Panchamasali Community

Panchamasali Community Welcome To Panchamasali Jagadguru Peetha - Shivamogga Road, Hanagawadi Post, Davanagere Dist, Karnataka state, 577601

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಹೃದಯಗಳಲ್ಲಿ ಸಂಸ್ಕಾರದ ದೀಪವನ್ನು ಬೆಳಗಿಸುವ ಮಹಾಸಂಕಲ್ಪದೊಂದಿಗೆ ನಡೆಯುತ್ತಿರುವ “ಸಂಸ್ಕಾರ ಶಿಕ್...
11/04/2026

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಹೃದಯಗಳಲ್ಲಿ ಸಂಸ್ಕಾರದ ದೀಪವನ್ನು ಬೆಳಗಿಸುವ ಮಹಾಸಂಕಲ್ಪದೊಂದಿಗೆ ನಡೆಯುತ್ತಿರುವ “ಸಂಸ್ಕಾರ ಶಿಕ್ಷಣ ಶಿಬಿರ”ದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಯೋಗದ ಅಮೂಲ್ಯ ತತ್ತ್ವವನ್ನು ಸರಳವಾಗಿ, ಮನಮುಟ್ಟುವಂತೆ ಅರುಹಿದರು.

ಪೂಜ್ಯರು ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರವನ್ನು ಅನುಗ್ರಹಿಸಿ, ಬಸವಾದಿ ಪ್ರಮಥರು ಅರುಹಿದ ಅಷ್ಟವಿಧಾರ್ಚನೆ ಹಾಗೂ ಷೋಡಶೋಪಚಾರಯುಕ್ತ ಇಷ್ಟಲಿಂಗ ಪೂಜೆಯ ವಿಧಾನವನ್ನು ಸುಲಭವಾಗಿ ವಿವರಿಸಿದರು. ಶಿವಯೋಗ ಸಾಧನೆಯ ಮೂರು ಹಂತಗಳಾದ—ಇಷ್ಟಲಿಂಗಾರ್ಚನೆ, ಇಷ್ಟಲಿಂಗ ನಿರೀಕ್ಷಣೆ ಮತ್ತು ಇಷ್ಟಲಿಂಗಾನುಸಂಧಾನ—ಇವುಗಳನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಪ್ರಾತ್ಯಕ್ಷವಾಗಿ ತೋರಿಸಿ ಮಕ್ಕಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಮಾಡಿದರು.

ಈ ಮೂಲಕ ಮಕ್ಕಳಲ್ಲಿ ಅರಿವು, ಆಚಾರ ಮತ್ತು ಅನುಭಾವ ಎಂಬ ಆತ್ಮಯಾತ್ರೆಯ ಮಾರ್ಗವನ್ನು ತೆರೆದಿಟ್ಟು, ಅವರೊಳಗಿನ ಭಕ್ತಿ ಮತ್ತು ಜ್ಞಾನದ ಬೆಳಕನ್ನು ಮೃದುವಾಗಿ ಪ್ರಜ್ವಲಿಸಿದರು.

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಆಂತರಿಕ ಬೆಳವಣಿಗೆಯನ್ನು ಅರಳಿಸುವ ಉನ್ನತ ಆಶಯದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ವು ಜಗದ್ಗುರು ಶ್ರೀ...
10/04/2026

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಆಂತರಿಕ ಬೆಳವಣಿಗೆಯನ್ನು ಅರಳಿಸುವ ಉನ್ನತ ಆಶಯದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ವು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಪೂಜ್ಯರು ಮಕ್ಕಳಿಗೆ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಮಹಾನ್ “ಅನುಭವ ಮಂಟಪ”ದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸಿ, ಏಳನೂರು ಎಪ್ಪತ್ತು ಅಮರಗಣಗಳ ಆತ್ಮಜೀವನ, “ಕಾಯಕವೇ ಕೈಲಾಸ”, “ದಾಸೋಹವೇ ದೇವಧಾಮ” ಹಾಗೂ ಶಿವಯೋಗದ ತತ್ತ್ವಗಳನ್ನು ಹಾಗೂ
ವಿಶ್ವಸಾಹಿತ್ಯಕ್ಕೆ ಕನ್ನಡದ ಅಮೂಲ್ಯ ಕೊಡುಗೆ ಎಂದರೆ ಬಸವಾದಿ ಶಿವಶರಣ-ಶರಣೆಯರು ರಚಿಸಿದ ವಚನಸಾಹಿತ್ಯವೇ ಆಗಿದೆ.
ವಚನಗಳಲ್ಲಿ ಬೆಳಕಿದೆ — ಬದುಕಿಗೆ ದಾರಿಯಿದೆ;
ಪ್ರಶ್ನೆಗಳಿಗೆ ಉತ್ತರವಿದೆ — ಸಮಸ್ಯೆಗಳಿಗೆ ಸಮಾಧಾನವಿದೆ;
ಮಾನವನ ಆತ್ಮೋದ್ಧಾರಕ್ಕೆ ಬೇಕಾದ ಸಮಸ್ತ ತತ್ತ್ವಜ್ಞಾನವೂ ವಚನಗಳಲ್ಲಿ ಸಮಗ್ರವಾಗಿ ಅಡಗಿದೆ ಎಂದು ಹೃದಯಂಗಮವಾಗಿ ವಿವರಿಸಿದರು.

ಇಂತಹ ಮಹತ್ತರ ಸಂಸ್ಕಾರ ಬೀಜಗಳನ್ನು ಬಿತ್ತುವ ಈ ಶಿಬಿರ, ಮಕ್ಕಳ ಭವಿಷ್ಯವನ್ನು ದೀಪ್ತಿಗೊಳಿಸುವ ದೈವಿಕ ಪ್ರಯತ್ನವಾಗಿರುತ್ತದೆ.

09/04/2026

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಒಳಗಿನ ಸಂಸ್ಕಾರ ಜ್ಯೋತಿಯನ್ನು ಬೆಳಗಿಸುವ ಪವಿತ್ರ ಸದುದ್ದೇಶದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ಕ್ಕೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳುವರು ಚಾಲನೆ ನೀಡಿದರು. ಅವರ ಆಶೀರ್ವಾದದ ನುಡಿಗಳು ಮಕ್ಕಳ ಮನಸ್ಸಿನಲ್ಲಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಬೆಳಕನ್ನು ಪ್ರಜ್ವಲಿಸಿತು. 🌼🙏ಈ ಸಂದರ್ಭದಲ್ಲಿ ಹರಪೀಠ ಸಂಸ್ಥಾಪಕ ಧರ್ಮದರ್ಶಿಗಳಾದ ಶ್ರೀ ಎಚ್.ಪಿ. ಬಾಬಣ್ಣವರು ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಂಡರು. ಮಕ್ಕಳ ಜೀವನದಲ್ಲಿ ಸಂಸ್ಕಾರಗಳ ಮಹತ್ವವನ್ನು ವಿವರಿಸಿ, ಬಾಲ್ಯದಲ್ಲೇ ಒಳ್ಳೆಯ ಚಿಂತನೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರಣೆ ನೀಡಿದರು. 🕉️ಯೋಗ, ಧ್ಯಾನ, ಇಷ್ಟಲಿಂಗ ಧಾರಣೆ, ಮಂತ್ರೋಚ್ಛಾರಣೆ ಹಾಗೂ ವಚನ ಪಾರಾಯಣವನ್ನು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡಿದ ಮಕ್ಕಳ ಹೃದಯಗಳಲ್ಲಿ ಆಧ್ಯಾತ್ಮಿಕತೆ ಬೀಜ ಬಿತ್ತಿತು. ಆಟ-ಪಾಠಗಳ ಸಂತಸದಲ್ಲಿ ಜ್ಞಾನ ಮತ್ತು ಸಂಸ್ಕಾರಗಳ ಸುವಾಸನೆ ಹರಡಿದ ಈ ಶಿಬಿರ, ಮಕ್ಕಳ ಬದುಕಿಗೆ ದಾರಿದೀಪವಾಗಿ ಭವಿಷ್ಯದ ಸತ್ಪ್ರಜೆಯನ್ನು ರೂಪಿಸುವ ದಿವ್ಯ ಪ್ರಯತ್ನವಾಯಿತು. ✨

09/04/2026

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಹಾಗೂ ಮಕ್ಕಳ ಒಳಗಿನ ಸಂಸ್ಕಾರ ಜ್ಯೋತಿಯನ್ನು ಪ್ರಜ್ವಲಿಸಲು ಪವಿತ್ರ ಸದುದ್ದೇಶದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ಕ್ಕೆ ಚಾಲನೆ ನೀಡಿದ ಕ್ಷಣ ಅತ್ಯಂತ ಅರ್ಥಪೂರ್ಣವಾಗಿತ್ತು. ಈ ಮಹತ್ವದ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳುವರು ಶುಭಾರಂಭ ಮಾಡಿದರು. ಅವರ ಆಶೀರ್ವಚನಗಳು ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರದ ಬೀಜ ಬಿತ್ತುವಂತಾಗಿದವು. 🌼🙏

ಈ ಸಂದರ್ಭದಲ್ಲಿ ಶ್ರೀಪೀಠದ ಆಡಳಿತಾಧಿಕಾರಿಗಳಾದ ಡಾ. ರಾಜಕುಮಾರ ಹೆಚ್.ಪಿ ಅವರು ಮಕ್ಕಳಿಗೆ ಅಮೂಲ್ಯ ಮಾರ್ಗದರ್ಶನ ನೀಡಿದರು. ಅವರು ಸಂಸ್ಕಾರ ಶಿಕ್ಷಣದ ಮಹತ್ವವನ್ನು ವಿವರಿಸಿ, ಶಿಸ್ತು, ಸೇವಾಭಾವ, ಗುರುಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಕ್ಕಳಿಗೆ ಪ್ರೇರಣೆ ನೀಡಿದರು. 🕉️ಈ “ಸಂಸ್ಕಾರ ಶಿಕ್ಷಣ ಶಿಬಿರ”ವು ಕೇವಲ ತರಬೇತಿ ಕಾರ್ಯಕ್ರಮವಲ್ಲ; ಇದು ಭವಿಷ್ಯದ ಸಜ್ಜನ ಸಮಾಜ ನಿರ್ಮಾಣದ ಬುನಾದಿಯಾಗಿದ್ದು, ಯುವ ಮನಸ್ಸುಗಳಲ್ಲಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯತೆಯ ಬೆಳಕನ್ನು ಹರಡುವ ಪವಿತ್ರ ಪ್ರಯತ್ನವಾಗಿದೆ. ✨

09/04/2026
ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಒಳಗಿನ ಸಂಸ್ಕಾರ ಜ್ಯೋತಿಯನ್ನು ಬೆಳಗಿಸುವ ಸದುದ್ದೇಶದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ಕ್ಕೆ ಜಗದ್ಗು...
09/04/2026

ಹರಿಹರ ಹರಪೀಠದಲ್ಲಿ ಯುವಪೀಳಿಗೆ ಮತ್ತು ಮಕ್ಕಳ ಒಳಗಿನ ಸಂಸ್ಕಾರ ಜ್ಯೋತಿಯನ್ನು ಬೆಳಗಿಸುವ ಸದುದ್ದೇಶದಿಂದ “ಸಂಸ್ಕಾರ ಶಿಕ್ಷಣ ಶಿಬಿರ”ಕ್ಕೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಚಾಲನೆ ನೀಡಿದರು.

ಯೋಗ, ಧ್ಯಾನ, ಇಷ್ಟಲಿಂಗ ಧಾರಣೆ, ಮಂತ್ರೋಚ್ಛಾರಣೆ ಹಾಗೂ ವಚನ ಪಾರಾಯಣವನ್ನು
ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡಿದ ಮಕ್ಕಳ ಹೃದಯಗಳಲ್ಲಿ ಆಧ್ಯಾತ್ಮಿಕತೆ ಬೀಜ ಬಿತ್ತಿತು.

ಆಟ-ಪಾಠಗಳ ಸಂತಸದಲ್ಲಿ ಜ್ಞಾನ ಮತ್ತು ಸಂಸ್ಕಾರಗಳ ಸುವಾಸನೆ ಹರಡಿದ ಈ ಶಿಬಿರ,
ಮಕ್ಕಳ ಬದುಕಿಗೆ ದಾರಿದೀಪವಾಗಿ, ಭವಿಷ್ಯದ ಸತ್ಪ್ರಜೆಯನ್ನು ರೂಪಿಸುವ ದಿವ್ಯ ಪ್ರಯತ್ನವಾಯಿತು.

ಶಿಗ್ಗಾವಿಯ ಹರ ಕಲ್ಯಾಣ ಮಂಟಪದಲ್ಲಿ ನವದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶ್ರೀ ನಾಗರಾಜ ಕ್ಯಾಬಳ್ಳಿ ಮತ್ತು ರೇಷ್ಮಾ ದಂಪತಿಗಳನ್ನು ಹರಸಿ ಆಶೀರ್...
08/04/2026

ಶಿಗ್ಗಾವಿಯ ಹರ ಕಲ್ಯಾಣ ಮಂಟಪದಲ್ಲಿ ನವದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶ್ರೀ ನಾಗರಾಜ ಕ್ಯಾಬಳ್ಳಿ ಮತ್ತು ರೇಷ್ಮಾ ದಂಪತಿಗಳನ್ನು ಹರಸಿ ಆಶೀರ್ವದಿಸಲು ಹೋದ ಕ್ಷಣವೇ ಭಕ್ತಿಭಾವದಿಂದ ತುಂಬಿತ್ತು. ಆದರೆ ಈ ದಿನದ ಯೋಗಾಯೋಗವೆಬಂತೆ ಇನ್ನೂ ಅಪೂರ್ವವಾಗಿತ್ತು — ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಫಕೀರ ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆಯುವ ಸೌಭಾಗ್ಯ ಲಭಿಸಿತು. ಆ ಕ್ಷಣ ಮನಸ್ಸಿಗೆ ಲಭಿಸಿದ ಶಾಂತಿ, ಗುರುಸನ್ನಿಧಿಯ ಕರುಣೆ — ವರ್ಣಿಸಲಾಗದ ಅನುಭವ. 🙏

ಜಗದ್ಗುರು ಮಹಾಸನ್ನಿಧಿಯವರು ನಮ್ಮೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸುತ್ತಾ, “ನಮ್ಮ ಮತ್ತು ನಿಮ್ಮ ಪೂರ್ವಾಶ್ರಮವೂ ಒಂದೇ ತಾಲ್ಲೂಕು — ಜಂಗಮಕ್ಷೇತ್ರ ಅಥಣಿ” ಎಂದು ಸ್ಮರಿಸಿದ ಕ್ಷಣವೇ ಹೃದಯ ಭಕ್ತಿಭಾವದಿಂದ ಕರಗಿತು. ಕಾಲ ಬೇರೆ, ಸಂದರ್ಭ ಬೇರೆ ಆದರೂ, ಒಂದೇ ತಪೋಭೂಮಿ — ಶ್ರೀಮದ್ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ಪವಿತ್ರ ತಪೋಕ್ಷೇತ್ರ ಶ್ರೀ ಗಚ್ಚಿನಮಠದ ಗುರುಕುಲದಲ್ಲಿ ಅಭ್ಯಾಸ ಮಾಡಿದವರಾಗಿದ್ದೇವೆ ಎಂಬ ಸ್ಮರಣೆ ಗುರುಪರಂಪರೆಯ ದೈವಿಕ ದಾರಿಯೇ ನಮಗೆ ಒಟ್ಟುಗೂಡಿಸಿದಂತೆ ಅನುಭವವಾಯಿತು. ✨

ಶ್ರೀಮದ್ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ಬಾಲ್ಯದ ಹೆಸರು ಶ್ರೀ ಗುರುಲಿಂಗ ದೇವರು. ಬಾಲ್ಯದಲ್ಲಿಯೇ ಶ್ರೀ ತೆಲಸಂಗ ಪಟ್ಟದ್ದೇವರ ಪದತಲದಲ್ಲಿ ವಿದ್ಯಾಭ್ಯಾಸ ಮಾಡಿ ಅರಿವು, ಆಚಾರ ಮತ್ತು ಅನುಭಾವಗಳ ತ್ರಿವೇಣಿ ಸಂಗಮವಾಗಿ ಪ್ರಕಾಶಿಸಿದ ಮಹಾನ್ ಯೋಗಿಗಳು ಅವರು. ಅವರ ಜೀವನವೇ ತಪಸ್ಸು, ಅವರ ಮಾತುಗಳೇ ಮಾರ್ಗದರ್ಶನ, ಅವರ ಪರಂಪರೆಯೇ ಭಕ್ತರಿಗೆ ದೀಪಸ್ತಂಭ. ಇಂದಿಗೂ ಆ ಪವಿತ್ರ ಗುರುಕೃಪೆ ಅನೇಕ ಹೃದಯಗಳನ್ನು ಬೆಳಗಿಸುತ್ತಿದೆ. 🕉️

ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಫಕೀರ ಸಿದ್ದರಾಮೇಶ್ವರ ಮಹಾಸ್ವಾಮಿಗಳವರು ಪೀಠಾರೋಹಣದ ಪೂರ್ವದಲ್ಲಿ, ತೆಲಸಂಗ ಹಿರೇಮಠದ ಪಟ್ಟದ್ದೇವರು — ಜನಮನಗಳಲ್ಲಿ ವಾಸವಾಗಿದ್ದ ಮಹಾಸನ್ನಿಧಿಯವರ ಮುತ್ತಜ್ಜರೇ ಮುರುಘೇಂದ್ರ ಶಿವಯೋಗಿಗಳವರ ವಿದ್ಯಾಗುರುಗಳಾಗಿದ್ದವರು ಎಂಬುದು ಈ ಗುರುಪರಂಪರೆಯ ಅದ್ಭುತ ವೈಭವವನ್ನು ಮತ್ತಷ್ಟು ಬೆಳಗಿಸಿತು. ಈ ಸಂಗತಿ ಕೇಳಿದಾಗ ಇದು ಕೇವಲ ಯೋಗಾಯೋಗವಲ್ಲ — ಗುರುಕೃಪೆಯೇ ನಮ್ಮನ್ನು ಒಂದೇ ಪವಿತ್ರ ಹಾದಿಯಲ್ಲಿ ನಡೆಸಿದ ಮಹಾಪ್ರಸಾದವೆಂದು ಮನಸ್ಸು ಭಕ್ತಿಯಿಂದ ನತಮಸ್ತಕವಾಯಿತು. 🙏

ನಮ್ಮ ಗುರುಗಳಾದ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರ ಆತ್ಮೀಯ ಒಡನಾಡಿಗಳಾಗಿದ್ದ ಶಿರಹಟ್ಟಿ ಜಗದ್ಗುರು ಶ್ರೀ ಫಕೀರ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ದರ್ಶನವು, ಗುರುಪರಂಪರೆಯ ಪಾವಿತ್ರ್ಯವನ್ನು ಕೇವಲ ಕೇಳುವುದಲ್ಲ — ಮನಸ್ಸಾರೆ ಅನುಭವಿಸುವಂತಾಯಿತು. ಆ ಸನ್ನಿಧಿಯಲ್ಲಿ ನಿಂತ ಕ್ಷಣವೇ ವಿನಯ, ಭಕ್ತಿ ಮತ್ತು ಕೃತಜ್ಞತೆಗಳ ಪ್ರವಾಹ ಮನದಲ್ಲಿ ಹರಿಯತೊಡಗಿತು.

ಈ ಪವಿತ್ರ ಗುರುಪರಂಪರೆಯ ನೆನಪುಗಳು ನಮಗೆ ಒಂದು ಸಂದೇಶ ನೀಡುತ್ತವೆ —
ಗುರುಗಳ ಕರುಣೆ ಇದ್ದಲ್ಲಿ ದಾರಿಗಳು ಸ್ವತಃ ತೆರೆಯುತ್ತವೆ,
ಗುರುಸ್ಮರಣೆ ಇದ್ದಲ್ಲಿ ಮನಸ್ಸಿಗೆ ಶಾಂತಿ ನೆಲೆಸುತ್ತದೆ,
ಗುರುಕೃಪೆ ಇದ್ದಲ್ಲಿ ಜೀವನವೇ ಪವಿತ್ರ ಯಾತ್ರೆಯಾಗುತ್ತದೆ. ✨

ಗುರುಪರಂಪರೆಯ ಈ ದಿವ್ಯ ಅನುಭವ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಾಗಿದೆ.
ಗುರುಕೃಪೆಯೇ ಜೀವನದ ಮಹಾಸಂಪತ್ತು — ಅದಕ್ಕಿಂತ ದೊಡ್ಡ ಐಶ್ವರ್ಯವೇ ಇಲ್ಲ. 🙏🕉️

ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಮಹಾಮನೆಗೆ ಪಾದಪೂಜೆಗೆ ಆಗಮಿಸಿದ ಪವಿತ್ರ ಕ್ಷಣದಲ್ಲಿ, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಸದ್ಭಕ್ತರೊ...
07/04/2026

ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಮಹಾಮನೆಗೆ ಪಾದಪೂಜೆಗೆ ಆಗಮಿಸಿದ ಪವಿತ್ರ ಕ್ಷಣದಲ್ಲಿ, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಸದ್ಭಕ್ತರೊಂದಿಗೆ ದಿವ್ಯ ಸಾನ್ನಿಧ್ಯದಲ್ಲಿ ಕೃಪಾಕಟಾಕ್ಷವನ್ನು ಹರಿಸಿದರು.

ಯುವಪೀಳಿಗೆ ಹಾಗೂ ಮಕ್ಕಳಿಗಾಗಿ “ಸಂಸ್ಕಾರ ಶಿಕ್ಷಣ ಶಿಬಿರ”*ಏಪ್ರೀಲ್ 09 ಮತ್ತು 10,2026 *ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ.ಸ್ಥಳ:ಹರಪೀಠ ಹರಿಹರ...
06/04/2026

ಯುವಪೀಳಿಗೆ ಹಾಗೂ ಮಕ್ಕಳಿಗಾಗಿ “ಸಂಸ್ಕಾರ ಶಿಕ್ಷಣ ಶಿಬಿರ”
*ಏಪ್ರೀಲ್ 09 ಮತ್ತು 10,2026
*ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ.
ಸ್ಥಳ:ಹರಪೀಠ ಹರಿಹರ.

🌼 ಸಂಸ್ಕಾರ ಶಿಕ್ಷಣ ಶಿಬಿರ – 2026 🌼ಲಿಂಗೈಕ್ಯ ಜಗದ್ಗುರು ಶ್ರೀ ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆಯೋಗಸಿಂಹಾಸನಾಧೀಶ...
04/04/2026

🌼 ಸಂಸ್ಕಾರ ಶಿಕ್ಷಣ ಶಿಬಿರ – 2026 🌼

ಲಿಂಗೈಕ್ಯ ಜಗದ್ಗುರು ಶ್ರೀ ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ
ಯೋಗಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ

👧🧒 ಯುವಪೀಳಿಗೆ ಹಾಗೂ ಮಕ್ಕಳಿಗಾಗಿ
✨ “ಸಂಸ್ಕಾರ ಶಿಕ್ಷಣ ಶಿಬಿರ” ✨

📅 ದಿನಾಂಕ: ಏಪ್ರಿಲ್ 9 ಮತ್ತು 10, 2026
📍 ಸ್ಥಳ: ಹರಪೀಠ, ಹರಿಹರ

📚 ಶಿಬಿರದಲ್ಲಿ ಒಳಗೊಂಡ ವಿಷಯಗಳು:
🧘‍♂️ ಯೋಗ
🔱 ಇಷ್ಟಲಿಂಗ ದೀಕ್ಷೆ
📖 ವಚನ ಪ್ರವಚನ
🎤 ಭಾಷಣ ಕಲೆ
🎶 ಸಂಗೀತ
🏏 ಭಾರತೀಯ ಸಂಪ್ರದಾಯಿಕ ಆಟಗಳು

🙏 ಸದ್ಭಕ್ತರು, ಪಾಲಕರು ಹಾಗೂ ಯುವಕರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿರಿ.
ಶರಣುಗಳೊಂದಿಗೆ,

ಹರಪೀಠದ ಸೇವೆಯಲ್ಲಿ,

ಶ್ರೀ ಡಾ. ರಾಜಕುಮಾರ ಹೆಚ್.ಪಿ.
ಆಡಳಿತಾಧಿಕಾರಿಗಳು, ಹರಪೀಠ ಹರಿಹರ
+91 94484 38331

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 94819 27666, +91 91876 62295.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Community posts news and promotions. Your email address will not be used for any other purpose, and you can unsubscribe at any time.

Contact The Practice

Send a message to Panchamasali Community:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram