Shree Sangameshwar Clinic, Bilgi

Shree Sangameshwar Clinic, Bilgi Welcome to our Shree Sangameshwar Clinic Bilagi official page dedicated to raising awareness about important health topics.

Join us as we discuss the latest trends in healthcare, share tips for maintaining a healthy lifestyle.

ಶುಶ್ರೂಷಣೆಗೆ ಹೊಸ ಭಾಷ್ಯ ಬರೆದವರು, ಸೇವೆಯ ದ್ಯೋತಕವಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಇಂದಿನ ದಿನವನ್ನು...
12/05/2026

ಶುಶ್ರೂಷಣೆಗೆ ಹೊಸ ಭಾಷ್ಯ ಬರೆದವರು, ಸೇವೆಯ ದ್ಯೋತಕವಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಇಂದಿನ ದಿನವನ್ನು ಜಾಗತಿಕ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಎಲ್ಲ ದಾದಿಯರಿಗೂ ಅಂತಾರಾಷ್ಟ್ರೀಯ ದಾದಿಯರ ದಿನದ ಹಾರ್ದಿಕ ಶುಭಾಶಯಗಳು. ದಾದಿಯರ ಸೇವಾ ಮನೋಭಾವ ಆರೋಗ್ಯ ಕ್ಷೇತ್ರದ ಆಧಾರವಾಗಿದೆ. ವಿಶೇಷವಾಗಿ ಈ ಸಾಂಕ್ರಾಮಿಕದ ಸವಾಲಿನ ಸಂದರ್ಭಗಳಲ್ಲಿ ನಿಮ್ಮೆಲ್ಲರ ಕರ್ತವ್ಯನಿಷ್ಠೆ, ಬದ್ಧತೆ, ತ್ಯಾಗ, ಸೇವಾಭಾವಗಳಿಗೆ ಸಮಸ್ತ ನಾಗರಿಕರ ಪರವಾಗಿ ಕೃತಜ್ಞತಾಪೂರ್ವಕ ಅಭಿನಂದನೆಗಳು.

Recalling the ‘Lady with a Lamp’, Florence Nightingale on her birth anniversary which is commemorated as . On this day would like to pay greatest gratitude to all the nurses who are the back of the world health infrastructure, for their service.

ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದು ಖ್ಯಾತಿ ಪಡೆದಿದ್ದ ಕಲ್ಪನಾ ಕನ್ನಡದ ಮೊದಲ ಸ್ಟಾರ್ ನಟಿ. ಸುಮಾರು ಒಂದುವರೆ ದಶಕ ತಮ್ಮ ಮನಮೋಹಕ ಅಭಿನಯದ...
12/05/2026

ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದು ಖ್ಯಾತಿ ಪಡೆದಿದ್ದ ಕಲ್ಪನಾ ಕನ್ನಡದ ಮೊದಲ ಸ್ಟಾರ್ ನಟಿ. ಸುಮಾರು ಒಂದುವರೆ ದಶಕ ತಮ್ಮ ಮನಮೋಹಕ ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಆಳಿದ ಕಲ್ಪನಾ ಕನ್ನಡ ಚಿತ್ರರಂಗದ ಧ್ರುವತಾರೆ.
ಮಿನುಗುತಾರೆ ಕಲ್ಪನಾ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಗೌರವ ನಮನಗಳು.


https://youtu.be/MOGJqqnJPuk
https://youtu.be/4xcKy8WTvV8

1998ರ ಇದೇ ದಿನದಂದು ಭಾರತವು ಯಶಸ್ವಿಯಾಗಿ ಅಣ್ವಸ್ತ್ರ ಪ್ರಯೋಗ ಮಾಡುವ ಮೂಲಕ ಜಗತ್ತಿನ ಅಣುಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿತು. ಇಂತಹ ಸಾಧನೆಯ ಸ್...
11/05/2026

1998ರ ಇದೇ ದಿನದಂದು ಭಾರತವು ಯಶಸ್ವಿಯಾಗಿ ಅಣ್ವಸ್ತ್ರ ಪ್ರಯೋಗ ಮಾಡುವ ಮೂಲಕ ಜಗತ್ತಿನ ಅಣುಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿತು. ಇಂತಹ ಸಾಧನೆಯ ಸ್ಮರಣಾರ್ಥ ಪ್ರತಿವರ್ಷ ಇಂದಿನ ದಿನವನ್ನು ರಾಷ್ಟೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಅವಿಸ್ಮರಣೀಯ ಸಾಧನೆ ಹಿಂದಿರುವ ಪ್ರತಿಯೊಬ್ಬರಿಗೂ ನಮನಗಳು.

In 1998, on this day India joined the elite list of nuclear states by successfully initiating Operation Shakti. Today, as we commemorate , Salute everyone responsible for the advancement of Science and Technology in India.

ಕನ್ನಡ ನಾಡು-ನುಡಿಗಾಗಿ ಸದಾ ಧ್ವನಿಯೆತ್ತುತ್ತಿದ್ದ ಹಿರಿಯ ಸಂಶೋಧಕ, ವಿದ್ವಾಂಸ, ಲೇಖಕ ದಿವಂಗತ ಡಾ. ಎಂ.ಚಿದಾನಂದಮೂರ್ತಿ ಅವರ ಜನ್ಮದಿನದಂದು ಅವರಿ...
09/05/2026

ಕನ್ನಡ ನಾಡು-ನುಡಿಗಾಗಿ ಸದಾ ಧ್ವನಿಯೆತ್ತುತ್ತಿದ್ದ ಹಿರಿಯ ಸಂಶೋಧಕ, ವಿದ್ವಾಂಸ, ಲೇಖಕ ದಿವಂಗತ ಡಾ. ಎಂ.ಚಿದಾನಂದಮೂರ್ತಿ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ಪ್ರಣಾಮಗಳು. ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ನಡೆಸಿದ ಹೋರಾಟವೂ ಸೇರಿದಂತೆ ಕನ್ನಡದ ಅಸ್ಮಿತೆ, ಸಾಹಿತ್ಯ, ಸಂಶೋಧನೆಗಳಿಗೆ 'ಚಿಮೂ' ಅವರ ಕೊಡುಗೆ ಅನನ್ಯ.


ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿ...
09/05/2026

ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ. ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ಪ್ರಣಾಮಗಳು.


https://youtu.be/RfajyKKs05E

ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನ ನಡೆಸಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಶಿವಶರಣೆ ಹೇಮರೆ...
09/05/2026

ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನ ನಡೆಸಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು.


https://youtu.be/P0mtIMjoEKo

*ವಿಶ್ವ ತಾಯಂದಿರ ದಿನದ ಶುಭಾಶಯಗಳು* ರಜೆ, ಸಂಬಳವೇ ಇಲ್ಲದೆ ಕೆಲಸ ಮಾಡುವ ಶ್ರಮಜೀವಿ... ಕುಟುಂಬದ ಏಳಿಗೆಗೆ ಕ್ಷಣಕ್ಷಣಕ್ಕೂ ಕಷ್ಟಪಡುವ ತ್ಯಾಗಮಯಿ....
09/05/2026

*ವಿಶ್ವ ತಾಯಂದಿರ ದಿನದ ಶುಭಾಶಯಗಳು*

ರಜೆ, ಸಂಬಳವೇ ಇಲ್ಲದೆ ಕೆಲಸ ಮಾಡುವ ಶ್ರಮಜೀವಿ... ಕುಟುಂಬದ ಏಳಿಗೆಗೆ ಕ್ಷಣಕ್ಷಣಕ್ಕೂ ಕಷ್ಟಪಡುವ ತ್ಯಾಗಮಯಿ... ಇಂದು ಅಮ್ಮಂದಿರ ದಿನ. ಹೀಗಾಗಿ, ಇಲ್ಲಿದೆ ಪ್ರತ್ಯಕ್ಷ ದೇವರಾದ ಅಮ್ಮಂದಿರ ದಿನದ ಶುಭಾಶಯದ ಸಂದೇಶಗಳು...

ಅಮ್ಮ... ಈ ಒಂದು ಪದವೇ ಅಮೃತ... ಅಮ್ಮ ಎಂದರೆ ಸಂಜೀವಿನಿ, ಅಮ್ಮನ ಮಾತೇ ಜೇನಿಗಿಂತಲೂ ಸಿಹಿ... ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ... ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರೀ ಮಾತಲ್ಲ, ಅದು ನಿಜ ಕೂಡಾ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ.

ಕಷ್ಟ ಬಂದಾಗ ಸಂತೈಸಿದವರು ಅಮ್ಮ... ಮಕ್ಕಳ ಹಾದಿಗೆ ಸದಾ ಕಾವಲಾಗಿರುವವರು ಅಮ್ಮ... ಎಡವಿ ಬಿದ್ದಾಗ ಕೈ ಕೊಟ್ಟು ಮೇಲೆ ಎತ್ತುವವರು ಅಮ್ಮ... ಕಣ್ಣೀರಿಟ್ಟಾಗ ಪ್ರೀತಿಯ ಮಳೆಗರೆದು ಕಣ್ಣೀರು ಒರೆಸುವವರು ಅಮ್ಮ... ಸಾಧನೆ ಮಾಡಿದಾಗ ಹಿರಿಹಿರಿ ಹಿಗ್ಗಿ ಖುಷಿ ಪಡುವವರು ಅಮ್ಮ... ತಾನು ಅರೆಹೊಟ್ಟೆಯಲ್ಲಿದ್ದರೂ ಮಕ್ಕಳು ಹಸಿದಿರಬಾರದು ಎಂದು ಕಷ್ಟಪಡುವವರು ಅಮ್ಮ... ಕೊನೆಯುಸಿರು ಇರುವ ತನಕ ಮಕ್ಕಳ ಏಳಿಗೆಯನ್ನೇ ಬಯಸುವವರು ಅಮ್ಮ... ಹೀಗೆ... ಅಮ್ಮ ಎಂದರೆನೇ ಎಲ್ಲಾ... ಎಲ್ಲರ ಬದುಕಿನ ಅಣು ಅಣು ಕೂಡಾ ಅಮ್ಮ ಕೊಟ್ಟ ಭಿಕ್ಷೆ...

ಪ್ರತೀಕ್ಷಣವೂ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವರು ಅಮ್ಮ... ಇವರು ರಜೆ, ಸಂಬಳವೇ ಇಲ್ಲದೆ ದುಡಿಯುವ ಜೀವ... ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತವನ್ನೇ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವ ಶಕ್ತಿ ಎಂದರೆ ಅದು ತಾಯಿ... ಅಮ್ಮನ ಮಮತೆಯ ಆಳ, ಅಗಲವನ್ನು ಅಳೆಯಲು ಯಾರಿಂದಲೂ ಸಾಧ್ಯವೇ ಇಲ್ಲ. ಬರೀ ಒಂದೆರಡು ಪದಗಳಲ್ಲಿ ತಾಯಿಯನ್ನು ಬಣ್ಣಿಸುವುದು ಕೂಡಾ ಸಾಧ್ಯವಿರುವ ಮಾತಲ್ಲ...

ಇಂದು ಅಮ್ಮಂದಿರ ದಿನ. ತಾಯಿಗಾಗಿ ಮೀಸಲಾದ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ದಿನ. ಹಾಗಂತ, ಅಮ್ಮಂದಿರ ದಿನ ಬರೀ ಒಂದು ದಿನಕ್ಕೆ ಮೀಸಲಲ್ಲ. ಯಾಕೆಂದರೆ, ಎಲ್ಲರಿಗೂ ಪ್ರತಿದಿನವೂ ಅಮ್ಮಂದಿರ ದಿನವೇ. ಆದರೆ, ಇಂದು ಈ ದಿನದ ಅಧಿಕೃತ ಆಚರಣೆಯಷ್ಟೇ. ಹೀಗಾಗಿ, ಎಲ್ಲರನ್ನೂ ನವಮಾಸ ಹೊತ್ತು ಹೆತ್ತು, ಸಾಕಿ ಸಲಹಿದ ತಾಯಿಗೆ ಶುಭಾಶಯ ಹೇಳುವುದು ಎಲ್ಲರ ಜವಾಬ್ದಾರಿ...

ತಾಯಿಯೇ ಶಕ್ತಿ, ಅವರೇ ಮೊದಲ ಗುರು, ಮಾರ್ಗದರ್ಶಕಿ. ಅವರೇ ಆತ್ಮಸಾಕ್ಷಿಯ ಕೈಗನ್ನಡಿ. ತಾಯಂದಿರದ್ದು ಪ್ರಾಂಜಲ ಮನಸ್ಸು, ನಿರ್ಮಲ ಪ್ರೀತಿ. ಅಂತಹ ಮಮಕಾರದ ಸಾಕಾರಮೂರ್ತಿಗಳಾದ ಎಲ್ಲ ಮಾತೆಯರಿಗೂ ತಾಯಂದಿರ ದಿನದ ಶುಭಾಶಯಗಳು.

Mother is greatest strength, first teacher, mentor and humble guide. She mirrored by conscience. Mothers are the purest soul, so here’s wishing them all a very Happy Mother’s Day.

https://youtu.be/PIjOXXVVKVs
https://youtu.be/w9yOuJTuDxg
https://youtu.be/R1HFIu89M8k

ಭಾರತದ ಸಾಮಾಜಿಕ ಸುಧಾರಕರಲ್ಲಿ ಅಗ್ರಗಣ್ಯರಾದ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದು ಅವರಿಗೆ ಅನಂತ ನಮನಗಳು. ಅಸ್ಪೃಶ್ಯತೆ, ಅಸಮಾನತೆ ವಿರು...
09/05/2026

ಭಾರತದ ಸಾಮಾಜಿಕ ಸುಧಾರಕರಲ್ಲಿ ಅಗ್ರಗಣ್ಯರಾದ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದು ಅವರಿಗೆ ಅನಂತ ನಮನಗಳು. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಅವರು ಹೋರಾಡಿದ ರೀತಿ ಎಂದಿಗೂ ಸ್ಫೂರ್ತಿದಾಯಕ.

Recalling one of the most important social reformers in the Indian history, Shri ji on his birth anniversary. His fight against untouchability and inequality has always inspired many.

ಕನ್ನಡ ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿರುವ ಶ್ರೀ ಅ.ನ.ಕೃಷ್ಣರಾಯರ (ಅ.ನ.ಕೃ.) ಜನ್ಮದಿನದಂದು ಅವರಿಗೆ ಗೌರವ ನಮನಗಳು. ಕನ್ನಡದ ಅಸ್ಮಿತೆಗಾಗಿ...
09/05/2026

ಕನ್ನಡ ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿರುವ ಶ್ರೀ ಅ.ನ.ಕೃಷ್ಣರಾಯರ (ಅ.ನ.ಕೃ.) ಜನ್ಮದಿನದಂದು ಅವರಿಗೆ ಗೌರವ ನಮನಗಳು. ಕನ್ನಡದ ಅಸ್ಮಿತೆಗಾಗಿ ಅವರು ಮಾಡಿದ ಹೋರಾಟ, ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಮರ.

https://youtu.be/NO9WBjMTI1k
https://youtu.be/kk23Aifm4c8
https://youtu.be/ATeObyxA0ZU
https://youtu.be/_DrtMri0Iow

ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆ ಪಡೆದ ಮಹಾವೀರ ಶ್ರೀ ಮಹಾರಾಣಾ ಪ್ರತಾಪ್ ಅವರ ಜಯಂತಿಯಂದು ಅವರಿಗೆ ಗೌರವ ಪ್ರಣಾಮಗಳು. ಮೊಘಲರ...
09/05/2026

ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆ ಪಡೆದ ಮಹಾವೀರ ಶ್ರೀ ಮಹಾರಾಣಾ ಪ್ರತಾಪ್ ಅವರ ಜಯಂತಿಯಂದು ಅವರಿಗೆ ಗೌರವ ಪ್ರಣಾಮಗಳು. ಮೊಘಲರ ವಿರುದ್ಧ ಅವರು ತೋರಿದ ಶೌರ್ಯ, ದಿಟ್ಟತನ, ಹಿಮ್ಮೆಟ್ಟಿಸಿದ ರೀತಿ ಸ್ಮರಣಾರ್ಹ.

Fondly remembering the ruler hailed as the first freedom fighter, an impeccable warrior Maharana Pratap ji on his birth anniversary. He shall always be hailed for valiantly resisting the Mughals.

'ವಲಸೆ ಹಕ್ಕಿಗಳ ಭವಿಷ್ಯವೇ ನಮ್ಮ ಭವಿಷ್ಯ'ವನ್ಯ ಸಂಪತ್ತಿನ ತಿಳಿವಳಿಕೆ, ಪಕ್ಷಿ ವೀಕ್ಷಣೆ ಉತ್ತೇಜಿಸುವ ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ...
09/05/2026

'ವಲಸೆ ಹಕ್ಕಿಗಳ ಭವಿಷ್ಯವೇ ನಮ್ಮ ಭವಿಷ್ಯ'

ವನ್ಯ ಸಂಪತ್ತಿನ ತಿಳಿವಳಿಕೆ, ಪಕ್ಷಿ ವೀಕ್ಷಣೆ ಉತ್ತೇಜಿಸುವ ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಹೆಚ್ಚಿಸಲು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 'ವಿಶ್ವ ವಲಸೆ ಹಕ್ಕಿ ದಿನ' ಆಚರಿಸಲಾಗುತ್ತಿದೆ.

'World Migratory Bird Day' is observed twice every year; on the second Saturday of May & October to represent the peak of cyclical bird-migratory seasons.

Let us cherish and pledge to protect these incredible creations of nature on this

Address

Bilgi

Opening Hours

Monday 10am - 1:30pm
5pm - 8:30pm
Tuesday 10am - 1:30pm
5pm - 8:30pm
Wednesday 10am - 1:30pm
5pm - 8:30pm
Thursday 10am - 1:30pm
5pm - 8:30pm
Friday 10am - 1:30pm
5pm - 8:30pm
Saturday 10am - 1:30pm
5pm - 8:30pm
Sunday 10am - 1:30pm
5pm - 8:30pm

Telephone

+919448959659

Alerts

Be the first to know and let us send you an email when Shree Sangameshwar Clinic, Bilgi posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shree Sangameshwar Clinic, Bilgi:

Share