03/07/2025
DHO of Dakshina Kannada District clarifies there is no incident of Heart Attack cases, due to the Services provided by Community Health Officers at Ayushman Arogya Mandir's. 🙏🙏🙏 @ H D Kumaraswamy PMO India Dr C. N. Manjunath fans Nikhil kumarswamy Karnataka Nurses Sangha Akhila karnataka H.D.Kumaraswamy Youth movement. Karnataka Nursing Officers Kno B Y Raghavendra Pralhad Joshi DK Shivakumar
* ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರ ಏಕೆ ಅತಿ ಹೆಚ್ಚು ಹೃದಯಾಘಾತ ?
* ಹಾಸನ ಜಿಲ್ಲೆಯಲ್ಲಿ ಮಾತ್ರ ಏಕೆ ಸಮುದಾಯ ಆರೋಗ್ಯ ಅಧಿಕಾರಿಗಳು ಇಲ್ಲ.
ಸುಮಾರು 29 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಾತ್ರ ಸಮುದಾಯ ಆರೋಗ್ಯ ಅಧಿಕಾರಿಗಳು ಇಲ್ಲದಿರುವುದು ವಿಪರ್ಯಾಸ
2017 ಕ್ಕೆ CPHC-UHC ಕಾರ್ಯಕ್ರಮದ ಅಡಿಯಲ್ಲಿ ಬಂತಂತಹ ಇವರು ಸುಮಾರು 29 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಶೈಕ್ಷಣಿಕವಾಗಿ B.sc ನರ್ಸಿಂಗ್ ಪದವಿ ಹಾಗೂ M.Sc ನರ್ಸಿಂಗ್ ಪದವಿಯನ್ನು ಪಡೆದಿರುವ ಇವರು ನೇಮಕಾತಿ ಆದ ನಂತರ BPCCHN ಎನ್ನುವ ಕೋರ್ಸ್ ಅನ್ನು ಮುಗಿಸಿಕೊಂಡು ಸಮುದಾಯದಲ್ಲಿ ಇವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಸುಮಾರು 5000 ಜನರಿಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿರುವ ಇವರು ಹಾಸನ ಜಿಲ್ಲೆಯನ್ನು ಹೊರತುಪಡಿಸಿ ಕರ್ನಾಟಕದ ಒಟ್ಟು 29 ಜಿಲ್ಲೆಗಳಲ್ಲಿ ಒಟ್ಟು ಸರಿಸುಮಾರು 6000 ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ
ಪ್ರಾಥಮಿಕವಾಗಿ 12 ವಿಸ್ಪೃತ ಸೇವೆಗಳನ್ನು ನೀಡುತ್ತಿರುವ ಇವರು
1. ಅಸಂಕ್ರಾಮಿಕ ರೋಗಗಳಾದ ರಕ್ತದೊತ್ತಡ ಮಧುಮೇಹ ಹಾಗೂ ಕ್ಯಾನ್ಸರ್ ತಪಾಸಣೆ
2. ಗರ್ಭಿಣಿ ಹಾಗೂ ಮಗುವಿನ ಸೇವೆ
3. ನವಜಾತ ಶಿಶುವಿನ ಸೇವೆ
4. ಕುಟುಂಬ ಕಲ್ಯಾಣ ಗರ್ಭ ನಿರೋಧಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು
5. ಅಪಘಾತ ಮತ್ತು ಗಾಯಾಳುಗಳ ಮೂಲಭೂತ ಸೇವೆಗಳು.
6. ಮೂಲಭೂತ ನೇತ್ರ ಸೇವೆಗಳು
7. ಮೂಲಭೂತ ಕಿವಿ ಮೂಗು ಗಂಟಲು ಸೇವೆಗಳು
8. ಮೂಲಭೂತ ವೃದ್ಯಾಪ್ಯ ಆರೈಕೆ ಸೇವೆಗಳು
9. ಮಾನಸಿಕ ಆರೋಗ್ಯ ಸೇವೆಗಳು
10. ಮೂಲಭೂತ ದಂತ ಸೇವೆಗಳು
11. ಬಾಲ್ಯ ಮತ್ತು ಹದಿಹರೆಯದವರಿಗೆ ಸಮಗ್ರ ಆರೋಗ್ಯ ಸೇವೆಗಳು
12. ದೈಹಿಕ ವ್ಯಾಯಾಮದ. ಯೋಗದ ಮುಖಾಂತರ ಅಸಂಕ್ರಾಮಿಕ ರೋಗಗಳನ್ನು ತಡೆಗಟ್ಟುವಂತಹ ಸೇವೆಗಳು
ಇಂತಹ ಅಮೂಲ್ಯವಾದ ಸೇವೆಗಳನ್ನು ನೀಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಾತ್ರ ಇಲ್ಲದಿರುವುದಕ್ಕೆ ಸರ್ಕಾರವೇ ಉತ್ತರಿಸಬೇಕಾಗಿದೆ
ಹಾಗೂ ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಜರುಗುತ್ತಿರುವಂತಹ ಹೃದಯಾಘಾತ ದಂತಹ ಘಟನೆಗಳನ್ನು ನೋಡಿದರೆ ಅತಿ ಅವಶ್ಯಕವಾಗಿ ಹಾಸನ ಜಿಲ್ಲೆಯಲ್ಲಿ ಇವರನ್ನು ಭರ್ತಿ ಮಾಡಿಕೊಳ್ಳಬೇಕು. ಹಾಗೂ ಸರ್ಕಾರವು ಸಮುದಾಯದಲ್ಲಿ ವಾಸಿಸುವಂತಹ ಕಡು ಬಡ ಜನತೆಗೆ ಸೂಕ್ತ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವ ಇವರುಗಳ ನೇಮಕಾತಿ ಮಾಡಬೇಕು.
2022-23 ನೆ ಸಾಲಿನ ವಾರ್ಷಿಕ ವರ್ಷದಲ್ಲಿ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ನೇಮಕಾತಿ ಪ್ರಕಟಣೆ, ಹೊರಡಿಸಿದ್ದು . ಹಾಸನ ಜಿಲ್ಲೆಯಲ್ಲಿ ಸುಮಾರು 800 ಜನ ವಿದ್ಯಾರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ ಹಾಗೂ ಇಲ್ಲಿಯವರೆಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವುದಿಲ್ಲ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಗಮನವನ್ನು ಹರಿಸಬೇಕಾಗಿದೆ