24/10/2025
Today, on the occasion of commemorating 200 years of Rani Chennamma’s historic victory in the 1824 Kittur War, I had the privilege of releasing a commemorative coin alongside Shri Gajendra Singh Shekhawat Ji at a grand ceremony organized by the Ministry of Culture,Government of India in association with Delhi Kannada Sangha, New Delhi.
Kittur Rani Chennamma — an immortal name in India’s history — who, with a small but valiant army, bravely defeated the British forces. Her victory in 1824 became a symbol of courage and an inspiration for the beginning of India’s freedom struggle.
१८२४ के कित्तूर युद्ध में रानी चेनम्मा की ऐतिहासिक विजय के २००वें वर्षगाँठ के पावन अवसर पर, केंद्रीय संस्कृति मंत्रालय और दिल्ली कन्नड़ संघ के संयुक्त तत्वावधान में नई दिल्ली में आयोजित भव्य समारोह में, मुझे श्री गजेन्द्र सिंह शेखावत जी के साथ स्मारक सिक्का जारी करने का महान सौभाग्य प्राप्त हुआ।
कित्तूर की रानी चेनम्मा — वह अमर वीरांगना — जिन्होंने अपनी छोटी लेकिन शूर सेना के साथ अंग्रेज़ी सेनाओं को परास्त कर, भारतीय स्वतंत्रता संग्राम की पहली ज्वाला को प्रज्वलित किया। उनका साहस, त्याग और अडिग देशभक्ति हम सभी के लिए प्रेरणा हैं, और वे नारी शक्ति, स्वाभिमान तथा स्वतंत्रता की शाश्वत प्रतीक बनी हुई हैं। 🇮🇳
ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ದ್ವಿಶತಮಾನೋತ್ಸವ ಅಂಗವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ದೆಹಲಿ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ನವದೆಹಲಿಯ ಸಿರಿ ಪೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಭವ್ಯ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋಧ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ ಅವರೊಂದಿಗೆ 200 ರೂಪಾಯಿಯ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡುವ ಮಹಾಸೌಭಾಗ್ಯ ನನಗೆ ದೊರಕಿತು.
"ಕರುನಾಡಿನ ಕಥೆ ಇತಿಹಾಸದ ತುಂಬೆಲ್ಲ ತುಂಬಿವೆ ಅಮರ ರಾಜರ, ವೀರ ರಮಣಿಯರ, ಶೂರ ಸೈನಿಕರ ಗಾಥೆಗಳು. ತಾಯಿ ಭಾರತಿಯ ತನುಜಾತೆಯಾದ ಕನ್ನಡಮ್ಮನ ಮಕ್ಕಳು ದೇಶದ, ಧರ್ಮದ ಹಿತಕ್ಕಾಗಿ ಜೀವ-ಜೀವನವನ್ನು ಅರ್ಪಿಸಿದ್ದಾರೆ. ಮಹಿಳೆಯರೂ ಸಹ ರಣರಂಗದಲ್ಲಿ ಹೋರಾಡಿದ, ಆಡಳಿತ ನಡೆಸಿದ ಸಾವಿರಾರು ಉದಾಹರಣೆಗಳು ಭಾರತೀಯ ಪರಂಪರೆಯಲ್ಲಿ ಇವೆ. ಕೆಳದಿ ಚೆನ್ನಮ್ಮ, ಅಬ್ಬಕ್ಕ, ಚೆನ್ನಭೈರಾದೇವಿ, ಬೆಳವಡಿ ಮಲ್ಲಮ್ಮನಂಥ ಅನೇಕ ವೀರರಮಣಿಯರು ಈ ಮಣ್ಣಿನಲ್ಲಿ ಅವತರಿಸಿದ್ದಾರೆ. ವೀರರಾಣಿ ಕಿತ್ತೂರು ಚೆನ್ನಮ್ಮ, ದೇಶ ರಕ್ಷಣೆಗೆ, ಧರ್ಮ ರಕ್ಷಣೆಗೆ ಹೋರಾಡಿದ ವೀರ ತಾಯಿಯರ ಸಾಲಿನ ಮುಕುಟ ಮಣಿ. ಆಗಂತುಕ ಬ್ರಿಟೀಷರ ವಸಹಾತುಶಾಹಿಯ ವಿರುದ್ಧ, ಅವರ ದಮನಕಾರಿ ನೀತಿಯ ವಿರುದ್ಧ, ಅನೈತಿಕ ಆಡಳಿತದ ವಿರುದ್ಧ ಇದ್ದ ಅಸಮಾಧಾನ ಒಟ್ಟಾಗಿ ಸ್ಫೋಟಗೊಂಡಿದ್ದೇ 1857 ರಲ್ಲಿ. ಈ ಸಂಗ್ರಾಮವನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲಾಗುತ್ತದೆ. ಆದರೆ ವೀರರಾಣಿ ಚೆನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು 1824ರಲ್ಲಿಯೇ ಹೊತ್ತಿಸಿದ್ದರು, ಅದರ ಫಲ ದೊರೆತದ್ದು 1947 ರಲ್ಲಿ. ಚೆನ್ನಮ್ಮನವರ ಅನನ್ಯ ಧರ್ಮ ಶೃದ್ಧೆ, ದೂರದೃಷ್ಟಿಯ ಆಡಳಿತ, ಕೆಚ್ಚೆದೆಯ ಹೋರಾಟ, ಶಕ್ತಿಶಾಲಿ ನಾಯಕತ್ವ ಇಂದಿಗೂ ಪ್ರೇರಣಾದಾಯಿ.
ಶೂರ ಸೇನಾನಿ ಕಿತ್ತೂರಿನ ರಾಣಿ
ರಾಣಿ ಚೆನ್ನಮ್ಮ ಜನಿಸಿದ್ದು 1778 ರ, ನವೆಂಬರ್ 14ರಂದು ಕಾಕತಿಯಲ್ಲಿ. ಕಾಕತಿಯು ಕಿತ್ತೂರಿನ ಆಡಳಿತಕ್ಕೆ ಒಳಗಾಗಿದ್ದ ಊರು. ಬೆಳಗಾವಿಯಿಂದ ಐದೇ ಐದು ಮೈಲು ದೂರದಲ್ಲಿದೆ. ತಂದೆ ಧೂಳಪ್ಪಗೌಡ ಮತ್ತು ತಾಯಿ ಪದ್ಮಾವತಿಯರ ಏಕಮಾತ್ರ ಪುತ್ರಿ ಚೆನ್ನಮ್ಮ. ಜನಿಸಿದಾಗಲೇ ಮಗುವಿನ ಮುಖದಲ್ಲಿ ರಾಣಿ ತೇಜಸ್ಸು ಇತ್ತಂತೆ. ಮಗುವಿನ ಜನನ ದಿನಾಂಕವನ್ನು ಪರಿಶೀಲಿಸಿದ ಜಂಗಮರು ಇವಳು ಮುಂದೆ ನಾಡಿನ ರಾಣಿಯಾಗಿ ಮೆರೆಯುತ್ತಾಳೆ. ವೀರವನಿತೆಯಾಗಿ ನಾಡಿನ ಕೀರ್ತಿ ಪತಾಕೆ ಹಾರಿಸುತ್ತಾಳೆ ಅಂತ ಭವಿಷ್ಯ ನುಡಿದಿದ್ದರಂತೆ.
ಚೆನ್ನಮ್ಮ, ಬಾಲ್ಯದಿಂದಲೂ ಪ್ರತಿಭಾಶಾಲಿ. ದೈವಭಕ್ತಿ, ಧೀರೋದಾತ್ತತೆ ಎರಡನ್ನೂ ಮೈಗೂಡಿಸಿಕೊಂಡವರು. ಶಿಕ್ಷಣದಲ್ಲಿ ಮುಂದು ಅಷ್ಟೇ ಅಲ್ಲ, ಕುದುರೆಸವಾರಿ, ಶಸ್ತ್ರಾಸ್ತ್ರ ಬಳಕೆಯಲ್ಲಿ ನಿಪುಣತೆ ಪಡೆದಿದ್ದರು. ಸ್ವತಃ ಯುದ್ಧ ನಿಪುಣರಾಗಿದ್ದ ತಂದೆ ದೂಳಪ್ಪಗೌಡರು ಮಗಳು ಚೆನ್ನಮ್ಮಳನ್ನು ವೀರವನಿತೆಯಾಗಿ ರೂಪಿಸಿದ್ದರು. ಕುದುರೆ ಸವಾರಿ, ಯುದ್ಧಕಲೆ, ಬಿಲ್ವಿದ್ಯೆ ಎಲ್ಲವನ್ನೂ ಕಲಿಸಿದ್ದರು. ಚೆನ್ನಮ್ಮನವರು ಧರ್ಮಶಾಸ್ತ್ರ, ನೀತಿಶಾಸ್ತ್ರ ಬಲ್ಲವರಾಗಿದ್ದರು. ಕತ್ತಿವರಸೆಯಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ಅವರ ಭರ್ಚಿಬಾಜಿಗೆ ವೀರಾಧಿವೀರರೇ ಹಣೆ ಮಣೆಯುತ್ತಿದ್ದರು. ಚೆನ್ನಮ್ಮವರ ಸಾಹಸದ ಕಥೆಗಳು ಅತ್ತ ಕಿತ್ತೂರಿನ ದೊರೆ ಮಲ್ಲಸರ್ಜರ ಕಿವಿಗೂ ಬಿದ್ದಿತ್ತು. ಇತ್ತ ಚೆನ್ನಮ್ಮವರು ಮಲ್ಲಸರ್ಜರ ಶೌರ್ಯಪರಾಕ್ರಮಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುತ್ತಿದ್ದರು. ರಾಜ ಮಲ್ಲಸರ್ಜರೊಂದಿಗೆ ಚೆನ್ನಮ್ಮನವರ ವಿವಾಹ ಗುರು ಹಿರಿಯರ ಆಶೀರ್ವಾದದಿಂದ ಬಲು ವಿಜ್ರಂಭಣೆಯಿಂದ ನಡೆಯಿತು.
ಕಿತ್ತೂರಿನ ಸೊಸೆಯಾದ ಮೇಲೆ, ಚೆನ್ನಮ್ಮ ಸುಮ್ಮನೆ ರಾಣಿವಾಸದಲ್ಲಿ ಕೂರಲಿಲ್ಲ. ಅರಮನೆಯ ಅಲಂಕಾರವಾಗಲು ಬಯಸಲಿಲ್ಲ. ರಾಜನೀತಿಯಲ್ಲಿ ತೊಡಗಿಸಿಗೊಂಡರು. ಪತಿ ಮಲ್ಲಸರ್ಜರ ಜೊತೆ ನಿಂತು ಕಿತ್ತೂರು ಸಾಮ್ರಜ್ಯದ ಅಭಿವೃದ್ಧಿಗೆ ಕೈ ಜೋಡಿಸಿದರು. ಹೀಗಿದ್ದಾಗಲೇ ಮರಾಠ ದೊರೆ ಪೇಶ್ವೆ ಕಿತ್ತೂರಿನ ಮೇಲೆ ಕಣ್ಣು ಹಾಕುತ್ತಾನೆ. ಮಲ್ಲಸರ್ಜನರನ್ನು ಮೋಸದಿಂದ ಸೆರೆ ಹಿಡಿದು ಕಾರಾಗೃಹದಲ್ಲಿ ಬಂಧಿಸುತ್ತಾನೆ. ಅಲ್ಲಿಯೇ ಮಲ್ಲಸರ್ಜರು ಬೇನೆಗೆ ತುತ್ತಾದಾಗ ವಿಧಿಯಿಲ್ಲದೆ ಬಿಡುಗಡೆ ಮಾಡುತ್ತಾನೆ. ಆದ್ರೆ ಅಷ್ಟರಲ್ಲಿ ಬೇನೆಯಿಂದ ಬಸವಳಿದಿದ್ದ ಮಲ್ಲಸರ್ಜ 1816 ರಲ್ಲಿ ಅಸುನೀಗುತ್ತಾರೆ.
ಪತಿಯ ಅಕಾಲಿಕ ಅಗಲಿಕೆ, ಬರಸಿಡಿಲು ಬಡಿದಂತಾಗುತ್ತದೆ. ಕಿತ್ತೂರು ಸಾಮ್ರಾಜ್ಯದ ಉಳಿವು ಹೇಗೆ? ಎನ್ನುವ ಸವಾಲು ಎದುರಾಗುತ್ತದೆ. ಆದರೆ ಧೃತಿಗೆಡದೆ, ಎಲ್ಲ ದುಃಖವನ್ನೂ ಸಹಿಸಿಕೊಂಡು ಕಿತ್ತೂರು ಸಾಮ್ರಾಜ್ಯದ ರಕ್ಷಣೆಗೆ ನಿಲ್ಲುತ್ತಾರೆ ಚೆನ್ನಮ್ಮ. ಹಿರಿಯ ಮಗ ಶಿವಲಿಂಗರುದ್ರ ಸರ್ಜನಿಗೆ ಪಟ್ಟಾಭಿಷೇಕ ಮಾಡಿ ತಾವು ರಾಜ್ಯದ ಆಗುಹೋಗುಗಳ ಮೇಲೆ ನಿಗಾ ಇಡುತ್ತಾರೆ. 1816 ರಿಂದ 1824 ರವರೆಗೆ ಶಿವಲಿಂಗರುದ್ರ ಸರ್ಜ ರಾಜ್ಯಭಾರ ಮಾಡುತ್ತಾನೆ. 1824ರಲ್ಲಿ ಶಿವಲಿಂಗ ರುದ್ರನೂ ಲಿಂಗೈಕ್ಯನಾದಾಗ ಬೇರೆ ದಾರಿ ಇಲ್ಲದೆ ಚೆನ್ನಮ್ಮ ಶಿವಲಿಂಗಪ್ಪನೆಂಬ ಬಾಲಕನನ್ನು ದತ್ತಕ ತೆಗೆದುಕೊಂಡು ಕಿತ್ತೂರಿನ ಮುಂದಿನ ರಾಜನೆಂದು ಘೋಷಿಸುತ್ತಾರೆ. ಆದರೆ ಬ್ರಿಟಿಷರು ದತ್ತಕವನ್ನು ಒಪ್ಪಲಿಲ್ಲ. ಇದು ಪರೀಕ್ಷಾಕಾಲ. ಕಿತ್ತೂರಿನ ಭವಿಷ್ಯ ಮುಳ್ಳಿನ ಮೇಲಿನ ನಡಿಗೆ ಎನಿಸಿತು. ವಾರಸುದಾರರಿಲ್ಲದ ರಾಜ್ಯವನ್ನು ಬ್ರಿಟೀಷರು ಕಾನೂನು ಮಾಡಿ ಕಬಳಿಸುತ್ತಿದ್ದರು. ಚೆನ್ನಮ್ಮನವರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದರು. ಸಂಘರ್ಷವೊಂದೇ ದಾರಿಯಾಯಿತು.
ಗೆಲುವಿನ ದ್ವಿಶತಮಾನೋತ್ಸವ
ಬ್ರಿಟಿಷ್ ಏಜೆಂಟ್ ಆಗಿದ್ದ ಥ್ಯಾಕರೆ ಕಿತ್ತೂರಿನ ರಾಣಿ ವಿಷಯವಾಗಿ ಬ್ರಿಟಿಷರ ತಲೆಯನ್ನೂ ಕೆಡಿಸುತ್ತಾನೆ. ಬ್ರಿಟಿಷರು ಕಿತ್ತೂರನ್ನು ಕಬಳಿಸಲು ಮುಂದಾಗುತ್ತಾರೆ. ಕಿತ್ತೂರಿನ ಅರಮನೆಯ ಭಂಡಾರಕ್ಕೆ ಬ್ರಿಟಿಷರು ಮುದ್ರೆ ಹಾಕುತ್ತಾರೆ. ರಾಜಭಂಡಾರ ಕಾಯಲಿಕ್ಕೆ ಬ್ರಿಟಿಷ್ ನೌಕಕರು ನೇಮಕಗೊಳ್ಳುತ್ತಾರೆ. ಇದು ರಾಣಿ ಚೆನ್ನಮ್ಮನವರನ್ನು ಕೆರಳಿಸುತ್ತದೆ. ಆ ಸಮಯದಲ್ಲಿ ಇಡೀ ಕಿತ್ತೂರು ಸಾಮ್ರಾಜ್ಯದ ಜನತೆ ರಾಣಿ ಚೆನ್ನಮ್ಮನವರ ಪರ ನಿಲ್ಲುತ್ತದೆ. ಒಗ್ಗಟ್ಟು ಪ್ರದರ್ಶಿಸುತ್ತದೆ. ಆ ಒಗ್ಗಟ್ಟನ್ನು ಮುರಿಯಲು ಥ್ಯಾಕರೆ ಇನ್ನಿಲ್ಲದ ಕುತಂತ್ರ ಹೂಡುತ್ತಾನೆ. ಆದ್ರೆ ಸಂಘಟನಾ ಚತುರೆಯಾಗಿದ್ದ ಚೆನ್ನಮ್ಮ ಥ್ಯಾಕರೆಯ ಎಲ್ಲಾ ಕುತಂತ್ರಗಳನ್ನೂ ಬುಡಮೇಲು ಮಾಡುತ್ತಾರೆ. ಥ್ಯಾಕರೆ ವಿರುದ್ಧ ಸೈನ್ಯವನ್ನು ಸಂಘಟಿಸುತ್ತಾರೆ. ಕೋಟೆಕೊತ್ತಲುಗಳನ್ನು ಭದ್ರಗೊಳಿಸುತ್ತಾರೆ. ಇದರ ನಡುವೆಯೇ ಯುದ್ಧ ಬೇಡ ಅನ್ನುವ ಸಂಧಾನ ಸೂತ್ರವನ್ನೂ ಜಾರಿಯಲ್ಲಿಡುತ್ತಾರೆ. ಆದ್ರೆ ಅದು ಫಲಿಸಲ್ಲ.
ಕೊನೆಗೆ ಚೆನ್ನಮ್ಮ ಬೇರೆ ದಾರಿಯಿಲ್ಲದೆ ಬ್ರಿಟಿಷರು ಮತ್ತು ಥ್ಯಾಕರೆಯ ಹುಟ್ಟಡಗಿಸಲು ಸಿದ್ಧಳಾಗುತ್ತಾರೆ. ಅದು 1824 ನೇ ಇಸವಿ, ಅಕ್ಟೋಬರ್ 22. ಮಹಾನವಮಿ ದಿನ. ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ದಾಳಿ ಮಾಡುತ್ತದೆ. ಸ್ವತಃ ಚೆನ್ನಮ್ಮ ಕುದುರೆ ಏರಿ ಖಡ್ಗ ಹಿಡಿದು ವೀರಾವೇಶದಿಂದ ರಣರಂಗಕ್ಕೆ ಧುಮುಕುತ್ತಾರೆ. ಚೆನ್ನಮ್ಮನವರ ಧರ್ಮದ ಕತ್ತಿ, ಬ್ರೀಟಿಷ್ ಸೈನಿಕರ ಎದೆಸೀಳುತ್ತದೆ. ಈ ತಿರುಗೇಟಿಗೆ ವೈರಿ ಪಡೆ ಪತರುಗುಟ್ಟುತ್ತದೆ. ಥ್ಯಾಕರೆ ಇಪ್ಪತ್ತು ನಿಮಿಷ ಕೊಡುತ್ತೇನೆ. ಕೋಟೆ ಬಾಗಿಲು ತೆರೆಯದಿದ್ದರೆ ನಾವೇ ಬಾಗಿಲು ಒಡೆದು ಒಳ ನುಗ್ಗುತ್ತೇವೆ ಅಂತ ಹೂಂಕರಿಸುತ್ತಾನೆ.
ಥ್ಯಾಕರೆಯ ಹೂಂಕಾರ ಕಿತ್ತೂರಿನ ಸ್ವಾಭಿಮಾನವನ್ನು ಕೆರಳಿಸುತ್ತದೆ. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸೇರಿ ಹರಹರ ಮಹಾದೇವ್ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಾ ಬ್ರಿಟಿಷ್ ಸೈನ್ಯದ ಮೇಲೆ ನುಗ್ಗುತ್ತಾರೆ. ಅದೊಂದು ಮಿಂಚಿನ ದಾಳಿ. ವೀರರಾಣಿ ಚೆನ್ನಮ್ಮನ ಯುದ್ಧಾಕ್ರೋಷ ನೋಡಿದ ಥ್ಯಾಕರೆ ಗಾಬರಿ ಬೀಳುತ್ತಾನೆ. ಚೆನ್ನಮ್ಮನ ಹೊಡೆತಕ್ಕೆ ಬ್ರಿಟಿಷರು ಕಂಗಾಲಾಗುತ್ತಾರೆ. ಚೆನ್ನಮ್ಮನಿಗೆ ಥ್ಯಾಕರೆಯನ್ನು ಸೆರೆ ಹಿಡಿದು ಶಿಕ್ಷಿಸಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಅಮಟೂರ ಬಾಳಪ್ಪ ಹಾರಿಸಿದ ಗುಂಡಿಗೆ ಥ್ಯಾಕರೆ ಹತನಾಗುತ್ತಾನೆ. ಬ್ರಿಟಿಷ್ ಸೈನ್ಯ ಮಣ್ಣು ಮುಕ್ಕುತ್ತದೆ. ವಾಲ್ಟರ್ ಮತ್ತು ಸ್ಟಿವೆನಸನ್ ಎಂಬ ಇಬ್ಬರು ಆಂಗ್ಲ ಅಧಿಕಾರಿಗಳು ಸೆರೆ ಸಿಕ್ಕರು. ಮೊದಲ ಯುದ್ಧದ ಜಯ ಚೆನ್ನಮ್ಮನವರದಾಯಿತು. ಈ ಸ್ವರಾಜ್ಯ ಯುದ್ಧದ ವಿಜಯೋತ್ಸವಕ್ಕೀಗ 200 ವರ್ಷ.
ಆದರೆ ಈ ಜಯ ತಾತ್ಕಾಲಿಕವಾಗಿತ್ತು, ಬ್ರಿಟಿಷರು ಹೆಚ್ಚಿನ ಶಕ್ತಿಯೊಂದಿಗೆ ಮತ್ತೆ ಬರುತ್ತಾರೆ, ಹಲವು ವಾರ ಕಿತ್ತೂರಿನ ಸೈನ್ಯ ಹಿಂದೆ ಸರಿಯಲಿಲ್ಲ. ಸೈನಿಕರ ರೋಷ ವೀರಭದ್ರನನ್ನು ನೆನಪಿಸಿದರೆ, ರಾಣಿಯಲ್ಲಿ ರಣಚಂಡಿಯೇ ಬಂದು ಕುಳಿತಂತೆ ಕಾಣುತ್ತಿತ್ತು. ಹಲವು ವಾರಗಳ ಘೋರ ಘರ್ಷಣೆಯ ನಂತರವೂ ಕುಂದಿಲ್ಲದ ಬಲವನ್ನು ಒಳಗಿನವರ ಸಂಚು ಛಿದ್ರಮಾಡಿತು. ಚೆನ್ನಮ್ಮನವರು ಸೆರೆಯಾದರು. ಐದು ವರ್ಷಗಳ ಸೆರೆವಾಸದಲ್ಲಿದ್ದಾಗಲೇ ಫೆಬ್ರುವರಿ 21,1829 ರಲ್ಲಿ ಬೈಲಹೊಂಗಲದಲ್ಲಿ ಲಿಂಗೈಕ್ಯರಾದರು, ಅವರಿಗಾಗ 51 ವರ್ಷ.
ಪೂಜೆ ಇಲ್ಲದೇ ಪ್ರಸಾದವಿಲ್ಲ
ಚೆನ್ನಮ್ಮನವರ ಕ್ಷಾತ್ರ ತೇಜ ಜನಜನಿತವೇ ಆಗಿದ್ದರೂ, ಅವರ ಧರ್ಮ ತತ್ಪರತೆಯೂ ಸ್ತುತ್ಯಾರ್ಹ. ಗುರು ಲಿಂಗ ಜಂಗಮರ ಪೂಜೆ ಎಂಬ ಸನಾತನ ನಿತ್ಯ ನೈಮಿತ್ಯ ಕರ್ಮವನ್ನು ಎಂದಿಗೂ ಬಿಟ್ಟವರಲ್ಲ. ಅದು ಅರಮನೆಯೇ ಆಗಲಿ, ಸೆರೆಮನೆಯೇ ಆಗಲಿ. ನಿತ್ಯ ಸನ್ಯಾಸಿ ಜಂಗಮರಿಗೆ ಊಟ ಬಡಿಸೆಯೇ ಪ್ರಸಾದ ಸೇವಿಸುವುದು ಅವರ ಕ್ರಮ. ಹೀಗಾಗಿ ಚೆನ್ನಮ್ಮನವರ ಆಶಾಕಿರಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅವರನ್ನು ಭೇಟಿಯಾಗಲು ಬೈರಾಗಿ ವೇಷದಲ್ಲಿ ಬಂದದ್ದು ಇತಿಹಾಸದಲ್ಲಿ ದಾಖಲೆಯಾಗಿದೆ.
ಚೆನ್ನಮ್ಮನವರ ಹೋರಾಟದ ಶಾಶ್ವತ ಪ್ರೇರಣೆ
ಚೆನ್ನಮ್ಮನವರ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ, ಅವರ ಧೈರ್ಯವು ಮುಂದಿನವರಿಗೆ ಪ್ರೇರಣೆ ನೀಡಿ ಆ ಕೆಲಸ ಪೂರ್ಣವಾಯಿತು. ಆದಿಯಲ್ಲೇ ಅವರು ಮಾಡಿದ ಹೋರಾಟ ಜಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ಹಲವು ಸಿಂಹಿಣಿಯರಿಗೆ ಮಾದರಿಯಾಗಿದೆ. ದೇಶದ ತುಂಬಾ ಚೆನ್ನಮ್ಮನವರ ಬಗ್ಗೆ ಅಪಾರ ಗೌರವವಿದೆ. ಅವರ ವೀರಗಾಥೆ ಸಾಹಿತ್ಯಕ್ಕೆ ವೀರರಸ ತುಂಬಿವೆ. ದೆಹಲಿಯ ಸಂಸತ್ ಭವನದಲ್ಲೂ ಅವರ ಪ್ರತಿಮೆ ದೇಶಭಕ್ತಿಯ ಪ್ರೇರಣೆ ನೀಡುತ್ತಾ ನಿಂತಿದೆ. ಅವರು ಸಮರ್ಥವಾದ ನಾಯಕಿ ಮಾತ್ರವಲ್ಲ, ಧರ್ಮಮೂರ್ತಿಯೂ ಹೌದು. ಇವರ ಸಾಧನೆ ಕೊಂಡಾಡುವುದು ಅತ್ಯಾವಶ್ಯಕ.
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ