Sri Matha Hearing Aid Centre

Sri Matha Hearing Aid Centre Hearing Aid centre

09/05/2019

ನಾವೇ ತಂದುಕೊಂಡ ಕಿವುಡುತನಕ್ಕೆ ಕಾರಣಗಳೇನು?

ಕಿವುಡುತನಕ್ಕೆ ಕಾರಣಗಳನ್ನು ನಾವೇ ತಂದುಕೊಂಡಿದ್ದೇವೆ. ಕಿವಿಗೆ ಅಪ್ಪಳಿಸಯವ ಸಂಗೀತ ನಿಮ್ಮನ್ನು ರಾಕಿಂಗ್ ಆಗಿರಿಸಬಹುದು ಆದರೆ ಕಿವುಡುತನಕ್ಕೆ ಕಾರಣವಾಗಬಹುದು! ನೃತ್ಯಗಾರ ಅಮಾನ್ ಕಿವಿ ಕೇಳಿದಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ. ಇನ್ನೂ 25ರ ಹರೆಯದ ಈ ಡ್ಯಾನ್ಸರ್ ಸಂಗೀತ ಲಯದ ವ್ಯತ್ಯಾಸವನ್ನು ಕೇಳುವುದು ಸಾಧ್ಯವಾಗದೇ ತನ್ನ ಜೀವನವೇ ಮುಗಿದು ಹೋಯಿತು ಎಂಬ ಸ್ಥಿತಿಗೆ ಬಂದು ತಲುಪಿದ್ದ.
ಡ್ಯಾನ್ಸ್ ಸ್ಟೆಪ್ ಗಳ ಅಭ್ಯಾಸಕ್ಕಾಗಿ ಅರ್ಧ ದಿನಕ್ಕೂ ಹೆಚ್ಚು ಹೊತ್ತು ಕಿವಿಗಡಚಿಕ್ಕುವ ಸಂಗೀತ ಆಲಿಸುತ್ತಾ ಆತ ಇರುವುದರಿಂದಾಗಿ ಆತನ ಕಿವಿಗಳ ನರಗಳ ಮೇಲೆ ಪರಿಣಾಮ ಉಂಟಾಗಿದೆ ಎಂಬುದನ್ನು ವೈದ್ಯರು ಕಂಡುಕೊಂಡರು. ಇಂಥ ನೂರಾರು ಘಟನೆಗಳನ್ನು ಉದಾಹರಣೆಯಾಗಿ ನೀಡಬಹುದು.
ಅಮಾನ್ ಶ್ರವಣ ಶಕ್ತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈಗ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಆತ ಗಟ್ಟಿ ಧ್ವನಿಯ ಸಂಗೀತ ಆಲಿಸುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಹಿತವಾಗಿರಬೇಕಾಗಿದ್ದ ಸಂಗೀತ ಇಂದು, ಶಬ್ದ ಮಾಲಿನ್ಯ ಏಜೆಂಟ್ ಆಗಿ ಬದಲಾಗುತ್ತಿದೆ, ತೀರಾ ದೊಡ್ಡ ಧ್ವನಿಯಲ್ಲಿದ್ದರೆ, ಅದು ಶ್ರವಣ ಶಕ್ತಿಯ ಮೇಲೆಯೇ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಅಧಿಕ ತೀವ್ರತೆಯ ಸಂಗೀತವು ಕಿವಿಯ ನರಗಳನ್ನು ದುರ್ಬಲಗೊಳಿಸಬಹುದು ಮತ್ತು ಸಾಮಾನ್ಯವಾಗಿ ಕಿವಿ ತಮಟೆ ಮೇಲೆ ಪರಿಣಾಮ ಬೀರುತ್ತದೆ," ಎಂದು ಡಾ. ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಇಎನ್ ಟಿ ವಿಭಾಗದ ಮುಖ್ಯಸ್ಥ ಇಮ್ಯಾನುವೆಲ್ ಜೇಮ್ಸ್ ಹೇಳುತ್ತಾರೆ.

ನಮ್ಮ ಕಿವಿ ಸಾಮರ್ಥ್ಯ ಎಷ್ಟು?
ಏಕಾಏಕಿ ಕಿವಿಗಡಚಿಕ್ಕುವ ಶಬ್ದವಾದಾಗ ಕಿವಿ ತಮಟೆಯ ಮೇಲೆ ಪರಿಣಾಮವಾಗುತ್ತದೆ. ಬ್ರಿಟಿಷ್ ಸ್ಟಾಂಡರ್ಡ್ ಪ್ರಕಾರ, 80-90 ಡೆಸಿಬಲ್‍ಗಳಷ್ಟು ಶಬ್ದವನ್ನು 8 ಗಂಟೆಗಳ ಕಾಲ ಆಲಿಸುವುದು ಕಿವಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ, ಆ ಮಿತಿಗಿಂತ ಜಾಸ್ತಿಯಾಗಿ ಸಂಗೀತವನ್ನು ನುಡಿಸಿದರೆ, ಆಗ ಅದು ಕಿವಿಗಳಿಗೆ ಗಂಭೀರ.

ಯಾರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಅಧಿಕ ಧ್ವನಿಯ ಸಂಗೀತಕ್ಕೆ ದೀರ್ಘ ಕಾಲ ತೆರೆದುಕೊಳ್ಳುವ ಕಲಾವಿದರು ಕೂಡಾ ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. "ಸಶಸ್ತ್ರ ಪಡೆಗಳಲ್ಲಿ ಎಂಜಿನ್ ರೂಂ ನಾವಿಕರಾಗಿ ಕೆಲಸ ಮಾಡುವ ವ್ಯಕ್ತಿಗಳೂ ಅತಿಯಾದ ಸಮಯ ಗಟ್ಟಿ ಶಬ್ದಕ್ಕೆ ತುತ್ತಾಗುತ್ತಾರೆ. ಹದಿಹರೆಯದವರು ಗಟ್ಟಿ ಧ್ವನಿಯಲ್ಲಿ ಸಂಗೀತ ಆಲಿಸುವುದರಿಂದ ಬಾಧಿತರಾಗುತ್ತಾರೆ.

ಇಂಜಿನಿಯರ್ ಕತೆ :--
29ರ ರೆಹಮಾನ್ (ಹೆಸರು ಬದಲಿಸಲಾಗಿದೆ), ಒಬ್ಬ ಧ್ವನಿ ಎಂಜಿನಿಯರ್ ಆಗಿದ್ದು, ಇವರಿಗೆ ಉದ್ಯೋಗವೇ ಧ್ವನಿಗ್ರಹಣ ಶಕ್ತಿ ಕಳೆದುಕೊಳ್ಳುವಂತೆ ಮಾಡಿತು. ಮಾಧುರ್ಯಕ್ಕಾಗಿ ಪರಿಪೂರ್ಣ ಧ್ವನಿಯನ್ನು ವಿನ್ಯಾಸಗೊಳಿಸಲು ಇವರು ಕಷ್ಟಪಟ್ಟು ದುಡಿಯುತ್ತಿದ್ದಾಗ, ದೀರ್ಘಕಾಲ ಗಟ್ಟಿಧ್ವನಿಯ ಸಂಗೀತಕ್ಕೆ ತಮ್ಮನ್ನು ಒಡ್ಡಿಕೊಳ್ಳಬೇಕಾಗಿತ್ತು. ಇದು ಕೆಲವು ದಿನಗಳ ಕಾಲ ಆಲಿಸುವ ಶಕ್ತಿಯನ್ನೇ ದೂರತಳ್ಳಿತು. ಆದಾಗ್ಯೂ, ಚಿಕಿತ್ಸೆಯ ಬಳಿಕ ಗುಣವಾದರೂ ಕಿವಿಯಲ್ಲಿ ಒಂದು ಝೇಂಕಾರ ಕೇಳಿಸುವುದು ಮುಂದುವರಿದಿದೆ.

ಮುಚ್ಚಿದ ಸ್ಥಳದದಲ್ಲಿನ ಅಬ್ಬರದ ಸಂಗೀತ ಕಿವಿಗಳಿಗೆ ತೀರಾ ಅಪಾಯಕಾರಿ. ದೀರ್ಘಕಾಲ ಏರುಧ್ವನಿಯ ಸಂಗೀತ ಆಲಿಸುವುದರಿಂದ ಕಿವಿಯಿಂದ ಮಿದುಳಿಗೆ ಸಂಕೇತಗಳನ್ನು ರವಾನಿಸುವ ನರ ತಂತುಗಳ ಕವಚವು ಹರಿದುಹೋಗಬಹುದು. ಇದು ಒಂದು ಅಥವಾ ಎರಡೂ ಕಿವಿಗಳ ಆಲಿಸುವ ಸಾಮಥ್ರ್ಯದ ಕುಂಠಿತಕ್ಕೆ ಕಾರಣವಾಗಬಹುದು.

ಹೆಡ್ ಫೋನ್ ತಂದಿಡುವ ಅಪಾಯ :--
ಗಟ್ಟಿಧ್ವನಿಯಲ್ಲಿ ಸಂಗೀತ ಆಲಿಸಲು ಹೆಡ್ ಫೋನ್ ಉಪಯೋಗಿಸಿದರೆ, ಈ ಅಪಾಯವು ಹೆಚ್ಚಿರುತ್ತದೆ. ವೈದ್ಯಕೀಯವಾಗಿ, 110 ಡೆಸಿಬಲ್‍ಗಳಿಗಿಂತ ಹೆಚ್ಚಿನ ಯಾವುದೇ ಶಬ್ದವು ಮಾನವ ಕಿವಿಗೆ ಅಸುರಕ್ಷಿತವಾಗಿರುತ್ತದೆ" ಎಂದು ಡಾ.ಆರ್.ಎಸ್.ಅಡಿಗ ಹೇಳುತ್ತಾರೆ.

ಹಾರ್ಮೋನು ಬದಲಾವಣೆ :--
ಗರ್ಭಿಣಿಯರು ಮತ್ತು 30 ರಿಂದ 40 ವರ್ಷದ ನಡುವಿನ ವ್ಯಕ್ತಿಗಳು ತಮ್ಮ ದೇಹದ ಹಾರ್ಮೋನುಗಳ ಬದಲಾವಣೆಯಿಂದ ಕಿವುಡತನಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖ ಮಾಡಬಹುದು.

ಅನೀಮಿಯಾ: --
ಗರ್ಭ ಧರಿಸಿರುವ ವೇಳೆಯಲ್ಲಿ, ಮಹಿಳೆಯರಲ್ಲಿ ಅನೀಮಿಯಾದ ಸಂಭವ ಹೆಚ್ಚಿರುತ್ತದೆ, ಇದು ಅವರನ್ನು ಶ್ರವಣ ದೋಷಕ್ಕೆ ಈಡಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಲ್ಲಿ ಗರ್ಭಧಾರಣೆಯ ಮಧುಮೇಹದ ಸಂಭವವು ಶ್ರವಣ ದೋಷದ ಇನ್ನೊಂದು ಕಾರಣವಾಗಿದೆ" ಎಂದು ಡಾ.ಜೇಮ್ಸ್ ಹೇಳುತ್ತಾರೆ.

ಇನ್ನು ಕೆಲ ಕಾರಣಗಳು:--
ಕಿವುಡುತನದ ಕುಟುಂಬ ಇತಿಹಾಸ, ಮಧುಮೇಹ, ಮಿನೆರೆ ಕಾಯಿಲೆ, ಕಬ್ಬಿಣದ ಕೊರತೆ, ವಿಟಮಿನ್ ಎ ಕೊರತೆ, ಅಪಧಮನಿ ಕಾಠಿಣ್ಯ (ಅಪಧಮನಿ ಗಟ್ಟಿಯಾಗುವಿಕೆ) ಮತ್ತು ಧೂಮಪಾನ ,30 ಮತ್ತು 40 ವರ್ಷಗಳ ನಡುವೆ ಕಿವುಡುತನ ಉಂಟಾಗುವುದರ ಹಿಂದಿನ ಪ್ರಮುಖ ಅಂಶಗಳಾಗಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗಾಗಿ :
Sri Matha Hearing Aid Centre
( Unit of Sri Matha Hospital)
Church Road , Kundapura
PH. NO :- 78999948131
9739249529

11/03/2019
ಕಿವಿಯೊಳಗೆ ಇರಿಸುವ ಕೋಕ್ಲಿಯರ್‌ (Cochlear)ಇಂಪ್ಲಾಂಟ್‌ :-             ಅನೇಕ ಕಾರಣಗಳಿಂದ ಕಿವುಡುತನ ಉಂಟಾಗಬಹುದು. ಜನ್ಮಜಾತ ಕಾರಣಗಳು ಮತ್ತ...
04/02/2019

ಕಿವಿಯೊಳಗೆ ಇರಿಸುವ ಕೋಕ್ಲಿಯರ್‌ (Cochlear)ಇಂಪ್ಲಾಂಟ್‌ :-

ಅನೇಕ ಕಾರಣಗಳಿಂದ ಕಿವುಡುತನ ಉಂಟಾಗಬಹುದು. ಜನ್ಮಜಾತ ಕಾರಣಗಳು ಮತ್ತು ಆನಂತರದ ಕಾರಣಗಳಿಂದ ಕಿವುಡುತನ ಬರಬಹುದು. ತಾಯಿಯ ಅನಾರೋಗ್ಯ, ಕ್ರೋಮೊಸೋಮಲ್‌(ಜೆನೆಟಿಕ್‌) ರೋಗಲಕ್ಷಣಗಳು ಅಥವಾ ಒಳಕಿವಿಯ ರೋಗಲಕ್ಷಣಗಳಿಂದಾಗಿ ಹುಟ್ಟುವ ಮಕ್ಕಳು ಕಿವುಡರಾಗಿ ಹುಟ್ಟಬಹುದು.

ಕಿವುಡುತನಕ್ಕೂ/ಅಂಧತ್ವದಂತಹ ಅಸ್ವಸ್ಥತೆಗಳಿಗೂ ಅಥವಾ ಮೂತ್ರಪಿಂಡದ ವೈಫಲ್ಯಕ್ಕೂ ಸಂಬಂಧ ಇರಬಹುದು. ಮೆನಿಂಜೈಟಿಸ್‌ ಕಾಯಿಲೆಯ ಒಂದು ದಾಳಿಯ ಬಳಿಕ ಮಕ್ಕಳು ಮತ್ತು ಹಿರಿಯರು ಹಠಾತ್ತಾಗಿ ಕಿವುಡರಾಗಬಹುದು.

ಬೈಲ್ಯಾಟರಲ್‌ ಕಿವುಡುತನಕ್ಕೆ ಅಂದರೆ ಎರಡೂ ಕಿವಿಗಳ ಕಿವುಡುತನಕ್ಕೆ ಕಾರಣ ಏನೇ ಇರಬಹುದು, ಆದರೆ ಅದರ ಪರಿಣಾಮದಿಂದಾಗಿ ವ್ಯಕ್ತಿಯ ಜೀವನ ಮಾತ್ರ ನಿಷ್ಪಲವಾಗುತ್ತದೆ . ಕಿವುಡುತನದಿಂದಾಗಿ ಒಬ್ಬ ಪ್ರೌಢ ವ್ಯಕ್ತಿಯು ತನ್ನ ಪ್ರಿಯರಾದವರು ಮತ್ತು ಹತ್ತಿರದವರ ಬಳಿ ಮಾತನಾಡುವ ಅವಕಾಶದಿಂದ ವಂಚಿತನಾಗುತ್ತಾನೆ. ಈ ಕಾರಣದಿಂದಾಗಿ ಸಮಾಜದಲ್ಲಿ ಅವನು ಪರಿತ್ಯಕ್ತನೆನಿಸಬಹುದು. ಇನ್ನು ಸಣ್ಣ ಮಗುವಿಗೆ ಕಿವಿ ಕೇಳಿಸದೆ ಇದ್ದರೆ, ಕಿವುಡುತನವು ಆ ಮಗುವಿನ ಜೀವನವನ್ನೇ ದುರಂತವನ್ನಾಗಿಸಬಹುದು. ಕಿವುಡುತನ ಇರುವ ಮಗುವು ಎರಡು ರೀತಿಯ ವೈಕಲ್ಯಗಳಿಂದ ಬಳಲುತ್ತದೆ. ಒಂದು ಕೇಳಿಸಿಕೊಳ್ಳಲು ಆಗದಿರುವ ವೈಕಲ್ಯ; ಅಂದರೆ ಕಿವುಡುತನ, ಮತ್ತೂಂದು ಮಾತನಾಡಲು ಆಗದಿರುವ ವೈಕಲ್ಯ.

ಈ ಕಾರಣದಿಂದಾಗಿ ಮಗುವು ಕಿವುಡ-ಮೂಗ ಎನಿಸಿಕೊಳ್ಳಬಹುದು. ಕಿವುಡುತನ ಇರುವವರರಿಗೆ, ತಮ್ಮ ಏಕಾಂಗಿತನದ ಬದುಕು ಅಸಂತೋಷವನ್ನು ಉಂಟುಮಾಡುತ್ತದೆ. ಕೋಕ್ಲಿಯರ್‌ ಇಂಪ್ಲಾಂಟ್‌-ಅಂದರೆ ಕೋಕ್ಲಿಯರ್‌ ಅಳವಡಿಕೆಯು ಕಿವುಡರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತದೆ.

ಕೋಕ್ಲಿಯರ್‌ ಇಂಪ್ಲಾಂಟ್‌ ಅಂಗನ್ಯೂನತೆಯನ್ನು ಸರಿಪಡಿಸುವ ಒಂದು ಪೂರಕ ಚಿಕಿತ್ಸಾ ಸಾಧನ. ಇದನ್ನು ಒಳಕಿವಿಯ ಒಳಭಾಗದಲ್ಲಿ ನೇರವಾಗಿ ಇರಿಸಿದಾಗ, ಅದು ಶ್ರವಣ ನರವನ್ನು ಅಥವಾ ಕೇಳುವಿಕೆಯ ನರವನ್ನು ಪ್ರಚೋದಿಸುತ್ತದೆ. ಇದು ಹಾನಿಗೊಳಗಾದ ನರವನ್ನು ಬಳಸಿಕೊಂಡು ಹೋಗುತ್ತದೆ ಮತ್ತು ಶ್ರವಣ ಸಂಕೇತಗಳನ್ನು ನೇರವಾಗಿ ವಿದ್ಯುತ್‌ ಸಂಕೇತಗಳಾಗಿ ಕೋಡ್‌ ಮಾಡಿ, ಮೆದುಳಿನಲ್ಲಿರುವ ಶ್ರವಣ ಕೇಂದ್ರಕ್ಕೆ ರವಾನಿಸುತ್ತದೆ. ಕೋಕ್ಲಿಯರ್‌ ಎಂಬುದು ಶ್ರವಣ ಸಾಧನಕ್ಕಿಂತ ಹೇಗೆ ವಿಭಿನ್ನ ಅಂದರೆ, ಒಂದು ಶ್ರವಣ ಸಾಧನವು ಹಾನಿಗೊಳಗಾದ ಒಳಕಿವಿಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಆದರೆ ಕೋಕ್ಲಿಯರ್‌ ಇಂಪ್ಲಾಂಟ್‌ ಹಾನಿಗೊಳಗಾದ ಒಳಕಿವಿಯನ್ನು ಹಾದುಕೊಂಡು ಹೋಗುತ್ತದೆ.

ಹುಟ್ಟುತ್ತಲೇ ಕಿವುಡರಾಗಿ ಹುಟ್ಟಿದ ಮಕ್ಕಳಿಗೆ, ಬಹಳ ಬೇಗನೆ ಕೋಕ್ಲಿಯರ್‌ ಅನ್ನು ಅಳವಡಿಸಿದರೆ, ಅವರಿಗೆ ಹೆಚ್ಚು ಪ್ರಯೋಜನವಾಗಬಹುದು. ಕೋಕ್ಲಿಯರ್‌ ಇಂಪ್ಲಾಂಟ್‌ನಿಂದಾಗಿ ಈ ಮಕ್ಕಳಲ್ಲಿ, ಹೋಲಿಕೆಯಲ್ಲಿ ಅದೇ ವಯಸ್ಸಿನ ಅಥವಾ ಓರಗೆಯ ಇತರ ಮಕ್ಕಳಷ್ಟೇ ಮಾತು ಮತ್ತು ಭಾಷಾ ಕೌಶಲ್ಯಗಳು ಉತ್ತಮಗೊಳ್ಳಬಹುದು. ಇಂತಹ ಮಕ್ಕಳು ಇತರ ಸಹಜ ಮಕ್ಕಳ ರೀತಿಯಲ್ಲಿಯೆ ಸಕಾಲದಲ್ಲಿ ಮುಖ್ಯ ವಾಹಿನಿಯ ಶಿಕ್ಷಣವನ್ನೂ ಸಹ ಪಡೆಯಬಹುದು.

ಕೇಳುವ ಶಕ್ತಿಯನ್ನು ಕಳೆದುಕೊಂಡಿರುವ ಹಿರಿಯರು - ಅಂದರೆ ಕಿವುಡುತನ ಇರುವ ಹಿರಿಯರು ಹೆಚ್ಚು ಸಮಯ ವ್ಯರ್ಥ ಮಾಡದೆ, ಆದಷ್ಟು ಬೇಗನೆ ಕೋಕ್ಲಿಯರ್‌ ಅನ್ನು ಅಳವಡಿಸಿಕೊಂಡರೆ ಒಳ್ಳೆಯದು. ಕಿವುಡುತನದ ಅವಧಿಯನ್ನು ಅವಲಂಬಿಸಿಕೊಂಡು, ಅಳವಡಿಕೆಯ ಪ್ರಯೋಜನವೂ ಸಹ ಕಿವುಡುತನದ ಪ್ರಮಾಣಕ್ಕೆ ಅನುಗುಣವಾಗಿ ಇರಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.

ಕೋಕ್ಲಿಯರ್‌ ಅನ್ನು ಯಾರು ಅಳವಡಿಸಿಕೊಳ್ಳಬಹುದು?

1. ಕಿವುಡರಾಗಿ ಹುಟ್ಟಿರುವ ಮಕ್ಕಳು ಅಥವಾ ಮಾತನ್ನು ಕಲಿಯುವ ಮೊದಲೇ ಕಿವುಡರಾದ ಮಕ್ಕಳು

2. ಮಾತು ಕಲಿತ ನಂತರ ಕಿವುಡರಾದ ಮಕ್ಕಳು

3.ನಂತರದ ಜೀವನದಲ್ಲಿ ಕಿವುಡರಾದ ಹಿರಿಯರು

4. ಹುಟ್ಟುವಾಗಲೇ ಕಿವುಡುತನ ಇದ್ದ ಮತ್ತು ಆ ಬಳಿಕ ಶ್ರವಣ ಸಾಧನ ಉಪಯೋಗಿಸಿದ ಹಿರಿಯರು

ಹೆಚ್ಚಿನ ಮಾಹಿತಿಗಾಗಿ :
Sri Matha Hearing Aid Centre
(Sri Matha Hospital)
Church Road Kundapura
Ph : 7899948131
9739249529

ಕಿವಿಗಳಲ್ಲಿ ರಿಂಗಣಿಸುವುದು :-(Tinnitus)                    ಕಿವಿಗಳಲ್ಲಿ ಮೊರೆಯುವುದನ್ನು ಅಥವಾ ರಿಂಗಣಿಸುವುದನ್ನು ನಿಮ್ಮಲ್ಲಿ ಕೆಲವರು ಅ...
04/02/2019

ಕಿವಿಗಳಲ್ಲಿ ರಿಂಗಣಿಸುವುದು :-(Tinnitus)

ಕಿವಿಗಳಲ್ಲಿ ಮೊರೆಯುವುದನ್ನು ಅಥವಾ ರಿಂಗಣಿಸುವುದನ್ನು ನಿಮ್ಮಲ್ಲಿ ಕೆಲವರು ಅನುಭವಿಸಿರಬಹುದು, ಈ ರಿಂಗಣಿಸುವಿಕೆಯು ಕಿವಿಗಳಲ್ಲಿ ಒಮ್ಮಿಂದೊಮ್ಮೆಗೆಯೇ ಆರಂಭವಾಗಬಹುದು ಅಥವಾ ಕಿವಿಯ ಪಕ್ಕದಲ್ಲಿಯೇ ಪಟಾಕಿ ಒಂದು ಸಿಡಿದಂತೆ ದೊಡ್ಡ ಸದ್ದು ಕೇಳಿಸಬಹುದು. ವೈದ್ಯಕೀಯವಾಗಿ ಇದಕ್ಕೆ ಟಿನ್ನಿಟಸ್‌ ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ನಾವು ಇದಕ್ಕೆ ಕಿವಿಯಲ್ಲಿ ರಿಂಗಣಿಸುವುದು ಅಥವಾ ಮೊರೆಯುವುದು ಎಂದು ಹೇಳುತ್ತೇವೆ. ಈ ಟಿನ್ನಿಟಸ್‌ ಅಥವಾ ರಿಂಗಣಿಸುವುದರ ಹಿಂದೆ ಹಲವಾರು ಮಿಥ್ಯೆಗಳು ಮತ್ತು ವಾಸ್ತವಗಳು ಇವೆ. ಕೆಳಗೆ ನೀಡಲಾಗಿರುವ ಕೆಲವು ವಾಸ್ತವ‌ ಅಂಶಗಳ ಮೂಲಕ ನಾವು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.

1.ಟಿನ್ನಿಟಸ್‌(tinnitus)ಎನ್ನುವುದು ಒಂದು ಕಾಯಿಲೆಯೇ?

ಅಲ್ಲ, ಟಿನ್ನಿಟಸ್‌ ಅನ್ನುವುದು ಕಿವಿಯಲ್ಲಿ ಇರಬಹುದಾದ ಅನೇಕ ಕಾಯಿಲೆಗಳ ಒಂದು ಚಿಹ್ನೆಯಷ್ಟೆ ಹೊರತು, ದೇಹದ ಯಾವುದಾದರೂ ಒಂದು ಭಾಗದಲ್ಲಿ ಇರುವ ಸೋಂಕು ದೇಹದ ತಾಪಮಾನ ಹೆಚ್ಚಿಸಿದ ಹಾಗೆ ಇಡೀಯ ದೇಹಕ್ಕೆ ಹರಡಿಕೊಳ್ಳುವ ಹಾಗೆ, ಇದೇ ಒಂದು ಸ್ವತಂತ್ರ ಕಾಯಿಲೆ ಅಲ್ಲ.

2.ಟಿನ್ನಿಟಸ್‌(tinnitus) ಅನ್ನುವುದು ಒಂದು ಸಾಮಾನ್ಯ ಸಮಸ್ಯೆಯೇ?

ಹೌದು, ಸಾಮಾನ್ಯವಾಗಿ ಎಲ್ಲರಿಗೂ ಒಂದು ಬಾರಿ ಅಥವಾ ಕೆಲವರಿಗೆ ಆಗಾಗ ಅಲ್ಪಾವಧಿಗೆ ಕಿವಿಯಲ್ಲಿ ಸಣ್ಣಗೆ ಮೊರೆಯುವಂತಹ ಅನುಭವ ಆಗಬಹುದು. ಆದರೆ ಕೆಲವರನ್ನು ಎಡೆಬಿಡದೆ ಕಾಡುವ ಟಿನ್ನಿಟಸ್‌ ಕಿರಿಕಿರಿ ಉಂಟು ಮಾಡಬಹುದು.ಸುಮಾರು ಮೂರನೆ ಒಂದರಷ್ಟು ವಯಸ್ಕರು ತಮ್ಮ ಜೀವಿತಾವಧಿಯಲ್ಲಿ ಕೆಲವು ಬಾರಿಯದರೂ ಟಿನ್ನಿಟಸ್‌ ಅನ್ನು ಅನುಭವಿಸಿರುತ್ತಾರೆ. ಸುಮಾರು 10%-15% ನಷ್ಟು ವಯಸ್ಕರಿಗೆ ಸುದೀರ್ಘ‌ ಅವಧಿಯ ಟಿನ್ನಿಟಸ್‌ ಇರುತ್ತದೆ ಮತ್ತು ಅದಕ್ಕೆ ವೈದ್ಯಕೀಯ ವಿಶ್ಲೇಷಣೆಯ ಆವಶ್ಯಕತೆ ಇರುತ್ತದೆ. ಈ ಹಿಂದೆಯೇ ತಿಳಿಸಿದಂತೆ, ಕಿವಿಯಲ್ಲಿ ಇರುವ ಅನೇಕ ಸಮಸ್ಯೆಗಳ ಕಾರಣದಿಂದ ಟಿನ್ನಿಟಸ್‌ ಬರಬಹುದು. ಅದರೆ ಕೆಲವು ವ್ಯಕ್ತಿಗಳಲ್ಲಿ ಇರುವಂತಹ ನಿಖರ ಕಾರಣ ಏನು ಎಂಬುದು ಹೆಚ್ಚಾಗಿ ಗುರುತಿಸಲು ಅಸಾಧ್ಯ ಎನ್ನುವ ರೀತಿಯಲ್ಲಿರುತ್ತದೆ.

3. ಟಿನ್ನಿಟಸ್‌(tinnitus) ಉಂಟಾಗಲು ಕಾರಣವೇನು?

ಟಿನ್ನಿಟಸ್‌ ರೋಗಿಗಳಲ್ಲಿ ಎರಡು ವರ್ಗದ ಜನರು ಸಿಗುತ್ತಾರೆ. ಹೆಚ್ಚು ಸಾಮಾನ್ಯ ವರ್ಗದವರು ಅಂದರೆ ಶ್ರವಣ ನಷ್ಟವಾಗಿರುವವರು ಅಥವಾ ಕಿವುಡುತನ ಇರುವವರು, ಅಂದರೆ ಒಳಕಿವಿಗಳ ಜೀವಕೋಶಗಳ ಹಾನಿ, ಜಖಂ ಅಥವಾ ಕಿವಿಯ ಒಳಭಾಗದ ನರಗಳಿಗೆ ಹಾನಿಯಾಗಿರುವ ಪರಿಸ್ಥಿತಿ ಇರುವವರು. ಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ಕಿವುಡುತನ, ದೊಡª ಶಬ್ದಕ್ಕೆ ಒಡ್ಡಿಕೊಂಡಿರುವ ಕಾರಣಕ್ಕೆ ಈ ರೀತಿ ಆಗುತ್ತದೆ. ಕೆಲವು ಔಷಧಿಗಳು ಸಹ ಟಿನ್ನಿಟಸ್‌ ಅನ್ನು ಉಂಟು ಮಾಡಬಹುದು ಅಥವಾ ಇರುವ ಟಿನ್ನಿಟಸ್‌ ತೊಂದರೆಯನ್ನು ಹೆಚ್ಚಿಸಬಹುದು. ಅವುಗಳೆಂದರೆ: ಆಂಟಿಬಯಾಟಿಕ್‌ಗಳು, ಕ್ಯಾನ್ಸರ್‌ ಔಷಧಿಗಳು, ವಾಟರ್‌ ಪಿಲ್‌ಗ‌ಳು(ಡೈಯುರೇಟಿಕ್ಸ್‌), ಕ್ವಿನೈನ್‌ ಔಷಧಿಗಳು, ಕೆಲವು ರೀತಿಯ ಶಾಮಕಗಳು, ಆಸ್ಪಿರಿನ್‌ ಇತ್ಯಾದಿ. ಟಿನ್ನಿಟಸ್‌ ಇರುವ ಇನ್ನೊಂದು ವರ್ಗದ ಜನರಲ್ಲಿ, ಈ ತೊಂದರೆ ಗಮನಾರ್ಹ ರೀತಿಯಲ್ಲಿ ಇರುವುದಿಲ್ಲ, ಆದರೂ ಅವರಿಗೆ ಟಿನ್ನಿಟಸ್‌ ಅನುಭವಾಗುತ್ತಿರುತ್ತದೆ. ಅಂದರೆ ಅವರ ಕಿವಿಯ ವಿಶೇಷ ಕೇಂದ್ರಗಳಲ್ಲಿನ ಕಾರ್ಯಶೀಲತೆಯು ಅಸಮರ್ಪಕವಾಗಿರುವ ಕಾರಣ ಅವರಲ್ಲಿ ಈ ಅಸಹಜತೆ ಕಾಣಿಸಿಕೊಂಡಿರುತ್ತದೆ

4. ಟಿನ್ನಿಟಸ್‌ (tinnitus) ಜೀವನ ಗುಣಮಟ್ಟಕ್ಕೆ ಹೇಗೆ ಬಾಧೆಯನ್ನುಂಟು ಮಾಡುತ್ತದೆ?

ಟಿನ್ನಿಟಸ್‌ ಅನ್ನುವುದು ವ್ಯಕ್ತಿಗಳನ್ನು ವಿವಿಧ ರೂಪದಲ್ಲಿ ಬಾಧಿಸಬಹುದು. ಟಿನ್ನಿಟಸ್‌ ಇದ್ದಲ್ಲಿ, ನಿಮಗೂ ಸಹ ಆಯಾಸ, ಒತ್ತಡ, ನಿದ್ರಿಸಲು ತೊಂದರೆ ಆಗುವುದು, ಏಕಾಗ್ರತೆಯ ತೊಂದರೆ, ನೆನಪಿನ ತೊಂದರೆ, ಖನ್ನತೆ, ಆತಂಕ ಮತ್ತು ಕಿರಿಕಿರಿಯಂತಹ ಅನುಭವಗಳಾಗಬಹುದು.

5.ಟಿನ್ನಿಟಸ್‌ನ (tinnitus) ತೀವ್ರತೆಯನ್ನು ತಗ್ಗಿಸಲು ಏನು ಮಾಡಬಹುದು?

ದೊಡ್ಡ ಶಬ್ದಗಳಿಗೆ ಕಿವಿಗಳನ್ನು ಒಡ್ಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ, ಉಪ್ಪು ಮತ್ತು ಪ್ರೇರಕಗಳ ಸೇವನೆಯನ್ನು ತಗ್ಗಿಸಿಕೊಳ್ಳಿ. ಕಾಫಿ, ಚಹಾ, ಕೋಲಾ ಮತ್ತು ಅಧಿಕ ತಂಬಾಕು ಸೇವನೆಯೂ ಸಹ ಟಿನ್ನಿಟಸ್‌ ತೊಂದರೆಯನ್ನು ಕೆರಳಿಸುತ್ತದೆ. ನಿತ್ಯವೂ ವ್ಯಾಯಾಮ ಮಾಡಲು ಪ್ರಯತ್ನಿಸಿ, ನಿಶ್ಯಕ್ತಿಯನ್ನು ಕಡಿಮೆ ಮಾಡಲು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ ಮತ್ತು ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವ ಸಂದರ್ಭ ಇದ್ದಲ್ಲಿ ಕಿವಿಗಳಿಗೆ ಸೂಕ್ತ ಸಂರಕ್ಷಕಗಳನ್ನು ಧರಿಸಿ ಮತ್ತು ಆಗಬಹುದಾದ ಆಘಾತಗಳನ್ನು ತಗ್ಗಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ :
Sri Matha Hearing Aid Centre
(Sri Matha Hospital )
Church Road, Kundapura
Ph: 7899948131
9739249529

ಶ್ರವಣ ನಷ್ಟ ತಡೆಗಟ್ಟುವುದು ಹೇಗೆ ?                             ನಮ್ಮ ಭಾವನೆ ಮತ್ತು ಯೋಚನೆಗಳನ್ನು ಹಂಚಿಕೊಳ್ಳಲು ಸಂವಹನ ಅನ್ನುವುದು ಬಹಳ...
21/01/2019

ಶ್ರವಣ ನಷ್ಟ ತಡೆಗಟ್ಟುವುದು ಹೇಗೆ ?

ನಮ್ಮ ಭಾವನೆ ಮತ್ತು ಯೋಚನೆಗಳನ್ನು ಹಂಚಿಕೊಳ್ಳಲು ಸಂವಹನ ಅನ್ನುವುದು ಬಹಳ ಮುಖ್ಯ. ಸಂವಹನವು ಪರಿಣಾಮಕಾರಿ ಆಗಬೇಕಾದರೆ, ಒಬ್ಬ ವ್ಯಕ್ತಿಯ ಕೇಳುವಿಕೆಯ ಸಾಮರ್ಥ್ಯ ಉತ್ತಮ ಮಟ್ಟದಲ್ಲಿರಬೇಕು. ಅಂದರೆ ವ್ಯಕ್ತಿಗೆ ಚೆನ್ನಾಗಿ ಕಿವಿ ಕೇಳಿಸಬೇಕು.
ಕಿವಿಗಳು ಆಲಿಸುವಿಕೆಗಾಗಿ ಮಾನವ ಶರೀರದಲ್ಲಿ ಇರುವ ಬಹುಮುಖ್ಯ ಅಂಗಗಳು. ಆಲಿಸುವಿಕೆ ಅಥವಾ ಕೇಳುವಿಕೆ ಅನ್ನುವುದು ನಮ್ಮ ದೈನಂದಿನ ಜೀವನದಲ್ಲಿ ಮತ್ತು ಸಂವಹನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ಒಂದು ಅಂಶ. ಸಂವಹನ ಅಥವಾ ಮಾತುಕತೆ ಅನ್ನುವುದು ನಮ್ಮ ದಿನನಿತ್ಯದ ಜೀವನದ ಒಂದು ಭಾಗ. ಉತ್ತಮ ಜೀವನ ಗುಣಮಟ್ಟವನ್ನು ಸಾಧಿಸುವಲ್ಲಿ ಕಿವಿ ಕೇಳುವಿಕೆಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆ ಕಾರಣಕ್ಕಾಗಿ ನಮ್ಮ ಕಿವಿ ಕೇಳುವಿಕೆಗೆ ಅಂದರೆ ಶ್ರವಣ ಶಕ್ತಿಗೆ ತೊಂದರೆ ಉಂಟು ಮಾಡುವಂತಹ ಅಂಶಗಳನ್ನು ತಡೆಯುವುದೂ ಸಹ ಮುಖ್ಯವಾಗುತ್ತದೆ.

ಕಿವಿಗಳ ಶ್ರವಣ ಶಕ್ತಿಗೆ ತೊಂದರೆ ಉಂಟು ಮಾಡುವ ಅಂಶಗಳು ಅಂದರೆ: ಶಬ್ದ ಮಾಲಿನ್ಯ, ಅಬ್ಬರದ ಸಂಗೀತ, ಕಿವಿಯ ಸೋಂಕುಗಳು, ಕಿವಿಗಳಿಗೆ ಪೆಟ್ಟಾಗುವುದು, ಬಾಹ್ಯ ವಸ್ತುಗಳು ಕಿವಿಯನ್ನು ಪ್ರವೇಶಿಸುವುದು, ಬಾಹ್ಯ ವಸ್ತುಗಳನ್ನು ಕಿವಿಯೊಳಗೆ ಹಾಕಿಕೊಳ್ಳುವುದು (ಕಿವಿಯನ್ನು ಶುದ್ಧ ಮಾಡುವ ಹತ್ತಿಕಡ್ಡಿಗಳು, ಪಿನ್ನುಗಳು, ಬೆಂಕಿಕಡ್ಡಿ, ಎಣ್ಣೆ ಅಥವಾ ಯಾವುದೇ ರೀತಿಯ ಮೊನಚು ವಸ್ತುಗಳು).

ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವುದರಿಂದ ಕಿರಿಕಿರಿ, ಆಯಾಸ, ಒತ್ತಡ ಮತ್ತು ರಾತ್ರಿ ನಿದ್ರೆ ಬಾರದೆ ಇರುವ ತೊಂದರೆ ಕಾಣಿಸಿಕೊಳ್ಳುತ್ತದೆ. ನಮ್ಮ ಕಿವಿಗಳ ಶ್ರವಣ ಶಕ್ತಿ ನಷ್ಟವಾಗಲು ಇರುವ ಬಹುಮುಖ್ಯ ಕಾರಣ ಅಂದರೆ, ಅತಿಯಾದ ಶಬ್ದ. ಕಿವಿಗಳಿಗೆ ಇಯರ್‌ ಫೋನ್‌ ಅಥವಾ ಹೆಡ್‌ ಪೋನ್‌ ಹಾಕಿಕೊಂಡು ಎತ್ತರದ ಧ್ವನಿಯಲ್ಲಿ ಸಂಗೀತ ಕೇಳುವುದೂ ಸಹ ಎಲ್ಲಾ ವಯೋಮಾನದವರಲ್ಲಿ ಶ್ರವಣ ದೋಷ ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣ.


ಶ್ರವಣ ನಷ್ಟವಾಗುವಿಕೆಯನ್ನು ತಡೆಯಲು ಸಲಹೆಗಳು/ಎಚ್ಚರಿಕೆಗಳು :

ಹೀಗೆ ಮಾಡಿ

1). ಕಿವಿಗಳಿಗೆ ರಕ್ಷಣೆ ನೀಡುವ ಇಯರ್‌ ಪ್ಲಗ್‌ಗಳು ಅಥವಾ ಮಫ್ಲರ್‌ ಇತ್ಯಾದಿಗಳನ್ನು ಬಳಸಿ.

2). ಶ್ರವಣ ನಷ್ಟಕ್ಕೆ ಕಾರಣ ಆಗಬಹುದಾದ ಕಾಯಿಲೆಗಳು (ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ) ಉಂಟಾಗುವುದನ್ನು ತಡೆಯಲು ಉತ್ತಮ ಆಹಾರಕ್ರಮವನ್ನು ಅನುಸರಿಸಿ.

3). ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಿ.

4). ನಿಮ್ಮ ಕಿವಿಗಳನ್ನು ಸ್ವತ್ಛ ಮತ್ತು ಒಣವಾಗಿ ಇರಿಸಿಕೊಳ್ಳಿ

5). ನಿಮ್ಮ ಕಿವಿಗಳನ್ನು ಮೇಣದಿಂದ ಮುಕ್ತವಾಗಿರಿಸಿ.

6). ತಜ್ಞರು ಮತ್ತು ಆಡಿಯಾಲಜಿಸ್ಟ್‌ನ್ನು ನಿಯಮಿತವಾಗಿ ಭೇಟಿಯಾಗಿ.

7). ಒಂದು ಹದ ಮತ್ತು ಸುರಕ್ಷಿತ ಮಟ್ಟದಲ್ಲಿ ಸಂಗೀತವನ್ನು ಆಲಿಸಿ.

8). ಯಾವುದೇ ರೀತಿಯ ಸಮಸ್ಯಾದಾಯಕ ರೋಗಲಕ್ಷಣಗಳಿಗೆ ಹತ್ತಿರದ ಸ್ಪೆಷಾಲಿಟಿ ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಭೇಟಿಕೊಡಿ ಮತ್ತು
ರೋಗಲಕ್ಷಣಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಿ.

9). ಅಲರ್ಜಿ ಉಂಟು ಮಾಡುವ ಔಷಧಿಗಳ ಸೇವನೆಯಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.



ಹೀಗೆ ಮಾಡಬೇಡಿ

1). ಅಬ್ಬರದ ಸಂಗೀತ ಅಥವಾ ಸದ್ದುಗಳಿಗೆ ಕಿವಿಯೊಡ್ಡಬೇಡಿ.

2). ಲೌಡ್‌ ಸ್ಪೀಕರ್‌, ಪಟಾಕಿ ಇತ್ಯಾದಿ ಸದ್ದು ಗದ್ದಲದ ಪರಿಸ್ಥಿತಿಗಳಿಂದ ದೂರ ಇರಿ.

3). ಕಿವಿಯ ಸೋಂಕು ಇದ್ದಲ್ಲಿ, ವೈದ್ಯರನ್ನು ಭೇಟಿಯಾಗಿ.

4). ಆಗಾಗ ಮರುಕಳಿಸುವ ಮೇಲಿನ ಶ್ವಾಸನಾಳದ ಸೋಂಕನ್ನು ತಡೆಯಿರಿ.

5). ಶಿಫಾರಸು ರಹಿತ ಔಷಧಿಗಳನ್ನು (ಇಯರ್‌ ಡ್ರಾಪ್‌ಗ್ಳುಳು) ಬಳಸಬೇಡಿ.

6). ಕಿವಿಗಳಿಗೆ ಎಣ್ಣೆ ಹಾಕಬೇಡಿ.

7). ಆಗಾಗ ಇಯರ್‌ ಬಡ್‌ಗಳನ್ನು ಬಳಸಬೇಡಿ.

8). ಅಪರೂಪಕ್ಕೆ ಕಾಣಿಸಿಕೊಂಡರೂ ಸಹ ಕಿವಿಯಲ್ಲಿನ ಯಾವುದೇ ಸಣ್ಣ ಸಮಸ್ಯೆಯನ್ನು ಕೂಡ ಅಲಕ್ಷ್ಯ ಮಾಡಬೇಡಿ(ನೀರು ಸ್ರವಿಸುವುದು, ತುರಿಕೆ, ಅಡಚಣೆ ಆಗಿರುವ ಸಂವೇದನೆ ,ಇತ್ಯಾದಿ).

21/01/2019

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಪತ್ತೆ ಮಾಡುವ ಅಗತ್ಯ

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಅಥವಾ ಕಿವುಡುತನ ಅನ್ನುವುದು ಮಗುವಿನ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆಯಲ್ಲಿ ಬಹಳಷ್ಟು ಹಿನ್ನಡೆಯನ್ನು ಉಂಟುಮಾಡುತ್ತದೆ‌. ಇದರಿಂದ ಮಗುವಿನ ಸಾಮಾಜಿಕ, ಭಾವನಾತ್ಮಕ, ಗ್ರಹಿಕೆಯ ಶಕ್ತಿ, ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗ ಹಾಗೂ ಆರ್ಥಿಕ ಶಕ್ತಿಯ ಮೇಲೆ ಬಹಳಷ್ಟು ಪರಿಣಾಮವನ್ನು ಕಡಿಮೆ ಮಾಡಬಹುದು.

ಕೆಲವು ಕಿವಿಕೇಳುವ ತೊಂದರೆಗಳು ಹುಟ್ಟಿನಿಂದ ಇರುತ್ತದೆ, ಇನ್ನು ಕೆಲವು ಕಿವಿಕೇಳುವ ತೊಂದರೆಗಳು ಮಕ್ಕಳು ಶಾಲೆಗೆ ಹೋಗುವ ವಯಸ್ಸಿನಲ್ಲಿ ಆರಂಭವಾಗುತ್ತದೆ. ಹುಟ್ಟಿನಿಂದ ಮಗುವಿಗೆ ಕೇಳುವ ತೊಂದರೆ ಇದ್ದರೆ ಮಗುವಿನ ಮಾತು ಕುಂಠಿತಗೊಳ್ಳುತ್ತದೆ. ಮಗುವಿಗೆ ಶಾಲೆಯ ವಯಸ್ಸಿನಲ್ಲಿ ಕಿವಿಯ ದೋಷವಿದ್ದರೆ ಶಾಲೆಯ ಪಾಠವನ್ನು ಗ್ರಹಿಸಲು ಕಷ್ಟವಾಗುತ್ತದೆ. ಆದುದರಿಂದ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ನಿಯಮಿತ ಕಿವಿ ಸ್ಕ್ರೀನಿಂಗ್‌ ಅನ್ನು ಕಡ್ಡಾಯ ಮಾಡದೆ ಹೋದರೆ, ಹೆಚ್ಚು ತೀವ್ರವಾಗಿಲ್ಲದ, ಅಥವಾ ಈಗಷ್ಟೇ ಆರಂಭವಾಗುತ್ತಿರುವ ಅಥವಾ ಒಂದು ಕಿವಿ ಕೇಳಿಸದೆ ಇರುವ ಸಂದರ್ಭಗಳು ಪತ್ತೆ ಆಗದೆಯೇ ಹೋಗುವ ಅಥವಾ ತಪಾಸಣೆ ತಪ್ಪಾಗಿ ಹೋಗುವ ಮತ್ತು ರೋಗ ಪರಿಸ್ಥಿತಿಯ ನಿರ್ವಹಣೆ ಸರಿಯಾಗಿ ಆಗದೆ ಇರುವ ಸಂದರ್ಭ ಬರಬಹುದು.

ಈ ಎಲ್ಲ ಕಾರಣಗಳಿಂದಾಗಿ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸುವುದು ಮತ್ತು ಸರಿಯಾದ ಚಿಕಿತ್ಸಾ ಕ್ರಮವನ್ನು ಅನುಸರಿಸುವುದು ಮತ್ತು/ಅಥವಾ ಸರಿಪಡಿಸಿಕೊಳ್ಳುವುದು ಬಹಳ ಆವಶ್ಯಕ. ಮಗುವಿನಲ್ಲಿ ಇರುವಂತಹ ಶ್ರವಣ ದೋಷವನ್ನು ಬಹಳ ಬೇಗನೆ ಗುರುತಿಸದೇ ಇರುವುದು ಅಥವಾ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಕೊಡಿಸದೆ ಇರುವುದರಿಂದ ಆ ಮಗುವಿನ ಶೈಕ್ಷಣಿಕ ಪ್ರಗತಿ, ಗ್ರಹಿಕೆಯ ಸಾಮರ್ಥ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ವಿಶೇಷ ಪ್ರಭಾವ ಉಂಟಾಗುತ್ತದೆ. ಮಾತು ಕಲಿಯುವ ಪ್ರಕ್ರಿಯೆಗೆ ಆಧಾರ ನೀಡಬೇಕು ಅನ್ನುವುದು ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡಬೇಕು ಎನ್ನುವುದರ ಹಿಂದಿನ ಉದ್ದೇಶ. ಕಿವುಡುತನದ ದುಷ್ಪರಿಣಾಮಗಳನ್ನು ತಗ್ಗಿಸಲು ಇರುವ ಆರಂಭಿಕ ಹಂತಗಳು ಅಂದರೆ ಹೊಸದಾಗಿ ಆರಂಭವಾಗುತ್ತಿರುವ ಶ್ರವಣ ದೋಷವನ್ನು ಮತ್ತು ಒಂದು ಅಥವಾ ಎರಡೂ ಕಿವಿಗಳಲ್ಲಿ ಇರುವ ಶ್ರವಣ ದೋಷವನ್ನು ಪತ್ತೆ ಮಾಡುವುದು, ಸೂಕ್ತ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು.

ಶಾಲಾ ಕೊಠಡಿಯಲ್ಲಿ ಮಗುವು ನಡೆದುಕೊಳ್ಳುವ ರೀತಿಯು ಮಗುವಿಗೆ ಇರಬಹುದಾದ ಕಿವುಡುತನವನ್ನು ಸೂಚಿಸುತ್ತಿರಬಹದು. ಅಂದರೆ ಶಿಕ್ಷಕರು ಹೇಳುವ ವಿಚಾರಕ್ಕೆ ಮಗುವು ಗಮನ ಕೊಡದಿರಬಹುದು, ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿರಬಹುದು, ಅಥವಾ ಆತನ/ಆಕೆಯ ಶೈಕ್ಷಣಿಕ ಪ್ರಗತಿಯ ಮಟ್ಟ ಬಹಳ ಕಳಪೆ ಇರಬಹುದು, ಮಾತು ಅಥವಾ ಇನ್ನಿತರ ಶ್ರವಣ ಮಾಹಿತಿಗಳನ್ನು ಅನುಸರಿಸಲು ಮಗುವಿಗೆ ಕಷ್ಟವಾಗುತ್ತಿರಬಹುದು, ಕೇಳುವಿಕೆಯ ಅಥವಾ ಆಲಿಸುವ ಸಂದರ್ಭಗಳಲ್ಲಿ ಮಗುವು ಬಹಳ ಬೇಗನೆ ಆಯಾಸಗೊಳ್ಳಬಹುದು, ಸರಳ ಪ್ರಶ್ನೆಗಳಿಗೂ ಸಹ ಅಸಮರ್ಪಕ ಉತ್ತರಗಳನ್ನು ಕೊಡಬಹುದು, ತನ್ನ ಸಹಪಾಠಿಗಳಿಂದ ದೂರ ಉಳಿಯಬಹುದು, ಮಗುವು ಓದುವ ಕೌಶಲದಲ್ಲಿ ಹಿಂದುಳಿಯಬಹುದು, ಮಾತನಾಡಲು ಮತ್ತು/ಅಥವಾ ಬರೆಯಲು ಕಷ್ಟವಾಗುತ್ತಿರಬಹುದು, ಬಹಳ ಬೇಗನೆ ಕಿರಿಕಿರಿಗೊಳ್ಳಬಹುದು. ಶಾಲಾ ಮಕ್ಕಳಲ್ಲಿ ಈ ಮೇಲೆ ಹೇಳಿದ ಯಾವುದೇ ನಡವಳಿಕೆಯನ್ನು ಗುರುತಿಸುವುದರಿಂದ, ಮಗುವಿನ ಶ್ರವಣ ವಿಶ್ಲೇಷಣೆಯ ಮೂಲಕ ಶ್ರವಣ ದೋಷವು ಯಾವ ಮಟ್ಟದಲ್ಲಿದೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ.

ಶಾಲಾ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ಮೂರು ಬಹುಮುಖ್ಯ ಮತ್ತು ಸಾಮಾನ್ಯ ವಿಧದ ಶ್ರವಣ ದೋಷಗಳು ಯಾವುವು:-

1). ಕಂಡಕ್ಟಿವ್‌ ಶ್ರವಣ ದೋಷ ಇದು ಶಾಶ್ವತ ಅಲ್ಲದ ಅಥವಾ ಅಲ್ಪಕಾಲಿಕ ವಿಧದ ಶ್ರವಣ ದೋಷ. ಹೊರ ಮತ್ತು/ಅಥವಾ ಮಧ್ಯ ಕಿವಿಯ ಅಸಹಜತೆಗಳಿಂದಾಗಿ (ಕಿವಿಯ ಸೋಂಕು ಅಥವಾ ಕಿವಿಯ ಅಸಹಜ ಸಂರಚನೆ ಇತ್ಯಾದಿ ಕಾರಣಗಳಿಂದ ಉಂಟಾಗುತ್ತದೆ), ಕಂಡಕ್ಟಿವ್‌ ಶ್ರವಣ ದೋಷ ಕಾಣಿಸಿಕೊಳ್ಳಬಹುದು. ಈ ವಿಧದ ಕಿವುಡುತನ ಇರುವ ಬಹಳಷ್ಟು ಪ್ರಕರಣಗಳಿಗೆ ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಪರಿಹಾರ ಸಿಕ್ಕಿರುತ್ತದೆ.

2). ಸೆನ್ಸರಿನ್ಯೂರಲ್‌ ಶ್ರವಣ ದೋಷ ಇದು ಎರಡನೆಯ ವಿಧದ ಮತ್ತು ಶಾಶ್ವತ ರೀತಿಯ ಶ್ರವಣ ದೋಷ ಆಗಿದ್ದು ಒಳಕಿವಿಯ ಅಸ್ವಸ್ಥತೆಯ (ಅಂದರೆ ಮೆದುಳು ಜ್ವರ, ಶಬ್ದಗಳಿಗೆ ಒಡ್ಡಿಕೊಳ್ಳುವುದು ಅಥವಾ ಜನ್ಮಜಾತ ತೊಂದರೆಗಳು ಇತ್ಯಾದಿ) ಕಾರಣದಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಈ ವಿಧದ ಶ್ರವಣ ದೋಷಕ್ಕೆ ಅನುಸರಿಸಬಹುದಾದ ಚಿಕಿತ್ಸಾ ಕ್ರಮ ಅಂದರೆ ಶಸ್ತ್ರಚಿಕಿತ್ಸೆ ಅಥವಾ ಶ್ರವಣ ಸಾಧನಗಳ ಬಳಕೆ.

3). ಮಿಶ್ರ ಶ್ರವಣ ದೋಷ ಅಂದರೆ ಕಂಡಕ್ಟಿವ್‌ ಮತ್ತು ಸೆನ್ಸೋನ್ಯೂರಲ್‌ ಶ್ರವಣ ದೋಷಗಳು ಜತೆಯಾಗಿ ಬರುವ ಒಂದು ಶ್ರವಣ ದೋಷ. ಈ ವರ್ಗದ ಶ್ರವಣ ದೋಷದಲ್ಲಿ ಹೊರ ಅಥವಾ ಮಧ್ಯ ಕಿವಿಯಲ್ಲಿ ಮತ್ತು ಒಳಕಿವಿಯಲ್ಲಿ ಅಸ್ವಸ್ಥತೆ ಇರಬಹುದು ಅಥವಾ ಹಾನಿ ಆಗಿರಬಹುದು.

ಹೆಚ್ಚಿನ ಮಾಹಿತಿಗಾಗಿ :
ಶ್ರೀ ಮಾತಾ ಹಿಯರಿಂಗ್ ಏಡ್ ಸೆಂಟರ್ , ಕುಂದಾಪುರ
9739249529
7899948131

ನವಜಾತ ಶಿಶುಗಳ ಶ್ರವಣ ಪರೀಕ್ಷೆ --                       ಶ್ರವಣ ಶಕ್ತಿ, ಅಂದರೆ ಕಿವಿ ಕೇಳಿಸುವಿಕೆ  ಇದು ಮೂಲ ಸಂವೇದನೆಗಳಲ್ಲೂ ಬಹಳ ವಿಶೇಷವ...
21/01/2019

ನವಜಾತ ಶಿಶುಗಳ ಶ್ರವಣ ಪರೀಕ್ಷೆ --

ಶ್ರವಣ ಶಕ್ತಿ, ಅಂದರೆ ಕಿವಿ ಕೇಳಿಸುವಿಕೆ ಇದು ಮೂಲ ಸಂವೇದನೆಗಳಲ್ಲೂ ಬಹಳ ವಿಶೇಷವಾದುದು ಮತ್ತು ಹೆಚ್ಚು ಅನಾದಿಯಾದುದು. ಕಿವಿ ಕೇಳಿಸುವ ಪ್ರಕ್ರಿಯೆಯನ್ನು, ತನ್ನ ಸುತ್ತಮುತ್ತಲಿನ ಹೆಚ್ಚಿನ ವಿವರಿಸಬಹುದು. ಸಾಕಷ್ಟು ಹಿಸುವ ಮನುಷ್ಯನ ಸಾಮರ್ಥ್ಯ ಎಂಬುದಾಗಿ ಶಬ್ದಗಳನ್ನು ಗ್ರ ಮಾತು ಮತ್ತು ಭಾಷಾ ಕೌಶಲಗಳನ್ನು ಗಳಿಸಬೇಕಾದರೆ ಶ್ರವಣ ಶಕ್ತಿಯು ಸಹಜವಾಗಿರಬೇಕಾದುದು ಅತ್ಯಂತ ಆವಶ್ಯಕ.
ಒಬ್ಬ ವ್ಯಕ್ತಿಯಲ್ಲಿ ಶಬ್ದಗಳನ್ನು ಕೇಳಿಸಿಕೊಳ್ಳಲು ಯಾವುದೇ ಮಟ್ಟದಲ್ಲಿ ಇರುವ ಅಸಾಮರ್ಥ್ಯಕ್ಕೆ ಶ್ರವಣ ನಷ್ಟ ಅಥವಾ ಕಿವುಡುತನ ಎಂದು ಹೇಳುತ್ತಾರೆ. ವ್ಯಕ್ತಿಯ ಸಂವಹನ ಮತ್ತು ಸಾಮಾಜಿಕ ಜೀವನದ ಮೇಲೆ ಕಿವುಡುತನವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಬಹುದು.

ಕಿವುಡುತನ ಇದೆ ಎಂಬುದನ್ನು ಆರಂಭದಲ್ಲೇ ಪತ್ತೆ ಮಾಡಲು ನಾವೇನು ಮಾಡಬಹುದು?

ಕಿವುಡುತನವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಪತ್ತೆ ಮಾಡುವುದು ಬಹಳ ಆವಶ್ಯಕ. ಜನಿಸಿದ ಮೊದಲ ತಿಂಗಳಲ್ಲೇ ಮಗುವಿನಲ್ಲಿ ಆರಂಭವಾಗುವ ಆಲಿಸುವಿಕೆಯ ಪ್ರಕ್ರಿಯೆಯು, ಮುಂದೆ ಅದನ್ನು ಮಾತನಾಡಲು ಸನ್ನದ್ಧಗೊಳಿಸುತ್ತದೆ. ಮಗುವಿನ ಮೆದುಳಿನಲ್ಲಿ ಹೊಸ ನರ ಜಾಲಗಳು ವಿಕಸನಗೊಳ್ಳುತ್ತಿರುವ ಕಾರಣ ಮಕ್ಕಳ ಮೆದುಳು ವಯಸ್ಕರ ಮೆದುಳಿಗಿಂತ ಹೆಚ್ಚು ಪ್ರಭಾವಗ್ರಾಹ್ಯ (ಸಂವೇದನಶೀಲ) ಆಗಿರುತ್ತದೆ ಮತ್ತು ಮಕ್ಕಳ ಮನಸ್ಸು ದೊಡ್ಡವರಿಗಿಂತಲೂ ಹೆಚ್ಚು ವೇಗವಾಗಿ, ಹೆಚ್ಚು ವಿಷಯಗಳನ್ನು ಗ್ರಹಿಸುತ್ತಿರುತ್ತದೆ.

ಒಂದುವೇಳೆ ಮಗುವಿಗೆ ಕಿವುಡುತನ ಇದ್ದಲ್ಲಿ, ಅದು ಆದಷ್ಟು ಬೇಗನೆ ಪತ್ತೆ ಆಯಿತು ಎಂದಾದರೆ, ಅದರಿಂದ ಆ ಮಗುವಿನ ಭಾಷಾ ಕಲಿಕೆ ಮತ್ತು ಸಾಮಾಜಿಕ ಬೆಳವಣಿಗೆಗೆ ಬಹಳ ಪ್ರಯೋಜನವಾಗುತ್ತದೆ. ತನ್ನ ಸುತ್ತಲೂ ತನ್ನ ಕುಟುಂಬದ ಸದಸ್ಯರು ಮಾತನಾಡುವುದನ್ನು ಕೇಳಿಸಿಕೊಂಡು ಮಗುವು ತಾನೂ ಮಾತನಾಡಲು ಕಲಿಯುತ್ತದೆ. ಮಗುವಿಗೆ ಕಿವುಡುತನ ಇದ್ದು, ಆ ಬಗ್ಗೆ ಯಾರಿಗೂ ತಿಳಿದೇ ಇಲ್ಲ ಎಂದು ಅಂದುಕೊಳ್ಳಿ. ಇದರಿಂದ ಮಗುವಿನ ಮಾತು ಮತ್ತು ಭಾಷಾ ಬೆಳವಣಿಗೆ ನಿಧಾನವಾಗಿ ಸಾಗುತ್ತದೆ. ಈ ರೀತಿಯ ನಿಧಾನವಾಗುವಿಕೆಯು ಆ ಬಳಿಕ ಮಗುವಿನ ಶೈಕ್ಷಣಿಕ ಜೀವನದಲ್ಲಿಯೂ ತೊಂದರೆ ಉಂಟು ಮಾಡುತ್ತದೆ. ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಮಾತು ಮತ್ತು ಕಲಿಕೆ ನಿಧಾನಗೊಳ್ಳುವುದನ್ನು ತಪ್ಪಿಸಬಹುದು.

ನವಜಾತ ಶಿಶುಗಳ ಶ್ರವಣ ಪರೀಕ್ಷೆ ಅನ್ನುವುದು ನಿಮ್ಮ ವಿ ಕೇಳಿಸುತ್ತಿದೆಯೇ ಇಲ್ಲವೇ ಅನ್ನುವುದನ್ನು ದೃಢಪಡಿಸುವ ಒಂದು ಮಗುವಿಗೆ ಸರಿಯಾಗಿ ಕಿ ಸ್ಕ್ರೀನಿಂಗ್ ಎಂಬುದು ತಪಾಸಣಾ ವಿಧಾನ. ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಮಕ್ಕಳಲ್ಲಿನ ಜನ್ಮಜಾತ ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವ ಒಂದು ಕಾರ್ಯ ವಿಧಾನ. ಮಗುವಿನ ಕಿವಿಯ ಒಂದು ನಿರ್ದಿಷ್ಟ ಕ್ಷೇತ್ರದ ಶ್ರವಣಶಕ್ತಿಯನ್ನು ಪರೀಕ್ಷಿಸಲು ಬಳಸುವ ಅಬೆjಕ್ಟಿವ್ ವಿಧಾನಗಳನ್ನು ಅದು ವಿವರಿಸುತ್ತದೆ. ನುರಿತ ಶ್ರವಣ ತಜ್ಞರು ಈ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಮಕ್ಕಳನ್ನು ಎರಡು ಪರೀಕ್ಷೆಯನ್ನು ನಡೆಸುತ್ತಾರೆ. ಈ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅಂದರೆ ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು ಮತ್ತು ಕಡಿಮೆ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು. ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳನ್ನು ತಪಾಸಣ ಪರೀಕ್ಷೆಗಳಿಗೆ ಶಿಫಾರಸು ಮಾಡಲಾಗುತ್ತದೆ.

ಒಂದು ವೇಳೆ ಮಗುವು ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ಆ ಮಗುವನ್ನು ಅನುಸರಣಾ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ನಾವು ತಿಳಿದಿರಬೇಕಾದ ಸಂಗತಿ ಅಂದರೆ, ಒಟ್ಟು ಮಕ್ಕಳಲ್ಲಿ ಶ್ರವಣ ನಷ್ಟ ಇರುವುದು ಕೇವಲ ಶೇ. 1ರಷ್ಟು ಮಕ್ಕಳಿಗೆ ಆದರೂ ಸುಮಾರು ಶೇ. 10ರಷ್ಟು ಮಕ್ಕಳೂ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ. ನವಜಾತ ಶಿಶುಗಳ ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದೆ ಇರಲು ಇರುವ ಪ್ರಮುಖ ಕಾರಣ ಅಂದರೆ, ಕಿವಿಯ ನಾಳಗಳಲ್ಲಿ ಕೊಳೆ ತುಂಬಿರುವುದು, ಮಧ್ಯ ಕಿವಿಯಲ್ಲಿ ದ್ರವ ತುಂಬಿರುವುದು ಅಥವಾ ಪರೀಕ್ಷೆಯ ಸಮಯದಲ್ಲಿ ಮಗುವು ಅತ್ತಿತ್ತ ಅಲುಗಾಡುವುದು/ಮಗುವು ಅಳುತ್ತಾ ಇರುವುದು.
ಆದರೆ ಹೆಚ್ಚಿನ ಮಕ್ಕಳು ಮುಂದಿನ ಹಂತದ ಅನುಸರಣಾ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. ಆದರೆ ಈ ಪರೀಕ್ಷೆಗೆ ಮಗುವನ್ನು ಒಳಪಡಿಸುವುದು ಬಹಳ ಆವಶ್ಯಕ ಯಾಕೆಂದರೆ, ಮಗುವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇರುವುದು ಇದೊಂದೇ ವಿಧಾನ.

ಕೆಲವು ಮಕ್ಕಳಲ್ಲಿ ಹುಟ್ಟುವಾಗ ಕಿವಿ ಕೇಳುವಿಕೆಯು ಸಹಜವಾಗಿದ್ದು, ಆ ಬಳಿಕ ಅಂದರೆ ನವಜಾತ ಶಿಶುವಿನ ಹಂತದ ಅನಂತರ ಕಿವಿ ಕೇಳಿಸದಿರುವ ತೊಂದರೆ ಕಾಣಿಸಿಕೊಳ್ಳಬಹುದು. ವಿವಿಧ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಾಗಿ ಈ ಪರಿಸ್ಥಿತಿ ಬರಬಹುದು. ಮಾತ್ರವಲ್ಲದೆ, ಏಟುಗಳು ಅಥವಾ ಕಾಯಿಲೆಗಳಿಗಾಗಿ ಬಳಸುವ ಕೆಲವು ಔಷಧಿಗಳಿಂದಾಗಿ ನವಜಾತ ಅನಂತರ ಶ್ರವಣ ನಷ್ಟ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಮಗುವಿನ ಶಿಶುವಿನ ಹಂತದ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಗಮನಿಸಲು ಮತ್ತು ಮಗುವಿನ ಕೇಳುವ ನಡವಳಿಕೆಯನ್ನು ವಿವಿಧ ಶಬ್ದಗಳಿಗೆ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರವಾಗಿ ಅಂದರೆ ವಿಶ್ಲೇಷಿಸಲು ನಿಯಮಿತ ಆಡಿಯೋಲಾಜಿಕಲ್ ಪರೀಕ್ಷೆಗೆ (ಶ್ರವಣ ಪರೀಕ್ಷೆ) ಶಿಫಾರಸು ಮಾಡಲಾಗುತ್ತದೆ.
ಹಿಯರಿಂಗ್ ಸ್ಕ್ರೀನಿಂಗ್ ಅಥವಾ ಶ್ರವಣ ಪರೀಕ್ಷೆ ಎನ್ನುವುದು ಸರಳ, ಸುರಕ್ಷಿತ ಮತ್ತು ನೋವು ರಹಿತ ಪರೀಕ್ಷೆ ಆಗಿದ್ದು, ಎಲ್ಲಾ ನವಜಾತ ಶಿಶುಗಳಿಗೂ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಯಾಕೆಂದರೆ ಈ ಪರೀಕ್ಷೆಯು ಮಗುವಿನ ಶ್ರವಣ ನಷ್ಟವನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಮಗುವಿನ ಭವಿಷ್ಯವನ್ನು ಬದಲಾಯಿಸುತ್ತದೆ.

ಈ ಎಲ್ಲ ಸೇವೆಗಳು ಶ್ರೀ ಮಾತಾ ಹಿಯರಿಂಗ್ ಏಡ್ ಸೆಂಟರ್ ನಲ್ಲಿ ಲಭ್ಯವಿದೆ .

16/01/2019

Oticon Hearing Aids are tested so you can count on them to perform, day in and day out. In this quality test, we submerge the hearing aids in one meter of water for two hours to meet the standard of rate resistency.



Available @ Sri Matha Hearing Aid

TOP 4 FOODS FOR HEALTHY EARS  --                   When it comes to health awareness, the first thing we typically think...
14/01/2019

TOP 4 FOODS FOR HEALTHY EARS --

When it comes to health awareness, the first thing we typically think about is food. The right types of food can help to nourish our bodies and cleanse us from dangerous diseases and toxins. However, we tend to forget that our own ears need nutrition in order to be healthy.

Various minerals found in some our favorite foods that help to keep our ears in tuned. Here are some examples…

1. Bananas :
Magnesium is the essential mineral found in this smoothie favorite item. It helps to protect against hearing loss by expanding the blood vessels and improving the circulation within the ears. Bananas can be eaten in various ways, the classic peeled way, the cereal way, or the smoothie way.

2. Broccoli :
Broccoli is filled with all kinds of amazing nutrients like vitamin K, vitamin C, and fiber. These nutrients can helps stop free radicals from damaging the delicate and sensitive tissue in your ears.

3. Fish :
Recent studies show that the intake of fish, such as sardines, tuna, salmon, and trout, are excellent sources for Omega 3 and Vitamin D. Omega 3 helps to protect the heart and reduce the risk of hearing loss. So grab your fishing rods and head to the lake today. Vitamin D strengthens the middle bones in your ear, which will prevent osteopenia and otosclerosis.

4. Dark Chocolate :
Dark chocolate is an excellent source for Zinc. This mineral is responsible for strengthening the immune system, which in turn guards the ears from infections and improves cell growth.

ಕಿವಿ ನೋವು ಅಥವಾ ಸೋಂಕು ಎಲ್ಲಾ ಪ್ರಾಯದವರನ್ನು ಕಾಡುವಂತಹ ಒಂದು ಸಾಮಾನ್ಯ ಅಂತೆಯೇ ತೀಕ್ಷ್ಣ ಸಮಸ್ಯೆಯಾಗಿದೆ. ಮಕ್ಕಳಿಂದು ಹಿಡಿದು ದೊಡ್ಡವರನ್ನೂ ...
14/01/2019

ಕಿವಿ ನೋವು ಅಥವಾ ಸೋಂಕು ಎಲ್ಲಾ ಪ್ರಾಯದವರನ್ನು ಕಾಡುವಂತಹ ಒಂದು ಸಾಮಾನ್ಯ ಅಂತೆಯೇ ತೀಕ್ಷ್ಣ ಸಮಸ್ಯೆಯಾಗಿದೆ. ಮಕ್ಕಳಿಂದು ಹಿಡಿದು ದೊಡ್ಡವರನ್ನೂ ಕಾಡುವ ಈ ನೋವು ಕಿರಿಕಿರಿ ಮತ್ತು ಭಯಂಕರ ವೇದನೆಯನ್ನುಂಟುಮಾಡುತ್ತದೆ.

ಸಣ್ಣ ಕಂಪಿಸುವ ಕಿವಿ ಮೂಳೆಗಳ ಖಾಲಿ ಸ್ಥಳ ಒಳಗೊಂಡಂತೆ ಕಿವಿ ತಮಟೆಯ ಹಿಂಭಾಗದಲ್ಲಿ ಕಿವಿಯ ಮಧ್ಯ ಭಾಗವನ್ನು ಇದು ಸಾಮಾನ್ಯವಾಗಿ ಹಾನಿ ಮಾಡುತ್ತದೆ. ಕಿವಿಯ ಸೋಂಕಿನ ಪರಿಣಾಮ ಮತ್ತು ಅದು ನಿಮ್ಮನ್ನು ಬಾಧಿಸುತ್ತಿರುವ ವಿಧಾನವನ್ನು ಅನುಸರಿಸಿ ಇದಕ್ಕೆ ಚಿಕಿತ್ಸೆಯನ್ನು ಒದಗಿಸಬಹುದು. ಕಿವಿಯ ಉರಿಯೂತದಿಂದ ಉಂಟಾಗುವ ಕಿವಿ ನೋವು ಹೆಚ್ಚು ಬಾಧಿಸುತ್ತಿರುವ ಸೋಂಕಾಗಿದೆ.

ಕಿವಿ ನೋವಿಗೆ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಇಲ್ಲವೇ ಕೆಲವೊಂದು ಮನೆಮದ್ದುಗಳ ಬಳಕೆಯಿಂದ ತಹಬಂದಿಗೆ ತಂದುಕೊಳ್ಳಬಹುದಾಗಿದೆ. ಕಿವಿ ಸೋಂಕಿನ ವಿಪರೀತ ನೋವು ಮತ್ತು ಸೋರಿಕೆಯನ್ನು ತಡೆಗಟ್ಟಲು ಶೀಘ್ರ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾದ್ದು ಅತ್ಯವಶ್ಯಕವಾಗಿದೆ.

ನೋವಿರುವ ಕಿವಿಗೆ ಬಿಸಿಯ ಸ್ಪರ್ಶ --
ಸೋರುತ್ತಿರುವ ಕಿವಿಯಲ್ಲಿ ನೋವು ವಿಪರೀತವಾಗಿದ್ದರೆ, ನೀವು ಹೀಟ್ ಪ್ಯಾಡ್ ಅಥವಾ ಬಿಸಿ ನೀರ ಪ್ಯಾಡ್ ಅನ್ನು ಆ ಕಿವಿಗೆ ಬಳಸಬಹುದಾಗಿದೆ. ಬಿಸಿ ನೀರ ಪ್ಯಾಡ್ ಕಿವಿಗೆ ಶಮನವನ್ನು ನೀಡಿ ಸೋರುವುದನ್ನು ತಡೆಗಟ್ಟುತ್ತದೆ. ಸೋರುತ್ತಿರುವ ಕಿವಿಯ ಸಮಸ್ಯೆಯನ್ನು ಹೊಂದಿರುವ ಯಾರು ಕೂಡ ಹಾಟ್ ವಾಟರ್ ಪ್ಯಾಡ್ ಅನ್ನು ಕಿವಿ ನೋವಿನ ಉಪಶಮನಕ್ಕೆ ಬಳಸಬಹುದಾಗಿದೆ.

ಇಯರ್ ಫೋನ್‌ಗಳನ್ನು ಬಳಸದಿರಿ --
ನಿಮ್ಮ ಕಿವಿ ವಿಪರೀತ ನೋವನ್ನು ಉಂಟುಮಾಡುತ್ತಿದ್ದರೆ, ಇಯರ್ ಫೋನ್‌ಗಳನ್ನು ಬಳಸದಿರುವ ತಕ್ಕ ಸಮಯ ಇದಾಗಿದೆ. ಒಮ್ಮೊಮ್ಮೆ ಇಯರ್ ಫೋನ್‌ಗಳಿಂದ ಬರುವಂತಹ ನೇರ ವಿಪರೀತ ಧ್ವನಿ ನಿಮ್ಮ ಕಿವಿ ತಮಟೆಗೆ ಹಾನಿಯನ್ನುಂಟುಮಾಡಬಹುದು. ಹೆಚ್ಚುವರಿ ಹಾನಿಯಿಂದ ಕಿವಿಯನ್ನು ಕಾಪಾಡಿಕೊಳ್ಳುವುದು ಕೂಡ ಕಿವಿ ನೋವಿನಿಂದ ಪರಿಹಾರವನ್ನು ಕಂಡುಕೊಳ್ಳುವ ಒಂದು ವಿಧಾನವಾಗಿದೆ. ದೊಡ್ಡ ಧ್ವನಿ ಮತ್ತು ಶಬ್ಧಗಳು ನಿಮ್ಮ ಕಿವಿಯನ್ನು ತಲುಪದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಇಯರ್ ಪ್ಲಗ್ ಬಳಸುವುದಕ್ಕಿಂತ ಹತ್ತಿಯ ಪ್ಲಗ್ ಅನ್ನು ಬಳಸುವುದು ಕೂಡ ಕಿವಿಗುಂಟುಮಾಡುವ ಹೆಚ್ಚುವರಿ ಧ್ವನಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಒತ್ತಡ ಹೊಂದದಿರಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ --
ನೀವು ಕಿವಿ ನೋವನ್ನು ಹೊಂದಿರುವ ಸಮಯದಲ್ಲಿ ಹೆಚ್ಚು ಒತ್ತಡವನ್ನು ಅನುಭವಿಸುವುದಕ್ಕಿಂತ ವಿಶ್ರಾಂತಿಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಹೆಚ್ಚು ಗಾಳಿಗೆ ಓಡಾಡುವುದನ್ನು ತಡೆಗಟ್ಟಿ ಮತ್ತು ನಿಮ್ಮ ಕಿವಿಗೆ ನೀರು ಹೋಗದಂತೆ ಎಚ್ಚರ ವಹಿಸಿ. ಇದರಿಂದ ನಿಮ್ಮ ಕಿವಿ ಸೋರುವಿಕೆ ಮತ್ತು ನೋವು ನಿಯಂತ್ರಣಕ್ಕೆ ಬರುತ್ತದೆ. ಕೆಲಸದ ಹೆಚ್ಚುವರಿ ಒತ್ತಡವನ್ನು ನಿಮ್ಮ ಮೇಲೆ ತಂದುಕೊಳ್ಳಬೇಡಿ ಮತ್ತು ಈ ಸಮಯದಲ್ಲಿ ಕಿವಿಯಾಭರಣವನ್ನು ಧರಿಸದಿರುವುದು ಉತ್ತಮ.

ತಜ್ಞರ ಸಲಹೆಯನ್ನು ಪಡೆದುಕೊಳ್ಳಿ --
ಕಿವಿಯ ಸೋಂಕಿಗೆ ನಾವು ಮೇಲೆ ತಿಳಿಸಿರುವ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ, ಅಥವಾ ಈ ವಿಧಾನವನ್ನು ಅನುಸರಿಸಿ ಕೂಡ ನಿಮ್ಮ ನೋವು ಮತ್ತು ಕಿವಿ ಸೋರಿಕೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ ನೀವು ತಜ್ಞರನ್ನು ಕಾಣುವುದು ಅತ್ಯವಶ್ಯಕವಾಗಿದೆ. ಕಿವಿಯು ನಮ್ಮ ದೇಹದಲ್ಲಿರುವ ಸೂಕ್ಷ್ಮ ಅಂಗವಾಗಿರುವುದರಿಂದ ಇದರ ಬಗ್ಗೆ ನಿರ್ಲಕ್ಷ್ಯವನ್ನು ತಾಳುವುದು ಸರಿಯಲ್ಲ. ಕಿವಿಯು ನಮ್ಮ ದೇಹದ ಮುಖ್ಯ ಭಾಗವಾಗಿರುವುದರಿಂದ ಮತ್ತು ದೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಕಿವಿಯನ್ನು ಕುರಿತು ಹೆಚ್ಚು ಜಾಗ್ರತೆ ಮತ್ತು ಮುತುವರ್ಜಿಯನ್ನು ವಹಿಸುವುದು ಆವಶ್ಯಕವಾಗಿದೆ.

04/01/2019

INTERTON HEARING AIDS --available @ Sri Matha Hearing Aid Centre

04/01/2019

HOW TO CLEAN HEARING AIDS & OTHER MAINTENANCE TIPS-

> Always keep them clean and dry. Keep your hearing aids away from water and excessive sweat
> To preserve the battery life when not in use, open the battery compartment door so the battery isn't in contact with any internal components
> Clean your hearing aids everyday
> Don't use household cleaning fluids, oil or alcohol to clean
> At bedtime, store your hearing aids in a hearing aid drying kit that you can get from your hearing care professional or audiologists
> Make sure to remove your hearing aids before swimming and showering, and avoid applying sticky products , such as hairspray, when wearing your hearing aids
> Its also a good idea to check your pockets before washing clothes in case you've taken them out and put them in your pocket. Hearing aids don't like going through the washing machine

New Year's come again to give us new hope and inspiration to be better human beings.HAVE A SUCCESSFUL NEW YEAR.
01/01/2019

New Year's come again to give us new hope and inspiration to be better human beings.

HAVE A SUCCESSFUL NEW YEAR.

28/12/2018

Why improve your hearing?

Treating your hearing loss and improving your hearing can :

* Help you stay connected with your friends and loved ones
* Increase your ability to participate in conversations
* Make it easier for the people around you
* Give you more confidence in social situations
* Keep alert to important sounds like alarms, approaching cars, the phone or a doorbell
* Bring back the subtle noises in nature and music that you love
* Keep your brain active and engaged

28/12/2018

Hearing loss: you are not alone

Hearing loss is common. In fact, more than 400 million people around the world have some form of hearing problems.

And yet, you may say: "I'm not really the type of person who wears a hearing aid." These days though, they're very different to the types you might remember. In fact, nowadays wearing hearing aid is more like wearing glasses or a cool pair of wireless earphones.

Address

Church Road, Kundapur
Kundapura
576201

Telephone

7899948131

Website

Alerts

Be the first to know and let us send you an email when Sri Matha Hearing Aid Centre posts news and promotions. Your email address will not be used for any other purpose, and you can unsubscribe at any time.

Share

Category