
17/07/2025
ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ವಿಶ್ವಪಥ ಬಳಗ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಜನಾರೋಗ್ಯ ಪರಿಸ್ಥಿತಿ, ಸಾರ್ವಜನಿಕ ವೈದ್ಯಕೀಯ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ದುಂಡು ಮೇಜಿನ ಸಭೆಯನ್ನು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಲಾಗಿತ್ತು.
ದುಂಡು ಮೇಜಿನ ಸಭೆಯಲ್ಲಿ ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿ ಕೆ ಅಬ್ದುಲ್ ಬಶೀರ್ ರವರು ಮಾತನಾಡುತ್ತಾ ಜನರು ಆರೋಗ್ಯದ ತಪಾಸಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಭೇಟಿ ನೀಡಿ ಬಿಪಿ, ಶುಗರ್, ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇಸಿಜಿ , ಕಿಡ್ನಿ ಪರೀಕ್ಷೆ ಮತ್ತು ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರವನ್ನು ಆಯೋಜಿಸಿ ಇತರೆ ಸಮಸ್ಯೆಗಳು ಕಂಡುಬಂದಲ್ಲಿ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಳಿಸಿಕೊಡಬೇಕು ಎಂದು ಮನವಿ ಮಾಡಿದರು. ಇದರ ಜೊತೆಯಲ್ಲಿ ಸಾರ್ವಜನಿಕರು ವೈದ್ಯರೊಂದಿಗೆ ಸಹಕರಿಸಬೇಕು.
ಇದೇ ಸಂದರ್ಭದಲ್ಲಿ ಹಿಮ್ಸ್ ನಿರ್ದೇಶಕರಾದ ಡಾ. ರಾಜಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಿಲ್, ಹಿಮ್ಸ್ ಮೆಡಿಕಲ್ ಸೂಪರ್ಡೆಂಟ್ ಡಾ.ರಾಘವೇಂದ್ರ ಪ್ರಸಾದ್, ವಿಶ್ವ ಪಥ ಮುಖ್ಯಸ್ಥರಾದ ಆರ್ ಪಿ ವೆಂಕಟೇಶ್ ಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹಮದ್, ನಿರ್ದೇಶಕರಾದ ಡಾ. ಸಾವಿತ್ರಿ, ಕೆ ಟಿ ಜಯಶ್ರೀ, ಜೈ ಭೀಮ್ ಅಧ್ಯಕ್ಷರಾದ ರಾಜೇಶ್, ಸಂದೇಶ್, ಧರ್ಮೇಶ್, ನವೀನ್, ಪೃಥ್ವಿ, ವಿಜಯಕುಮಾರ್ ಮತ್ತು ಹಾಸನ ಜಿಲ್ಲೆ ಅನೇಕ ಪ್ರಗತಿಪರ ಚಿಂತಕರು ವೈದ್ಯರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.