ಚು ಬರುತ್ತವೆ' ಎಂದು.

ಇದೇ ರೀತಿಯ ಹಲವಾರು ಪ್ರಶ್ನೆಗಳು ನಿಮ್ಮಲ್ಲೂ ಇರಬಹುದು, ಅಲ್ಲವೇ?

ಖಾಯಿಲೆಗಳಾಗಲಿ, ಕಷ್ಟಗಳಾಗಲಲಿ ಒಳ್ಳೆಯತನಕ್ಕೆ ಸಂಬಂಧಪಟ್ಟಿದ್ದಲ್ಲ!
ಅರಿವು, ವಿವೇಚನೆ, ಬುದ್ದಿವಂತಿಕೆಗೆ ಸಂಬಂಧಪಟ್ಟಿದ್ದು.

ಇಲ್ಲಿ ಆರೋಗ್ಯ, ಸ್ವಾಸ್ಥ್ಯ ಹಾಗೂ ರೋಗಗಳು ಏಕೆ ಬರುತ್ತವೆ ಎನ್ನುವುದರ ಕುರಿತು ಒಂದೆರಡು ಪ್ರಮುಖ ಅಂಶದ ಕುರಿತು ಹೇಳಬಯಸುತ್ತೇನೆ.

ಖಾಯಿಲೆಗಳು, ಮೆಡಿಸಿನ್ ಗಳು, ದೊಡ್ಡ ದೊಡ್ಡ ಆಸ್ಪತ್ರೆ, ಅದನ್ನು ಮೀರಿಸುವ ಬಿಲ್ಲುಗಳು, ನಾವೇ ಬೆಸ್ಟು ಎಂದು ಡಂಗುರ ಸಾರುವ ಹೆಲ್ತ್ ಕೇರ್ ಬ್ರಾಂಡ್ ಗಳು, ಸಪ್ಲಿಮೆಂಟ್ಸ್, ಚಿಕಿತ್ಸಾ ಪದ್ದತಿಗಳು ನನ್ನಲ್ಲೂ ಬಹಳಷ್ಟು ಗೊಂದಲಗಳನ್ನು ಹುಟ್ಟು ಹಾಕಿದ್ದವು. ಸೂಕ್ತ, ಸಮಾಧಾನಕರ ಉತ್ತರ ಕಂಡುಕೊಳ್ಳಲು ವರ್ಷಾನುಗಟ್ಟಲೆ ನಾನು ಪರದಾಡಿದ್ದಿದೆ.

ಸುಮಾರು 25 ವರ್ಷಗಳ ಹಿಂದೆ ಸಜ್ಜನ, ಪ್ರಾಮಾಣಿಕ, ಕರ್ತವ್ಯನಿಷ್ಠ ಉದ್ಯೋಗಿ, ಪರೋಪಕಾರಿ, ದುಶ್ಚಟದ ಸೋಂಕೂ ಇಲ್ಲದ ನನ್ನ ತಂದೆ ಒಂದಷ್ಟು ತೀವ್ರತರ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಗೆ ತುತ್ತಾದರು. ಏನೇ ಚಿಕಿತ್ಸೆ, ಔಷದೋಪಚಾರ ಮಾಡಿದರೂ ಮತ್ತೆಂದೂ ಅವರು ಸಹಜ ಸ್ಥಿತಿಗೆ ಬರಲಿಲ್ಲ.

2009 ರ ವರ್ಷದಲ್ಲಿ ನಾನು ಸಹಜ ಆರೋಗ್ಯದ ಗುಟ್ಟು ತಿಳಿದುಕೊಳ್ಳುವ ಜಿಜ್ಞಾಸೆಗೆ ಬಿದ್ದು ಬೆಂಗಳೂರಿನಿಂದ-ಪಾಂಡಿಚೇರಿ ವರೆಗೂ ಸಂಶೋಧನಾ ಪ್ರವಾಸ ಕೈಗೊಂಡು ಹತ್ತು-ಹಲವು ಡಾಕ್ಟರ್ಸ್, ವೈದ್ಯ ಪದ್ಧತಿ, ಚಿಕಿತ್ಸಾ ಪದ್ದತಿಗಳು, ಆರೋಗ್ಯಧಾಮಗಳು, ಅವುಗಳಿಗೆ ಹೊಂದಿಕೊಂಡಂತೆ ಇರುವ ನಂಬಿಕೆಗಳು, ಆಚರಣೆಗಳು, ಜೀವ ವಿಜ್ಞಾನಗಳು, ಸಿದ್ದಿ ಪುರುಷರು, ಮೇಧಾವಿಗಳು, ವೈದ್ಯಕೀಯ ಕಾಲೇಜುಗಳು, ಅವುಗಳ ಸರ್ಟಿಫಿಕೇಟುಗಳನ್ನು ಮೀರಿಸುವ ವಿದ್ವತ್ತು ಉಳ್ಳ ದೊಡ್ಡ ದೊಡ್ಡ ವ್ಯಕ್ತಿತ್ವಗಳ ಸಂಪರ್ಕವಾಯಿತು, ಎಷ್ಟೊಂದು ರೂಢಿಗತ ಅಜ್ಞಾನಗಳು, ಮೌಢ್ಯಗಳ, ಆಚರಣೆಗಳ ವಿಷಯಗಳಲ್ಲಿ ಬೆಳಕು ಮೂಡಿಸುವಂತಹ ವಿಚಾರಗಳು ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂದವು.

ಇದೇ ಸಮಯದಲ್ಲಿ ನನ್ನ ತಂದೆಯ ಆರೋಗ್ಯ ತುಂಬಾನೇ ಬಿಗಡಾಯಿಸಿತ್ತು, ಹಾಸಿಗೆ ಬಿಟ್ಟು ಮೇಲೆ ಏಳುವಂತಿರಲಿಲ್ಲ.
ವೈದ್ಯರು, ಆಸ್ಪತ್ರೆಗಳು ಅಸಹಾಯಕತೆಯಿಂದ ಕೈ ಚೆಲ್ಲಿದ್ದವು.
ನನ್ನ ಪ್ರವಾಸದ ಸಮಯದಲ್ಲಿ ಸಿದ್ಧ ಹಾಗೂ ಆಯುರ್ವೇದ ಪದ್ದತಿಯಲ್ಲಿ ಪರಿಣಿತರು, ಸರ್ಜರಿ ತಜ್ಞರೂ ಆಗಿದ್ದ ಡಾ. ಕಾರ್ತಿಕೇಯನ್ ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದರು. ಅವರಿಗೆ ನನ್ನ ತಂದೆಯ ಅನಾರೋಗ್ಯದ ವಿಚಾರ ತಿಳಿಸಿ ಸಹಾಯ ಕೇಳಿ ಒಮ್ಮೆ ಬಂದು ತಪಾಸಣೆ ಮಾಡಲು ಮನವಿ ಮಾಡಿಕೊಂಡೆ.

ಕೂಡಲೇ ಸ್ಪಂದಿಸಿ ಬಂದ ಡಾ. ಕಾರ್ತಿಕೇಯನ್ ನನ್ನ ತಂದೆಯ ಎಡಗೈ ನಾಡಿ ಪರೀಕ್ಷಿಸಿ 'ಚಿಂತೆ ಬೇಡ, ಮೂರು ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ' ಎಂದು ಅದೇನು ದೊಡ್ಡ ವಿಷಯವಲ್ಲ ಎಂಬಂತೆ ಹೇಳಿದರು. ನಂತರ ಅವರು ಹೇಳಿದ ಸಮಯಕ್ಕಿಂತ ಅತೀ ಕಡಿಮೆ ಸಮಯದಲ್ಲಿ ಚೇತರಿಕೊಂಡರು. ಅಷ್ಟರಲ್ಲಾಗಲೇ ಬಹಳ ಕೃಶರಾಗಿದ್ದ ಅವರು ಅಲ್ಲಿಂದ ಒಂದಷ್ಟು ತಿಂಗಳು ನಮ್ಮೊಡನಿದ್ದು ದೇಹಾಂತ್ಯವಾದರು.

ಈ ಘಟನೆಯ ನಂತರ ಔಷಧಿಗಳು, ದುಬಾರಿ ಚಿಕಿತ್ಸೆ, ಆಸ್ಪತ್ರೆಗಳು, ಪದವಿಗಳನ್ನು ಮೀರಿದ ಜೀವ ವಿಜ್ಞಾನದ ಮಹತ್ವ ಸ್ವತಃ ನನ್ನ ಅನುಭವಕ್ಕೆ ಬಂದಿತ್ತು.

ಇಷ್ಟರ ನಡುವೆಯೂ ನಮಗೆ ಖಾಯಿಲೆಗಳು ಬರಲು ಮೂಲ ಕಾರಣವೇನು?
ಸ್ವಾಭಾವಿಕ ಹಾಗೂ ನೈಸರ್ಗಿಕವಾಗಿ ಗುಣಪಡಿಸುವ ವಿಧಾನಗಳೇನು? ಎಂಬ ಪ್ರಮುಖ, ಮೂಲಭೂತ ಪ್ರಶ್ನೆಗಳಿಗೆ , ಡಾ. ಬಿ ಎಂ ಹೆಗ್ಡೆ, ಡಾ. ಖಾದರ್ಡಾ, ಡಾ. ಬಿಸ್ವರೂಪ್ ರಾಯ್ ಚೌಧುರಿಯಂತವರು ಸಂಪರ್ಕಕ್ಕೆ ಬಂದ ನಂತರ ಒಂದಷ್ಟು ವಿಜ್ಞಾನಿಕ, ತರ್ಕಕ್ಕೆ ಸಿಗುವ ಸಮಾಧಾನಕರ ಉತ್ತರ ಸಿಕ್ಕಿದ್ದು.

ಡಾ. ಬಿಸ್ವರೂಪ್ ಎಲ್ಲಿ ವೈದ್ಯರ ಕೆಲಸ ಮುಗಿಯುತ್ತದೆಯೋ ಅಲ್ಲಿಂದ ನನ್ನ ಕೆಲಸ ಆರಂಭವಾಗುತ್ತದೆ. ಯಾಕೆಂದರೆ, ವೈದ್ರು, ಅಸ್ಸ್ಪತ್ರೆಗಳು ಇನ್ನು ನಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ತುಂಬಾ ನಿರ್ಣಾಯಕ ರೋಗಿಗಳನ್ನೇ ಹೆಚ್ಚು ಅವರು ಗುಣಪಡಿಸಿರುವುದು.
ಹಾಗೆಯೇ ಮುಂದುವರಿದು, ಔಷಧಿಗಳು, ಇಂಜೆಕ್ಷನ್ ಗಳನ್ನು ನಿಲ್ಲಿಸಿದ ನಂತರವೇ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುವುದು ಎಂದು ಸಂಶೋಧನೆ, ಆಧಾರಗಳ ಸಮೇತ ಖಚಿತವಾಗಿ ಹಾಗೂ ಸ್ಪಷ್ಟವಾಗಿ ಹೇಳುತ್ತಾರೆ.
ಔಷಧಿಗಳನ್ನು ತೆಗೆದುಕೊಂಡು ಗುಣಮುಖರಾದ ಒಂದೇ ಒಂದು ಉದಾಹರಣೆ ಇಡೀ ಪ್ರಪಂಚದಲ್ಲಿ ಸಿಗಲಾರದು ಎಂದು ತಮ್ಮ ಸಂಶೋಧನೆಗಳನ್ನು ಮುಂದಿಟ್ಟುಕೊಂಡು ಹೇಳುತ್ತಾರೆ!

ನಮ್ಮ ದೇಹ ಪ್ರಪಂಚದ ಅತ್ಯಂತ ಬುದ್ದಿವಂತ ಯಂತ್ರ. ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವ ಎಲ್ಲಾ ಬುದ್ದಿವಂತಿಕೆ ಅದಕ್ಕಿದೆ. ನಾವು ಔಷಧಿಗಳ ರೂಪದಲ್ಲಿ ತೇಗುಕೊಳ್ಳುವ ಕೆಮಿಕಲ್ ಗಳಿಂದ ಹೊರಗಿನಿಂದ ದಾಳಿ ಮಾಡದೆ, ತನ್ನನ್ನು ತಾನು ಗುಣಪಡಿಸಿಕೊಳ್ಳುವ ವಾತಾವರ ಕಲ್ಪಿಸಿಕೊಡುವುದಷ್ಟೇ ನಮ್ಮ ಜವಾಬ್ದಾರಿ.

ಚಿಕಿತ್ಸಾ ಚಕ್ರ ( Cure cycle for disease), ಅಂದರೆ ಬದಲಾದ ವಾತಾವರ, ಉಷ್ಣಾಂಶ, ಪ್ರಕೃತಿ ಏರುಪೇರುಗಳಾದಾಗ 3-7 ದಿನಗಳ ಒಳಗೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಬುದ್ದಿವಂತಿಕೆ ಮತ್ತು ಸಾಮರ್ಥ್ಯ ನಮ್ಮ ದೇಹಕ್ಕೇ ಇರುತ್ತದೆ. ಕೆಲವು ಅತೀ ವಿಶೇಷ ಸಂದರ್ಭಗಳನ್ನು ಒರತುಪಡಿಸಿ.
ಮನುಷ್ಯ ನಿರ್ಮಿತ ಯಾವ ವಿಧಾನ, ಪದ್ಧತಿ, ಕ್ರಮ, ತಂತ್ರವೂ ಪ್ರಕೃತಿ ದತ್ತವಾಗಿ ಬಂದ ನಮ್ಮ ದೇಹದ ಬುದ್ದಿವಂತಿಕೆಗೆ ಸಮವಾಗಲಾರದು.
ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಮನುಷ್ಯನ ಬುದ್ದಿವಂತಿಕೆಯಿರುವುದು.

ಇನ್ನು ಮೂಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕಡೆ ಗಮನ ಹರಿಸೋಣ.

ನಮ್ಮ ಎಲ್ಲ ಖಾಯಿಲೆಗಳು, ರೋಗಗಳಿಗೆ ಮೂಲ ಕಾರಣ ಪ್ರಕೃತಿಗೆ ವಿರುದ್ಧವಾದ ನಮ್ಮ ಜೀವನ ಹಾಗೂ ಆಹಾರ ಕ್ರಮ!
ಪ್ರಕೃತಿಗೂ ನಮಗೂ ನೇರ ಸಂಪರ್ಕವಿದೆ. ಇಲ್ಲ ಎನ್ನುವವರು ಗಟ್ಟಿಯಾಗಿ ಮೂಗು ಹಿಡಿದು ಒಂದಷ್ಟು ಕ್ಷಣಗಳು ಕಳೆಯುವಷ್ಟರಲ್ಲಿ ತನಗೂ ಆಮ್ಲಜನಕ ನೀಡುವ ಗಿಡ-ಮರಕ್ಕೂ ಇರುವ ಸಂಬಂಧ ಅರಿವಿಗೆ ಬಂದುಬಿಡುತ್ತದೆ.

ನೀವು ಮಣ್ಣಿನ ನೇರ ಸಂಪರ್ಕಕ್ಕೆ ಬಂದು ಎಷ್ಟು ತಿಂಗಳಾದವು?
ಒಂದಷ್ಟು ನಿಮಿಷಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡು ದಿನಗಳಾದವು?
ಪ್ರಕೃತಿದತ್ತವಾದ ನೀರನ್ನು ಕುಡಿದು ಎಷ್ಟು ಸಮಯವಾಯಿತು?
ತಿಂಗಳಿಗೊಂದು ದಿನ ಉಪವಾಸ ಮಾಡಿ ಎಷ್ಟು ವರ್ಷಗಳಾದವು?
ಸೂರ್ಯಾ ಮುಳುಗಿದ ನಂತರ ಊಟದ ರೂಪದಲ್ಲಿ ಏನನ್ನೂ ತಿನ್ನದೇ ಇದ್ದು ಎಷ್ಟು ವರ್ಷಗಳಾದವು?
ಕುಟುಂಬ, ಸ್ನೇಹಿತರು, ಬಂದು-ಬಳಗದೊಟ್ಟಿಗೆ ಒಂದು ಸುದೀರ್ಘ ವಾಕ್ ಮಾಡಿ, ಒಂದು ಬೆಟ್ಟ ಹತ್ತಿದ್ದು, ಪ್ರಕೃತಿ ನಡುವೆ ಸಮಯ ಕಳೆದು ಎಷ್ಟು ದಿನಗಳಾದವು?
ನಿಮ್ಮ ಆಹಾರ ಕ್ರಮ ಏನೇ ಇರಲಿ, ನೀವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಹಣ್ಣುಗಳು, ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಶೇ 50 ಕ್ಕೂ ಪ್ರಮಾಣದಲ್ಲಿ ತಿನ್ನುವ ಪದ್ಧತಿ ಬಿಟ್ಟು ಎಷ್ಟು ದಿನಗಳಾದವು?
ನಿಮಗೆ ಖುಷಿ, ಸಂತೋಷ, ನೆಮ್ಮದಿ ಕೊಡುವಂತಹ ಕೆಲಸಗಳನ್ನು ಮೂಲೆಗೆ ತಳ್ಳಿ ಎಷ್ಟು ದಿನಗಳಾದವು?

ಇಂತಹ ಇನ್ನೂ ಹತ್ತು ಹಲವು ಪ್ರಶ್ನೆಗಳನ್ನು ನಿಮ್ಮನ್ನು ನೀವೇ ಕೇಳಿಕೊಂಡು ಉತ್ತರ ಪಡೆದುಕೊಳ್ಳಲು ಪ್ರಯತ್ನಿಸಿ.
ನಿಮ್ಮ ಒಳ್ಳೆಯತನಕ್ಕೂ ಆರೋಗ್ಯಕ್ಕೂ ಇರುವ ಸಂಬಂಧ ನಿಮಗೇ ಗೋಚರವಾಗುತ್ತದೆ.

ಮುಂದಿನ ದಿನಗಳಲ್ಲಿ ಮೆಡಿಸಿನ್ ಮಾಫಿಯ ಬೆಳಕಿಗೆ ತರಲು ಇಚ್ಛಿಸದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಆಧಾರಿತ, ಅಡ್ಡ ಪರಿಣಾಮಗಳಿಲ್ಲದ ಸರಳ ಹಾಗೂ ನೈಸರ್ಗಿಕ ಅರೋಗ್ಯ ಕುರಿತಾದ ಮಾಹಿತಿಯನ್ನು ಸರಣಿ ಲೇಖನಗಳಲ್ಲಿ ವಿವರಿಸುತ್ತೇನೆ.

ಕಾರಂಜಿ ಶ್ರೀಧರ್

ಹೆಲ್ತ್ ಅಂಡ್ ವೆಲ್ನೆಸ್ ಕೋಚ್

Email: swasthya.way2health@gmail.com

25/03/2023
ನಿಮಗೆ ಹೃದಯಾಘಾತ ಆಗತ್ತದೆ ಎಂಬುದನ್ನು ಮೊದಲೇ ಕಂಡುಕೊಳ್ಳುವುದು ಹೇಗೆ?ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಒಂದು ವಿದ್ಯಮಾನಾ ನಿಮ್ಮ ಗಮನಕ್ಕೆ ...
13/03/2023

ನಿಮಗೆ ಹೃದಯಾಘಾತ ಆಗತ್ತದೆ ಎಂಬುದನ್ನು ಮೊದಲೇ ಕಂಡುಕೊಳ್ಳುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಒಂದು ವಿದ್ಯಮಾನಾ ನಿಮ್ಮ ಗಮನಕ್ಕೆ ಬಂದಿರಬಹುದು.

ಕೆಲಸ ಮಾಡುತ್ತಿರುವಾಗ, ವ್ಯಾಯಾಮ ಮಾಡುತ್ತಿರುವಾಗ, ನಡೆಯುತ್ತಿರುವಾಗ, ಡ್ರೈವ್ ಮಾಡುತ್ತಿರುವಾಗ, ಡಾನ್ಸ್ ಮಾಡುತ್ತಿರುವಾಗ, ನಗು ನಗುತ್ತಾ ಮಾತನಾಡುತ್ತಿರುವಾಗ ಅಥವಾ ಇನ್ನಾವುದೇ ಕೆಲಸ ಮಾಡುತ್ತಿರುವಾಗ ಅಚಾನಕ್ಕಾಗಿ ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ ದೃಶ್ಯಗಳನ್ನು ನೀವು ಗಮನಿಸಿರುತ್ತೀರಿ. ಇವರಲ್ಲಿ ಯಾವುದೇ ಮೆಡಿಕಲ್ ಹಿಸ್ಟರಿ ಇಲ್ಲದೇ ಇರದ, ಆರೋಗ್ಯದಿಂದ ಇದ್ದವರೂ ಇದ್ದಾರೆ.
ಇದರ ಹಿಂದಿನ ಕಾರಣವನ್ನು ಇಲ್ಲಿ ಸಾರ್ವಜನಿಕವಾಗಿ ನಾನು ಚರ್ಚಿಸುವಂತಿಲ್ಲ.
ಆದರೆ, ಯಾವ ಕಾರಣದಿಂದ ಇದು ಆಗುತ್ತಿದೆ ಎಂದು ತಿಳಿದುಕೊಳ್ಳುವುದಕ್ಕಿಂತ ಏಕೆ ಹೀಗಾಗುತ್ತಿದೆ ಅನ್ನುವುದರ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಯೋಣ.

ಇದಕ್ಕೆ ಮೂಲ ಕಾರಣ ನಮ್ಮ 'ಸರ್ಕ್ಯಾಡಿಯನ್ ರಿದಮ್' ಅಥವಾ ಬಾಡಿ ಕ್ಲಾಕ್ ನಲ್ಲಿ ಅಡಚಣೆಯುಂಟಾಗುವುದು.
ಅಂದರೆ ನಮ್ಮ ದೇಹದ ಆರೋಗ್ಯ ಕಾಪಾಡುವುದರಲ್ಲಿ ಅಥವಾ ಬಿಗಡಾಯಿಸುವುದರಲ್ಲಿ ಈ 'ಬಾಡಿ ಕ್ಲಾಕ್' ಮಹತ್ವದ ಪಾತ್ರ ವಹಿಸುತ್ತದೆ.
ನಮ್ಮ ಬಾಡಿ ಕ್ಲಾಕ್ ಒಂದು ಲಯದಲ್ಲಿದ್ದರೆ ಆರೋಗ್ಯವಾಗಿರುತ್ತೇವೆ, ಸಮತೋಲನ ತಪ್ಪಿದರೆ ಅರೋಗ್ಯ ಬಿಗಡಾಯಿಸುತ್ತದೆ.

ಒಂದು ಉದಾಹರಣೆಯನ್ನು ಗಮನಿಸೋಣ.

ನಿಮ್ಮ ಕಾರಿನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಹೊಸದು, ಉಳಿದ ಮೂರು ಸ್ವಲ್ಪ ಸವೆದಿರುವ ಚಕ್ರಗಳು.
ಈ ಸ್ಥಿತಿಯಲ್ಲಿ ಕಾರನ್ನು ಸತತ ಬಳಕೆ ಮಾಡುತ್ತಿದ್ದರೆ ಏನಾಗುತ್ತದೆ?
ಕಾಲ ಕ್ರಮೇಣ ಸಮತೋಲನವಿಲ್ಲದೆ ಉಪಯೋಗಿಸುವ ಪರಿಣಾಮದಿಂದ ಬ್ರೇಕ್, ಸಸ್ಪೆನ್ಷನ್, ಕ್ಲಚ್, ಎಂಜಿನ್ ಹಾಗೂ ಕಾರಿನ ಇತರ ಭಾಗಗಳೂ ಕೆಟ್ಟು ನಿಲ್ಲುವ ಸಂಭವ ಹೆಚ್ಚು ಅಲ್ಲವೇ?
ಕಾರಿಗೆ ಒಂದು ಲಯವಿರಬೇಕಾದರೆ ಒಂದೋ ನಾಲ್ಕೂ ಟೈರ್ ಗಳು ಸಮನಾಗಿ ಸವೆದಿರಬೇಕು, ಅಥವಾ ನಾಲ್ಕೂ ಟೈರ್ ಗಳು ಹೊಸದಾಗಿರವೇಕು, ಅಲ್ಲವೇ?

ನಮ್ಮ ದೇಹದ ಈ ರೀತಿಯ ಲಯದ ಸ್ಥಿತಿ ಹಾಗೂ ಲಯ ಬಿಗಡಾಯಿಸುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ 'ಬಾಡಿ ಕ್ಲಾಕ್' ಅಂದರೆ ಏನು ಎಂಬುದನ್ನು ಅರ್ಥ ಮಾಡಿಕೊಂಡು, ಬಿಗಡಾಯಿಸಿದ 'ಬಾಡಿ ಕ್ಲಾಕ್' ಅನ್ನು ಸಮತೋಲನದ ಸ್ಥಿತಿಗೆ ತಂದುಕೊಳ್ಳುವ ವಿಧಾನವನ್ನು ತಿಳಿಯಲು ಸಹಾಯವಾಗುತ್ತದೆ.

'ಸರ್ಕ್ಯಾಡಿಯನ್ ರಿದಮ್' ಅಥವಾ 'ಬಾಡಿ ಕ್ಲಾಕ್' ಎಂಬುದು 2017 ರ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನ.
ಈ ವಿಜ್ಞಾನ ಹೇಳುವಂತೆ ನಮ್ಮ 'ಬಾಡಿ ಕ್ಲಾಕ್' ಅನ್ನು ಸಮತೋಲನದಲ್ಲಿ ಇಟ್ಟುಕೊಂಡರೆ ನಾವು ಆರೋಗ್ಯದಿಂದಿರುತ್ತೇವೆ, ಸಮತೋಲನ ತಪ್ಪಿದರೆ ಆರೋಗ್ಯ ಬಿಗಡಾಯಿಸುತ್ತದೆ.

ಈ 'ಸರ್ಕ್ಯಾಡಿಯನ್ ರಿದಮ್' ಆಫ್ ಬ್ಲಡ್ ಪ್ರೆಷರ್' ವಿಜ್ಞಾನದ ವಿಶ್ಲೇಷಣೆಯ ಪ್ರಕಾರ, ದಿನದಲ್ಲಿ ನಮ್ಮ ರಕ್ತದೊತ್ತಡ ಹೇಗಿರುತ್ತದೆ ಎಂಬುದನ್ನು ಅರಿಯುವ ಮೂಲಕ ಮುಂದಿನ ಕೆಲವು ದಿನಗಳಲ್ಲಿ ನಮಗೆ ದೃದಯಾಘಾತ ಆಗಬಹುದೇ ಎಂಬುದನ್ನು ಅಂದಾಜಿಸಬಹುದು!
(ಹೃದಯಾಘಾತ ಆಗೇ ಆಗುತ್ತದೆ ಎಂದಲ್ಲ, ಸಾಧ್ಯತೆಗಳು ಹೆಚ್ಚು ಎಂದು ಹೇಳಬಹುದು)

ಅಂದರೆ, ಬೆಳಿಗ್ಗೆ ಸುಮಾರು 10 ಗಂಟೆ ನಿಮ್ಮ ರಕ್ತದೊತ್ತಡ 140/90 ಇದೆಯೆಂದುಕೊಂಡರೆ, ರಾತ್ರಿ 10 ಗಂಟೆಯ ಸುಮಾರಿಗೆ ರಕ್ತದೊತ್ತಡ 120/80 ಇದೆ ಅಂದುಕೊಳ್ಳೋಣ. ಅಂದರೆ ಬೆಳಿಗ್ಗಿನ ರಕ್ತದೊತ್ತಡಕ್ಕೆ ಹೋಲಿಸಿದರೆ ರಾತ್ರಿಯ ರಕ್ತದೊತ್ತಡ ಸುಮಾರು 10%-20% ಕಡಿಮೆಯಿದೆ ಅಲ್ಲವೇ?.

ಹೀಗೆ ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ರಕ್ತದೊತ್ತಡ ಒಂದೇ ರೀತಿಯಿರದೆ ಒಂದು ಲಯದಲ್ಲಿ ವ್ಯತ್ಯಾಸವಾಗುತ್ತಿದ್ದರೆ ಅಂತಹ ಜನರನ್ನು 'ಡಿಪ್ಪರ್' ವರ್ಗದವರು ಎಂದು ವರ್ಗೀಕರಿಸಲಾಗುತ್ತದೆ.

ಯಾರ ತಕ್ತದೊತ್ತಡ ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಒಂದೇ ರೀತಿ ಇರುವುದಿಲ್ಲ, ಅಂದರೆ ಬೆಳಿಗ್ಗೆ ರಕ್ತದೊತ್ತಡ 140/90 ರಷ್ಟು ಇದ್ದು, ರಾತ್ರಿಯೂ ಅಷ್ಟೇ ಇದ್ದರೆ ಆ ರೀತಿಯ ಜನರನ್ನು 'ನಾನ್ ಡಿಪ್ಪರ್' ವರ್ಗದವರು ಎಂದು ವರ್ಗೀಕರಿಸಲಾಗುತ್ತದೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡ ಬೆಳಿಗ್ಗೆ 9-10 ಸುಮಾರಿಗೆ ಹೆಚ್ಚಿರುತ್ತದೆ, ರಾತ್ರಿಯ ಹೊತ್ತಿಗೆ ಕಡಿಮೆಯಿರುತ್ತದೆ.
ನಡುವೆ ಲಯಬದ್ಧವಾದ ಏರುಪೇರು ಆಗತ್ತಿರುತ್ತದೆ. ಆದರೆ ಯಾವ ವ್ಯಕ್ತಿಯ ರಕ್ತದೊತ್ತಡ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೇ ರೀತಿಯಿರುತ್ತದೆಯೋ ಅದು ಒಳ್ಳೆಯ ಆರೋಗ್ಯದ ಲಕ್ಷಣವಲ್ಲ!
ಅಂದರೆ, ಮುಂದಿನ ಕೆಲವುದು ದಿನಗಳಲ್ಲಿ ಅಂಥವರಲ್ಲಿ ದೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಊಹಿಸಬಹುದು!

ಸತತ ಮೂರು ದಿನಗಳ ರಕ್ತದೊತ್ತಡದ ರೀಡಿಂಗ್ ಅನ್ನು ನಿಗವಾಹಿಸಿ ನೋಡಿಕೊಂಡು ನೀವು 'ಡಿಪ್ಪರ್' ವರ್ಗದವರೋ ಅಥವಾ 'ನಾನ್ ಡಿಪ್ಪರ್' ವರ್ಗದವರೋ ಎಂದು ತಿಳಿದುಕೊಳ್ಳಬಹುದು.

ಒಂದು ವೇಳೆ ನೀವು 'ನಾನ್ ಡಿಪ್ಪರ್' ವರ್ಗದವರಾಗಿದ್ದರೆ ನಿಮ್ಮ 'ಬಾಡಿ ಕ್ಲಾಕ್' ಅನ್ನು ಸರಿಪಡಿಸಿಕೊಳ್ಳುವ ಮೂಲಕ ಹೃದಯಾಗಾತದ ಸಾಧ್ಯತೆಯಿಂದ ಪಾರಾಗಬಹುದು.

ಬಾಡಿ ಕ್ಲಾಕ್ ಅನ್ನು ಸರಿಪಡಿಸಿಕೊಳ್ಳುವ ಮಾರ್ಗೋಪಾಯಗಳನ್ನು ಇಲ್ಲಿ ಗಮನಿಸೋಣ.

ಮೊದಲನೆಯದು ಸಮಯವೇ ಔಷಧಿ (Time as Medicine):

ನೀವು ಪ್ರತೀ ದಿನ ತಿನ್ನುವ ಆಹಾರವನ್ನು ೮ ಗಂಟೆಗಳ ಅವಧಿಯೊಳಗೇ ತಿನ್ನಿ.

ನೀವು ಸಸ್ಯಾಹಾರಿ ಅಥವಾ ಮಾಂಸಾಹಾರಿ ಏನೇ ಆಗಿರಿ, ಬೆಳಿಗ್ಗಿನ 8 ಗಂಟೆಗಳ ಅವಧಿಯೊಳಗೆ ಆಹಾರ ತಿನ್ನಿ, ಉಳಿದ 16 ಗಂಟೆ ಹೊಟ್ಟೆಯನ್ನು ಖಾಲಿ ಬಿಡಿ. ಬಾಯಾರಿಕೆಯಾದರೆ ನೀರನ್ನು ಸೇವಿಸಬಹುದು.
ಬೆಳಿಗ್ಗೆ 10 ಗಂಟೆ ಉಪಹಾರ ಸೇವಿಸಿದರೆ ಕೊನೆಯ ಊಟದ ಸೇವನೆ 6 ಗಂಟೆಯ ಒಳಗೆ ಮುಗಿಸಬೇಕು.
6 ಗಂಟೆಯ ನಂತರ ಬೆಳಿಗ್ಗೆ 10 ಗಂಟೆಯ ವರೆಗೆ ಖಾಲಿ ಹೊಟ್ಟೆಯಲ್ಲಿರಬೇಕು.

ರೀತಿ ಮುಂದಿನ 15 ದಿನಗಳ ವರೆಗೆ ಮಾಡಿದರೆ ನೀವು ಊಹಿಸದ ಒಂದಷ್ಟು ಆರೋಗ್ಯ ಸುಧಾರಣೆಗಳು ಆಗುತ್ತತೆ!

ರಕ್ತದೊತ್ತಡ ಕಡಿಮೆಯಾಗುವುದಷ್ಟೇ ಅಲ್ಲ, ಡಯಾಬಿಟಿಕ್ ಇದ್ದವರಿಗೆ ಡಯಾಬಿಟೀಸ್ ಕಡಿಮೆಯಾಗುತ್ತದೆ.
ಉರಿಯೂತ ಕಡಿಮೆಯಾಗುತ್ತದೆ. ಅತಿಯಾದ ದೇಹದ ತೂಕ ಕಡಿಮೆಯಾಗಿರುತ್ತದೆ, ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ನೆಮ್ಮದಿಯ ನಿದ್ರೆ ಬರಲು ಪ್ರಾರಂಭವಾಗಿರುತ್ತದೆ. ಅಜೀರ್ಣ, ಕಿಡ್ನಿ, ಥೈರೊಯ್ಡ್ ಸಮಸ್ಯೆಯಿದ್ದವರಿಗೆ ಸಾಕಷ್ಟು ಸುಧಾರಣೆ ಕಂಡುಬರುತ್ತದೆ.
ಈ ರೀತಿ ಇನ್ನೂ ಅನೇಕ ಲಾಭಗಳು ಈ 'ಸಮಯವೇ ಮದ್ದು' ಪದ್ದತಿಯಿಂದ ಸಿಗುತ್ತವೆ.

15 ದಿನಗಳವರೆಗೆ ಈ ರೀತಿ 8 ಗಂಟೆಯ ಒಳಗೆ ಆಹಾರವನ್ನು ತಿಂದು ಉಳಿದ 16 ಗಂಟೆಯವರಿಗೆ ಖಾಲಿ ಹೊಟ್ಟೆಯಲ್ಲಿದ್ದು,
ಮುಂದಿನ 15 ದಿನಗಳು ದಿನದ 10 ಗಂಟೆಯ ಅವಧಿಯಲ್ಲಿ ತಿಂದು ಉಳಿದ 14 ಗಂಟೆ ಖಾಲಿ ಹೊಟ್ಟೆಯಲ್ಲಿರುವುದನ್ನು ರೂಢಿಸಿಕೊಂಡು ಅಲ್ಲಿಂದ ಮುಂದೆಕ್ಕೆ ಜೀವನ ಪರ್ಯಂತ ಬೆಳಿಗ್ಗಿನ 12 ಗಂಟೆಯ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡಿ ಉಳಿದ 12 ಗಂಟೆ ಏನೂ ತಿನ್ನದೆ ಇರುವ ಶಿಸ್ತನ್ನು ಬೆಳಸಿಕೊಂಡರೆ ಸದಾಕಾಲ ನಿರೋಗಿಗಳಾಗಿ ಬದುಕಬಹುದು.

ಏನು ತಿನ್ನಬೇಕು ಎಂದು ಲೆಕ್ಕ ಹಾಕಿ ತಿನ್ನುವುದುದಕ್ಕಿಂತ ಸೂರ್ಯ ಮುಳುಗಿದ ಮೇಲೆ ಏನೂ ತಿನ್ನದಿರುವುದೇ ಆರೋಗ್ಯದ ಗುಟ್ಟು!
(ಈ ಪರಿಕಲ್ಪನೆಯನ್ನು 'ಆಟೋಫೆಜಿ' ಎಂದು ಕರೆಯುತ್ತಾರೆ. ಮುಂದೊಂದು ದಿನ ಈ ಕುರಿತು ಪ್ರತ್ಯೇಕವಾಗಿ ವಿವರಿಸುತ್ತೇನೆ.)

ಇದರ ಜೊತೆಗೆ, ಪ್ರತಿ ದಿನ ಬೆಳಿಗ್ಗೆ ಬರಿಗಾಲಲ್ಲಿ ಮಣ್ಣಿನ ಸಂಪರ್ಕದಲ್ಲಿದ್ದು ಕನಿಷ್ಠ 30 ನಿಮಿಷ ಸೂರ್ಯ ಸ್ನಾನ ಮಾಡುವುದರ ಜೊತೆಗೆ ರಾತ್ರಿ ಸಮಯದಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಿ, ಪ್ರಖರ ಬೆಳಕಿನ ಲೈಟ್ ಗಳನ್ನು ಬಳಸದೆ ಕೇವಲ ಎಣ್ಣೆ ದೀಪಗಳು ಅಥವಾ ಮೇಣದ ಬತ್ತಿ ದೀಪಗಳನ್ನು ಬಳಸಲು ರೂಢಿಸಿಕೊಂಡರೆ ಹೆಚ್ಚಿನ ಸುಧಾರಣೆ ಕಂಡು ಬರುತ್ತದೆ. ಕ್ರಮೇಣ ಗುಣಮುಖರೂ ಆಗುತ್ತೀರಿ.
ಈ ರೀತಿಯ ಚಿಕಿತ್ಸಕ ಗುಣ ಪದ್ದತಿಯನ್ನು ಬೆಳಕೇ ಮದ್ದು.
(Light as Medicine) ಎಂದು ಕರೆಯುತ್ತಾರೆ.

ದೀರ್ಘಕಾಲದಿಂದ ಔಷಧಿ, ಮಾತ್ರೆಗಳು, ಇಂಜೆಕ್ಷನ್ ನ ಮೊರೆ ಹೋದವರಲ್ಲಿ ಈ ಸುಧಾರಣೆಯಲ್ಲಿ ನಿಧಾನವಾಗಬಹುದು. ಅಂಥವರಿಗೆ ಹಾಟ್ ವಾಟರ್ ಇಮ್ಮರ್ಶನ್ ಥೆರಪಿ (Hot Immersion Therapy), ಜೀರೋ ವೋಲ್ಟ್ ಥೆರಪಿ(Zero Volt Therapy), ಲಿವಿಂಗ್ ವಾಟರ್ ಥೆರಪಿ (Living Water Therapy), ಡಿ.ಇ. ಪಿ. ಡಯಟ್(DIP DIET) ಹಾಗೂ ಪಂಚಕರ್ಮ ರೀತಿಯ ಔಷಧಿ ರಹಿತ ಚಿಕಿತ್ಸಾ ಪದ್ದತಿಯಿಂದ ಗುಣಪಡಿಸುವ ಕ್ರಮವಿದೆ.

ಈ ರೀತಿಯ ಚಿಕಿತ್ಸೆಗಳಿಂದ ಡಯಾಬಿಟಿಸ್, ಬಿ.ಪಿ., ಹೃದಯ ಸಂಬಂಧಿ ಖಾಯಿಲೆ ಇರುವವರು, ಕೀಲು ನೋವು, ದೇಹದ ನೋವು, ಅತಿಯಾದ ದೇಹದ ತೂಕ, ಉರಿಯೂತ, ಮಲಬದ್ಧತೆ, ಕಡಿಮೆ ಇಮ್ಮ್ಯೂನಿಟಿ ಇರುವವರು, ಪಾರ್ಕಿನ್ಸನ್ ಖಾಯಿಲೆ ಇರುವವರು ಬೇಗ ಗುಣಮುಖರಾಗಬಹುದು.

ಈಗ ಹೃದಯಾಘಾತದ ಸಾಧ್ಯತೆಯ ಹಾಗೂ ಗುಣಪಡಿಸಿಕೊಳ್ಳುವ ಕುರಿತು ನಿಮಗೆ ಒಂದಿಷ್ಟು ಅರಿವು ಮೂಡಿರಬಹುದು.

ಈಗ ಹೇಳಿ, ನೀವು ಡಿಪ್ಪರ್ ವರ್ಗದವರೇ? ಅಥವಾ ನಾನ್ ಡಿಪ್ಪರ್ ವರ್ಗದವರೇ?

ಮೂಲ: ಡಾ.ಬಿಸ್ವರೂಪ್ ರಾಯ್ ಚೌಧುರಿ

ಅನುವಾದ: ಕಾರಂಜಿ ಶ್ರೀಧರ್

Email: swasthya.way2health@gmail.com

'ಹಾರ್ಟ್ ಕ್ಯಾನ್ಸರ್' ಅನ್ನುವುದು ಇರುವುದಿಲ್ಲ ಏಕೆ ಗೊತ್ತೆ?ಬ್ಲಡ್ ಕ್ಯಾನ್ಸರ್, ಲಂಗ್ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಕೋಲನ್ ಕ್ಯಾನ್ಸರ್, ಬ್...
04/03/2023

'ಹಾರ್ಟ್ ಕ್ಯಾನ್ಸರ್' ಅನ್ನುವುದು ಇರುವುದಿಲ್ಲ ಏಕೆ ಗೊತ್ತೆ?
ಬ್ಲಡ್ ಕ್ಯಾನ್ಸರ್, ಲಂಗ್ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಕೋಲನ್ ಕ್ಯಾನ್ಸರ್, ಬ್ರೈನ್ ಕ್ಯಾನ್ಸರ್ ಎಂಬ ಹೆಸರುಗಳನ್ನು ಕೇಳಿರುತ್ತೀರಿ ಆದರೆ,ಹಾರ್ಟ್ ಕ್ಯಾನ್ಸರ್ ಎಂಬುದನ್ನು ನೀವು ಕೇಳಿರುವುದಿಲ್ಲ, ಅಲ್ಲವೇ?
ಇದಕ್ಕೆ ಕಾರಣ ತಿಳಿಯುವುದಕ್ಕೆ ಮೊದಲು ಕ್ಯಾನ್ಸರ್ ಅಥವಾ ಟ್ಯೂಮರ್ ಏಕೆ ಆಗುತ್ತದೆ ಎಂಬುದನ್ನು ತಿಳಿಯೋಣ.
ರಕ್ತನಾಳಗಳಲ್ಲಿ ಬ್ಲಾಕೇಜ್ ಆಗಿ ಸರಾಗ ರಕ್ತ ಸಂಚಾರಕ್ಕೆ ತೊಂದರೆಯಾದಾಗ, ರಕ್ತ ಕಣಗಳಿಗೆ ಆಹಾರ ಅಥವಾ ಆಮ್ಲಜನಕ ಕೊರತೆಯುಂಟಾಗುತ್ತದೆ. ಈ ರೀತಿ ಕೊರತೆಯುಂಟಾದಾಗ ಯಾವ ಜೀವಕೋಶಗಳು ಏನು ಕೆಲಸ ಮಾಡುತ್ತವೆ ಎನ್ನುವ ಆಧಾರದ ಮೇಲೆ ಪ್ರತಿಶತ ಸುಮಾರು 80 ರಷ್ಟು ರಕ್ತಕಣಗಳು ಸಾಯುತ್ತವೆ, ಆ ಭಾಗದ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತವೆ, ಇನ್ನುಳಿದ ಶೇಕಡಾ 20 ರಷ್ಟು ಜೀವಕೋಶಗಳು ಅಂದರೆ 'ಕ್ಯಾನ್ಸರ್ ಸೆಲ್' ನಂತವು ತಮ್ಮ ಉಳಿವಿಗಾಗಿ ಹೋರಾಡುಡುತ್ತವೆ.
ತನ್ನ ಉಳಿವು/ಅಸ್ತಿತ್ವಕ್ಕಾಗಿ ಹೋರಾಡುವ ಈ ಸೆಲ್ ಗಳು 'ಎಂಜಿಯೋಜೆನಿಟಿಕ್ ಪಾತ್ ವೇಸ್' (Angiogenic pathways)/ 'ಆಂಜಿಯೋಸಿಸ್' ಎಂಬ ಕಳ್ಳ ಮಾರ್ಗ ಮಾಡಿಕೊಂಡು ತಮ್ಮ ಪಕ್ಕದ ಇತರ ದೇಹದ ಭಾಗದಿಂದ ತಮ್ಮ ಉಳಿವಿಗೆ ಬೇಕಾದ ಆಹಾರ ಪದಾರ್ಥವನ್ನು ಪೂರೈಸಿಕೊಳ್ಳಲು ಹೋರಾಡುತ್ತವೆ. ಇಂತಹ ಸಮಯದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಈ ರೀತಿ ಉಂಟಾಗುವ ಖಾಯಿಲೆಗಳನ್ನು 'ಆಂಜಿಯೋಜೆನಿಸಿಸ್' ಖಾಯಿಲೆಗಳು ಎಂದು ಕರೆಯುತ್ತಾರೆ.
ಈ ಉದಾಹಣೆಯನ್ನು ಗಮನಿಸಿದರೆ ಸೆಲ್ ಗಳು ಹೇಗೆ 'ಟ್ಯೂಮರ್' ಆಗಿ ಪರಿವರ್ತನೆಯಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ಒಬ್ಬ ವಿದ್ಯಾರ್ಥಿ ತನ್ನ ಶಾಲಾ ಶುಲ್ಕವನ್ನು ಕಟ್ಟಲು 10 ಸಾವಿರ ಬೇಕಿರುತ್ತದೆ.
ಹಣ ಸಿಗಬಹುದಾದ ಎಲ್ಲ ಮಾರ್ಗಗಲ್ಲೋ ಮುಚ್ಚಿ ಹೋಗಿ ಕೊನೆಗೆ ಕಳ್ಳತನ ಮಾಡಿ ಹಣ ಹೊಂದಿಸಲುನಿರ್ಧರಿಸುತ್ತಾನೆ.
ಅವನ ಜೊತೆಗೆ ಇನ್ನಷ್ಟು ಹಣದ ಕೊರತೆಯಿರುವ ವಿದ್ಯಾರ್ಥಿಗಳೂ ಸೇರಿಕೊಂಡು ಒಂದು ದರೋಡೆ ಮಾಡಲು ತೀರ್ಮಾನಿಸಿ ಬ್ಯಾಂಕ್ ತಿಜೋರಿಗೆ ಕನ್ನ ಹಾಕುತ್ತಾರೆ.
ತಿಜೋರಿಯಲ್ಲಿದ್ದ ಹಣದ ರಾಶಿಯನ್ನು ಕಂಡ ಆ ವಿದ್ಯಾರ್ಥಿಗಳು ತಮ್ಮ ಅಗತ್ಯ ಪೂರೈಸಿಕೊಳ್ಳಲ್ಲಷ್ಟೇ ಬಂದಿದ್ದನ್ನು ಮರೆತು ಅಲ್ಲಿರುವ ಎಲ್ಲಾ ಹಣವನ್ನೂ ದೋಚಲು ಮುಂದಾಗುತ್ತಾರೆ.
ಕ್ರಮೇಣ ಇದು ಅವರಿಗೆ ಗೀಳಾಗಿ ಪರಿಣಮಿಸಿ ಇತರ ಬ್ಯಾಂಕ್ ಗಳ ತಿಜೋರಿಗಳನ್ನೂ ದರೋಡೆ ಮಾಡಲು ಲಗ್ಗೆ ಇಡುತ್ತವೆ.
ಆರಂಭದಲ್ಲಿ ವಿದ್ಯಾರ್ಥಿಗಳ ಮೂಲ ಉದ್ದೇಶವೇನಿತ್ತು? ತಮ್ಮ ಶಾಲಾ ಶುಲ್ಕವನ್ನು ಕಟ್ಟುವುದಷ್ಟೇ ಇತ್ತು? ಅನ್ಯ ಮಾರ್ಗಗಳಿಲ್ಲದೆ ಅನಿವಾರ್ಯವಾಗಿ ಬ್ಯಾಂಕ್ ದರೋಡೆಗೆ ಮುಂದಾಗುವುದು, ದರೋಡೆಕೋರರಾಗಿ ಬದಲಾಗುವದಲ್ಲ, ಅಲ್ಲವೇ?
ಈ ವಿದ್ಯಾರ್ಥಿಗಳ ರೀತಿಯಲ್ಲಿದ್ದ ದೇಹದ ಕೆಲವು ಜೀವಕೋಶಗಳು ಆಂಜಿಯೋಜೆನೆಟಿಕ್ ಎಂಬ ಕಳ್ಳ ಮಾರ್ಗ ಮಾಡಿಕೊಂಡು ತಮ್ಮ ಆಹಾರ ಪೂರೈಸಿಕೊಳ್ಳಲು ಹೋಗಿ, ತಾವಿದ್ದ ಜಾಗದಿಂದ ದೇಹದ ಇತರ ಭಾಗಗಳಿಗೂ ಹರಡುತ್ತವೆ. ದೇಹದ ಇಂತಹ ಸೆಲ್ ಗಳಿಂದ ದೇಹದ ಕೆಲವು ಭಾಗಗಳಲ್ಲಿ ಗೆಡ್ಡೆ/ಟ್ಯೂಮರ್ ರೂಪದಲ್ಲಿ ಕಾಣಸಿಗುವುದು.
ಈವೊಂದು ಉದಾಹರಣೆಯನ್ನು ಗಮನಿಸಿ.
ಒಬ್ಬನ ಮನೆಯಲ್ಲಿ ಒಂದು ಕಾರು ಇರುತ್ತದೆ, ಆ ಕಾರನ್ನು ನಿಲ್ಲಿಸಲು ತನ್ನದೇ ಜಾಗವಿರುತ್ತದೆ. ಕೆಲವು ದಿನಗಳ ನಂತರ ಅವನು ಇನ್ನೊಂದು ಕಾರು ಖರೀದಿ ಮಾಡುತ್ತಾನೆ, ಅದನ್ನು ತನ್ನ ಜಾಗದಲ್ಲಿ ನಿಲ್ಲಿಸಲು ಜಾಗವಿಲ್ಲದೆ ಪಕ್ಕದ ಮನೆಯ ಮುಂಭಾಗದಲ್ಲಿ ನಿಲ್ಲಸುತ್ತಾನೆ. ತನ್ನ ಬಳಿ ಕಾರ್ ಇಲ್ಲದಿರುವ ಕಾರಣದಿಂದ ಪಕ್ಕದ ಮನೆಯವನು ಯಾವುದೇ ತಕರಾರು ಮಾಡದೆ ಸುಮ್ಮನಿಸುತ್ತಾನೆ.
ಒಂದು ಸಂದರ್ಭ ಬರುತ್ತದೆ. ಪಕ್ಕದ ಮನೆಯವನೂ ಒಂದು ಕಾರು ಕೊಳ್ಳುತ್ತಾನೆ. ತನ್ನ ಕಾರು ನಿಲ್ಲಿಸಲು ಜಾಗ ತೆರವು ಮಾಡಿಕೊಡಲು ಕೇಳಿಕೊಂಡಾಗ ಅಷ್ಟರಲ್ಲಿ ತನ್ನ ಎರಡೇ ಕಾರು ನಿಲ್ಲಿಸಿದ್ದ ಜಾಗವೂ ತನ್ನದೇ ಜಾಗ ಎಂಬ ಭ್ರಮೆಗೆ ಬಿದ್ದ ಮೊದಲನೇ ಮನೆಯವನು ಜಾಗ ಬಿಟ್ಟುಕೊಡದೆ ಜಗಳಕ್ಕೆ ಬೀಳುತ್ತಾನೆ.
ಈ ರೀತಿ ನಮ್ಮ ದೇಹದ ಯಾವುದೇ ಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬೆಳವಣಿಗೆಯಾದಾಗ ದೇಹ ನೋವು ಅಥವಾ ಅನಾನುಕೂಲದ ರೀಯಿಯಲ್ಲಿ ನಮಗೆ ಎಚ್ಚರಿಕೆ ನೀಡುತ್ತದೆ. ಆ ಕೂಡಲೇ ನಾವು ಎಚ್ಚೆತ್ತುಕೊಂಡು 'ನೈಟ್ರಿಕ್ ಆಕ್ಸೈಡ್' ಗಮನಕೊಟ್ಟರೆ ಅದನ್ನು ಸರಿದಾರಿಗೆ ತಂದುಕೊಳ್ಳಬಹುರು.
ಆದರೆ, ಇದನ್ನು ತಿಳಿಯದ ನಾವು ಡಾಕ್ಟರ್ ಬಳಿ ಓಡಿ ಹೋಗುತ್ತೇವೆ. ಅಲ್ಲಿ ಅಲ್ಟ್ರಾ ಸೌಂಡ್ ಅಥವಾ ಬಯಾಪ್ಸಿ ಮಾಡಲು ಸಲಹೆ ನೀಡುತ್ತಾರೆ ಅಲ್ಲವೇ? ಇಂತಹ ಹಸ್ತಕ್ಷೇಪಗಳಿಂದ ಟ್ಯೂಮರ್ ಅನ್ನು ಕೆಣಕುತ್ತೆವೋ ಆಗ ಶೇ 65 ರಷ್ಟು ಕ್ಯಾನ್ಸರ್ಕಾರಕವಲ್ಲದ ಟ್ಯೂಮರ್ ಸೆಲ್ ಗಳು ಕ್ಯಾನ್ಸರಸ್ ಸೆಲ್ ಗಳಾಗಿ ಹರಡಲು ನಾವೇ ಅನುವು ಮಾಡಿಕೊಟ್ಟಂತೆ ಆಗುತ್ತದೆ.
ರಕ್ತ ನಾಳಗಳಲ್ಲಿ ಬ್ಲಾಕೇಜ್ ಆಗಿ ತಮ್ಮ ಅಗತ್ಯ ಆಹಾರ/ಆಮ್ಲಜನಕ ಪೂರೈಕೆಗಾಗಿ 'ಆಂಜಿಯೋಜೆನೆಟಿಕ್' ಎಂಬ ಕಳ್ಳ ಮಾರ್ಗ ಮಾಡಿಕೊಳ್ಳಲ್ಲು ಜೀವಕೋಶಗಳಿಗೆ ಕನಿಷ್ಠ ಎರಡು ದಿನಗಳು ಬೇಕಾಗುತ್ತವೆ.
ಈ ಸಂದರ್ಭದಲ್ಲಿ ಸಾಕಷ್ಟು ಅಗತ್ಯ ಪೂರಕೆಯಿಲ್ಲದೆ ಬಳಷ್ಟು ಜೀವಕೋಶಗಳು ಸಾಯುತ್ತವೆ. ಅಂದರೆ ಸುಮಾರು ಶೇ. 80 ರಷ್ಟು ಸಾಯುತ್ತವೆ, ಶೇ. 20 ರಷ್ಟು ಸೆಲ್ ಗಳು ಅಗತ್ಯಕ್ಕಿಂತ ಹೆಚ್ಚು ತಿಂದು ದೊಡ್ಡದಾಗಿ ಆ ಭಾಗದಲ್ಲಿ ಗೆಡ್ಡೆಯ ರೂಪದಲ್ಲಿ ಕಾಣಸಿಗುತ್ತವೆ.
ಇಂತಹ ಸಂದರ್ಭಗಳಲ್ಲಿ ನಮ್ಮ ದೇಹದ ಇತರ ಯಾವುದೇ ಭಾಗಗಳಿಗೆ ಎರಡು ದಿನ ತಮ್ಮ ಆಹಾರ/ಆಮ್ಲಜನಕ ಪೂರಕೆಯಿಲ್ಲದೆ ತಮ್ಮ ಕೆಲಸ ನಿಲ್ಲಿಸಿದರೂ ನಡೆದೀತು ಆದರೆ ಕೆಲವು ಕ್ಷಣಗಳಿಗೂ ತನ್ನ ಕೆಲಸವನ್ನು ನಿಲ್ಲಿಸಲು ನಮ್ಮ ಹೃದಯಕ್ಕೆ ಸಾಧ್ಯವಿಲ್ಲ. ಹಾಗೆ ನಿಲ್ಲಿಸಿದರೆ ಏನಾಗುತ್ತದೆ? ಹೃದಯಾಘಾತವಾಗುತ್ತದೆ! ಅಥವಾ ಹೃದಯ ಸಂಬಂಧಿ ಖಾಯಿಲೆಗಳು ಬರುತ್ತವೆ.
ಕೇವಲ 20 ನಿಮಿಷಗಳು ಮಾತ್ರ ಆಹಾರ/ಆಮಜನಕದ ಪೂರೈಕೆಯಿಲ್ಲದೆ ನಮ್ಮ ಹೃದಯ ಬದುಕುಳಿಯಬಹುದು ಅಷ್ಟೇ!
ಅಂದರೆ, ಹೃದಯದ ಜೀವಕೋಶಗಳು ಕ್ಯಾನ್ಸರ್ ಸೆಲ್ ಗಗಳಾಗಿ ಪರಿವರ್ತನೆಯಾಗಿ ಕ್ಯಾನ್ಸರ್ ಉಂಟಾಗಲು ಅದರ ಬಳಿ ಸಮಯವೇ ಉಳಿಯುವುದಿಲ್ಲ!
ಈ ಕಾರಣಕ್ಕಾಗಿಯೇ 'ಹೃದಯದ ಕ್ಯಾನ್ಸರ್' ಆಗುವುದಿಲ್ಲ, ಅಥವಾ ಆ ರೀತಿಯ ಖಾಯಿಲೆಯ ಹೆಸರು ಕೇಳ ಸಿಗುವುದಿಲ್ಲ!
ನಮ್ಮ ದೇಹದ ಯಾವುದೇ ಭಾಗದಲ್ಲಿ ಗಡ್ಡೆ, ಉರಿಯೂತ ಕಾಣಿಸಿಕೊಳ್ಳುವುದೂ ಇಂತಹ ಕಾರಣಗಳಿಗೆ.
ಆಹಾರ/ಆಮ್ಲಜನಕದ ಕೊರತೆಯ ಕಾರಣಕ್ಕೆ ಅಥವಾ ಅತಿವೃಷ್ಟಿಯ ಕಾರಣಕ್ಕೆ.
ಅತಿವೃಷ್ಟಿ ಅಂದರೆ ದೇಹದ ಯಾವುದೋ ಒಂದು ಭಾಗದ ಜೀವಕೋಶಗಳು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವೆನೆ ಮಾಡುತ್ತಿರುತ್ತವೆ.
ಬಹುತೇಕ ಅದು ಅಂಜೋಜೆನಿಸ್ ಎಂಬ ಕಳ್ಳ ಮಾರ್ಗದಿಂದಲೇ ಆಗಿರುತ್ತದೆ.
'ಬಯಾಪ್ಸಿ' ಮಾಡಿಸುವಂತ ಕ್ರಿಯೆಗಳು ಗೆಡ್ಡೆಯ ರೂಪದಲ್ಲಿರುವುದನ್ನು ಕದಲಿಸಿ ಅದು ಕ್ಯಾನ್ಸರ್ ಸೆಲ್ ಗಳಾಗಿ ಹರಡುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತವೆ.
ನೆನಪಿರಲಿ, ಯಾವ ದೇಹಕ್ಕೆ ಗೆಡ್ಡೆಯಂತಹ ಅನುಪಯುಕ್ತ ವಸ್ತುಗಳನ್ನು ಉತ್ಪತ್ತಿ ಮಾಡಲು ಸಾಧ್ಯವೂ ಆದೇ ನಮ್ಮ ದೇಹಕ್ಕೆ ಅದನ್ನು ನಾಶ ಮಾಡುವ ಸಾಮರ್ಥ್ಯವೂ ಇರುತ್ತದೆ. ಅಂದರೆ ಪರೀಕ್ಷೆ, ಶಸ್ತ್ರ ಚಿಕಿತ್ಸೆಯಂತ ಹೊರಗಿನ ಮಧ್ಯಪ್ರವೇಶದ ಅಗತ್ಯವಿರುವುದಿಲ್ಲ.
ಈ ರೀತಿ ದೇಹ ತನ್ನನ್ನು ತಾನೇ ಗುಣಪಡಿಸಿಕೊಳ್ಳಲು ಅಗತ್ಯವಿರುವುದೇ 'ನೈಟ್ರಿಕ್ ಆಕ್ಸೈಡ್' ಎಂಬ ಅಣು!
ಆಂಜಿಯೋಸಿಸ್ ಎಂಬ ಕಳ್ಳ ಆಹಾರ ಮಾರ್ಗವನ್ನು ಮುಚ್ಚಿಹಾಕಿ ಬ್ಲಾಕ್ ಆದ ರಕ್ತನಾಳಗಳನ್ನು ಸರಿಪಡಿಸಿ ಸರಾಗ ರಕ್ತಚಲನೆಗೆ ಸಹಾಯ ಮಾಡುತ್ತದೆ ಈ 'ನೈಟ್ರಿಕ್ ಆಕ್ಸೈಡ್'. ಅದೂ ಕೇವಲ ಎರಡು ದಿನಗಳಲ್ಲಿ!
ಈ ವಿಷಯವು 1998 ರ ನೊಬೆಲ್ ಪುರಸ್ಕೃತ ವಿಜ್ಞಾನದಲ್ಲಿ ಸಂಶೋಧನೆ, ಆಧಾರಗಳ ಸಮೇತ ಸಾಬೀತುಪಡಿಸಲಾಗಿದೆ.
ಸ್ವಾಭಾವಿಕವಾಗಿ 'ನೈಟ್ರಿಕ್ ಆಕ್ಸೈಡ್' ಉತ್ಪತ್ತಿ ಮಾಡಲು ಕ್ರಮಬದ್ಧ ಹಣ್ಣುಗಳು-ತರಕಾರಿಗಳು ಹಾಗೂ ಇತರ ಆಹಾರವನ್ನು ಕ್ರಮಬದ್ಧವಾಗಿ ತಿನ್ನುವ ಕ್ರಮದ ನೈಸರ್ಗಿಕ ಮಾರ್ಗವೇ ಡಿ.ಐ.ಪಿ ಡಯಟ್ (DIP Diet) ಹಾಗೂ ಹಸಿರು ಜ್ಯುಸ್!
(ಡಿ.ಐ.ಪಿ ಡಯಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಹಿಂದಿನ ಲೇಖನದಲ್ಲಿ ವಿವರವಾಗಿ ತಿಳಿಸಿಕೊಡಲಾಗಿದೆ)
ಡಿ.ಐ.ಪಿ ಡಯಟ್ ಹಾಗೂ ಹಸಿರು ಜ್ಯುಸ್ ಆಹಾರ ಪದ್ದತಿಯನ್ನು ಅನುಸರಿಸಿದ ಎರಡೇ ದಿನಗಳಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗಿ ಉರಿಯೂತ ಕಡಿಮೆಯಾಗಲು ಆರಂಭಿಸುತ್ತದೆ. ಕಟ್ಟಿಕೊಂಡ ರಕ್ತ ಸಂಚಲನೆ ಸರಾಗವಾಗತೊಡಗುತ್ತದೆ.
ಗೆಡ್ಡೆಯ ಗಾತ್ರ ಕಡಿಮೆಯಾಗತೊಡಗುತ್ತದೆ.
ಗೆಡ್ಡೆಯ ಗಾತ್ರಕ್ಕೆ ಅನುಗುಣವಾಗಿ ಒಂದು-ಒಂದೂವರೆ ತಿಂಗಳಿನಲ್ಲಿ ತುಂಬಾ ದೊಡ್ಡ ಮಟ್ಟದ ಸುಧಾರಣೆ ಕಾಣಬಹುದು. ಸ್ಟೋನ್ ಅಥವಾ ಕ್ಯಾನ್ಸರ್ ಸೆಲ್ ಗಳಿಗೂ ಇದು ಅನ್ವಯಿಸುತ್ತದೆ.
'ಡಿಯಾಬಿಟೀಸ್' ಇದ್ದವರು ಯಾವುದೇ ಔಷಧಿಗಳು, ಇಂಜೆಕ್ಷನ್ ಇಲ್ಲದೆ ಗುಣಮುಖರಾಗುವುದೂ ಈ ಮಾರ್ಗದಲ್ಲೇ. ಇದಿಷ್ಟೇ ಅಲ್ಲ, ತಪ್ಪಾದ ಜೀವನಕ್ರಮದಿಂದಾಗಿ ಬಂದಿರುವ/ಬರುವ ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವ ಮಾರ್ಗವೂ ಇದೆ.
ಖಾಯಿಲೆ, ತೀವ್ರತೆಗನುಗುಣವಾಗಿ ಯಾವುದೇ ರೀತಿಯ ಖಾಯಿಲೆಗಳನ್ನು ಕೆಲವೇ ದಿನಗಳು ಅಥವಾ ತಿಂಗಳುಗಳಲ್ಲಿ ಯಾವುದೇ ಔಷಧಿಗಳು, ಇಂಜೆಕ್ಷನ್ ಗಳು, ಶಸ್ತ್ರ ಚಿಕಿತ್ಸೆ, ಲೇಸರ್ ಚಿಕಿತ್ಸೆಗಳಿಲ್ಲದೆ. ಬಿ. ಪಿ., ಶುಗರ್ ನಂತಹ ಖಾಯಿಲೆಗಳನ್ನು ಕೇವಲ 5 ದಿನಗಳಲ್ಲಿ ರಿವರ್ಸ್ ಮಾಡಿಕೊಳ್ಳುವ ಕ್ರಮವೂ ಇದೆ.
ಮೂಲ: ಡಾ.ಬಿಸ್ವರೂಪ್ ರಾಯ್ ಚೌಧುರಿ, ವಿಶ್ವವಿಖ್ಯಾತ ನ್ಯೂಟ್ರಿಷನಿಸ್ಟ್
ಅನುವಾದ: ಕಾರಂಜಿ ಶ್ರೀಧರ್.
ಹೆಲ್ತ್ ಅಂಡ್ ವೆಲ್ನೆಸ್ಸ್ ಕೋಚ್, ಬೆಂಗಳೂರು.
Email: swasthya.way2health@gmail.com

The bundle to start reversing all your diseases in 6 days without medication and side effects.  medication https://bit.l...
26/01/2023

The bundle to start reversing all your diseases in 6 days without medication and side effects. medication https://bit.ly/3oFqcFf

26/01/2023
'ಡಯಾಬಿಟಿಸ್'ನಿಂದ ಮುಕ್ತಿ ಹೊಂದುವುದು ಈಗ ಸರಳ-ಸುಲಭ ಮತ್ತು ಸಾಧ್ಯ!ಒಂದು ಬಾರಿ ಬಿಪಿ-ಶುಗರ್ ಬಂದರೆ ಜೀವನ ಪರ್ಯಂತ ಮಾತ್ರೆ-ಇಂಜೆಕ್ಷನ್ ತೆಗೆದುಕ...
09/11/2022

'ಡಯಾಬಿಟಿಸ್'ನಿಂದ ಮುಕ್ತಿ ಹೊಂದುವುದು ಈಗ ಸರಳ-ಸುಲಭ ಮತ್ತು ಸಾಧ್ಯ!

ಒಂದು ಬಾರಿ ಬಿಪಿ-ಶುಗರ್ ಬಂದರೆ ಜೀವನ ಪರ್ಯಂತ ಮಾತ್ರೆ-ಇಂಜೆಕ್ಷನ್ ತೆಗೆದುಕೊಂಡೆ ಬದುಕಬೇಕೆಂಬ ಭ್ರಮೆಯಿತ್ತು!

ಇಂದು ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ವೈದ್ಯರಷ್ಟೇ ಅಲ್ಲದೆ ಎಲ್ಲ ರೀತಿಯ ವೈದ್ಯ ಪದ್ಧತಿಯ ತಜ್ಞರೂ ಕೂಡ ಡಯಾಬಿಟಿಸ್ ನಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದು ಎಂಬುದನ್ನು ಈಗ ಕಂಡುಕೊಂಡಿದ್ದಾರೆ!

2 ನೋಬಲ್ ಪ್ರಶಸ್ತಿ ಪುರಸ್ಕೃತ ಸಂಶೋಧನೆಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ಈ 'ಫ್ರೀಡಂ ಡಯಟ್' ನಿಂದ ನಿಮ್ಮ ಸಕ್ಕರೆ ಖಾಯಿಲೆಯಿಂದ ಕೇವಲ ೬ ದಿನಗಳಲ್ಲಿ ಅದ್ಭುತ ಲಾಭ ಪಡೆಯಿರಿ!
ಕೇವಲ 21 ದಿನಗಳಲ್ಲಿ ಔಷಧಿಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಿಟ್ಟು ಬಿಡಿ!

ಯಾವುದೇ ಔಷಧಿ, ಕಠಿಣ ಡಯಟ್, ವ್ಯಾಯಾಮ ಅಥವ ಅಡ್ಡ ಪರಿಣಾಮಗಳಿಲ್ಲ!

ಡಯಾಬಿಟಿಸ್ ನಿಂದ ಮುಕ್ತಿ ಹೊಂದಲು ಮೂರು ಆಯ್ಕೆಗಳು

1. ಸರಳ ಭಾಷೆಯಲ್ಲಿರುವ ನಮ್ಮ ಫ್ರೀ ಡಯಟ್ ಪ್ಲಾನ್ ಅನ್ನು ಉಚಿತವಾಗಿ ಪಡೆದು ನೀವೇ ಪ್ರಯತ್ನಿಸಿ.
2. ದೀರ್ಘ ಕಾಲದಿಂದ ಔಷಧಿಯ ನೆರವಿನಲ್ಲಿರುವರು ತಜ್ಞರ ನಿಗಾದಲ್ಲಿ ಪ್ರಯತ್ನಿಸಿ.
3. ಮನೆಯ ವಾತಾವರಣದಲ್ಲಿ ಪ್ರಯತ್ನಿಸಲು ಪ್ರೇರಣೆ ಸಿಗುತ್ತಿಲ್ಲವೆಂದಾದರೆ ನಮ್ಮ 21 ದಿನಗಳ 'ಫ್ರೀಡಂ ಡಯಟ್ ರಿಟ್ರೀಟ್',
ಪ್ರಕೃತಿಯ ನಡುವೆ ವಸತಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಿ.

ಸಾವಿರಾರು ಜನರು ಈಗಾಗಲೇ 'ಫ್ರೀಡಂ ಡಯಟ್' ನೆರವಿನಿಂದ ಲಾಭ ಪಡೆದಿದ್ದಾರೆ.

ತಡವೇಕೆ?

ಈಗಲೇ ಕಾರ್ಯಮಗ್ನರಾಗಿ.

ಫ್ರೀಡಂ ಡಯಟ್ ಪ್ಲಾನ್ ಗಾಗಿ +91 94821 40916 ಸಂಖ್ಯೆಗೆವಾಟ್ಸಪ್ಪ್ ಮೆಸೇಜ್ ಮಾಡಿ.

https://menuzen.site/Swasthya.Way2Health

.Way2Health

ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬುದು ಈಗ ಹಳೆಯ ಪುರಾಣ!ಯಾವುದೇ ಔಷಧಿಗಳಿಲ್ಲದೆ, ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ಯಾವುದೇ ಅಡ್ಡ ಪರಿ...
24/10/2022

ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬುದು ಈಗ ಹಳೆಯ ಪುರಾಣ!

ಯಾವುದೇ ಔಷಧಿಗಳಿಲ್ಲದೆ, ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಟೈಪ್-2 ಡಯಾಬಿಟಿಸ್ ಅನ್ನು ನಮ್ಮ 'ಫ್ರೀಡಮ್ ಡಯಟ್' ಪ್ಲಾನ್ ನಿಂದ ನೈಸರ್ಗಿಕವಾಗಿ-ಸುರಕ್ಷಿತವಾಗಿ ಕೇವಲ 6 ದಿನಗಳಲ್ಲಿ ರಿವರ್ಸ್ ಮಾಡಿಕೊಳ್ಳಿ!

ವೈಜ್ಞಾನಿಕ ಸಂಶೋಧನೆ ಮತ್ತು ಕೇಸ್ ಸ್ಟಡೀಸ್‌ನಿಂದ ಆಧಾರದಿಂದ ಕೂಡಿದೆ.

9482140916 ಗೆ 'ಫ್ರೀಡಮ್ ಡಯಟ್ ಪ್ಲಾನ್' ಸಂದೇಶವನ್ನು ಕಳುಹಿಸುವ ಮೂಲಕ ಮಾರ್ಗದರ್ಶಿ ಪಡೆಯಿರಿ.

Burst the age old myth of diabetes not curable!Reverse your Type-2 Diabetes without any medication, strict diet and with...
24/10/2022

Burst the age old myth of diabetes not curable!

Reverse your Type-2 Diabetes without any medication, strict diet and without any side effects naturally-safely within 6 days with our Freedom Diet Plan!

Backed by scientific research and case studies.

Get the guide just by sending 'Freedom Diet Plan' message to +91 94821 40916

Address

Bangalore
560079

Alerts

Be the first to know and let us send you an email when Swasthya.Way2Health posts news and promotions. Your email address will not be used for any other purpose, and you can unsubscribe at any time.

Contact The Practice

Send a message to Swasthya.Way2Health:

Share