Panchamasali Community

Panchamasali Community Welcome To Panchamasali Jagadguru Peetha - Shivamogga Road, Hanagawadi Post, Davanagere Dist, Karnataka state, 577601

06/05/2026
ಡಿ ಕೆ ಎಸ್ ಚಾರಿಟಬಲ್ ಇನ್ಸ್ಟಿಟ್ಯೂಟ್ ಟ್ರಸ್ಟ್ ಕನಕಪುರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಕನಕಪುರ ತಾಲ್ಲೂಕಿನ ಮಹಾಜನತೆಯ ಸಹಕಾರ ಮತ್ತು ಸಹಯ...
06/05/2026

ಡಿ ಕೆ ಎಸ್ ಚಾರಿಟಬಲ್ ಇನ್ಸ್ಟಿಟ್ಯೂಟ್ ಟ್ರಸ್ಟ್ ಕನಕಪುರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಕನಕಪುರ ತಾಲ್ಲೂಕಿನ ಮಹಾಜನತೆಯ ಸಹಕಾರ ಮತ್ತು ಸಹಯೋಗದೊಂದಿಗೆ ಮಾನ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹಾಗೂ ಬಮೂಲ್ ಅಧ್ಯಕ್ಷರು ಮತ್ತು ಮಾಜಿ ಸಂಸದರಾದ ಶ್ರೀ ಡಿ.ಕೆ.ಸುರೇಶ ಅವರ ಮುಂದಾಳತ್ವದಲ್ಲಿ 2026 ಜನವರಿ 28 ರಿಂದ ಫೆಬ್ರವರಿ 1ರವರೆಗೆ ಆಯೋಜಿಸಿದ ಕನಕೋತ್ಸವದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು “ಯೋಗ ವಿಜ್ಞಾನ ಶಿಬಿರ”ಮೂಲಕ ಸಾವಿರಾರು ಯೋಗಾಸಕ್ತರಿಗೆ ಔಷಧಿಯಿಲ್ಲದ ಆರೋಗ್ಯ ಜೀವನದ ವಿಧಾನವನ್ನು ಅರುಹಿದ್ದಾರೆ.

ಆದರೆ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭಕ್ತರು ನೀಡಿದ ಕೋಟಿ ಕೋಟಿ ದೇಣಿಗೆ ಹಾಗೂ ಪೀಠ ಅಭಿವೃದ್ಧಿಗಾಗಿ ಸರಕಾರದ 10 ಕೋಟಿ ಅನುದಾನವನ್ನು ತಿಂದು ತೇಗಿದ ಉಚ್ಛಾಟಿತ ಮಾಜಿ ಪ್ರಧಾನ ಧರ್ಮದರ್ಶಿ ಗುಳುಂಪತಿ ತನ್ನ ದೂರವಾಣಿ ವಾಟ್ಯಾಪ್ ಮೂಲಕ ಎಪ್ರೀಲ್ 12,2026 ರಿಂದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಬಗ್ಗೆ ದುಷ್ಟ ಅಪಪ್ರಚಾರಕ್ಕೆ ಇಳಿದಿರುವುದು ನೋಡಿ.
ಅಖಂಡ ಪಂಚಮಸಾಲಿ ಸದ್ಭಕ್ತರೇ,ಈ ಗೋಮುಖವ್ಯಾಘ್ರ ಗುಳುಂಪತಿಗೆ ಬಗ್ಗೆ ಜಾಗೃತಿರಾಗಿರಿ.

ಕರುಳಿನ ತ್ಯಾಗಕ್ಕೆ “ಸಿದ್ಧರಾಮ ಸಿಂಚನ”ದೀಪವು ತನ್ನ ಸುತ್ತಮುತ್ತಲಿನ ಕತ್ತಲನ್ನು ಓಡಿಸಿ ಬೆಳಕನ್ನು ಹರಡುತ್ತದೆ. ಮನೆಗೆ ಹೊಳಪು ಕೊಡುತ್ತದೆ, ಮಂದ...
03/05/2026

ಕರುಳಿನ ತ್ಯಾಗಕ್ಕೆ “ಸಿದ್ಧರಾಮ ಸಿಂಚನ”

ದೀಪವು ತನ್ನ ಸುತ್ತಮುತ್ತಲಿನ ಕತ್ತಲನ್ನು ಓಡಿಸಿ ಬೆಳಕನ್ನು ಹರಡುತ್ತದೆ. ಮನೆಗೆ ಹೊಳಪು ಕೊಡುತ್ತದೆ, ಮಂದಿರಕ್ಕೆ ಮಂಗಳ ಕೊಡುತ್ತದೆ, ದಾರಿಗೆ ದಿಕ್ಕು ತೋರಿಸುತ್ತದೆ. ಆದರೆ ಅದೇ ದೀಪದ ಕೆಳಗೆ ಮಾತ್ರ ಕತ್ತಲು ಗಾಢವಾಗಿ ನೆಲೆಸಿರುತ್ತದೆ. ಈ ದೃಶ್ಯವನ್ನು ನೋಡಿದಾಗ ಮನಸ್ಸು ಒಂದೇ ಪ್ರಶ್ನೆ ಕೇಳುತ್ತದೆ—ಇತರರ ಬದುಕನ್ನು ಬೆಳಗಿಸುವವರ ಬದುಕಿನ ಅಡಿಯಲ್ಲಿರುವ ಕತ್ತಲನ್ನು ನೋಡುವವರು ಯಾರು?

ಈ ಪ್ರಶ್ನೆ ಕೇವಲ ತತ್ತ್ವಚಿಂತನೆಯಲ್ಲ; ಅದು ನಮ್ಮ ಸಮಾಜದ ಹೃದಯಕ್ಕೆ ಕೇಳಬೇಕಾದ ಪ್ರಶ್ನೆ. ಲೋಕಕ್ಕೆ ಮಾರ್ಗದರ್ಶನ ಮಾಡುವವರು, ಸಮಾಜಕ್ಕೆ ಸೇವೆ ಸಲ್ಲಿಸುವವರು, ಸಾವಿರಾರು ಮಂದಿಗೆ ಆಶ್ರಯವಾಗುವವರು—ಅವರ ಹಿಂದೆ ನಿಂತು ಮೌನವಾಗಿ ತ್ಯಾಗ ಮಾಡಿದವರನ್ನು ನಾವು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆ? ವಿಶೇಷವಾಗಿ ಸನ್ಯಾಸ ಮಾರ್ಗಕ್ಕೆ ತಮ್ಮ ಮಗನನ್ನು ಸಮರ್ಪಿಸಿದ ತಂದೆತಾಯಿಗಳ ಬದುಕು ಎಷ್ಟು ಮೌನ ಕಣ್ಣೀರಿನಿಂದ ತುಂಬಿರುತ್ತದೆ ಎಂಬುದನ್ನು ಯೋಚಿಸಿದರೆ ಹೃದಯ ಕಂಪಿಸುತ್ತದೆ.

ಒಬ್ಬ ಮಗನಿಗಾಗಿ ದೇವರಿಗೆ ಹರಕೆ ಹೊತ್ತು, ಒಂಬತ್ತು ತಿಂಗಳು ಹೆತ್ತು ಹೊತ್ತು, ಸಾಕಿ ಸಲುಹಿ, ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರೂ ಮಗನ ಹೊಟ್ಟೆಗೆ ಅನ್ನ ತುಂಬಿಸುವ ಪಾಲಕರು. ಮುಗಿಲಂತೆ ಪೋಷಿಸಿ, ಕಡಲಂತೆ ಪ್ರೀತಿಸಿ, ಕಡುಕಷ್ಟ ಬಂದರೂ ಎದೆಯೊಡ್ಡಿ ನಿಲ್ಲುವ ಮಾತಾಪಿತೃಗಳು. ತಮ್ಮ ಕನಸುಗಳನ್ನು ಮೌನವಾಗಿ ಸಮಾಧಿ ಮಾಡಿ, ಮಗನ ಕನಸುಗಳಿಗೆ ರೆಕ್ಕೆ ಕಟ್ಟಿ ಅದರಲ್ಲಿ ಖುಷಿಪಡುವ ಮಹಾತ್ಯಾಗಿಗಳು.

ಅಂಥ ಮಗನು ಸಮಾಜದ ಹಿತಕ್ಕಾಗಿ ಸನ್ಯಾಸಿಯಾಗುವ ಕ್ಷಣದಲ್ಲಿ ಅವರ ಕಣ್ಣಲ್ಲಿ ಕಣ್ಣೀರು ತುಂಬುತ್ತದೆ. ಆದರೆ ಅದು ದುಃಖದದ್ದಲ್ಲ—ಹೆಮ್ಮೆಯದು.

“ನಮ್ಮ ಮಗ ನಮ್ಮ ಮನೆಯವನಾಗಿರಲಿಲ್ಲ… ಸಮಾಜದವನಾದನು” ಎಂಬ ಗರ್ವದ ಕಣ್ಣೀರು.

ಆದರೆ ವರ್ಷಗಳು ಕಳೆಯುತ್ತವೆ. ಮಗನು ಸಮಾಜಕ್ಕೆ ಗುರುವಾಗುತ್ತಾನೆ. ಸಾವಿರಾರು ಜನರು ಅವನ ಆಶೀರ್ವಾದಕ್ಕಾಗಿ ಬರುತ್ತಾರೆ. ಅವನ ಮಾತಿಗೆ ಮೌಲ್ಯ, ಅವನ ಸೇವೆಗೆ ಗೌರವ, ಅವನ ಹೆಸರಿಗೆ ಕೀರ್ತಿ. ಆದರೆ ಅವನನ್ನು ಹೆತ್ತ ತಂದೆತಾಯಿಗಳು ಮಾತ್ರ ವೃದ್ಧಾಪ್ಯದಲ್ಲಿ ಆಶ್ರಯವಿಲ್ಲದೆ, ನೆಲೆಯಿಲ್ಲದೆ, ಮೌನವಾಗಿ ಬದುಕುತ್ತಿದ್ದರೆ—ಅದು ಕೇವಲ ಅವರ ನೋವಲ್ಲ, ಮಾನವತ್ವವೇ ತಲೆತಗ್ಗಿಸುವ ಸಮಾಜದ ನಾಚಿಕೆ.

ಬಾಗಲಕೋಟೆ -ಚಿತ್ರದುರ್ಗದ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಬದುಕು ಈ ಮೌನ ಸತ್ಯವನ್ನು ನೆನಪಿಸುತ್ತದೆ. ಇಪ್ಪತ್ತೈದು ವರ್ಷಗಳಿಂದ ಸನ್ಯಾಸ ಜೀವನದಲ್ಲಿ ಸಮಾಜಕ್ಕಾಗಿ ತೊಡಗಿಸಿಕೊಂಡಿರುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರು ಊರು ಸುತ್ತಿ ಜನಾಂಗವನ್ನು ಸಂಘಟಿಸಿದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ತಂದವರು. ಕಲ್ಲು ಒಡೆಯುವ ಕೈಗಳಿಗೆ ಆತ್ಮಗೌರವ ಕಲಿಸಿದವರು. ಬದುಕನ್ನು ಕಟ್ಟಿಕೊಳ್ಳುವ ದಾರಿ ತೋರಿಸಿದವರು.

ಆದರೆ ಇಂತಹ ಮಹನೀಯರ ಪೂರ್ವಾಶ್ರಮದ ತಂದೆತಾಯಿಗಳಾದ ಹನುಮಂತಪ್ಪ ಮತ್ತು ಸರೋಜಮ್ಮ ದಾವಣಗೆರೆಯಲ್ಲಿ ದಿನಗೂಲಿ ದುಡಿದು ಬದುಕುವ ಪರಿಸ್ಥಿತಿಯಲ್ಲಿ ಇದ್ದರು ಎಂಬುದು ಕೇಳಿದಾಗ ಮನಸ್ಸು ಕಲುಕುತ್ತದೆ. ಮಗಳ ಮದುವೆಗಾಗಿ ಇದ್ದ ಮನೆಯನ್ನು ಮಾರಿಬಿಟ್ಟು, ಕೊನೆಗೆ ಗುಡಿಸಲಿನಲ್ಲಿ ದಿನ ಕಳೆಯುವ ಸ್ಥಿತಿ ಎದುರಿಸಿದ್ದರು. ಸಮಾಜಕ್ಕೆ ಬೆಳಕಾದ ಮಗನ ತಾಯ್ತಂದೆಗಳು ತಾವೇ ಕತ್ತಲಿನಲ್ಲಿ ಬದುಕುತ್ತಿದ್ದರು.

ನಾವು ಎಷ್ಟೊಂದು ವಿಚಿತ್ರ ಸಮಾಜದಲ್ಲಿ ಬದುಕುತ್ತಿದ್ದೇವೆ! ಸ್ವಾಮೀಜಿಗಳ ಆಶೀರ್ವಾದ ಬೇಕು, ಅವರ ಕೈಯಿಂದ ವರಪ್ರಸಾದ ಬೇಕು, ಅವರ ಹೆಸರಿನಿಂದ ಮಾನಸಮ್ಮಾನ,ಗೌರವಾದರಗಳು ಬೇಕು. ಆದರೆ ಅವರನ್ನು ರೂಪಿಸಿದ ತಂದೆತಾಯಿಗಳ ನೋವು ಕಾಣುವುದಿಲ್ಲವೇಕೆ? ನಾವು ಫಲ ತಿನ್ನುತ್ತೇವೆ, ಆದರೆ ಮರದ ಬೇರು ಒಣಗುತ್ತಿದೆಯೇ ಎಂದು ನೋಡಲು ತಿರುಗುವುದಿಲ್ಲವೇಕೆ?

ಈ ಕರುಳಿನ ತ್ಯಾಗದ ಹಿಂದಿರುವುದು ಮಾತಿಗೆ ಬಾರದ ಮಹಾಮೌನದ ಕಣ್ಣೀರಿನ ಗಾಥೆ -ಇದನ್ನು ಅರ್ಥ ಮಾಡಿಕೊಂಡವರು ಹೊಸದುರ್ಗದ ಕುಂಚಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು. ಅವರು ಆ ತಂದೆತಾಯಿಗಳ ಪರಿಸ್ಥಿತಿಯನ್ನು ಕಂಡು ಕೇವಲ ಕರುಣೆ ಪಡಲಿಲ್ಲ; ಅವರ ಹೃದಯವೇ ಕರಗಿತು. ಅಕ್ಕಮಹಾದೇವಿಯವರ “ನೊಂದವರ ನೋಯದವರೆತ್ತ ಬಲ್ಲರು” ಎಂಬ ವಚನವೇ ಅವರೊಳಗೆ ಜೀವಂತವಾಯಿತು.

ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬಹುದಾಗಿದ್ದವರು, ಆ ಸಂಭ್ರಮವನ್ನು ಬದಿಗಿಟ್ಟು ಸರಳವಾಗಿ ಆಚರಿಸಿಕೊಂಡರು. ಉಳಿದ ಹಣವನ್ನು ಸಂಗ್ರಹಿಸಿ ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಯರಗುಂಟೆಯಲ್ಲಿ ಒಂದು ಜಾಗ ಖರೀದಿಸಿದರು. ಅಲ್ಲಿ ಒಂದು ಸುಂದರ ಮನೆಯನ್ನು ಕಟ್ಟಿಸಿದರು. ಆ ಮನೆಗೆ “ಸಿದ್ದರಾಮ ಸಿಂಚನ” ಎಂದು ಹೆಸರು ಇಟ್ಟರು. ಅದು ಕೇವಲ ಮನೆಗೆ ಇಟ್ಟ ಹೆಸರು ಅಲ್ಲ; ಕೃತಜ್ಞತೆಗೆ ಕೊಟ್ಟ ರೂಪ.

ಮೇ 1—ಬುದ್ಧ ಪೌರ್ಣಿಮೆ, ವಿಶ್ವ ಕಾರ್ಮಿಕರ ದಿನ. ಐವತ್ತು ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆ ಮನೆಯನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಪೂರ್ವಾಶ್ರಮದ ತಂದೆತಾಯಿಗಳಿಗೆ ಹಸ್ತಾಂತರಿಸಲಾಯಿತು. ಆ ಕ್ಷಣದಲ್ಲಿ ಮನೆ ಮಾತ್ರ ಕೊಡಲಿಲ್ಲ—ಗೌರವ ನೀಡಲಾಯಿತು. ಆಶ್ರಯ ಮಾತ್ರ ಕೊಡಲಿಲ್ಲ—ಮರೆಯಾದ ತ್ಯಾಗಕ್ಕೆ ಮನ್ನಣೆ ನೀಡಲಾಯಿತು. ಕಣ್ಣೀರು ಮಾತ್ರ ಒರೆಸಲಿಲ್ಲ—ಸಮಾಜದ ಮನಸ್ಸನ್ನೇ ತೊಳೆಯಲಾಯಿತು.

ಒಬ್ಬ ತಾಯಿ ಮನೆ ಬಾಗಿಲಲ್ಲಿ ನಿಂತು ಕಣ್ಣೀರಿನಿಂದ ಒಳಗೆ ನೋಡಿರಬಹುದು. ಒಬ್ಬ ತಂದೆ ಗೋಡೆಯನ್ನು ಸ್ಪರ್ಶಿಸಿ ಮೌನವಾಗಿ ನಿಟ್ಟುಸಿರು ಬಿಟ್ಟಿರಬಹುದು. “ನಮ್ಮ ಮಗ ಸಮಾಜಕ್ಕೆ ಕೊಟ್ಟೆವು; ಸಮಾಜ ನಮ್ಮನ್ನು ಮರೆಯಲಿಲ್ಲ” ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿರಬಹುದು. ಆ ಕ್ಷಣದ ಮೌಲ್ಯವನ್ನು ಅಳೆಯಲು ಯಾವ ತಕ್ಕಡಿ ಸಾಲದು.

ಈ ಘಟನೆ ನಮಗೆ ದೊಡ್ಡ ಪಾಠ ಹೇಳುತ್ತದೆ. ಧರ್ಮವೆಂದರೆ ಕೇವಲ ಪೂಜೆ ಅಲ್ಲ. ಮಠ ಕಟ್ಟುವುದು ಮಾತ್ರ ಅಲ್ಲ. ಜಾತ್ರೆ, ಜಾತ್ರೋತ್ಸವ, ಘೋಷಣೆ, ಗೌರವ ಸಮಾರಂಭ ಮಾತ್ರ ಅಲ್ಲ. ನಿಜವಾದ ಧರ್ಮ ಎಂದರೆ ಮೌನವಾಗಿ ಅಳುವವರ ಬಳಿ ನಿಲ್ಲುವುದು. ತ್ಯಾಗ ಮಾಡಿದವರ ಕಣ್ಣೀರನ್ನು ಒರೆಸುವುದು. ಬೆಳಕನ್ನು ಕೊಟ್ಟವರ ಅಡಿಯ ಕತ್ತಲನ್ನು ಹೋಗಲಾಡಿಸುವುದು.

“ಸಿದ್ದರಾಮ ಸಿಂಚನ” ಕೇವಲ ಒಂದು ಮನೆ ಅಲ್ಲ. ಅದು ತಾಯಿಯ ತ್ಯಾಗದ ಕಣ್ಣೀರಕ್ಕೆ,ತಂದೆಯ ಭಕ್ತಿ ಶಕ್ತಿ ಶ್ರದ್ಧೆಯ ಮೌನವೃತಕ್ಕೆ ನೀಡಿದ ಸ್ಮಾರಕ. ಸಮಾಜದ ಮರೆವಿಗೆ ಹೊಡೆದ ಎಚ್ಚರಿಕೆಯ ಘಂಟೆ.

ದೀಪದ ಬೆಳಕನ್ನು ಎಲ್ಲರೂ ಕಾಣುತ್ತಾರೆ; ಆದರೆ ಅದರ ಕೆಳಗಿನ ಕತ್ತಲನ್ನು ಗುರುತಿಸಿ, ಅದನ್ನು ನೀಗಿಸಲು ಕೈಹಾಕುವವರೇ ನಿಜವಾದ ಮಹಾನುಭಾವರು. ಅಂತಹ ಕರುಣಾಮೂರ್ತಿ, ತ್ಯಾಗಶೀಲ, ಸ್ನೇಹಜೀವಿ—ಕುಂಚಟಿಗ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳವರು.

ಶರಣಶ್ರೀ ಹನುಮಂತಪ್ಪ ಮತ್ತು ಶರಣೆ ಸರೋಜಮ್ಮ ದಂಪತಿಗಳು, ‘ಬಾಗಿದ ತಲೆ—ಮುಗಿದ ಕೈ’ಯಾಗಿ ‘ಸಿದ್ಧರಾಮ ಸಿಂಚನ’ ಉನ್ನತಾಲಯದ ಮಹಾದ್ವಾರದಲ್ಲಿ ನಿಂತು “ಶರಣರ ಬರವೆಮಗೆ ಪ್ರಾಣಜೀವಾಳ”ವೆಂದು ಹೃದಯಪೂರ್ವಕವಾಗಿ ಸ್ವಾಗತಿಸಿದ ಕ್ಷಣದಲ್ಲಿ—ಸಾಕ್ಷಾತ್ ವಿಶ್ವಗುರು ಬಸವಣ್ಣನವರು ಧರ್ಮಪತ್ನಿ ನೀಲಾಂಬಿಕೆಯೊಂದಿಗೆ ನಿಂತು ಬರಮಾಡಿಕೊಂಡರೆಯೆಂಬ ಭಾವ ಮೂಡಿತು.
ಮಹಾಮನೆಯೊಳಗೆ ಜಗದ ಜಂಗಮರೊಂದಿಗೆ ಪಾದಾರ್ಪಣೆ ಮಾಡಿದ ನಾವು,’ಶಬ್ದದೊಳಗಣ ನಿಶ್ಯಬ್ಧ’ವಾಗಿ ಆ ದಿವ್ಯ ಕ್ಷಣಕ್ಕೆ ಸಾಕ್ಷಿಯಾದುದು—
ನಮ್ಮ ಅಹೋಭಾಗ್ಯ.

ಮನದ ಕೊನೆಯ ಮೊನೆಯ ಮಾತು—
ಇದು ಒಬ್ಬ ಮಠಾಧೀಶರ ಮಾತಾಪಿತಗಳ ತ್ಯಾಗದ ಕರಾಳ ಕಥೆಯಷ್ಟೇ ಅಲ್ಲ; ಸಮಾಜವು ಅರಿವಿನ ಬೆಳಕಿನಲ್ಲಿ ಹುಡುಕಿದರೆ ಅನೇಕ ಮೌನಗಾಥೆಗಳು ಹೊರಹೊಮ್ಮುತ್ತವೆ. ಬರೀಗಣ್ಣಿನಿಂದ ನೋಡಿಯು ನೋಡದಂತೆ ಮೌನವಾಗಿದ್ದರೆ ಕಣ್ಣೀರು ಕಾಣದು;
ಕುಂಚಾದ್ರಿ ಶಿಖರದ ಶಾಂತವೀರರ ವಿಶಾಲ ದೃಷ್ಟಿಯಿಂದ ನೋಡಿದಾಗಲೇ
ಅಗೋಚರ ಗಾಥೆಗಳು ಬೆಳಕಿಗೆ ಬರುತ್ತವೆ.

ಹರಗುರು ಚರಣ ಸೇವೆಯಲ್ಲಿ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(ಹರಪೀಠ) ಹರಿಹರ.

03/05/2026

ಕರುಳಿನ ತ್ಯಾಗಕ್ಕೆ “ಸಿದ್ಧರಾಮ ಸಿಂಚನ”

ದೀಪವು ತನ್ನ ಸುತ್ತಮುತ್ತಲಿನ ಕತ್ತಲನ್ನು ಓಡಿಸಿ ಬೆಳಕನ್ನು ಹರಡುತ್ತದೆ. ಮನೆಗೆ ಹೊಳಪು ಕೊಡುತ್ತದೆ, ಮಂದಿರಕ್ಕೆ ಮಂಗಳ ಕೊಡುತ್ತದೆ, ದಾರಿಗೆ ದಿಕ್ಕು ತೋರಿಸುತ್ತದೆ. ಆದರೆ ಅದೇ ದೀಪದ ಕೆಳಗೆ ಮಾತ್ರ ಕತ್ತಲು ಗಾಢವಾಗಿ ನೆಲೆಸಿರುತ್ತದೆ. ಈ ದೃಶ್ಯವನ್ನು ನೋಡಿದಾಗ ಮನಸ್ಸು ಒಂದೇ ಪ್ರಶ್ನೆ ಕೇಳುತ್ತದೆ—ಇತರರ ಬದುಕನ್ನು ಬೆಳಗಿಸುವವರ ಬದುಕಿನ ಅಡಿಯಲ್ಲಿರುವ ಕತ್ತಲನ್ನು ನೋಡುವವರು ಯಾರು?

ಈ ಪ್ರಶ್ನೆ ಕೇವಲ ತತ್ತ್ವಚಿಂತನೆಯಲ್ಲ; ಅದು ನಮ್ಮ ಸಮಾಜದ ಹೃದಯಕ್ಕೆ ಕೇಳಬೇಕಾದ ಪ್ರಶ್ನೆ. ಲೋಕಕ್ಕೆ ಮಾರ್ಗದರ್ಶನ ಮಾಡುವವರು, ಸಮಾಜಕ್ಕೆ ಸೇವೆ ಸಲ್ಲಿಸುವವರು, ಸಾವಿರಾರು ಮಂದಿಗೆ ಆಶ್ರಯವಾಗುವವರು—ಅವರ ಹಿಂದೆ ನಿಂತು ಮೌನವಾಗಿ ತ್ಯಾಗ ಮಾಡಿದವರನ್ನು ನಾವು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆ? ವಿಶೇಷವಾಗಿ ಸನ್ಯಾಸ ಮಾರ್ಗಕ್ಕೆ ತಮ್ಮ ಮಗನನ್ನು ಸಮರ್ಪಿಸಿದ ತಂದೆತಾಯಿಗಳ ಬದುಕು ಎಷ್ಟು ಮೌನ ಕಣ್ಣೀರಿನಿಂದ ತುಂಬಿರುತ್ತದೆ ಎಂಬುದನ್ನು ಯೋಚಿಸಿದರೆ ಹೃದಯ ಕಂಪಿಸುತ್ತದೆ.

ಒಬ್ಬ ಮಗನಿಗಾಗಿ ದೇವರಿಗೆ ಹರಕೆ ಹೊತ್ತು, ಒಂಬತ್ತು ತಿಂಗಳು ಹೆತ್ತು ಹೊತ್ತು, ಸಾಕಿ ಸಲುಹಿ, ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರೂ ಮಗನ ಹೊಟ್ಟೆಗೆ ಅನ್ನ ತುಂಬಿಸುವ ಪಾಲಕರು. ಮುಗಿಲಂತೆ ಪೋಷಿಸಿ, ಕಡಲಂತೆ ಪ್ರೀತಿಸಿ, ಕಡುಕಷ್ಟ ಬಂದರೂ ಎದೆಯೊಡ್ಡಿ ನಿಲ್ಲುವ ಮಾತಾಪಿತೃಗಳು. ತಮ್ಮ ಕನಸುಗಳನ್ನು ಮೌನವಾಗಿ ಸಮಾಧಿ ಮಾಡಿ, ಮಗನ ಕನಸುಗಳಿಗೆ ರೆಕ್ಕೆ ಕಟ್ಟಿ ಅದರಲ್ಲಿ ಖುಷಿಪಡುವ ಮಹಾತ್ಯಾಗಿಗಳು.

ಅಂಥ ಮಗನು ಸಮಾಜದ ಹಿತಕ್ಕಾಗಿ ಸನ್ಯಾಸಿಯಾಗುವ ಕ್ಷಣದಲ್ಲಿ ಅವರ ಕಣ್ಣಲ್ಲಿ ಕಣ್ಣೀರು ತುಂಬುತ್ತದೆ. ಆದರೆ ಅದು ದುಃಖದದ್ದಲ್ಲ—ಹೆಮ್ಮೆಯದು.

“ನಮ್ಮ ಮಗ ನಮ್ಮ ಮನೆಯವನಾಗಿರಲಿಲ್ಲ… ಸಮಾಜದವನಾದನು” ಎಂಬ ಗರ್ವದ ಕಣ್ಣೀರು.

ಆದರೆ ವರ್ಷಗಳು ಕಳೆಯುತ್ತವೆ. ಮಗನು ಸಮಾಜಕ್ಕೆ ಗುರುವಾಗುತ್ತಾನೆ. ಸಾವಿರಾರು ಜನರು ಅವನ ಆಶೀರ್ವಾದಕ್ಕಾಗಿ ಬರುತ್ತಾರೆ. ಅವನ ಮಾತಿಗೆ ಮೌಲ್ಯ, ಅವನ ಸೇವೆಗೆ ಗೌರವ, ಅವನ ಹೆಸರಿಗೆ ಕೀರ್ತಿ. ಆದರೆ ಅವನನ್ನು ಹೆತ್ತ ತಂದೆತಾಯಿಗಳು ಮಾತ್ರ ವೃದ್ಧಾಪ್ಯದಲ್ಲಿ ಆಶ್ರಯವಿಲ್ಲದೆ, ನೆಲೆಯಿಲ್ಲದೆ, ಮೌನವಾಗಿ ಬದುಕುತ್ತಿದ್ದರೆ—ಅದು ಕೇವಲ ಅವರ ನೋವಲ್ಲ, ಮಾನವತ್ವವೇ ತಲೆತಗ್ಗಿಸುವ ಸಮಾಜದ ನಾಚಿಕೆ.

ಬಾಗಲಕೋಟೆ -ಚಿತ್ರದುರ್ಗದ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಬದುಕು ಈ ಮೌನ ಸತ್ಯವನ್ನು ನೆನಪಿಸುತ್ತದೆ. ಇಪ್ಪತ್ತೈದು ವರ್ಷಗಳಿಂದ ಸನ್ಯಾಸ ಜೀವನದಲ್ಲಿ ಸಮಾಜಕ್ಕಾಗಿ ತೊಡಗಿಸಿಕೊಂಡಿರುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರು ಊರು ಸುತ್ತಿ ಜನಾಂಗವನ್ನು ಸಂಘಟಿಸಿದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ತಂದವರು. ಕಲ್ಲು ಒಡೆಯುವ ಕೈಗಳಿಗೆ ಆತ್ಮಗೌರವ ಕಲಿಸಿದವರು. ಬದುಕನ್ನು ಕಟ್ಟಿಕೊಳ್ಳುವ ದಾರಿ ತೋರಿಸಿದವರು.

ಆದರೆ ಇಂತಹ ಮಹನೀಯರ ಪೂರ್ವಾಶ್ರಮದ ತಂದೆತಾಯಿಗಳಾದ ಹನುಮಂತಪ್ಪ ಮತ್ತು ಸರೋಜಮ್ಮ ದಾವಣಗೆರೆಯಲ್ಲಿ ದಿನಗೂಲಿ ದುಡಿದು ಬದುಕುವ ಪರಿಸ್ಥಿತಿಯಲ್ಲಿ ಇದ್ದರು ಎಂಬುದು ಕೇಳಿದಾಗ ಮನಸ್ಸು ಕಲುಕುತ್ತದೆ. ಮಗಳ ಮದುವೆಗಾಗಿ ಇದ್ದ ಮನೆಯನ್ನು ಮಾರಿಬಿಟ್ಟು, ಕೊನೆಗೆ ಗುಡಿಸಲಿನಲ್ಲಿ ದಿನ ಕಳೆಯುವ ಸ್ಥಿತಿ ಎದುರಿಸಿದ್ದರು. ಸಮಾಜಕ್ಕೆ ಬೆಳಕಾದ ಮಗನ ತಾಯ್ತಂದೆಗಳು ತಾವೇ ಕತ್ತಲಿನಲ್ಲಿ ಬದುಕುತ್ತಿದ್ದರು.

ನಾವು ಎಷ್ಟೊಂದು ವಿಚಿತ್ರ ಸಮಾಜದಲ್ಲಿ ಬದುಕುತ್ತಿದ್ದೇವೆ! ಸ್ವಾಮೀಜಿಗಳ ಆಶೀರ್ವಾದ ಬೇಕು, ಅವರ ಕೈಯಿಂದ ವರಪ್ರಸಾದ ಬೇಕು, ಅವರ ಹೆಸರಿನಿಂದ ಮಾನಸಮ್ಮಾನ,ಗೌರವಾದರಗಳು ಬೇಕು. ಆದರೆ ಅವರನ್ನು ರೂಪಿಸಿದ ತಂದೆತಾಯಿಗಳ ನೋವು ಕಾಣುವುದಿಲ್ಲವೇಕೆ? ನಾವು ಫಲ ತಿನ್ನುತ್ತೇವೆ, ಆದರೆ ಮರದ ಬೇರು ಒಣಗುತ್ತಿದೆಯೇ ಎಂದು ನೋಡಲು ತಿರುಗುವುದಿಲ್ಲವೇಕೆ?

ಈ ಕರುಳಿನ ತ್ಯಾಗದ ಹಿಂದಿರುವುದು ಮಾತಿಗೆ ಬಾರದ ಮಹಾಮೌನದ ಕಣ್ಣೀರಿನ ಗಾಥೆ -ಇದನ್ನು ಅರ್ಥ ಮಾಡಿಕೊಂಡವರು ಹೊಸದುರ್ಗದ ಕುಂಚಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು. ಅವರು ಆ ತಂದೆತಾಯಿಗಳ ಪರಿಸ್ಥಿತಿಯನ್ನು ಕಂಡು ಕೇವಲ ಕರುಣೆ ಪಡಲಿಲ್ಲ; ಅವರ ಹೃದಯವೇ ಕರಗಿತು. ಅಕ್ಕಮಹಾದೇವಿಯವರ “ನೊಂದವರ ನೋಯದವರೆತ್ತ ಬಲ್ಲರು” ಎಂಬ ವಚನವೇ ಅವರೊಳಗೆ ಜೀವಂತವಾಯಿತು.

ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬಹುದಾಗಿದ್ದವರು, ಆ ಸಂಭ್ರಮವನ್ನು ಬದಿಗಿಟ್ಟು ಸರಳವಾಗಿ ಆಚರಿಸಿಕೊಂಡರು. ಉಳಿದ ಹಣವನ್ನು ಸಂಗ್ರಹಿಸಿ ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಯರಗುಂಟೆಯಲ್ಲಿ ಒಂದು ಜಾಗ ಖರೀದಿಸಿದರು. ಅಲ್ಲಿ ಒಂದು ಸುಂದರ ಮನೆಯನ್ನು ಕಟ್ಟಿಸಿದರು. ಆ ಮನೆಗೆ “ಸಿದ್ದರಾಮ ಸಿಂಚನ” ಎಂದು ಹೆಸರು ಇಟ್ಟರು. ಅದು ಕೇವಲ ಮನೆಗೆ ಇಟ್ಟ ಹೆಸರು ಅಲ್ಲ; ಕೃತಜ್ಞತೆಗೆ ಕೊಟ್ಟ ರೂಪ.

ಮೇ 1—ಬುದ್ಧ ಪೌರ್ಣಿಮೆ, ವಿಶ್ವ ಕಾರ್ಮಿಕರ ದಿನ. ಐವತ್ತು ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಾಗೂ ಹಲವು ಮಹನೀಯರ ನೇತೃತ್ವದಲ್ಲಿ ಆ ಸಿದ್ಧರಾಮ ಸಿಂಚನ ಕುಟೀರವನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಪೂರ್ವಾಶ್ರಮದ ತಂದೆತಾಯಿಗಳಿಗೆ ಹಸ್ತಾಂತರಿಸಲಾಯಿತು. ಆ ಕ್ಷಣದಲ್ಲಿ ಮನೆ ಮಾತ್ರ ಕೊಡಲಿಲ್ಲ—ಗೌರವ ನೀಡಲಾಯಿತು. ಆಶ್ರಯ ಮಾತ್ರ ಕೊಡಲಿಲ್ಲ—ಮರೆಯಾದ ತ್ಯಾಗಕ್ಕೆ ಮನ್ನಣೆ ನೀಡಲಾಯಿತು. ಕಣ್ಣೀರು ಮಾತ್ರ ಒರೆಸಲಿಲ್ಲ—ಸಮಾಜದ ಮನಸ್ಸನ್ನೇ ತೊಳೆಯಲಾಯಿತು.

ಒಬ್ಬ ತಾಯಿ ಮನೆ ಬಾಗಿಲಲ್ಲಿ ನಿಂತು ಕಣ್ಣೀರಿನಿಂದ ಒಳಗೆ ನೋಡಿರಬಹುದು. ಒಬ್ಬ ತಂದೆ ಗೋಡೆಯನ್ನು ಸ್ಪರ್ಶಿಸಿ ಮೌನವಾಗಿ ನಿಟ್ಟುಸಿರು ಬಿಟ್ಟಿರಬಹುದು. “ನಮ್ಮ ಮಗ ಸಮಾಜಕ್ಕೆ ಕೊಟ್ಟೆವು; ಸಮಾಜ ನಮ್ಮನ್ನು ಮರೆಯಲಿಲ್ಲ” ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿರಬಹುದು. ಆ ಕ್ಷಣದ ಮೌಲ್ಯವನ್ನು ಅಳೆಯಲು ಯಾವ ತಕ್ಕಡಿ ಸಾಲದು.

ಈ ಘಟನೆ ನಮಗೆ ದೊಡ್ಡ ಪಾಠ ಹೇಳುತ್ತದೆ. ಧರ್ಮವೆಂದರೆ ಕೇವಲ ಪೂಜೆ ಅಲ್ಲ. ಮಠ ಕಟ್ಟುವುದು ಮಾತ್ರ ಅಲ್ಲ. ಜಾತ್ರೆ, ಮಹೋತ್ಸವ,ಘೋಷಣೆ, ಗೌರವ ಸಮಾರಂಭ ಮಾತ್ರ ಅಲ್ಲ. ನಿಜವಾದ ಧರ್ಮ ಎಂದರೆ ಮೌನವಾಗಿ ಅಳುವವರ ಬಳಿ ನಿಲ್ಲುವುದು. ತ್ಯಾಗ ಮಾಡಿದವರ ಕಣ್ಣೀರನ್ನು ಒರೆಸುವುದು. ಬೆಳಕನ್ನು ಕೊಟ್ಟವರ ಅಡಿಯ ಕತ್ತಲನ್ನು ಹೋಗಲಾಡಿಸುವುದು.

“ಸಿದ್ದರಾಮ ಸಿಂಚನ” ಕೇವಲ ಒಂದು ಮನೆ ಅಲ್ಲ. ಅದು ತಾಯಿಯ ತ್ಯಾಗದ ಕಣ್ಣೀರಕ್ಕೆ,ತಂದೆಯ ಭಕ್ತಿ ಶಕ್ತಿ ಶ್ರದ್ಧೆಯ ಮೌನವ್ರತಕ್ಕೆ ನೀಡಿದ ಸ್ಮಾರಕ. ಸಮಾಜದ ಮರೆವಿಗೆ ಹೊಡೆದ ಎಚ್ಚರಿಕೆಯ ಘಂಟೆ.

ದೀಪದ ಬೆಳಕನ್ನು ಎಲ್ಲರೂ ಕಾಣುತ್ತಾರೆ; ಆದರೆ ಅದರ ಕೆಳಗಿನ ಕತ್ತಲನ್ನು ಗುರುತಿಸಿ, ಅದನ್ನು ನೀಗಿಸಲು ಕೈಹಾಕುವವರೇ ನಿಜವಾದ ಮಹಾನುಭಾವರು. ಅಂತಹ ಕರುಣಾಮೂರ್ತಿ, ತ್ಯಾಗಶೀಲ, ಸ್ನೇಹಜೀವಿ—ಕುಂಚಟಿಗ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳವರು.

ಶರಣಶ್ರೀ ಹನುಮಂತಪ್ಪ ಮತ್ತು ಶರಣೆ ಸರೋಜಮ್ಮ ದಂಪತಿಗಳು, ‘ಬಾಗಿದ ತಲೆ—ಮುಗಿದ ಕೈ’ಯಾಗಿ ‘ಸಿದ್ಧರಾಮ ಸಿಂಚನ’ ಉನ್ನತಾಲಯದ ಮಹಾದ್ವಾರದಲ್ಲಿ ನಿಂತು “ಶರಣರ ಬರವೆಮಗೆ ಪ್ರಾಣಜೀವಾಳ”ವೆಂದು ಹೃದಯಪೂರ್ವಕವಾಗಿ ಸ್ವಾಗತಿಸಿದ ಕ್ಷಣದಲ್ಲಿ—ಸಾಕ್ಷಾತ್ ವಿಶ್ವಗುರು ಬಸವಣ್ಣನವರು ಧರ್ಮಪತ್ನಿ ನೀಲಾಂಬಿಕೆಯೊಂದಿಗೆ ನಿಂತು ಬರಮಾಡಿಕೊಂಡರೆಯೆಂಬ ಭಾವ ಮೂಡಿತು.
ಮಹಾಮನೆಯೊಳಗೆ ಜಗದ ಜಂಗಮರೊಂದಿಗೆ ಪಾದಾರ್ಪಣೆ ಮಾಡಿದ ನಾವು,’ಶಬ್ದದೊಳಗಣ ನಿಶ್ಯಬ್ಧ’ವಾಗಿ ಆ ದಿವ್ಯ ಕ್ಷಣಕ್ಕೆ ಸಾಕ್ಷಿಯಾದುದು—ನಮ್ಮ ಅಹೋಭಾಗ್ಯ.

ಮನದ ಕೊನೆಯ ಮೊನೆಯ ಮಾತು—
ಇದು ಒಬ್ಬ ಮಠಾಧೀಶರ ಪಾಲಕರ ತ್ಯಾಗದ ಕರಾಳ ಕಥೆಯಷ್ಟೇ ಅಲ್ಲ; ಸಮಾಜವು ಅರಿವಿನ ಬೆಳಕಿನಲ್ಲಿ ಹುಡುಕಿದರೆ ಅನೇಕ ಮೌನಗಾಥೆಗಳು ಹೊರಹೊಮ್ಮುತ್ತವೆ. ಬರೀಗಣ್ಣಿನಿಂದ ನೋಡಿಯು ನೋಡದಂತೆ ಮೌನವಾಗಿದ್ದರೆ ಕಣ್ಣೀರು ಕಾಣದು;
ಕುಂಚಾದ್ರಿ ಶಿಖರದ ಶಾಂತವೀರರ ವಿಶಾಲ ದೃಷ್ಟಿಯಿಂದ ನೋಡಿದಾಗಲೇ ಅಗೋಚರ ಗಾಥೆಗಳು ಬೆಳಕಿಗೆ ಬರುತ್ತವೆ.

ಹರಗುರು ಚರಣ ಸೇವೆಯಲ್ಲಿ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(ಹರಪೀಠ) ಹರಿಹರ.

ರಾಂಪುರ ಹಾಗೂ ಚೆಳ್ಳಕೆರೆಯಿಂದ ಹರಿಹರ ಹರಪೀಠಕ್ಕೆ. ಆಗಮಿಸಿದ ಸದ್ಭಕ್ತರಿಗೆ ಹರಸಿ ಆಶೀರ್ವದಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.
02/05/2026

ರಾಂಪುರ ಹಾಗೂ ಚೆಳ್ಳಕೆರೆಯಿಂದ ಹರಿಹರ ಹರಪೀಠಕ್ಕೆ. ಆಗಮಿಸಿದ ಸದ್ಭಕ್ತರಿಗೆ ಹರಸಿ ಆಶೀರ್ವದಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.

01/05/2026
ಹರಿಹರ ಹರಪೀಠಕ್ಕೆ ಭೇಟಿ ನೀಡಿದ ವಿಜಯಪುರ ಹಾಗೂ ದಾವಣಗೆರೆಯಿಂದ ಸದ್ಭಕ್ತರಿಗೆ ಹರಸಿ ಆಶೀರ್ವದಿಸಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು.
30/04/2026

ಹರಿಹರ ಹರಪೀಠಕ್ಕೆ ಭೇಟಿ ನೀಡಿದ ವಿಜಯಪುರ ಹಾಗೂ ದಾವಣಗೆರೆಯಿಂದ ಸದ್ಭಕ್ತರಿಗೆ ಹರಸಿ ಆಶೀರ್ವದಿಸಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು.

30/04/2026
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರುನೊಂದಣಿ ಸಂಖ್ಯೆ : 432/94-95ಗೆ,ಶ್ರೀ ಪರಮೇಶ ಪಟ್ಟಣಶೆಟ್ಟಿಸಾ:ಹೊನ್ನಾಳಿ ,ಜಿ...
29/04/2026

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರು
ನೊಂದಣಿ ಸಂಖ್ಯೆ : 432/94-95

ಗೆ,
ಶ್ರೀ ಪರಮೇಶ ಪಟ್ಟಣಶೆಟ್ಟಿ
ಸಾ:ಹೊನ್ನಾಳಿ ,ಜಿಲ್ಲಾ ದಾವಣಗೆರೆ.

ವಿಷಯ:ರಾಜ್ಯ ಪ್ರದಾನ ಕಾರ್ಯದರ್ಶಿ ಹುದ್ದೆಯಿಂದ ಕಡಿಮೆಗೊಳಿಸುವ ಕುರಿತು.

ಈ ಮೇಲೆ ಕಾಣಿಸಿದ ವಿಷಯ ಕುರಿತು ಶ್ರೀ ಪರಮೇಶ ಪಟ್ಟಣಶೆಟ್ಟಿ ಸಾ:ಹೊನ್ನಾಳಿ,ಜಿಲ್ಲಾ ದಾವಣಗೆರೆ.ನಿಮ್ಮನ್ನು ಈ ಕೆಳಗಿನ ಕಾರಣದಿಂದ ಪ್ರದಾನ ಕಾರ್ಯದರ್ಶಿ ಹುದ್ದೆಯಿಂದ ಕಡಿಮೆಗೊಳಿಸಿ ಇಂದಿನಿಂದ ಈ ಸ್ಥಾನಕ್ಕೆ ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್ ಇವರನ್ನು ನೇಮಕ ಮಾಡಿರುತ್ತೇನೆ.ತಾವು ಸಂಘದ ಸಂಬಂಧಪಟ್ಟ ದಾಖಲೆಗಳನ್ನು ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್ ಇವರಿಗೆ ನೀಡಲು ನಿರ್ದೇಶನ ನೀಡಿರುತ್ತೇನೆ.

1)ರಾಜ್ಯ ಅಧ್ಯಕ್ಷರ ಅಪ್ಪಣೆ ಇಲ್ಲದೆ ಅಧ್ಯಕ್ಷರ ಹೆಸರನ್ನು ಬಳಕೆ ಮಾಡಿ ದಿನಾಂಕ:27.04.2026ರ ಸಭೆಗೆ ಹರಿಹರಕ್ಕೆ ಬರಲು ಎಲ್ಲರಿಗೂ ತಿಳಿಸಿದ್ದು.
2)ತಾವು ದಿನಾಂಕ:26.04.2026 ರಂದು ಪತ್ರಕಾಗೋಷ್ಠಿಯಲ್ಲಿ ಅಧ್ಯಕ್ಷರ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದು ಮನಸ್ಸಿಗೆ ನೋವು ಆಗುವಂತೆ ಶಬ್ಧ ಪ್ರಯೋಗ ಮಾಡಿದ್ದು.
3)ಅಧ್ಯಕ್ಷರು ಏನೇ ಆದೇಶ ಮಾಡಿದರು ತಾವು ವ್ಯತಿರಿಕ್ತ ಭಾವನೆಯೊಂದಿಗೆ ಅಧ್ಯಕ್ಷರ ಆದೇಶಕ್ಕೆ ಚ್ಯುತಿತರುವ ಹಿನ್ನಲೆಯಲ್ಲಿ ಸಂಘಟನೆಗೆ ಸಹಕರಿಸುವ ಮನೋಭಾವನೆ ಇಲ್ಲದಿರುವುದಕ್ಕೆ ಇಂದಿನಿಂದ ರಾಜ್ಯ ಪ್ರದಾನ ಕಾರ್ಯದರ್ಶಿ ಹುದ್ದೆಯಿಂದ ಕಡಿಮೆಗೊಳಿಸಿ ಈ ಜಾಗಕ್ಕೆ ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್ ಇವರನ್ನು ನೇಮಕ ಮಾಡಿರುತ್ತೇನೆ.
ವಂದನೆಗಳೊಂದಿಗೆ

ಸ್ಥಳ :ಕೊಪ್ಪಳ
ದಿನಾಂಕ:28.04.2026.

ಪ್ರತಿಗಳು
1. ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್ ಇವರ ನೇಮಕ ಆದೇಶ
2. ನೊಂದಣಾಧಿಕಾರಿಗಳು ಬೆಂಗಳೂರು.
3. ಸಂಘ ವ್ಯವಹರಿಸುವ ಎಲ್ಲಾ ಬ್ಯಾಂಕುಗಳಿಗೆ
4.ದಿನಪತ್ರಿಕಾ ಪ್ರಕಟಣೆಗಾಗಿ

(ಸಹಿ)
ಸೋಮನಗೌಡ ಎಮ್ ಪಾಟೀಲ್
ಅಧ್ಯಕ್ಷರು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರು

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರುನೊಂದಣಿ ಸಂಖ್ಯೆ : 432/94-95ಇವರಿಗೆ,ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್ಸಾ:...
29/04/2026

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರು
ನೊಂದಣಿ ಸಂಖ್ಯೆ : 432/94-95

ಇವರಿಗೆ,
ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್
ಸಾ:ಬುಡಪನಹಳ್ಳಿ,ಬ್ಯಾಡಗಿ ತಾಲ್ಲೂಕು,ಜಿಲ್ಲಾ ಹಾವೇರಿ.

ವಿಷಯ :- ರಾಜ್ಯ ಪ್ರದಾನ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಆದೇಶ ನೀಡುವ ಕುರಿತು.

ಈ ಮೇಲೆ ಕಾಣಿಸಿದ ವಿಷಯ ಕುರಿತು ಶ್ರೀ ಶಂಕರಗೌಡ ಚನ್ನಬಸನಗೌಡ ಪಾಟೀಲ್
ಸಾ:ಬ್ಯಾಡಗಿ ಜಿಲ್ಲಾ ಹಾವೇರಿ ನಿಮ್ಮನ್ನು ಈ ದಿನದಿಂದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರು ಇದರ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ನೀಡಿರುತ್ತೇನೆ.ತಾವುಗಳು
ಇಂದಿನಿಂದ ಸಕ್ರಿಯವಾಗಿ ಸಂಘದ ಚಟುವಟಿಕೆಯಲ್ಲಿ ರಾಜ್ಯ ಅಧ್ಯಕ್ಷರ ಜೊತೆಗೆ ಸಹಕರಿಸುತ್ತಾ ತಾವುಗಳು ಸಂಘಟನೆಯನ್ನು ಬಲಪಡಿಸಲು ವಿನಂತಿ ಮಾಡುತ್ತಾ ಈ ಆದೇಶವನ್ನು ನೀಡಿರುತ್ತೇನೆ.
ವಂದನೆಗಳೊಂದಿಗೆ

ಸ್ಥಳ :ಕೊಪ್ಪಳ
ದಿನಾಂಕ:28.04.2026.
ಪ್ರತಿಗಳು

1. ಶ್ರೀ ಪರಮೇಶ ಪಟ್ಟಣಶೆಟ್ಟಿ ಹೊನ್ನಾಳಿ,ಜಿಲ್ಲಾ ದಾವಣಗೆರೆ.
2. ನೊಂದಣಾಧಿಕಾರಿಗಳು ಬೆಂಗಳೂರು.
3. ಸಂಘ ವ್ಯವಹರಿಸುವ ಎಲ್ಲಾ ಬ್ಯಾಂಕುಗಳಿಗೆ

(ಸಹಿ)
ಸೋಮನಗೌಡ ಎಮ್ ಪಾಟೀಲ್
ಅಧ್ಯಕ್ಷರು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರು.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Community posts news and promotions. Your email address will not be used for any other purpose, and you can unsubscribe at any time.

Contact The Practice

Send a message to Panchamasali Community:

Share