Janapriya Hospital Hassan

Janapriya Hospital Hassan Our hospital is a 120 bedded multi-specialty hospital, providing state of the art care

With Abundant Blessings from Almighty, the relentless commitment by a team of professionals and with the support & encouragement by the people of Hassan and neighbouring districts “We started as an Orthopaedic & Trauma care centre, Today we are a Multispecialty Hospital with more than 100beds with many firsts to its Credit at Hassan like....
 First Hospital to have a full time Neuro Surgeon,
 Fi

rst Hospital with Cardiac Cath-Lab and Fulltime Cardiologist.
 First Hospital with C T. M.R.I & Central laboratory complex
under one roof.”


Dr.Abdul Basheer.V.K
Chairman & CEO
Janapriya hospital Hassan

ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ವಿಶ್ವಪಥ ಬಳಗ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದ...
17/07/2025

ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ವಿಶ್ವಪಥ ಬಳಗ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಜನಾರೋಗ್ಯ ಪರಿಸ್ಥಿತಿ, ಸಾರ್ವಜನಿಕ ವೈದ್ಯಕೀಯ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ದುಂಡು ಮೇಜಿನ ಸಭೆಯನ್ನು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಲಾಗಿತ್ತು.
ದುಂಡು ಮೇಜಿನ ಸಭೆಯಲ್ಲಿ ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿ ಕೆ ಅಬ್ದುಲ್ ಬಶೀರ್ ರವರು ಮಾತನಾಡುತ್ತಾ ಜನರು ಆರೋಗ್ಯದ ತಪಾಸಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಭೇಟಿ ನೀಡಿ ಬಿಪಿ, ಶುಗರ್, ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇಸಿಜಿ , ಕಿಡ್ನಿ ಪರೀಕ್ಷೆ ಮತ್ತು ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರವನ್ನು ಆಯೋಜಿಸಿ ಇತರೆ ಸಮಸ್ಯೆಗಳು ಕಂಡುಬಂದಲ್ಲಿ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಳಿಸಿಕೊಡಬೇಕು ಎಂದು ಮನವಿ ಮಾಡಿದರು. ಇದರ ಜೊತೆಯಲ್ಲಿ ಸಾರ್ವಜನಿಕರು ವೈದ್ಯರೊಂದಿಗೆ ಸಹಕರಿಸಬೇಕು.
ಇದೇ ಸಂದರ್ಭದಲ್ಲಿ ಹಿಮ್ಸ್ ನಿರ್ದೇಶಕರಾದ ಡಾ. ರಾಜಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಿಲ್, ಹಿಮ್ಸ್ ಮೆಡಿಕಲ್ ಸೂಪರ್ಡೆಂಟ್ ಡಾ.ರಾಘವೇಂದ್ರ ಪ್ರಸಾದ್, ವಿಶ್ವ ಪಥ ಮುಖ್ಯಸ್ಥರಾದ ಆರ್ ಪಿ ವೆಂಕಟೇಶ್ ಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹಮದ್, ನಿರ್ದೇಶಕರಾದ ಡಾ. ಸಾವಿತ್ರಿ, ಕೆ ಟಿ ಜಯಶ್ರೀ, ಜೈ ಭೀಮ್ ಅಧ್ಯಕ್ಷರಾದ ರಾಜೇಶ್, ಸಂದೇಶ್, ಧರ್ಮೇಶ್, ನವೀನ್, ಪೃಥ್ವಿ, ವಿಜಯಕುಮಾರ್ ಮತ್ತು ಹಾಸನ ಜಿಲ್ಲೆ ಅನೇಕ ಪ್ರಗತಿಪರ ಚಿಂತಕರು ವೈದ್ಯರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

17/07/2025

Patient Treatment Review Janapriya Multispeciality Hospital Hassan.

17/07/2025

Dr. Nayana S.P. MBBS D.N.B, Family Consultant Physician. Diabetes, Prevention, Treatment Details Video, Janapriya Multispeciality Hospital Hassan.

17/07/2025

Dr. Manoj Kumar B.K. MBBS MD.D.N.B, General Consultant Physician. BP, Diabetes, Hypertension Prevention, Treatment detail Video, Janapriya Multispeciality Hospital Hassan.

16/07/2025

ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಜನಸಾಗರ.....

ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್ ಕ್ರಾಸ್ ಭವನದಲ್ಲಿ ಮಣಿ ಪಾಲ್ ಆಸ್ಪತ್ರೆ, ಬೆಂಗಳೂರು, ಜನಪ್ರಿಯ ಆಸ್ಪತ್ರೆ, ಹಾಸನ, ಮಣಿ ಪಾಲ್ ಆಸ್ಪತ್ರೆ, ಬೆಂಗಳೂರು, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ, ಹಾಸನ, ಐಎಂಎ, ಹಾಸನ, ರೋಟರಿ ಸನ್ ರೈಸ್ ಹಾಸನ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ಸಂಬಂಧಿ ತಪಾಸಣಾ ಶಿಬಿರದಲ್ಲಿ ಜನ ಸಾಗರವೇ ಹರಿದು ಬಂದಿತು.

ಹಿಮ್ಸ್ ನಿರ್ದೇಶಕ ಡಾ.ಬಿ.ರಾಜಣ್ಣ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಹೃದಯಾಘಾತದ ಬಗ್ಗೆ ಮಾಧ್ಯಮ ಗಳಲ್ಲಿ ನೋಡುತ್ತಿದ್ದೇವೆ. ಈ ಬಗ್ಗೆ ನಾವುಗಳು ಅಂಕಿ-ಅಂಶ ಪಡೆದು ಒಂದು ವರದಿಯನ್ನು ಸಿದ್ಧಪಡಿಸಿದ್ದು, ಆಗಸ್ಟ್‌ನಿಂದ ಹೃದಯಾಘಾತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಿದರು.
ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ಇದುವರೆಗೂ ಜಿಲ್ಲೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. 40 ರಿಂದ 45 ವರ್ಷ ವಯಸ್ಸಿನವರು ಹಾಗೂ 19 ರಿಂದ 21 ವರ್ಷ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕದ ವಿಚಾರವಾಗಿದೆ ಎಂದರು. ಆಟೋ, ಟ್ಯಾಕ್ಸಿ ಚಾಲಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಧೂಮಪಾನ, ಮದ್ಯಪಾನ, ಅತಿಯಾದ ದಪ್ಪ ಇರುವವರಿಗೆ ಖಾಯಿಲೆಗಳು ಬಳುವಳಿಯಾಗಿ ಬರುತ್ತವೆ ಎಂದು ಹೇಳಿದರು.

ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ.ಅಬ್ದುಲ್ ಬಷೀರ್ ಮಾತನಾಡಿ,
ಕಳೆದ ಒಂದೂವರೆ ತಿಂಗಳಿನಿಂದ ಹಾರ್ಟ್ ಅಟ್ಯಾಕ್ ಆಗುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಕಾಲ ಕಾಲಕ್ಕೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಪ್ರತಿನಿತ್ಯ ಕೆಲ ಸಮಯ ಯೋಗಕ್ಕಾಗಿ ಮೀಸಲಿಡಬೇಕು. ನಮ್ಮ ಹೃದಯ ಮಿಡಿತವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಲೋಕೇಶ್, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಹೆಚ್.ಪಿ.ಮೋಹನ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀರಂಗ ಡಾಂಗೆ, ರೋಟರಿ ಕ್ಲಬ್ ಆಫ್ ಸನ್ ರೈಸ್ ಕಾರ್ಯದರ್ಶಿ ಯೋಗೀಶ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹ್ಮದ್, ಖಜಾಂಚಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಬಿ.ಆರ್.ಉದಯ ಕುಮಾರ್, ಕೆ.ಟಿ. ಜಯಶ್ರೀ , ಜೈಪ್ರಕಾಶ್, ಗಿರೀಶ್, ಭೀಮ್ ರಾಜ್, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 350 ರಿಂದ 400ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು, 200ಕ್ಕೂ ಹೆಚ್ಚು ಜನರಿಗೆ ಇಸಿಜಿ ಪರೀಕ್ಷೆಯನ್ನು ಮಾಡಲಾಯಿತು. ಪಾಲ್ಗೊಂಡ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ನೀಡಲಾಯಿತು. ಶಿಬಿರದಲ್ಲಿ ಜನಪ್ರಿಯ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಮಣಿಪಾಲ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

16/07/2025
ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಜನಸಾಗರ.....ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್ ಕ್ರಾಸ್ ಭವನದಲ್ಲಿ ಮಣಿ ಪಾಲ್ ಆಸ್ಪತ್ರೆ, ಬೆಂಗಳೂರು, ಜ...
14/07/2025

ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಜನಸಾಗರ.....

ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್ ಕ್ರಾಸ್ ಭವನದಲ್ಲಿ ಮಣಿ ಪಾಲ್ ಆಸ್ಪತ್ರೆ, ಬೆಂಗಳೂರು, ಜನಪ್ರಿಯ ಆಸ್ಪತ್ರೆ, ಹಾಸನ, ಮಣಿ ಪಾಲ್ ಆಸ್ಪತ್ರೆ, ಬೆಂಗಳೂರು, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ, ಹಾಸನ, ಐಎಂಎ, ಹಾಸನ, ರೋಟರಿ ಸನ್ ರೈಸ್ ಹಾಸನ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ಸಂಬಂಧಿ ತಪಾಸಣಾ ಶಿಬಿರದಲ್ಲಿ ಜನ ಸಾಗರವೇ ಹರಿದು ಬಂದಿತು.

ಹಿಮ್ಸ್ ನಿರ್ದೇಶಕ ಡಾ.ಬಿ.ರಾಜಣ್ಣ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಹೃದಯಾಘಾತದ ಬಗ್ಗೆ ಮಾಧ್ಯಮ ಗಳಲ್ಲಿ ನೋಡುತ್ತಿದ್ದೇವೆ. ಈ ಬಗ್ಗೆ ನಾವುಗಳು ಅಂಕಿ-ಅಂಶ ಪಡೆದು ಒಂದು ವರದಿಯನ್ನು ಸಿದ್ಧಪಡಿಸಿದ್ದು, ಆಗಸ್ಟ್‌ನಿಂದ ಹೃದಯಾಘಾತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಿದರು.
ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ಇದುವರೆಗೂ ಜಿಲ್ಲೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. 40 ರಿಂದ 45 ವರ್ಷ ವಯಸ್ಸಿನವರು ಹಾಗೂ 19 ರಿಂದ 21 ವರ್ಷ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕದ ವಿಚಾರವಾಗಿದೆ ಎಂದರು. ಆಟೋ, ಟ್ಯಾಕ್ಸಿ ಚಾಲಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಧೂಮಪಾನ, ಮದ್ಯಪಾನ, ಅತಿಯಾದ ದಪ್ಪ ಇರುವವರಿಗೆ ಖಾಯಿಲೆಗಳು ಬಳುವಳಿಯಾಗಿ ಬರುತ್ತವೆ ಎಂದು ಹೇಳಿದರು.

ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ.ಅಬ್ದುಲ್ ಬಷೀರ್ ಮಾತನಾಡಿ,
ಕಳೆದ ಒಂದೂವರೆ ತಿಂಗಳಿನಿಂದ ಹಾರ್ಟ್ ಅಟ್ಯಾಕ್ ಆಗುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಕಾಲ ಕಾಲಕ್ಕೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಪ್ರತಿನಿತ್ಯ ಕೆಲ ಸಮಯ ಯೋಗಕ್ಕಾಗಿ ಮೀಸಲಿಡಬೇಕು. ನಮ್ಮ ಹೃದಯ ಮಿಡಿತವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಲೋಕೇಶ್, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಹೆಚ್.ಪಿ.ಮೋಹನ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀರಂಗ ಡಾಂಗೆ, ರೋಟರಿ ಕ್ಲಬ್ ಆಫ್ ಸನ್ ರೈಸ್ ಕಾರ್ಯದರ್ಶಿ ಯೋಗೀಶ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹ್ಮದ್, ಖಜಾಂಚಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಬಿ.ಆರ್.ಉದಯ ಕುಮಾರ್, ಕೆ.ಟಿ. ಜಯಶ್ರೀ , ಜೈಪ್ರಕಾಶ್, ಗಿರೀಶ್, ಭೀಮ್ ರಾಜ್, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 350 ರಿಂದ 400ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು, 200ಕ್ಕೂ ಹೆಚ್ಚು ಜನರಿಗೆ ಇಸಿಜಿ ಪರೀಕ್ಷೆಯನ್ನು ಮಾಡಲಾಯಿತು. ಪಾಲ್ಗೊಂಡ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ನೀಡಲಾಯಿತು. ಶಿಬಿರದಲ್ಲಿ ಜನಪ್ರಿಯ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಮಣಿಪಾಲ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಹಾಸನ ರೋಟರಿ ಸನ್ ರೈಸ್ 2025-26 ನೇ ಸಾಲಿನ ನೂತನ ಸಮಿತಿಯ ಇನ್ಸ್ಟಾಲೇಶನ್ ಸಮಾರಂಭವನ್ನು  ನಗರದ ನಂದಗೋಕುಲ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾ...
14/07/2025

ಹಾಸನ ರೋಟರಿ ಸನ್ ರೈಸ್ 2025-26 ನೇ ಸಾಲಿನ ನೂತನ ಸಮಿತಿಯ ಇನ್ಸ್ಟಾಲೇಶನ್ ಸಮಾರಂಭವನ್ನು ನಗರದ ನಂದಗೋಕುಲ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಅಸಿಸ್ಟೆಂಟ್ ಗವರ್ನರ್ ರೋಟೆರಿಯನ್ ಪ್ರದೀಪ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಗಣನೀಯವಾಗಿ ಸೇವಾ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ.ವಿಕೆ ಅಬ್ದುಲ್ ಬಶೀರ್ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಗವರ್ನರ್ ರೊಟೇರಿಯನ್ ಮಂಜುನಾಥ್, ಅಧ್ಯಕ್ಷರಾದ ಹೆಚ್ ಡಿ ವಜ್ರ ಕುಮಾರ್, ಕಾರ್ಯದರ್ಶಿ ಕೆಎಸ್ ಯೋಗೇಶ್, ಖಜಾಂಚಿ ಗವಿಗೌಡ ಮತ್ತು ಮುಂತಾದ ರೋಟೇರಿಯನ್ಸ್ ಹಾಗೂ ಹಾಸನದ ನಾಗರಿಕರು ಭಾಗವಹಿಸಿದ್ದರು.

ಜಿಲ್ಲಾಡಳಿತ ಹಾಸನ, ಜಿಲ್ಲಾ ಪಂಚಾಯತ್ ಹಾಸನ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು  ...
14/07/2025

ಜಿಲ್ಲಾಡಳಿತ ಹಾಸನ, ಜಿಲ್ಲಾ ಪಂಚಾಯತ್ ಹಾಸನ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯವನ್ನು ಗೆಲ್ಲೋಣ ಎಂಬ ವಿಶೇಷ ಪರಿಕಲ್ಪನೆಯಲ್ಲಿ ವಾಲ್ಕಥ್ತ್ ನ್ - 2025 ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯದ ಶ್ರೀಮತಿ ಲತಾ ಕುಮಾರಿಯವರು ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಎಸ್ಪಿ ಮಹಮ್ಮದ್ ಸುಜಿತ, ಜಿಪಂ ಸಿಇಓ ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ ಗೀತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನೀಲ್ ಕುಮಾರ್, ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿ ಕೆ ಅಬ್ದುಲ್ ಬಶೀರ್, ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಚ್ ಪಿ ಮೋಹನ್, ಐಎಂಎ ಅಧ್ಯಕ್ಷರಾದ ಡಾ. ಶ್ರೀರಂಗದಂಗೆ, ವೈದ್ಯರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು ಮತ್ತು ಜನಪ್ರಿಯ ಆಸ್ಪತ್ರೆಯ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಹಾಸನ ನಗರದ ಆದಿಚುಂಚನಗಿರಿ ಮಠದಲ್ಲಿ ನಡೆಯುತ್ತಿರುವ ಗುರುವಂದನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಗುರುಗಳಾದ ಶ್ರೀ ಶ...
12/07/2025

ಹಾಸನ ನಗರದ ಆದಿಚುಂಚನಗಿರಿ ಮಠದಲ್ಲಿ ನಡೆಯುತ್ತಿರುವ ಗುರುವಂದನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿಕೆ ಅಬ್ದುಲ್ ಬಶೀರ್ ಆಸ್ಪತ್ರೆ ಆಡಳಿತ ಅಧಿಕಾರಿ ಮೊಹಮ್ಮದ್ ಕಿಸಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.....

12/02/2025

ತರಳಬಾಳು ಹುಣ್ಣಿಮೆ ಮಹೋತ್ಸವ -- 2025, ಭರಮಸಾಗರ

ಶ್ರೀ ಮದುಜ್ಜಯಿನಿಸದ್ಧರ್ಮಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ ರವರು ಆಯೋಜಿಸಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ 2025 ಭರಮಸಾಗರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಮತ್ತು ಕೌಶಲಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್ ಮಂಜುನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿ.ಕೆ ಅಬ್ದುಲ್ ಬಶೀರ್ ರವರು ಭಾಗವಹಿಸಿ ಮಾತನಾಡುತ್ತಾ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮತ್ತು ಎಲ್ಲಾ ಸಮಾಜದವರು ಒಂದು ಎಂಬಂತೆ ಬಿಂಬಿಸುವ ಈ ಸುಂದರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಪರಮ ಪೂಜ್ಯ ಸ್ವಾಮೀಜಿ ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳಿಗೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಪರಮಪೂಜ್ಯರು ಎಲ್ಲರನ್ನೂ ಸಮಾನವಾಗಿ ಕಾಣುವ ಬಡವ ಬಲ್ಲಿದರೆಂಬ ಭೇದಭಾವ ಕಾಣದ ಮತ್ತು ಅವರ ಶಿಸ್ತು ಬದ್ಧ ಜೀವನ ಹಾಗೂ ಪ್ರತಿ ಸೋಮವಾರ ಮಠದಲ್ಲಿ ನ್ಯಾಯಾಲಯವನ್ನು ಸ್ಥಾಪನೆ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಪರಿಹಾರ ನೀಡುವ ಪರಮಪೂಜ್ಯರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಮತ್ತು ಆರೋಗ್ಯ, ಶಿಕ್ಷಣ, ಪರಿಸರ, ಸಾಹಿತ್ಯ, ಕಲೆ ಮತ್ತು ಹಾಗೂ ಇನ್ನಿತರೆ ಕ್ಷೇತ್ರಗಳಿಗೆ ಪರಮಪೂಜ್ಯರು ನೀಡುತ್ತಿರುವ ಕೊಡುಗೆಗೆ ಭಕ್ತಿ ಪೂರ್ವಕ ಧನ್ಯವಾದಗಳು ಸಲ್ಲಿಸಿದರು, ನಂತರ ಆರೋಗ್ಯ ಮತ್ತು ಸಮಾಜದ ಬಗ್ಗೆ ಮಾತನಾಡಿದ ಅವರು ಉತ್ತಮ ಸಮಾಜ ನಿರ್ಮಿಸಲು ಕುಟುಂಬದ ಆರೋಗ್ಯ ಮತ್ತು ಶಿಕ್ಷಣ ತುಂಬಾನೇ ಮುಖ್ಯ, ರಾಜ್ಯದ, ರಾಷ್ಟ್ರದ ಉನ್ನತಿಗೆ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯವೇ ಮುಖ್ಯ, ಆದ್ದರಿಂದ ಎಲ್ಲರೂ ಆರೋಗ್ಯ ಸಮಾಜವನ್ನು ನಿರ್ಮಿಸಲು ಪಣತೊಡಬೇಕು. ಸಾಮಾನ್ಯ ಕಾಯಿಲೆಯಾದ ಬಿಪಿ ಮತ್ತು ಶುಗರ್ ಪರೀಕ್ಷೆ ಮಾಡಿಸಲು ಉದಾಸಿನ ಮಾಡಬೇಡಿ, ಪರಮಪೂಜ್ಯರ ಹುಟ್ಟುಹಬ್ಬವಾದ ಜೂನ್ 16 ರಂದು ಪ್ರತಿ ವರ್ಷ ಎಲ್ಲರೂ ಸ್ಥಳೀಯ ವೈದ್ಯರನ್ನು ಭೇಟಿ ಮಾಡಿ ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ಮಾಡಿಸಿ ಏಕೆಂದರೆ ಇವೆರಡೂ ಕಾಯಿಲೆಯಿಂದ ನಮಗೆ ತುಂಬಾ ಆರೋಗ್ಯದ ಸಮಸ್ಯೆಗಳನ್ನು ಕಾಣಿಸಿಕೊಳ್ಳಬಹುದು. ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಪೂಜ್ಯರಿಗೆ ಧನ್ಯವಾದಗಳು.

ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ನೀಡಿರುವ ಸೇವೆಯನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಡಾ. ವಿ ಕೆ ಅಬ್ದುಲ್ ಬಶೀರ್ ರವರನ್ನು ಪರಮಪೂಜ್ಯ ಜಗದ್ಗುರುಗಳು ಗೌರವಿಸಿದರು.

Address

Hassan

Alerts

Be the first to know and let us send you an email when Janapriya Hospital Hassan posts news and promotions. Your email address will not be used for any other purpose, and you can unsubscribe at any time.

Contact The Practice

Send a message to Janapriya Hospital Hassan:

Share

Category