Naturopath Foundation

Naturopath Foundation Contact information, map and directions, contact form, opening hours, services, ratings, photos, videos and announcements from Naturopath Foundation, Physical therapist, vijaynagar, Bangalore.

ಆರೋಗ್ಯದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಹಲವಾರು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ, ಆದರೆ ಇವೆಲ...
10/06/2019

ಆರೋಗ್ಯದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಹಲವಾರು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ, ಆದರೆ ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಲೋಳೆಸರ ಅನೇಕ ವಿಧದ ಔಷಧೀಯ ಗುಣಗಳಿಂದಲೇ ಹೆಸರುವಾಸಿಯಾಗಿದೆ, ಇವೆಲ್ಲದಕ್ಕೆ ಕಾರಣವಿಷ್ಟೇ, ಇವು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಜೊತೆಗೆ ಚರ್ಮದ ಆರೈಕೆಗೆ ಬೇಕಾದ ಸಮೃದ್ಧ ಪೋಷಕಾಂಶಗಳು ಬಹಳಷ್ಟು ಇದರಲ್ಲಿರುವುದೇ ಈ ಪಟ್ಟ ಸಿಗಲು ಕಾರಣವಾಗಿದೆ.

ಅಷ್ಟೇ ಏಕೆ ಲೋಳೆಸರದ (ಅಲೋವೆರಾ) ಉಪಯೋಗಗಳ ಪಟ್ಟಿ ಮಾಡಿದರೆ ಬಹಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಕೂದಲು ಮತ್ತು ಚರ್ಮಕ್ಕೆ ಇದು ನೀಡುವ ಪೋಷಣೆ ಬೇರೆ ಯಾವುದೇ ಕೃತಕ ಪ್ರಸಾಧನಕ್ಕಿಂತಲೂ ಉತ್ತಮವಾಗಿದೆ.
ಅಲ್ಲದೆ, ಚಿಕ್ಕಪುಟ್ಟ ಗಾಯಗಳಾದರೆ ಲೋಳೆಸರದ ರಸ ಹೆಚ್ಚಿಕೊಂಡರೆ ಕೂಡಲೇ ರಕ್ತ ಒಸರುವುದು ನಿಲ್ಲುತ್ತದೆ. ಸುಟ್ಟ ಗಾಯದ ಉರಿಯನ್ನು ತಣಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಹೆಚ್ಚಳ, ದೇಹಕ್ಕೆ ಲಭಿಸಿದ ಶಕ್ತಿಯಲ್ಲಿ ಏರಿಕೆ, ರೋಗ ನಿರೋಧಕ ಶಕ್ತಿಯ ಹೆಚ್ಚಳ ಮೊದಲಾದ ಆರೋಗ್ಯಕರ ಆಗರವೇ ಇದರಲ್ಲಿ ಅಡಗಿದೆ... ಬನ್ನಿ ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಸಂಧಿವಾತ
ಮೂಳೆಗಳಲ್ಲಿರುವ ಸೈವೊನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಈ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ. ಆದರೆ ಈ ಅಂಶ ಒಣಗಿದರೆ ನೋವು, ಉರಿಯುಂಟಾಗುತ್ತದೆ. ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಈ ಸಮಸ್ಯೆಗೆ ಉತ್ತರ ಹೇಳುತ್ತದೆ.
ಸಂಧಿವಾತಕ್ಕೆ ಪರಿಣಾಮಕಾರಿ ಉತ್ತರ ಕಂಡುಕೊಳ್ಳಲು 2 ಚಮಚ ಲೋಳೆಸರವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಊಟಕ್ಕೆ ಮುನ್ನ 30 ನಿಮಿಷದ ಮುಂಚೆ ಇದನ್ನು ತೆಗೆದುಕೊಳ್ಳಬೇಕು. ಅಲ್ಲದೆ ಈ ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ನೋವು ಕಡಿಮೆಯಾಗುವುದಲ್ಲದೆ ತಿಂಗಳಿನಲ್ಲಿ ಇದರ ಉತ್ತಮ ಫಲಿತಾಂಶ ದೊರಕಲಿದೆ.

ರೋಗಾಣು ಪ್ರತಿಬಂಧಕ
ಲೋಳೆಸರ ಅತೀ ಪ್ರಬಲವಾದ ರೋಗಾಣು ಪ್ರತಿಬಂಧಕ (antibacterial) ಮತ್ತು ಸೋಂಕು ನಿರೋಧಕ (antiseptic) ಗುಣಲಕ್ಷಣಗಳನ್ನು ಹೊಂದಿರುವುದರಿಂದ, ತ್ವಚೆಯ ಬಿರುಕುಗಳು, ಗಾಯಗಳು, ಕೀಟಾಣುಗಳ ಕಡಿತ, ಮತ್ತು ಸಣ್ಣ ವೃಣಗಳ ಸಮಸ್ಯೆಗೆ ಬಹು ಪರಿಣಾಮಕಾರಿಯಾಗಿ ಕಾರ್ಯವಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, ಲೋಳೆಸರ ದ್ರವದಲ್ಲಿ ಗಾಯವನ್ನು ಉರಿಮುಕ್ತಗೊಳಿಸುವ ಸಾಮರ್ಥ್ಯದ ಜೊತೆ, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಯೂ ಕೂಡ ಇರುವುದರಿಂದ, ಯಾವುದೇ ರೀತಿಯ ಗಾಯದ ಸಮಸ್ಯೆಯನ್ನು ಶೀಘ್ರ ಶಮನಗೊಳ್ಳುತ್ತದೆ

ಮೊಡವೆಯ ಕಲೆ
ಒಂದು ವೇಳೆ ಬಿಸಿಲು ಅಥವಾ ಹಳೆಯ ಮೊಡವೆ ಚಿವುಟಿದ್ದರ ಪರಿಣಾಮವಾಗಿ ತ್ವಚೆಯ ಮೇಲೆ ಕಲೆ ಉಳಿದುಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಕೊಂಚ ವೃತ್ತಾಕಾರದಲ್ಲಿ ಕಲೆಯ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ.

ತ್ವಚೆಯ ಆರ್ದ್ರತೆಗೆ
ಮುಖದ ಚರ್ಮಕ್ಕೆ ಆರ್ದ್ರತೆ ನೀಡಲು ಲೋಳೆಸರಕ್ಕಿಂತ ಉತ್ತಮವಾದ ಇನ್ನೊಂದು ವಸ್ತುವಿಲ್ಲ. ಇದರ ನಿಯಮಿತ ಬಳಕೆಯಿಂದ ಚರ್ಮಕ್ಕೆ ಅಗತ್ಯವಾಗಿರುವ ಆರ್ದ್ರತೆ ಲಭಿಸುತ್ತದೆ. ಇದನ್ನು ಯಾವುದೇ ವಿಧದ ಚರ್ಮದವರೂ ಯಾವುದೇ ಅಳುಕಿಲ್ಲದೇ ಬಳಸಬಹುದು.

10/01/2019
09/01/2019
ನನ್ನ ಪ್ರೀತಿಯ ಆತ್ಮೀಯ ಗೆಳೆಯರೇ....ಪ್ರತಿ ಭಾನುವಾರದಂತೆ ಈ ಭಾನುವಾರದ ನಾಟೀ ಔಷಧೀಯ ಕಾರ್ಯಕ್ರಮದ ಔಷಧೀ ನಮ್ಮ ಕಾಲಿನ ಹಿಮ್ಮಡಿಯ ಒಡೆತ.. (ಸೀಳು)...
31/12/2018

ನನ್ನ ಪ್ರೀತಿಯ ಆತ್ಮೀಯ ಗೆಳೆಯರೇ....
ಪ್ರತಿ ಭಾನುವಾರದಂತೆ ಈ ಭಾನುವಾರದ ನಾಟೀ ಔಷಧೀಯ ಕಾರ್ಯಕ್ರಮದ ಔಷಧೀ ನಮ್ಮ ಕಾಲಿನ ಹಿಮ್ಮಡಿಯ ಒಡೆತ.. (ಸೀಳು). ಹೌದು ಗೆಳೆಯರೇ ನಮ್ಮ ಹಲವು ಗೆಳೆಯರು ಈ ಬಗ್ಗೆಯೇ ಕೇಳಿದ್ದರು. ಹೇಳಿಕೇಳಿ ಚಳಿಗಾಲ ಬೇರೆ ನಮ್ಮ ಚರ್ಮ ಒಡೆಯುವುದು ಸರ್ವೇಸಾಮಾನ್ಯವಾಗಿರುತ್ತದೆ.. ಅದರಲ್ಲಿ ಕಾಲಿನ ಪಾದದ ಹಿಮ್ಮಡಿ ಒಡೆತ ಸದಾಕಾಲವೂ ಇರುತ್ತದೆ.. ನಾವು ನೀವು ನೋಡಿರುವಹಾಗೆ ಏನೆಲ್ಲಾ ಕ್ರೀಂ ಗಳು ಲೋಷನ್ಗಳು.. ಬೆಣ್ಣೆಗಳು ಕೊನೆಗೇ ಗ್ರೀಸ್ ಕೂಡಾ ಹಚ್ಚುವುದು ನೋಡಿದ್ದೇವೆ. ಕೆಳಗೆ ನೋಡಿರುವ ಗಿಡ ನೋಡಿದ್ದೀರಲ್ಲವೆ.. ಅದು ದತ್ತೂರಿ ಗಿಡ. ಬೇರೆ ಬೇರೆಕಡೆಗಳಲ್ಲಿ ಬೇರೆಯದೇ ಹೆಸರಿನಿಂದ ಕರೆಯಬಹುದು. ಈಗ ಇದರ ಬಳಕೆಯನ್ನು ನೋಡೋಣಾವಲ್ಲವೆ. ಮೊದಲು ಒಡೆದಿರುವ ಪಾದವನ್ನು ಒಂದು ಬಕೇಟ್ ಬಿಸಿನೀರನ್ನು ತೆಗೆದುಕೊಡು ಅದರೋಳಗೆ ಪಾದಗಳನ್ನು ಅರ್ಧಗಂಟೆಗಳ ಕಾಲ ನೆನೆಸಿ. ನಂತರ ನಿಮ್ಮ ಹಲ್ಲುಗಳನ್ನು ಉಜ್ಜುವ ಹಳೆಯ ಬ್ರಷ್ ತೆಗೆದುಕೊಂಡು. ಸ್ವಲ್ಪ ಶಾಂಪೂ ಹಚ್ಚಿಕೊಂಡು ಪಾದಗಳ ಹಿಮ್ಮಡಿಯ ಒಡೆದಿರುವ ಭಾಗಗಳಲ್ಲಿ ಚೆನ್ನಾಗಿಯೇ ತಿಕ್ಕಿತೊಳೆದುಕೊಂಡು. ನಂತರ ಈ ಗಿಡ ಮುರಿದರೆ ಹೊರ ಬರುವ ತಿಳೀ ಹಳದಿ ಬಣ್ಣದ ಲೋಳೆಯನ್ನು (ರಸವನ್ನು) ದಿನ ಬಿಟ್ಟು ದಿನ (ಮೂರುಸಲ) ಹಚ್ಚಿದರೆ ಸಮಸ್ಯೆಗಳು ಪರಿಹಾರವಾಗುವುದು... ಈ ಗಿಡದ ಮಹತ್ವವು ಇನ್ನೂ ಇದೆ. ಬಹಳ ಔಷಧೀಯ ಗಿಡವಿದು. ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಇದರ ಉಪಯೋಗ ಬಹಳಷ್ಟು ಇದೆ. ಮುಂದಿನ ದಿನಗಳಲ್ಲಿ ತಿಳಿಸುವೆ. ಧನ್ಯವಾದಗಳು ನಿಮಗೆಲ್ಲರಿಗೂ.

ನನ್ನ ಪ್ರೀತಿಯ ಗೆಳೆಯರೇಈ ಭಾನುವಾರದ ನಾಟೀ ಔಷಧೀಯ ಕಾರ್ಯಕ್ರಮದಲ್ಲಿ ನಮ್ಮನ್ನು ಕಾಡುವ "ಅಲ್ಸರ್" ತೊಂದರೆಯ ಬಗ್ಗೆ.. ನಮ್ಮ ಕೆಲವು ಗೆಳೆಯರು ಅಲ್ಸ...
09/12/2018

ನನ್ನ ಪ್ರೀತಿಯ ಗೆಳೆಯರೇ
ಈ ಭಾನುವಾರದ ನಾಟೀ ಔಷಧೀಯ ಕಾರ್ಯಕ್ರಮದಲ್ಲಿ ನಮ್ಮನ್ನು ಕಾಡುವ "ಅಲ್ಸರ್" ತೊಂದರೆಯ ಬಗ್ಗೆ.. ನಮ್ಮ ಕೆಲವು ಗೆಳೆಯರು ಅಲ್ಸರ್ ಬಗ್ಗೆಯೇ ಕೇಳಿದ್ದರು... ಇದು ಇತ್ತೀಚೆಗೆ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ.. ಕೆಳಗೆ ಕಾಣುವ ಗಿಡವನ್ನು ನೋಡಿದ್ದೀರಲ್ಲವೆ.. ಈ ಗಿಡದ ಹೆಸರು ಬೇರೆ ಬೇರೆ ಭಾಗಗಳಲ್ಲಿ ಬೇರೆಯದೇ ಹೆಸರುಗಳಿಂದ ಕರೆಯುತ್ತಾರೆ . ಇದರ ಮೂಲ ಹೆಸರು ಪಚ್ಚರಿ ಎಂದು. ಇದು ನಿಮ್ಮ ತೋಟದಲ್ಲಿ ಗದ್ದೆಗಳ ಬದುವಿನಲ್ಲಿ.. ಜಮೀನಿನಲ್ಲಿ ಹೀಗೆ ಎಲ್ಲೆಲ್ಲೂ ಕಾಣಬಹುದು. ಇದರ ಉಪಯೋಗಗಳನ್ನು ಹೇಗೆಂದು ನೋಡೋಣಾವಲ್ಲವೇ.. ಈ ಗಿಡದ ಎಲೆಗಳನ್ನು ತಂದು ತೊಳೆದು ಸ್ವಲ್ಪ ಅರೆದುಕೊಂಡು ಅದಕ್ಕೆ ತುಪ್ಪದೊಂದಿಗೆ ಸೇರಿಸಿ ಕಲೆಸಿಕೊಂಡು ಬೆಳಗ್ಗೆ ಖಾಲಿಯಾದ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ.. ಕೆಲವುದಿನಗಳಲ್ಲಿ ನಿಮ್ಮ ಅಲ್ಸರ್ ಮಾಯ.. ಹಾಗೆಯೇ ಇದರ ಹೂಗಳನ್ನು ಕಿತ್ತು ತೊಳೆದುಕೊಂಡು ಶುದ್ದ ಹಸುವಿನ ಹಾಲಿನಲ್ಲಿ ಅರೆದು ಹಾಲು ಬರದ ಬಾಣಂತಿಯರಿಗೆ ಕುಡಿಸಿದರೆ ಹಾಲು ಅಧಿಕಗೊಳ್ಳುತ್ತದೆ .. ಮತ್ತು ಈ ಗಿಡವನ್ನು ಮುರಿದಾಗ ಬರುವ ಹಾಲಿನಿಂದ ಬಾಯಿಯೊಳಗಿನ ಹುಣ್ಣಿಗೆ ಹಚ್ಚಿದರೆ ಕೆಲವುದಿನಗಳಲ್ಲಿ ಗುಣವಾಗುವುದು...
ಅಲ್ಸರ್ ಗೆ ಔಷಧೀಯನ್ನು ತಿನ್ನುವಾಗ ಹಸಿಮೆಣಸಿನಕಾಯಿ ಖಾರವಾದ ಊಟವನ್ನು ಮಾಡಬಾರದು ಹಾಗೇ ಮಧ್ಯವನ್ನು ಸೇವಿಸಬಾರದು.. ಧನ್ಯವಾದಗಳು

ಈ ಗಿಡಗಳನ್ನ ನೋಡಿದ್ದೀರಲ್ಲವೆ ನಿಮ್ಮ ಕಾಲಕೆಳಗೆ ಓಡಾಡುವ ಜಾಗದಲ್ಲಿ ಬೆಳೆದಿರುತ್ತದೆ.. ಜ಼ೂಮ್ ಮಾಡಿನೋಡಿ ತಿಳಿಯುವುದು... ಈ ಗಿಡದ ಮಹತ್ವವೇನೆಂದ...
03/12/2018

ಈ ಗಿಡಗಳನ್ನ ನೋಡಿದ್ದೀರಲ್ಲವೆ ನಿಮ್ಮ ಕಾಲಕೆಳಗೆ ಓಡಾಡುವ ಜಾಗದಲ್ಲಿ ಬೆಳೆದಿರುತ್ತದೆ.. ಜ಼ೂಮ್ ಮಾಡಿನೋಡಿ ತಿಳಿಯುವುದು... ಈ ಗಿಡದ ಮಹತ್ವವೇನೆಂದರೆ ನಮ್ಮ ದೇಹದಲ್ಲಿ ಕುತ್ತಿಗೆಯ ಭಾಗದಲ್ಲಿ ಕಂಕುಳಿನಲ್ಲಿ ನರುಗುಳ್ಳೆ ಬಂದಿರುತ್ತದೆಯಲ್ಲವೆ.. ಆ ನರುಗುಳ್ಳೆಗೆ ಈ ಗಿಡದ ಹಾಲು ರಾಮಬಾಣ.. ಈ ಗಿಡವನ್ನು ಮುರಿದರ ಬಿಳಿಯ ಹಾಲು ಬರುತ್ತದೆ ಅದನ್ನು ತೆಗೆದುಕೊಂಡು ಗುಳ್ಳೆಗಳ ಭಾಗಕ್ಕೆ ಹಚ್ಚಿದರೆ ಕೇವಲ 4 5 ದಿನಗಳಲ್ಲಿ ನಿಮಗೇ ಗೊತ್ತಿಲ್ಲದಂತೆ ಉದುರಿಹೋಗುವುದು...
ಧನ್ಯವಾದಗಳು

22/11/2018

ನಾವು ದಿನನಿತ್ಯ ಸೇವಿಸುವ ಎಣ್ಣೆ ಲೆಕ್ಕಾಚಾರ!
# # # # # #₹₹ # # # # # # # # # # # # # # # # # # #
Ravi Arehalli ಅವರು ಬರೆದಿರುವ ಲೇಖನದಿಂದ ಸಂಗ್ರಹಿಸಿರುವ ಮಾಹಿತಿ:
------------------------------------------------------------------
ಉತ್ಕೃಷ್ಟ ದರ್ಜೆಯವೆಂದು, ಕೊಲೆಸ್ಟ್ರಾಲ್ ಮುಕ್ತ (ಇದು ಇನ್ನೊಂದು ದೊಡ್ಡ ಕಥೆ!) ಡಬಲ್ ರೀಫೈನ್ಡ್ ಎಂದೆಲ್ಲಾ ಹೇಳಿಕೊಳ್ಳುವ ಹೆಸರಾಂತ ಬ್ರಾಂಡುಗಳ ಬಹುತೇಕ ಎಣ್ಣೆಗಳ ಬೆಲೆಗಳು 70 ರಿಂದ ಶುರು ಆಗಿ 130--140ರಲ್ಲಿ ನಿಲ್ಲುತ್ತವೆ. ಬಹುತೇಕ ಎಣ್ಣೆಗಳು ಆಯಾ ಎಣ್ಣೆಕಾಳುಗಳಿಗೆ ಸಂಬಂಧಿಸಿದ ವಾಸನೆ, ಬಣ್ಣ ಇತ್ಯಾದಿಗಳನ್ನು ಕಳೆದುಕೊಂಡು ತಿಳಿನೀರಿನಂತೆ ಸ್ವಚ್ಛ ಸುಂದರವಾಗಿ ಕಾಣಿಸತ್ತಿರುತ್ತವೆ. ಇರಲಿ.

ಒಂದಿಷ್ಟು ಎಣ್ಣೆ ತೆಗೆಯುವ ಹಂತದ ಲೆಕ್ಕಾಚಾರಗಳನ್ನು ನೋಡೋಣ ಬನ್ನಿ.

ಕಡ್ಲೆಕಾಯಿ (ಶೇಂಗಾ) ಎಣ್ಣೆ ಒಂದು ಕೆಜಿಯಷ್ಟು ತಯಾರಾಗಲು ಅತ್ಯುತ್ತಮ ದರ್ಜೆಯ 2ರಿಂದ 2.5 ಕೆಜಿ ಶೇಂಗಾಬೀಜ ಬೇಕು. 2 ಕೆಜಿ ಬೀಜ (ಸಾವಯವ ಅಲ್ಲದ್ದು) ದ ಹೋಲ್ಸೇಲ್ ಬೆಲೆ ಈಗ 70 ರೂಪಾಯಿ ಇರಬಹುದೆಂದುಕೊಳ್ಳೋಣ. ಶೇಂಗಾಬೀಜದ ಖರ್ಚು 140 ಆಯಿತು. ಇದಕ್ಕೆ ಎಣ್ಣೆ ತೆಗೆಯುವ ಛಾರ್ಜು 30 ಸೇರಿಸೋಣ. ನಂತರ ಸಾಗಣೆ, ಕ್ಲೀನಿಂಗ್ ಇತ್ಯಾದಿ 30 ರೂಪಾಯಿ ಎಂದುಕೊಳ್ಳೋಣ. ಎಣ್ಣೆ ತೆಗೆದ ಮೇಲೆ ಇದಕ್ಕೆ ಶೇ 25ರಷ್ಟು ಪ್ಯಾಕಿಂಗ್ ಮತ್ತು ಮಾರ್ಕೆಟಿಂಗ್ ವೆಚ್ಚಗಳು ಸೇರಿಕೊಳ್ಳುತ್ತವೆ.

2 ಕೆಜಿ ಶೇಂಗಾ ಬೀಜ 140/-
ಮಿಲ್ಲಿಂಗ್ ಚಾರ್ಜು 30/-
ಸಾಗಣೆ, ಕ್ಲೀನಿಂಗ್ ಖರ್ಚು 30/-
ಪ್ಯಾಕಿಂಗ್ ಮಾರ್ಕೆಟಿಂಗ್ 50/-
-------------------------------------
ಒಟ್ಟು 250/-
ಒಂದು ಕೆಜಿ ಹಿಂಡಿ -30/-
--------------------------------
ನಂತರ ಒಟ್ಟು 220/-

ಒಟ್ಟು ಮೊತ್ತದಲ್ಲಿ 1 ಕೆಜಿ ಹಿಂಡಿಯ ಫಾಕ್ಟರಿ ದರ 30ನ್ನು ಕಳೆದರೆ ಕೆಜಿ ಎಣ್ಣೆಯ ಮೊತ್ತ 220ಕ್ಕೆ ಇಳಿಯುತ್ತದೆ. ದೊಡ್ಡ ಪ್ರಮಾಣದಲ್ಲಿ ಫಾಕ್ಟರಿಗಳಲ್ಲಿ ಎಣ್ಣೆ ತೆಗೆದು ರೀಫೈನ್ ಮಾಡುವುದರಿಂದ, ಹೀಟ್ ಪ್ರೆಸ್ ಮಾಡಿ ಎಣ್ಣೆ ತೆಗೆಯುವಾಗ ಪ್ರತಿ ಕೆಜಿ ಬೀಜಕ್ಕೆ ಸ್ವಲ್ಪ ಹೆಚ್ಚು ಎಣ್ಣೆ ದೊರೆಯಬಹುದು. ಆಗ ಈ ಖರ್ಚುಗಳು ಶೇ 20 ರಷ್ಟು ಕಡಿಮೆ ಆಗುತ್ತವೆ ಎಂದುಕೊಂಡರೂ ಪ್ರತಿ ಕೆಜಿ ಎಣ್ಣೆಯ ಫ್ಯಾಕ್ಟರಿ ದರವೆ 176 ರೂಪಾಯಿ ಆಗುತ್ತದೆ. ಅದು ಡಿಸ್ಟಿಬ್ಯೂಟರ್‌ಗಳನ್ನು ತಲುಪಿ, ಹೋಲ್‌ಸೇಲ್, ರೀಟೈಲ್ (ಸಾಧಾರಣ ವಸ್ತುವಿನ ರೀಟೈಲ್ ಬೆಲೆಯ ಶೇ 33ರಷ್ಟು ಇಲ್ಲಿ ಹಂಚಿಕೆಯಾಗುತ್ತದೆ) ಎಂದು ನಮ್ಮ ಕೈ ತಲುಪುವಷ್ಟರಲ್ಲಿ 234 ಆಗಬೇಕು.

ಆದರೆ ಕೆಜಿಗೆ 234ರೂಪಾಯಿ ಎಂದರೆ ಯಾವ ಗ್ರಾಹಕನೂ ಆ ಎಣ್ಣೆಯನ್ನು ಮೂಸುವುದಿಲ್ಲ.

ಆಗ ‘ಮಾರುಕಟ್ಟೆ’ಯ ವ್ಯಾಪಾರಿ ಬುದ್ದಿ ಕೆಲಸ ಮಾಡತೊಡಗುತ್ತದೆ. ಕಲಬೆರಕೆ ಆರಂಭವಾಗುತ್ತದೆ. ಗ್ರಾಹಕರಿಗೆ ಬೆಲೆಯೂ ಹೆಚ್ಚಾಗಬಾರದು, ಕರಿದ ತಿಂಡಿಗಳೂ ಗರಿಗರಿಯಾಗಿರಬೇಕು. ಆರೋಗ್ಯದ ಮೇಲೆ ದಿಡೀರ್ ಪರಿಣಾಮ ಉಂಟಾಗುವಂತಿರಬಾರದು. ನಿಧಾನ ವಿಷದಂತ ಪದಾರ್ಥಗಳಾದರೆ ಸಲೀಸು.

’ಲಿಕ್ವಿಡ್ ಪ್ಯಾರಾಫಿನ್’ನಂತಹ ಪೆಟ್ರೊಲಿಯಂ ಸಂಸ್ಕರಣೆಯ ಹಂತದ ‘ಉಳಿಕೆ’ಗಳು ಕಲಬೆರಕೆ ಮಾಡಲು ಬಹಳ ಸೂಕ್ತ ಪದಾರ್ಥ. ಇಂತದ್ದೆ ಹಲವು ಕಲಬೆರಕೆ ಪದಾರ್ಥಗಳು ಹಾಲಿನಲ್ಲಿ ನೀರು ಹೊಂದಿಕೊಳ್ಳುವಂತೆ ಎಣ್ಣೆಯೊಡನೆ ಸೇರಿಹೋಗುತ್ತವೆ. ಅಗ್ಗದ ಫಾಮ್ ಆಯಿಲ್ ಕೊನೆಯ ಆಯ್ಕೆ. ಜೊತೆಗೆ ಒಂದಿಷ್ಟು ಬಣ್ಣ, ಕೃತಕ ಸುವಾಸನೆಯನ್ನು ಸೇರಿಸಲೇಬೇಕು. ಎಲ್ಲವೂ ಗ್ರಾಹಕರನ್ನು ಖುಷಿಪಡಿಸಲು. ಹೀಗೆಲ್ಲಾ ಕಲಬೆರಕೆಯಾಗಿ ತಯಾರಾದ ಎಣ್ಣೆಯ ಪ್ರತಿ ಕೆಜಿಯ ಫಾಕ್ಟರಿ ದರ 50--60ರ ಆಸುಪಾಸಿನಲ್ಲಿರಬಹುದು. ನೋಡಿ, ನಮಗಾಗಿ ಎಣ್ಣೆ ತಯಾರು ಮಾಡುವ ದೊಡ್ಡ ಫ್ಯಾಕ್ಟರಿಯವ ಎಷ್ಟೆಲ್ಲಾ ಕಲಬೆರಕೆಯ ಸರ್ಕಸ್ಸು ಮಾಡಬೇಕಲ್ಲವೆ...

ಈ ಲೆಕ್ಕಾಚಾರ ಸ್ವಲ್ಪ ಅಂಕಿ ಅಂಶ ಬದಲಾವಣೆಯೊಂದಿಗೆ ಈಗ ಲಭ್ಯ ಇರುವ ಸೂರ್ಯಕಾಂತಿ, ತೆಂಗು, ಎಳ್ಳು, ಹುಚ್ಚೆಳ್ಳು...ಹೀಗೆ ಎಲ್ಲಾ ಎಣ್ಣೆಗಳಿಗೂ ಅನ್ವಯಿಸುತ್ತದೆ ಹಾಗೂ ಕಲಬೆರಕೆಯಲ್ಲಿ ಎಲ್ಲವೂ ಅಣ್ಣತಮ್ಮಂದಿರೇ.

ಹೇಳಿ ಇಷ್ಟು ಕಡಿಮೆ ಬೆಲೆಗೆ ತಯಾರಾಗುವ ಎಣ್ಣೆಯನ್ನೇ ಅಲ್ಲವೆ ನಾವೂ ನೀವೂ ಆ ರುಚಿ, ಈ ರುಚಿ, ಡೈಮಂಡು, ಗೋಲ್ಡು ಇತ್ಯಾದಿ ಬ್ರಾಂಡುಗಳಲ್ಲಿ ತಿನ್ನುತ್ತಿರುವುದು...ಇದೇ ಎಣ್ಣೆ ಮತ್ತು ಮೈದಾದಂತಹ ಘೋರ ವಿಷದ ಜೊತೆಗೂಡಿ ತಯಾರಾದ ಬೇಕರಿ ತಿನಿಸುಗಳನ್ನು ನಾವು ಚಪ್ಪರಿಸುತ್ತಿದ್ದೇವಲ್ಲ...ಪ್ರತಿ ಹಳ್ಳಿಯಲ್ಲೂ ಇಂದು ಬೇಕರಿಗಳಾಗಿವೆ...ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳು ಬಂದಿವೆ. ಎಣ್ಣೆ ಬಳಸುವುದರಲ್ಲಿ ಇಂದು ಬಡವ, ಬಲ್ಲಿದ; ಹಳ್ಳಿ ನಗರ ಎಂಬ ವ್ಯತ್ಯಾಸಗಳಿಲ್ಲ.

ಪ್ರತಿ ಗ್ರಾಂ ಎಣ್ಣೆ ನಮ್ಮ ದೇಹ ಸೇರುವಾಗಲೂ ನಿಧಾನ ವಿಷವನ್ನು ಉಣ್ಣುತ್ತಿರುತ್ತೇವೆ. ಇಂದಿನ ಜನರನ್ನುಅತಿಹೆಚ್ಚು ಕಾಡುತ್ತಿರುವ ಬೊಜ್ಜು, ಬೀಪಿ, ಶುಗರ್ರು, ಕ್ಯಾನ್ಸರ್ರು ಮತ್ತೊಂದು ಇತ್ಯಾದಿ ನೂರೆಂಟು ಕಾಯಿಲೆಗಳಿಗೂ ನಾವು ಬಳಸುವ ಎಣ್ಣೆಗಳೇ ಮೂಲವಾಗಿರಬಾರದೇಕೆ...ಅದರಲ್ಲಿ ಸಂಶಯವೇ ಇಲ್ಲ ಬಿಡಿ. ಅಂಗೈ ಹುಣ್ಣಿಗೆ ಕನ್ನಡಿಯಾಕೆ?

ಹಾಗಿದ್ದ ಮೇಲೆ ನಾವು ಪ್ರತಿನಿತ್ಯ ಮನೆ, ಹೋಟೆಲ್ಲು, ಸಮಾರಂಭ ಎಲ್ಲೆಡೆಯೂ ವಿಷಕಾರಿ ಎಣ್ಣೆಗಳನ್ನು ಸೇವಿಸುತ್ತಿದ್ದೇವೆ ಅಂತಾಯಿತು.

ಹಾಗಾದರೆ ಇದರಿಂದ ಹೊರಬರಲು ಆಗುವುದಿಲ್ಲವೆ...

ಅಲ್ಲಾ.. ಇಷ್ಟೆಲ್ಲಾ ಆಗುವಾಗ ಸರ್ಕಾರ, ಅದರ ಅಂಗೋಪಾಂಗಗಳು ಎಣ್ಣೆ ಹೊಡೆಯುತ್ತಿರುತ್ತವಾ ಅಂತಾ ನೀವು ಕೇಳಬಹುದು...ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿವೆಯೆಂದರೆ ನಿಮಗೆ ವಿಷಯದ ಗಾಂಭೀರ್ಯ ಅರ್ಥವಾಗುತ್ತಿದೆ ಎಂದರ್ಥ.

ಎಲ್ಲರ ಮನಸ್ಸಿನಲ್ಲೂ ಆರೋಗ್ಯದ ಬುದ್ಧನ ಹುಟುಕಾಟ ಶುರುವಾಗಬೇಕಿದೆ.

ನನ್ನ ಆತ್ಮೀಯ ಗೆಳೆಯರೇ...ಪ್ರತೀ ಭಾನುವಾರದಂದು ನಾಟೀ ಔಷಧೀಯ ಕಾರ್ಯಕ್ರಮಗಳಲ್ಲಿ ಈ ವಾರದ ನಾಟೀ ಔಷಧಿ "ಮೂಲವ್ಯಾಧಿ" "ಪೈಲ್ಸ್" ನದ್ದು(ಮೊದಲು ಸಂಪ...
14/11/2018

ನನ್ನ ಆತ್ಮೀಯ ಗೆಳೆಯರೇ...
ಪ್ರತೀ ಭಾನುವಾರದಂದು ನಾಟೀ ಔಷಧೀಯ ಕಾರ್ಯಕ್ರಮಗಳಲ್ಲಿ ಈ ವಾರದ ನಾಟೀ ಔಷಧಿ
"ಮೂಲವ್ಯಾಧಿ" "ಪೈಲ್ಸ್" ನದ್ದು
(ಮೊದಲು ಸಂಪೂರ್ಣ ಓದಿ ನಂತರ ಶೇರ್ ಮಾಡಿ)
ಈ ಕೆಳಗಿನ ಗಿಡಕ್ಕೆ "ತುತ್ತೀ ಗಿಡ" ಎಂದು ಹೆಸರು. ಇದು ಎಂತಹುದೇ ಮೂಲವ್ಯಾಧಿ ಇದ್ದರೂ ಕೆಲವೇ ಕೆಲವು ದಿನಗಳಲ್ಲಿ ಮಂಗಮಾಯವಾಗಿಬಿಡುತ್ತದೆ.. ಈ ಗಿಡಗಳು ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವಂತ್ತದ್ದು.. ಈ ಎಲೆಗಳನ್ನು ಬೆಳಗ್ಗೆ ಹಾಳು ಹೊಟ್ಟೆಯಲ್ಲಿ 8 ರಿಂದ 10 ಎಲೆಗಳನ್ನು ತೆಗೆದುಕೊಂಡು ತೊಳೆದು ತಿನ್ನಬೇಕು. ಎಲೆಯು ಕಹಿಯಾಗಿರದೆ ತುಳಸಿ ಎಲೆ ತಿಂದಹಾಗೇ ಆಗುತ್ತದೆ..
ಹೊಟ್ಟೆಯಲ್ಲಿನ ಹುಣ್ಣುಗಳಿದ್ದರೂ ಈ ಎಲೆ ರಾಮಬಾಣ. ಈ ಪೈಲ್ಸ್ ಇದ್ದವರು ಯಾರೀಗೂ ಹೇಳದೆ ಮುಚ್ಚಿಡುವುದೇ ಹೆಚ್ಚು.. ಮೊದಲು ರಕ್ತ ಸೋರುತ್ತದೆ. ನಂತರ ಮುಳ್ಳಿನಂತಹ ಬೇರು ಬರುತ್ತದೆ. ನಂತರ ಮಲ ಹೊರಬರುವಾಗ ಸಂಕಟವಾಗಿ ಕರುಳು ಹೊರಬರುತ್ತದೆ.. ಅತಿಹೆಚ್ಚು ನೀರು ಕುಡಿಯಬೇಕು.. ಚಪಾತಿ. ಚಿಕನ್. ರಮ್. ಜವಳೀಕಾಯಿ. ಗುಂಡುಬದನೇಕಾಯಿ. ಪಪ್ಪಾಯಿಕಾಯಿ. ಸೀಡ್ ಲೆಸ್ ದ್ರಾಕ್ಷಿ . ಬಾದಾಮಿ ಬೀಜ. ಸಪೋಟ.ಹುರುಳಿಕಾಳು. ಇವುಗಳನ್ನ ಸ್ವಲ್ಪದಿನ ತಿನ್ನುವುದು ಬಿಟ್ಟರೆ ಉತ್ತಮ. ಸಾಧ್ಯವಾದರೆ ರಾತ್ರಿ ಊಟವಾದ ನಂತರ ಒಂದು ಸಣ್ಣ ಹಸಿ ಮೂಲಂಗಿಯನ್ನು ತಿಂದರೆ ಇನ್ನೂ ಉತ್ತಮ. ಕಿತ್ತಳೆ ಹಣ್ಣು ಕೂಡಾ ಸಹಕಾರಿ.. ಈ "ತುತ್ತೀ ಗಿಡ" ದ ಎಲೆಯನ್ನು 18 ದಿನಗಳವರೆಗೆ ತಿನ್ನಬೇಕು.. ಕೇವಲ 3 ಅಥವಾ 4 ದಿನಗಳಲ್ಲೇ ಉತ್ತಮವಾದ ಪರಿಣಾಮಕಾರಿಯಾದ ಆರೋಗ್ಯ ನಿಮ್ಮದಾಗುವುದು.. ಧನ್ಯವಾದಗಳು ನಿಮಗೆ.
ನಿಮ್ಮ ಶೇರ್ ಇತರರಿಗೆ ಸಂಕಟ ನಿವಾರಣೆ.

ನನ್ನ ಪ್ರೀತಿಯ ಆತ್ಮೀಯ ಸ್ನೇಹಿತರಿಗೆ ಈ ವಾರದ ನಾಟೀ ಔಷಧಿ "ದೇಹದೊಳಗಿನ ಕೊಬ್ಬು ಕರಗುವ ಬಗ್ಗೆ""Fat Control" ತುಂಬಾಜನರು ಅದರಲ್ಲೂ ನಮ್ಮ ಅಕ್ಕ...
11/11/2018

ನನ್ನ ಪ್ರೀತಿಯ ಆತ್ಮೀಯ ಸ್ನೇಹಿತರಿಗೆ ಈ ವಾರದ ನಾಟೀ ಔಷಧಿ "ದೇಹದೊಳಗಿನ ಕೊಬ್ಬು ಕರಗುವ ಬಗ್ಗೆ"
"Fat Control" ತುಂಬಾಜನರು ಅದರಲ್ಲೂ ನಮ್ಮ ಅಕ್ಕ-ತಂಗಿಯರು ಈ ದೇಹದ ತೂಕ ಇಳಿಯುವಿಕೆ ಬಗ್ಗೆಯೇ ಕೇಳಿಕೊಂಡಿದ್ದರು.... ಇದಕ್ಕೆ ಪರಿಹಾರವಿದೆ. ಮುಟ್ಟಿದರೆ ಮುನಿ ಎಂಬ ಸೊಪ್ಪು ನೆಲದಲ್ಲಿ ಬೆಳೆಯುತ್ತದೆ. ಅದರ ತುಂಬೆಲ್ಲಾ ಸಣ್ಣ ಮುಳ್ಳುಗಳು ಇರುತ್ತದೆ. ಯಾವುದೇ ವಸ್ತು ಅಥವಾ ಯಾರದರೂ ಮುಟ್ಟಿದರೆ ನಾಚಿಕೆಯಿಂದ ಮುದುಡಿಕೊಳ್ಳುತ್ತದೆ. ಈ ಗಿಡಕ್ಕೆ ಬೇರೆ ಬೇರೆ ಊರುಗಳಲ್ಲಿ ಬೇರೆಯದೇ ಹೆಸರಿರಬಹುದು. ಆದರೆ ಗಿಡ ಬದಲಾಗುವುದಿಲ್ಲ. ಈ ಸೊಪ್ಪಿನ "ಬೇರು"ಗಳನ್ನು ತೆಗೆದು ಚೆನ್ನಾಗಿಯೇ ತೊಳೆದುಕೊಂಡು 25 ಗ್ರಾಂ ನಷ್ಟು "ಬೇರು ಮಾತ್ರ".
ನಂತರ ದೊಡ್ಡಹೆಪ್ಲೆ ಬೀಜ 10 ಗ್ರಾಂ. (ನಿಮ್ಮ ಊರಿನಲ್ಲಿರುವ ಕುಂಕುಮ ಅಂಗಡಿ ಅಥವಾ ಗಿಡಮೂಲಿಕೆಗಳ ಅಂಗಡಿಯಲ್ಲಿ ದೊರಕುತ್ತದೆ) ಶಿವಮೊಗ್ಗದಲ್ಲಿ ಬಸವೇಶ್ವರ ಸ್ಟೋರ್ ಬಸವೇಶ್ವರ ದೇವಸ್ಥಾನದ ಹತ್ತಿರ ಗಾಂಧಿಬಜ಼ಾರ್ ನಲ್ಲಿ ದೊರಕುತ್ತದೆ. ಮತ್ತು ಓಮಿನಕಾಳು ಇದು ಎಲ್ಲರಿಗೂ ಗೊತ್ತಿದೆ 10 ಗ್ರಾಂ. ಇದಿಷ್ಟನ್ನೂ ಜಜ್ಜಿಕೊಂಡು ಅರ್ಧ ಲೀಟರ್ ನೀರನ್ನು ಹಾಕಿ ಚೆನ್ನಾಗಿಯೇ ಕುದಿಸಿ ಕುದಿಸಿ ಬಳಿಕ. ಕಷಾಯ ಒಂದು ಲೋಟದಷ್ಟು ಆದಮೇಲೆ ಅದನ್ನ ಬೆಳಗ್ಗೆ ಖಾಲಿಯಾದ ಹೊಟ್ಟೆಯಲ್ಲಿ ಕುಡಿಯಬೇಕು. (ಹಿಂದಿನದಿನವೇ ಬೇರನ್ನು ತಂದಿಟ್ಟುಕೊಂಡರೆ ಉತ್ತಮ) ಕೇವಲ 15 ದಿನಗಳಲ್ಲಿ ಪರಿಣಾಮಕಾರಿಯಾಗಿ 4 ರಿಂದ 5 ಕೇಜಿ ತೂಕ ಕಡಿಮೆಯಾಗುತ್ತದೆ... (""ವಿಷೇಶವಾಗಿ ಒಂದು ಮಾತು ಬೇಗ ತೂಕ ಕಳೆದುಕೊಳ್ಳಲು ಜಾಸ್ತಿ ಅಥವ ಹೆಚ್ಚೆಚ್ಚು ಕುಡಿಯುವುದು ಒಳ್ಳೆಯದಲ್ಲಾ"") ಮಾಮೂಲಿಯಾಗಿ ಊಟಾ ತಿಂಡಿ ಮಾಡಿ.. ವಾಕಿಂಗ್ ಒಳ್ಳೆಯದು... ಹೆಚ್ಚು ಬಿಸಿ ನೀರು ಕುಡಿಯುವುದು ಸಹಕಾರಿ...
ಧನ್ಯವಾದಗಳು

15/08/2018

" ಸರ್ ನನಗೆ ಟೈಪ್ 2 ಡಯಾಬಿಟೀಸ್ ಇದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಬರಲು ಏನು ಮಾಡಬೇಕು?" ಎಂದು ಯಾರಾದರೂ ನನ್ನನ್ನು ಕೇಳಿದರು ಎಂದಿಟ್ಟುಕೊಳ್ಳಿ. ಆಗ ನಾನು ಅವರಿಗೆ "ನಿಮ್ಮ ವಸಡಿನಲ್ಲಿ ಹುಣ್ಣು ಇದೆಯಲ್ಲವೇ? ಅದಕ್ಕೆ ಒಂದು ಕೆಲಸ ಮಾಡಿ: ಒಂದು ಚಿಟಿಕೆ ಶುದ್ಧ ಅರಿಶಿನವನ್ನು ಅಲ್ಲಿಗೆ ಮೆತ್ತಿ. ಅದಕ್ಕೂ ಹೋಗದಿದ್ದರೆ ಒಂದು ಹಿಳುಕು ಬೆಳ್ಳುಳ್ಳಿಯನ್ನು ಜಗಿದು ವಸಡು ಊದಿರುವ ಭಾಗದಲ್ಲಿ ಇಟ್ಟುಕೊಳ್ಳಿ. ಅದಕ್ಕೂ ಜಗ್ಗದಿದ್ದರೆ ಜಗಿದ ಬೆಳ್ಳುಳ್ಳಿಯ ರಸದ ಜೊತೆ ಚಿಟಿಕೆ ಶುದ್ಧ ಅರಿಶಿನವನ್ನು ಸೇರಿಸಿಕೊಂಡು ಹಾಗೆ ಇಟ್ಟುಕೊಳ್ಳಿ!" ಎಂದು ಸಲಹೆ ಕೊಟ್ಟೆ ಎಂದಿಟ್ಟುಕೊಳ್ಳಿ. ಆಗ ಅವರು ನನ್ನನ್ನು ಮೇಲಿನಿಂದ ಕೆಳಕ್ಕೆ ಒಮ್ಮೆ ವಿಚಿತ್ರವಾಗಿ ನೋಡಿ, ಸುಮ್ಮನಾಗಿ ಬಿಡುತ್ತಾರೆ. ಮತ್ತೆ ಅವರು ನನ್ನ ಬಳಿ ಬಂದು ಸಲಹೆ ಕೇಳುವುದಿಲ್ಲ!

ಆದರೆ ಅವರ ವರ್ತನೆಯಿಂದ ನನಗೆ ಬೇಸರವಾಗುವುದಿಲ್ಲ. ಇದೆಲ್ಲಾ ನನಗೆ ಅಭ್ಯಾಸವಾಗಿಬಿಟ್ಟಿದೆ.

Type two ಡಯಾಬಿಟಿಸ್ ಇರುವ ಯಾವುದೇ ವ್ಯಕ್ತಿಗಾದರೂ ಹೀಗೆ ಹೇಳಿದರೆ ಅವರ ಪ್ರತಿಕ್ರಿಯೆ ಇದೆ ಆಗಿರುತ್ತದೆ!

ಅವರಿಗೆ ಮಧುಮೇಹಕ್ಕೆ ಇರುವ ಚಿಕಿತ್ಸೆ ಎಂದರೆ ಯಾವ ಆಹಾರ ತಿನ್ನಬೇಕು ಮತ್ತು ಯಾವ ಮಾತ್ರೆ ತೆಗೆದುಕೊಳ್ಳಬೇಕು ಅಥವಾ ಗಿಡಮೂಲಿಕೆಯ ಔಷಧಗಳಿವೆಯಾ ಎಂಬ ಹುಡುಕಾಟವಾಗಿರುತ್ತದೆ!

ಡಯಾಬಿಟಿಸ್ ನ ಯಾವ ಬೇರು ಎಲ್ಲಿದೆ ಎಂಬುದರ ಬಗ್ಗೆ ಸ್ವಲ್ಪವೂ ತಿಳಿದುಕೊಳ್ಳದೆ ಕೇವಲ ರಕ್ತದ ಸಕ್ಕರೆಯ ಮಟ್ಟದ ಯಾಂತ್ರಿಕ ನಿಯಂತ್ರಣದಲ್ಲಿ ತೊಡಗುವುದು ವ್ಯಕ್ತಿ ಡಯಾಬಿಟಿಸ್ ಮಾರುಕಟ್ಟೆಯನ್ನು ನಿಯಂತ್ರಿಸುವ ವ್ಯಾಪಾರಿ ಶಕ್ತಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗ ಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತದೆ! ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಬೇಕಾದ ಮಾರುಕಟ್ಟೆ ಸಾಹಿತ್ಯವನ್ನು ನಾವು ಮೇನ್ ಸ್ಟ್ರೀಮ್ ಮೀಡಿಯಾದಲ್ಲಿ ನೋಡುತ್ತೇವೆ. ಅದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಡಯಾಬಿಟಿಸ್ ಎಂದರೆ ರಕ್ತದ ಸಕ್ಕರೆಯ ಮಟ್ಟದ ನಿಯಂತ್ರಣ ಮಾತ್ರ ಮತ್ತೇನು ಇಲ್ಲ ಎಂಬ ವಿಷಯದಲ್ಲಿ hypnotize ಆಗಿರುತ್ತಾನೆ. ಆದರೆ ಅದನ್ನು ಹೊರತುಪಡಿಸಿದ ಯಾವ ವಿಷಯದ ಬಗ್ಗೆ ಹೇಳಿದರು ಅವರಿಗೆ ನಂಬಿಕೆ ಬರುವುದಿಲ್ಲ!

ಡಯಾಬಿಟೀಸ್ ಎಂದರೆ ಕೇವಲ ರಕ್ತದ ಸಕ್ಕರೆಯ ಮಟ್ಟದ ನಿಯಂತ್ರಣ ಎನ್ನುವುದು ವೈಜ್ಞಾನಿಕ ಮೂಢನಂಬಿಕೆ!

ಬಾಯಿ, ಗಂಟಲು, ಹೊಟ್ಟೆ ಮತ್ತು ರಕ್ತನಾಳಗಳು ಹೀಗೆ ದೇಹದಾದ್ಯಂತ ಹರಡಿಕೊಂಡಿರುವ ಕೆಟ್ಟ ಬ್ಯಾಕ್ಟೀರಿಯಾಗಳು ಸಹ ರಕ್ತದ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು. ವಸಡಿನ ಹುಣ್ಣು, ಹುಳುಕಾದ ಹಲ್ಲು ಮತ್ತಿತರ ಬಾಯಿಯ ಸಮಸ್ಯೆಗಳು ದೇಹದ ಆಳದ ಒಳಗೆ ಹೀಗೆ ಹುದುಗಿಕೊಂಡಿರುವ ಬ್ಯಾಕ್ಟೀರಿಯಾಗಳ ಒಂದು ಸಣ್ಣ ಪ್ರಕಟಣಾ ರೂಪವಾಗಿರಬಹುದು!

ಹೀಗೆ ದೇಹದ ಒಳಗಿರುವ ಮತ್ತು ವಸಡಿನಲ್ಲಿ ಇರುವ ಬ್ಯಾಕ್ಟೀರಿಯಾಗಳು SUBCLINICAL ಉರಿಯೂತಕ್ಕೆ ಕಾರಣವಾಗುತ್ತವೆ. ಆಗ ದೇಹವನ್ನು ರಕ್ಷಿಸಿಕೊಳ್ಳುವ ರೋಗ ನಿರೋಧಕ ವ್ಯವಸ್ಥೆ ಜಾಗೃತವಾಗುತ್ತದೆ. TNF-alpha, IL-6, IL-1beta ಮತ್ತು Reactive Protein ಎಂಬ ಅಂಶಗಳು ಬಿಡುಗಡೆಯಾಗುತ್ತವೆ. ಇವುಗಳು ಇನ್ಸುಲಿನ್ ವಿರೋಧಕಾರಿಗಳಾಗಿ ಕೆಲಸ ಮಾಡುತ್ತವೆ. ಅಂದರೆ ಇವುಗಳು ಇನ್ಸುಲಿನ್ ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದಾಗಿ ರಕ್ತದ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ.

ಇಂತಹ ಸಮಯಗಳಲ್ಲಿ ರಕ್ತನಾಳದ ಈ ಈ ಉರಿಯೂತಕ್ಕೆ ಚಿಕಿತ್ಸೆಯನ್ನು ನೀಡಬೇಕು.

ಅದನ್ನು ಬಿಟ್ಟು ಕೇವಲ ರಕ್ತದ ಸಕ್ಕರೆಯ ಮಟ್ಟದ ಯಾಂತ್ರಿಕ ನಿರ್ವಹಣೆಯನ್ನಷ್ಟೇ ಮಾಡುತ್ತಾ ಹೋದರೆ ಆಗ ರಕ್ತನಾಳಗಳ ಉರಿಯೂತ ಹಾಗೆಯೇ ಉಳಿದುಬಿಡುತ್ತದೆ. ಇದರಿಂದ ದೀರ್ಘಕಾಲದಲ್ಲಿ ರಕ್ತನಾಳದ ಸಮಸ್ಯೆ ವಿಷಮಿಸಿ ಡಯಾಬಿಟಿಸ್ ರಕ್ತನಾಳದ ಸಮಸ್ಯೆಗಳ ಅಂತಿಮ ರೂಪ ಹತ್ತಾರು ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಒಂದೊಂದಾಗಿ ಪ್ರಕಟಗೊಳ್ಳುತ್ತಾ ಹೋಗುತ್ತವೆ.

ರಕ್ತನಾಳದ ಉರಿಯೂತವನ್ನು ಶಮನಗೊಳಿಸಲು ಮತ್ತು ಒಳಗೆ ಇರುವ ಬ್ಯಾಕ್ಟೀರಿಯಾಗಳನ್ನು ದಮನಗೊಳಿಸಲು ನೈಸರ್ಗಿಕ ಆಹಾರ ಒಂದೇ ಉತ್ತಮ ಔಷಧ. ಅದಕ್ಕೆಂದು ಯಾವುದೋ ಒಂದು ಪವಾಡಸದೃಶ ಔಷಧವಿಲ್ಲ. ನೈಸರ್ಗಿಕವಾದ ಎಲ್ಲಾ ಆಹಾರವೂ ಔಷಧವೇ.

ಆಹಾರದಲ್ಲಿ ವೈವಿಧ್ಯತೆ ಇರಬೇಕು. ಮನೆಯಲ್ಲಿದ್ದರೆ ಲಿಂಗಾಕಾರ, ಹೊರಗಡೆ ಹೋದರೆ ಚಕ್ರಾಕಾರ; ಇಲ್ಲೂ ಬಂದೆಯಾ ಜಡೆ ಶಂಕರ (ರಾಗಿ) ಎಂಬ ಏಕಾಹಾರ ಸೇವನೆಯ ಸಂಸ್ಕೃತಿಯಿಂದ ಕೆಟ್ಟ ಬ್ಯಾಕ್ಟೀರಿಯಾಗಳು ಸುಲಭವಾಗಿ ಮನುಷ್ಯನ ಮೇಲೆ ದಾಳಿ ಮಾಡುತ್ತವೆ! ಇದರಿಂದ ಡಯಾಬಿಟಿಸ್ ಗೇ ಅನುಕೂಲಕರವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಬಾಯಿಯಲ್ಲಿರುವ ಮತ್ತು ದೇಹದಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವುದರಿಂದ HbA1c ಅಂದರೆ ಸಕ್ಕರೆ ಅಂಟಿಕೊಂಡ ಹಿಮೊಗ್ಲೋಬಿನ್ ಗಳ ಪ್ರಮಾಣದಲ್ಲಿಯೂ ಸಹ ಇಳಿಕೆ ಕಂಡು ಬರುತ್ತದೆ!

ಇದರಿಂದ ಡಯಾಬಿಟಿಸ್ ತೀಕ್ಷ್ಣತೆ ಕಡಿಮೆಯಾಗುತ್ತದೆ!

01/06/2018
15/03/2018

ಕುಮಾರ್ ಬುರಡಿಕಟ್ಟಿಯವರು ಅಡುಗೆ ಎಣ್ಣೆ ಕುರಿತು ಬರೆದ ಬರಹ -..........................................................
ನಾವು ಎಣ್ಣೆ ಬಿಟ್ಟು ಇವತ್ತಿಗೆ ಒಂದು ತಿಂಗಳಾಯಿತು. ಎಣ್ಣೆ ಅಂದ್ರೆ ಅಡುಗೆಗೆ ಬಳಸುವ ಎಣ್ಣೆ ಕಣ್ರಿ.

ಆವತ್ತು ಗೀತಾ ಸ್ಪರ್ಧಾತ್ಮಕ ಪರೀಕ್ಷೆಯೊಂದಕ್ಕೆ ಹೋಗಿದ್ದಳು. ಮನೆಯಲ್ಲಿ ಅತ್ತೆಯೂ ಇರಲಿಲ್ಲ. ಗುಂಡನನ್ನು ಬೆಳಿಗ್ಗೆಯಿಂದ ಸಂಜೆ ತನಕ ನೋಡಿಕೊಳ್ಳುವ ಜವಾಬ್ದಾರಿ ನಂದು. ಒಂದಿಷ್ಟು ಆಟ ಆಡಿದೆವು, ಒಂದಿಷ್ಟು ಕೆಲಸಾನೂ ಮಾಡೋಣ ಅಂದುಕೊಂಡು ಅಡುಗೆಮನೆಯ ಮೂಲೆಯಲ್ಲಿ ಬಿದ್ದಿದ್ದ ಖಾಲಿ ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಡಬ್ಬಗಳನ್ನು ಕೈಗೆತ್ತಿಕೊಂಡೆ. ಅವುಗಳ ಮೇಲುಭಾಗವನ್ನು ಕತ್ತರಿಸಿ ಓಪನ್ ಡಬ್ಬ ರೀತಿ ಮಾಡಿ, ಒಳಗೆ-ಹೊರಗೆ ಕ್ಲೀನ್ ಮಾಡಿ, ಅದಕ್ಕೆ ಮಣ್ಣುಹಾಕಿ ಒಂದಿಷ್ಟು ಸಸಿ ನೆಡೋಣ ಎಂಬುದು ಯೋಜನೆ. ಮೇಲುಭಾಗವನ್ನು ಕತ್ತರಿಸಿ ತೊಳೆಯುವುದಕ್ಕೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಒಳಗೆ ಚೀವಿಂಗ್ ಗಮ್ ರೀತಿಯ ಅಂಟು ಪದಾರ್ಥ ಡಬ್ಬಗಳ ಒಳಗೋಡೆಗೆ ದಪ್ಪನಾಗಿ ಅಂಟಿಕೊಂಡಿತ್ತು. ಮೂರ್ನಾಲ್ಕು ಬ್ರಾಂಡ್ ಎಣ್ಣೆಯ ಡಬ್ಬಗಳಿದ್ದವು. ಎಲ್ಲದರಲ್ಲೂ ಈ ಅಂಟು ದ್ರವ್ಯ ಮೆತ್ತಿಕೊಂಡಿತ್ತು. ಎಷ್ಟು ಅಸಹ್ಯವಾಗಿತ್ತೆಂದರೆ ಮತ್ತು ಎಷ್ಟು ರಿಜಿಡ್ ಆಗಿತ್ತೆಂದರೆ ಬಹಳ ಕಷ್ಟಪಟ್ಟರೂ ಅದನ್ನು ತೆಗೆಯಲಾಗಲಿಲ್ಲ. ಪಕ್ಕಾ ಚೀವಿಂಗ್ ಗಮ್ ತಿಂದ ಮೇಲೆ ಉಳಿಯುತ್ತಲ್ಲ, ಹಾಗಿತ್ತು. ತೊಳೆಯುವಾಗ ಬಾತ್ ರೂಮಿನಲ್ಲಿ ಬಿದ್ದ ಆ ಅಂಟು ಎಷ್ಟು ತೊಳೆದರೂ ಹೋಗಲಿಲ್ಲ. ಒಂದು ವಾರದ ತನಕ ಕಾಲಿಟ್ಟರೆ ಅಂಟಿಕೊಳ್ಳುತ್ತಿತ್ತು. ಇಲ್ಲಿ ಯಾವ ಕಂಪನಿಯ, ಬ್ರ್ಯಾಂಡಿನ ಎಣ್ಣೆ ಎಂಬುದು ಮುಖ್ಯವಲ್ಲ. ಎಲ್ಲಾ ಬ್ರ್ಯಾಂಡಿನ ಎಣ್ಣೆಯದ್ದೂ ಇದೇ ಕತೆ.

ಮುಂದೆ ಹೋಗುವ ಮುನ್ನ ಒಂದು ಸರಳ ಅಂಕಗಣಿತವನ್ನು ನೋಡೋಣ. ಒಂದು ಲೀಟರ್ ಶೇಂಗಾ ಎಣ್ಣೆ ತೆಗೆಯೋಕೆ ಏನಿಲ್ಲವೆಂದರೂ ಮೂರು ಕೇಜಿ ಶೇಂಗಾ ಕಾಳು ಬೇಕಾಗುತ್ತದೆಯಂತೆ. ಒಂದು ಕೇಜಿಗೆ 80 ರೂಪಾಯಿಯಂತೆ ಲೆಕ್ಕ ಹಾಕಿದರೆ ಮೂರು ಕೇಜಿಗೆ 240 ರೂಪಾಯಿ. ಅದರ ಪ್ರೊಸೆಸಿಂಗ್, ಮಾರ್ಕೆಟಿಂಗ್, ಸಾಗಾಣಿಕೆ, ಲಾಭದ ಮಾರ್ಜಿನ್ ಎಲ್ಲ ಲೆಕ್ಕಾ ಹಾಕಿದರೆ ಒಂದು ಕೇಜಿ ಎಣ್ಣೆಯನ್ನು ತಯಾರಿಸಿ ನಮ್ಮ ಓಣಿಯ ಅಂಗಡಿಗೆ ತಲುಪಿಸಬೇಕಾದರೆ ಕನಿಷ್ಠ 300 ರೂಪಾಯಿ ಖರ್ಚು ತಗಲುತ್ತದೆ. ಅದಕ್ಕಿಂತ ಕಡಿಮೆಗೆ ಮಾರುವ ಪ್ರಮೇಯವೇ ಬರುವುದಿಲ್ಲ. ಆದರೆ ಮಾರ್ಕೇಟಿನಲ್ಲಿ ಒಂದು ಲೀಟರ್ ಶೇಂಗಾ ಎಣ್ಣೆ ನಮಗೆ 80 ರೂಪಾಯಿಗೆ ಸಿಗುತ್ತದೆ...!!! 220 ರೂಪಾಯಿ ಲಾಸ್ ಮಾಡಿಕೊಂಡು ನಮಗೆ ಬರೀ 80 ರೂಪಾಯಿಗೆ ಮಾರೋಕೆ ಎಣ್ಣೆ ಬ್ಯುಸಿನೆಸ್ ಮಾಡೋರಿಗೆ ಹುಚ್ಚು ಹಿಡಿದಿದೆಯಾ? ಇಲ್ಲ... ಅಷ್ಟು ಕಡಿಮೆ ಬೆಲೆಗೆ ಶುದ್ಧ ಶೇಂಗಾ ಎಣ್ಣೆ ಮಾರುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಮಾರುತ್ತಿದ್ದಾರೆಂದರೆ ಅದು ಶುದ್ಧ ಎಣ್ಣೆ ಅಲ್ಲ. ಅದರಲ್ಲಿ ನೈಜ ಶೇಂಗಾ ಎಣ್ಣೆ ಇರೋದು ಕಾಲುಭಾಗಕ್ಕಿಂತ ಕಡಿಮೆ. ಉಳಿದದ್ದೆಲ್ಲಾ ಕಲಬೆರಕೆ. ಅದಕ್ಕೆ ಹೇವರಿಕೆ ಹುಟ್ಟಿಸುವ ಈ ಅಂಟು ಪದಾರ್ಥವನ್ನು ಬೆರೆಸುತ್ತಾರಂತೆ. (ಅದರ ಹೆಸರನ್ನು ಮರೆತಿರುವೆ. ಯಾರಿಗಾದರೂ ಗೊತ್ತಾದರೆ ಹೇಳಿ). ಇದು ಕೇವಲ ಶೆಂಗಾ ಎಣ್ಣೆಗೆ‌ಮಾತ್ರ ಸೀಮಿತವಾದ ಲೆಕ್ಕಾಚಾರ ಅಲ್ಲ. ಸೂರ್ಯಕಾಂತಿ ಎಣ್ಣೆಯನ್ನೂ ಒಳಗೊಂಡತೆ ಎಲ್ಲಾ ಅಡುಗೆ ಎಣ್ಣೆಗೂ ಅನ್ವಯಿಸುವ ಸರಳ ಅಂಕಗಣಿತ.

ನನಗೆ ಮೊದಲೇ ಇದರ ಬಗ್ಗೆ ಒಂದಿಷ್ಟು ಗೊತ್ತಿತ್ತಾದರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ತಿಂಗಳ ಹಿಂದೆ ಖಾಲಿ ಎಣ್ಣೆ ಡಬ್ಬಾಗಳನ್ನು ತೊಳೆಯುವುದಕ್ಕೆ ಹೋದಾಗಲೇ ಅದರ ದಿಗ್ದರ್ಶನವಾಗಿದ್ದು.

ಈ ಅಂಟು ಏನು ಮಾಡುತ್ತದೆ? ಆರು ತಿಂಗಳ ಹಿಂದೆ ನೋಡಿದ್ದ ಒಬ್ಬ ಪ್ರಖ್ಯಾತ ಹೃದಯ ತಜ್ಞ Bimal Chhajer ಅವರ ವೀಡಿಯೋ ನೆನಪಾಯಿತು. ಅವರ ಮಾತು ಬಹಳ ಸ್ಪಷ್ಟವಾಗಿತ್ತು, ಸರಳವಾಗಿತ್ತು. ಅದರ ಸಾರಾಂಶ ಹೀಗಿದೆ:

“ನಮ್ಮ ಅಡುಗೆ ಮನೆಯ ಗೋಡೆಗಳೆಲ್ಲಾ ಅಂಟು ಅಂಟಾಗಿರುತ್ತವೆ. ಬಹಳ ದಿನ ಹಾಗೇ ಬಿಟ್ಟರೆ ಅದನ್ನು ತೊಳೆದು ಕ್ಲೀನ್ ಮಾಡುವುದಕ್ಕೂ ಆಗದಷ್ಟುಅಂಟು ಮೆತ್ತಿಕೊಂಡುಬಿಟ್ಟಿರುತ್ತದೆ. ಅಡುಗೆ ಮನೆಯಲ್ಲಿ ಬಹಳ ದಿನ ಉಪಯೋಗಿಸದೇ ಹಾಗೇ ಇಟ್ಟ ವಸ್ತುಗಳ ಕತೆಯೂ ಇದೇ ಆಗಿರುತ್ತದೆ. ಇಷ್ಟಕ್ಕೆಲ್ಲಾ ಕಾರಣ ಅಡುಗೆಗೆ ಬಳಸುವ ಎಣ್ಣೆಯಲ್ಲಿ ಮಿಶ್ರಿತವಾಗಿರುವ ಈ ಅಂಟು ಪದಾರ್ಥ. ನಾವು ಎಣ್ಣೆ ಹಾಕಿ ಒಗ್ಗರಣೆ ಮಾಡುವಾಗ ಈ ಪದಾರ್ಥದ ಒಂದು ಸಣ್ಣಭಾಗ ಆವಿಯಾಗಿ ಗೋಡೆಗೆ ಅಂಟಿಕೊಂಡರೆ ಉಳಿದದ್ದೆಲ್ಲಾ ನಮ್ಮ ದೇಹದೊಳಗೆ ಹೋಗುತ್ತದೆ. ಆವಿಯಾದ ಸ್ವಲ್ಪ ಭಾಗವೇ ಗೋಡೆಗೆ ಇಷ್ಟೊಂದು ಹಾನಿ ಮಾಡಿದರೆ ದೇಹದೊಳಗೆ ಹೋದ ಬಹುಪಾಲು ಅಂಟು ಪದಾರ್ಥ ದೇಹಕ್ಕೆ ಇನ್ನೆಂಥಾ ಸಮಸ್ಯೆ ಮಾಡಬಹುದೆಂದು ಯೋಚಿಸಿ.

ದೇಹದ ಯಾವುದೇ ಅಂಗ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಶುದ್ಧ ರಕ್ತ ಅತ್ಯಗತ್ಯ. ದೇಹದ ಮೂಲೆ ಮೂಲೆಗಳಿಂದ ಅಶುದ್ಧ ರಕ್ತ ನೀಲಿ ನಾಳಗಳ ಮೂಲಕ ಹೃದಯವನ್ನು ಸೇರುತ್ತದೆ. ಅಶುದ್ಧ ರಕ್ತವನ್ನು ಶುದ್ಧೀಕರಿಸಿ, ಆಮ್ಲಜನಕ ಸೇರಿಸಿ ದೇಹದ ಎಲ್ಲಾ ಭಾಗಗಳಿಗೂ ಪಂಪ್ ಮಾಡುವ ಕೆಲಸ ಹೃದಯದ್ದು. ಅದನ್ನು ಸಾಗಿಸುವ ಕೆಲಸ ಕೆಂಪು ರಕ್ತನಾಳಗಳದ್ದು. ಹೃದಯವೂ ಕೂಡ ಸ್ನಾಯುಗಳಿಂದ ಮಾಡಲ್ಪಟ್ಟ ಒಂದು ಅಂಗವಾಗಿದ್ದರಿಂದ ಅದೂ ಕಾರ್ಯನಿರ್ವಹಿಸಬೇಕೆಂದರೆ ಅದಕ್ಕೂ ಶುದ್ಧ ರಕ್ತಬೇಕು. ಹಾಗಾಗಿ, ದೇಹದ ಇತರ ಭಾಗಗಳಿಗೆ ಹೇಗೆ ರಕ್ತನಾಳಗಳ ಮೂಲಕ ಶುದ್ಧ ರಕ್ತ ಹರಿಯುತ್ತದೆಯೋ ಅದೇ ರೀತಿಯಲ್ಲಿ ಹೃದಯ ಸ್ನಾಯುಗಳಿಗೂ ಒಂದಿಷ್ಟು ರಕ್ತ ಹರಿಯುತ್ತದೆ. ಅದಕ್ಕಾಗಿ ಚಿಕ್ಕಚಿಕ್ಕ ನಾಳಗಳಿರುತ್ತವೆ. ನಮ್ಮ ಅಡುಗೆ ಎಣ್ಣೆಯಲ್ಲಿ ಕಲಬೆರಕೆಯಾಗಿ ಸೇರಿಕೊಂಡಿರುವ ಈ ಅಂಟು ಪದಾರ್ಥ ಹೇಗೆ ಅಡುಗೆಮನೆಯ ಗೋಡೆಗೆ ಅಂಟಿಕೊಳ್ಳುತ್ತದೆಯೋ ಅದೇ ರೀತಿ ಹೃದಯ ಸ್ನಾಯುಗಳಿಗೆ ರಕ್ತವನ್ನು ಕೊಂಡೊಯ್ಯುವ ಈ ನಾಳಗಳ ಒಳಗೂ ಅಂಟಿಕೊಂಡು ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಾಳಗಳಲ್ಲಿ ಅದು ಕಟ್ಟಿಕೊಂಡರೆ (ಬ್ಲಾಕ್ ಆದರೆ) ಹೃದಯ ಸ್ನಾಯುಗಳಿಗೆ ಶುದ್ಧರಕ್ತವೇ ಹರಿಯುವುದಿಲ್ಲ. ಆಗ ಕಾರ್ಯನಿರ್ವಹಿಸಲು ಶಕ್ತಿಯೇ ಇಲ್ಲದಂತಾಗಿ ಹೃದಯ ಕೆಲಸ ನಿಲ್ಲಿಸಿಬಿಡುತ್ತದೆ. ಹೃದಯಾಘಾತ.

ಮತ್ತೆ ಇಷ್ಟೊಂದು ಎಣ್ಣೆ ಪದಾರ್ಥ ತಿಂತೀವಿ. ಆದ್ರೂ ಯಾಕೆ ಹೃದಯಾಘಾತ ಆಗೋದಿಲ್ಲ ಎಂದರೆ ಈ ರಕ್ತನಾಳಗಳ ಒಳಗೆ ಕಟ್ಟಿಕೊಳ್ಳುವ ಅಂಟನ್ನು ಈ ನಾಳಗಳೇ ಕ್ಷಣಕ್ಷಣಕ್ಕೂ ಕಷ್ಟಪಟ್ಟು ಕ್ಲೀನ್ ಮಾಡುತ್ತಿರುತ್ತವೆ. ಅದಕ್ಕೂ ಒಂದು ಮಿತಿ ಇರುತ್ತದೆ. ಅಂಟು ಜಾಸ್ತಿ ಆದರೆ ಅವುಗಳಿಗೂ ಕ್ಲೀನ್ ಮಾಡೋಕೆ ಆಗಲ್ಲ.”

ಈಗ ನನ್ನ ಖಾಲಿ ಎಣ್ಣೆ ಡಬ್ಬಳ ವಿಷಯಕ್ಕೆ ಬರೋಣ. ಇಷ್ಟೆಲ್ಲಾ ಗೊತ್ತಾದ ಮೇಲೂ, ಅದರಲ್ಲೂ ನಾನೇ ಖುದ್ದಾಗಿ ಆ ಅಂಟು ಪದಾರ್ಥವನ್ನು ನೋಡಿದ ಮೇಲೂ ಮತ್ತೆ ಆ ಎಣ್ಣೆಯನ್ನು ತಿನ್ನೋದಕ್ಕೆ ಮನಸ್ಸು ಸುತಾರಾಂ ಒಪ್ಪಲಿಲ್ಲ. ಒಂದು ರೀತಿಯ ವಾಕರಿಕೆ ಬರುತ್ತಿತ್ತು. ಆವತ್ತೇ ತೀರ್ಮಾನ ಮಾಡಿದೆ ಎಣ್ಣೆಯನ್ನು ಬಿಟ್ಟುಬಿಡೋಣ ಅಂತ...!

ಹಾಗಿದ್ದರೆ ಊಟ ತಯಾರು ಮಾಡೋದು ಹೇಗೆ? ಒಗ್ಗರಣೆ ಹಾಕೋದು ಹೇಗೆ? ದೇಹಕ್ಕೆ ಅಗತ್ಯವಿರುವ ಕೊಬ್ಬಿನಾಂಶ ಎಲ್ಲಿಂದ ಬರುತ್ತದೆ? ಹೀಗೆ ಹತ್ತಾರು ಪ್ರಶ್ನೆಗಳು ಬಂದವು. ಅದಕ್ಕೂ ಉತ್ತರವನ್ನು ಮೇಲೆ ಹೇಳಿದ ಹೃದಯ ತಜ್ಞರೇ ಕೊಟ್ಟಿದ್ದರು.

ಅಸಲಿಗೆ ಅಡುಗೆಯ ರುಚಿ ನಿರ್ಧಾರವಾಗುವುದು ಎಣ್ಣೆಯಿಂದಲ್ಲ, ಬದಲಿಗೆ ಮಸಾಲೆಯಿಂದ. ರುಚಿಗೆ ಎಣ್ಣೆಯೇ ಕಾರಣ ಎಂದು ನೀವು ನಂಬುವುದಾದರೆ ಒಂದು ಚಮಚ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ನೋಡಿ, ಗೊತ್ತಾಗುತ್ತೆ. ಅಡುಗೆಯ ರುಚಿ ಪ್ರಧಾನವಾಗಿ ನಿರ್ಧಾರವಾಗುವುದು ಎಣ್ಣೆಯಿಂದಲ್ಲ, ಮಸಾಲೆಯಿಂದ. ಉಪ್ಪು, ಖಾರ, ಹುಳಿ – ಇತ್ಯಾದಿಗಳನ್ನು ಬಳಸಿ, ಆದರೆ ಎಣ್ಣೆಯನ್ನು ಬಿಡಿ ಎಂಬುದು ಆ ವೈದ್ಯರ ಸಲಹೆ. ನಾನು ಅದನ್ನು ಯಥಾವತ್ತಾಗಿ ಪಾಲಿಸಲಿಲ್ಲ. ಅದನ್ನು ಸ್ವಲ್ಪ ಮಾಡಿಫೈ ಮಾಡಿಕೊಳ್ಳಲು ನಿರ್ಧರಿಸಿದೆ. (ವಾಸ್ತವದಲ್ಲಿ ತುಪ್ಪವೂ ಕೂಡ ಕೊಲೆಸ್ಟ್ರಾಲ್ ಪದಾರ್ಥವಾಗಿದ್ದರಿಂದ ಅದನ್ನೂ ದೂರವಿಡಬೇಕು. ಆದರೆ, ಒಂದೇ ಸಾರಿಗೆ ಎಲ್ಲಾ ಬಿಡೋದು ಕಷ್ಟ ಎಂಬ ಕಾರಣಕ್ಕೆ ಈ ಮಾರ್ಪಾಡು. ಭವಿಷ್ಯದಲ್ಲಿ ಎಣ್ಣೆ, ತುಪ್ಪ ಎರಡನ್ನೂ ಬಿಡುವ ಬಗ್ಗೆ ಪ್ರಯತ್ನಿಸಬಹುದು)

ಸಂಜೆ ಗೀತಾ ಮನೆಗೆ ಬಂದ ಮೇಲೆ ಖಾಲಿ ಎಣ್ಣೆ ಡಬ್ಬದೊಳಗಿನ ಅಂಟು ಪದಾರ್ಥದ ಬಗ್ಗೆ, ಎಣ್ಣೆಯ ಉತ್ಪಾದನೆ-ಕಲಬೆರಕೆಯ ಸರಳ ಅಂಕಗಣಿತದ ಬಗ್ಗೆ ವಿವರಿಸಿದೆ. ಅದೆಲ್ಲಾ ಆಕೆಗೂ ಗೊತ್ತಿತ್ತು. ಆದರೆ, ಪರ್ಯಾಯ ಏನು ಎಂಬುದೇ ಪ್ರಶ್ನೆಯಾಗಿತ್ತು. ಇಬ್ಬರೂ ಕೂತು ಒಂದು ತೀರ್ಮಾನ ಮಾಡಿದೆವು. ಎಣ್ಣೆಯ ಬದಲಿಗೆ ಒಂದಿಷ್ಟು ತುಪ್ಪ ಬಳಸಿದರಾಯಿತು ಎಂಬ ತೀರ್ಮಾನಕ್ಕೆ ಬಂದೆವು. ಅಂಗಡಿಯಿಂದ ತಂದ ತುಪ್ಪದಲ್ಲಿ ಏನೇನು ಕಲಬೆರಕೆ ಮಾಡಿರುತ್ತಾರೋ ಏನೋ ಎಂಬ ಸಂಶಯದಿಂದ ಮನೆಯಲ್ಲೇ ಮಾಡಿದ ತುಪ್ಪವನ್ನು ಬಳಸುವುದಕ್ಕೆ ನಿರ್ಧರಿಸಿದೆವು. ಅಂತೆಯೇ ಪ್ರಯೋಗ ಪ್ರಾರಂಭಿಸಿಯೇ ಬಿಟ್ಟೆವು.

ದಿನವೊಂದಕ್ಕೆ ಒಂದು ಲೀಟರ್ ಫುಲ್ ಕ್ರೀಮ್ ನಂದಿನಿ ಹಾಲು ತಂದು, ಚೆನ್ನಾಗಿ ಕಾಯಿಸಿ, ಆರಿಸಿ, ಫ್ರಿಡ್ಜಿನಲ್ಲಿಟ್ಟರೆ ಮರುದಿನ ಬೆಳಿಗ್ಗೆ ಹೊತ್ತಿಗೆ ಬೇಕಾದಷ್ಟು ಕೆನೆಗಟ್ಟಿರುತ್ತದೆ. ಅದನ್ನು ಶೇಖರಿಸಿ ಫ್ರಿಡ್ಜಿನಲ್ಲೇ ಇಟ್ಟು ಐದಾರು ದಿನಕ್ಕೊಮ್ಮೆ ಹೆಪ್ಪು ಹಾಕಿ, ಕಡೆದರೆ ಮೂರ್ನಾಲ್ಕು ಮಂದಿ ಇರುವ ಕುಟುಂಬಕ್ಕೆ ಸಾಕಾಗುವಷ್ಟು ಬೆಣ್ಣೆ ತುಪ್ಪ ಸಿಗುತ್ತದೆ. ಅಂಗಡಿಯಿಂದ ಕಲಬೆರಕೆ ಎಣ್ಣೆ ತರೋದೂ ಬೇಡ, ಕಲಬೆರಕೆ ತುಪ್ಪ ತರೋದೂ ಬೇಡ. ಮನೆಗೆ ಯಾರಾದರೂ ಆಕಳು ಅಥವಾ ಎಮ್ಮೆಯ ಹಾಲನ್ನು ಸಪ್ಲೆ ಮಾಡುವ ವ್ಯವಸ್ಥೆ ಇದ್ದರೆ ಅದು ಇನ್ನೂ ಒಳ್ಳೆಯದು. ಇಲ್ಲದಿದ್ದರೆ ನಂದಿನಿ ಹಾಲೇ ಸಾಕಾಗುತ್ತದೆ. ಕಾಫಿ, ಟಿ, ಮೊಸರು, ಮಜ್ಜಿಗೆಗಳಿಗೆ ಹಾಲೂ ಆಗುತ್ತೆ. ಒಗ್ಗರಣೆಗೆ ತುಪ್ಪವೂ ಆಗುತ್ತೆ.

ಇವತ್ತಿಗೆ ಒಂದು ತಿಂಗಳಾಯಿತು. ಅಡುಗೆಗಾಗಿ ಒಂದು ಹನಿ ಎಣ್ಣೆ ಬಳಸಿಲ್ಲ. ಉಪ್ಪಿಟ್ಟು ಮಾಡಿದ್ದೇವೆ, ಅವಲಕ್ಕಿ ಹಚ್ಚಿದ್ದೇವೆ, ಸಾಂಬಾರು ಮಾಡಿದ್ದೇವೆ, ದೋಸೆ ಮಾಡಿದ್ದೇವೆ, ಚಟ್ನಿ ಮಾಡಿದ್ದೇವೆ. ಹೀಗೆ ಬಹುತೇಕ ಎಲ್ಲಾ ರೀತಿ ಅಡುಗೆ ಮಾಡಿದ್ದೇವೆ. ಯಾವುದಕ್ಕೂ ಒಂದು ಹನಿ ಎಣ್ಣೆ ಬಳಸಿಲ್ಲ. ರುಚಿಯಲ್ಲಿ ಕಳಪೆಯೇನೂ ನಮಗೆ ಕಂಡಿಲ್ಲ. ಒಂದು ರೀತಿಯಲ್ಲಿ ಎಣ್ಣೆಯ ಅಡುಗೆಗಿಂತ ತುಪ್ಪದ ಅಡುಗೆಯೇ ಹೆಚ್ಚು ರುಚಿಕರವಾಗಿದೆ. ನಾನು ಮನೆಯಿಂದ ಹೊರಗೆ ಸ್ನೇಹಿತರ ಮನೆಯಲ್ಲಿ ಅಥವಾ ಹೊಟೇಲಿನಲ್ಲಿ ಉಣ್ಣುವ ಅನಿವಾರ್ಯತೆ ಬಂದಾಗ ಅಲ್ಲೂ ತುಪ್ಪದ ಅಡುಗೆಯೇ ಬೇಕು ಅಂತ ಕೇಳೋಕೆ ಆಗಲ್ಲ. ಅಂತಹ ಸಂದರ್ಭದಲ್ಲಿ ಎಣ್ಣೆಯ ಅಡುಗೆ ಉಂಡಿದ್ದುಂಟು. ಕಳೆದೊಂದು ತಿಂಗಳಲ್ಲಿ ನಾಲ್ಕಾರು ಬಾರಿ. ಅದನ್ನು ಬಿಟ್ಟರೆ ಮನೆಯಲ್ಲಿ ಅಡುಗೆ ಮಾಡಿಲ್ಲ; ಉಂಡಿಲ್ಲ!

ಆರು ತಿಂಗಳ ಹಿಂದೆ ಬಿಳಿ ಅಕ್ಕಿ, ಗೋಧಿ ಆಧಾರಿತವಾಗಿದ್ದ ನನ್ನ ಪ್ರಧಾನ ಆಹಾರವನ್ನು ಸಿರಿಧಾನ್ಯಕ್ಕೆ ವರ್ಗಾಯಿದ್ದೆ. ಅದು ಈಗಲೂ ಮುಂದುವರೆಯುತ್ತಿದೆ. ನವಣಕ್ಕಿ ಅನ್ನ, ಸಜ್ಜೆ-ರಾಗಿ-ಜೋಳದ ರೊಟ್ಟಿ, ಸಾಮೆಯ ದೋಸೆ ಮತ್ತು ಇಡ್ಲಿ ನಡೆಯುತ್ತಿದೆ. 75% ಸಿರಿಧಾನ್ಯ ಹಾಗೂ 25% ನೆಲ್ಲಕ್ಕಿ- ಗೋಧಿ ಊಟ ಚಾಲೂ ಇದೆ. ಅದಾದ ಮೇಲೆ ಈಗ ಎಣ್ಣೆಯ ಬದಲಿಗೆ ತುಪ್ಪ ಬಳಸುವ ಮಾರ್ಪಾಡು..!

ಒಂದು ತಿಂಗಳಾಯಿತು. ಈ ಅಭ್ಯಾಸವನ್ನು ಹೀಗೆ ಮುಂದುವರೆಸಬಹುದು ಎಂಬ ವಿಶ್ವಾಸ ಬಂದಿದ್ದರಿಂದ ಇಲ್ಲಿ ಬರೆಯುತ್ತಿರುವೆ. ನನ್ನನ್ನು ನೋಡಿ ಒಬ್ಬರಾದರೂ ಇದನ್ನು ಅಳವಡಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಇದನ್ನು ಪಬ್ಲಿಕ್ ಆಗಿ ಷೇರ್ ಮಾಡುತ್ತಿರುವೆ. ನಿಮಗೆ ಇಷ್ಟವಾದರೆ, ಕನ್ವಿನ್ಸ್ ಆದರೆ ಇದನ್ನು ಷೇರ್ ಮಾಡಿ. ಇಲ್ಲವೇ ನೀವೇ ಪ್ರಯೋಗ ಮಾಡಿ, ಸರಿ ಎನ್ನಿಸಿದರೆ ನಿಮ್ಮ ಅನುಭವ ಬರೆಯಿರಿ. ಒಳ್ಳೆಯದು ಹರಡಲಿ.
- ಕುಮಾರ್ ಬುರಡಿಕಟ್ಟಿ
(Please spread the word, share with your friends and family)
#ಸ್ಥಳೀಯ_ಜನ_ಸ್ಥಳೀಯ_ಆಹಾರ_ಸರಣಿ
#ಸಮಗ್ರ_ಸುಸ್ಥಿರ_ಕೃಷಿ_ಬದುಕು॑)

11/03/2018
07/11/2017

Well it makes sense infact lot of sense
Rediscover urselves

15/08/2017
15/08/2017
Well it's an independence day Celebration on its high, by planting more than 500 plants and the what makes you more blis...
15/08/2017

Well it's an independence day
Celebration on its high, by planting more than 500 plants and the what makes you more blissful is after planting when you get raining immediate after that.
even the nature and the mother earth blessing us for the sweatdonation thanks to our very enthusiastic folks who came all the way from Bangalore to celebrate the independence.

Address

Vijaynagar
Bangalore

Opening Hours

Monday 8am - 10pm
Tuesday 8am - 10pm
Wednesday 8am - 10pm
Thursday 8am - 10pm
Friday 8am - 10pm
Saturday 8am - 10pm
Sunday 8am - 10pm

Telephone

8970508585

Website

Alerts

Be the first to know and let us send you an email when Naturopath Foundation posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram