Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

  • Home
  • India
  • Malur
  • Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು 1. For updating health related issues
2. Social service. Upliftment of poor and downtrodden.

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡 ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿ...
22/04/2025

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡

ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪ್ರವಾಸಿಗರ ಮೇಲೆ ಭಯೋತ್ಪಾದಕರಿಂದ ನಡೆದಿರುವ ಹೀನ ಕೃತ್ಯದಿಂದ ನನ್ನ ಕರುನಾಡಿನ ಇಬ್ಬರು ಸೇರಿ ದೇಶದ 30ಕ್ಕೂ ಹೆಚ್ಚು ನಾಗರೀಕರು ಅಸುನೀಗಿರುವುದು ನಮ್ಮೆಲ್ಲರಿಗೂ ಅತ್ಯಂತ ನೋವುಂಟು ಮಾಡಿದೆ.

ಈ ಕೃತ್ಯಕ್ಕೆ ಕಾರಣಕರ್ತರಾದ ಉಗ್ರಗಾಮಿಗಳಿಗೆ ಯಾವುದೇ ಕರುಣೆ ಇಲ್ಲದೆ ಅತ್ಯಂತ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಇಡೀ ಭಾರತ ದೇಶ ಒತ್ತಾಯಿಸುತ್ತಿದೆ.

ಈ ಧಾರ್ಮಿಕ ಮೂಲಭೂತವಾದಿಗಳನ್ನು ಪಕ್ಷಾತೀತವಾಗಿ ಯಾವುದೇ COURTESY ಇಲ್ಲದೆ ಹತ್ತಿಕ್ಕುವ ಕೆಲಸ ಆಗಲೇ ಬೇಕು. THEY SHOULD NOT BE SPARED.

ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ, ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ತುಂಬಾ ನೋವಿನಿಂದ ಹೇಳಲು ಇಚ್ಚಿಸುತ್ತೇನೆ.

ನೇರಳೆ ಹಣ್ಣು😊ಈ ದಿನ ಆಸ್ಪತ್ರೆಯಲ್ಲಿ ಬೈರ್ನಳ್ಳಿ ಗ್ರಾಮದ ಒಂದು ಮಗುವಿನ ತಾಯಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ನೇರಳೆ ಹಣ್ಣನ್ನು ನನಗೂ ಸೇರಿದಂತೆ...
08/07/2024

ನೇರಳೆ ಹಣ್ಣು😊

ಈ ದಿನ ಆಸ್ಪತ್ರೆಯಲ್ಲಿ ಬೈರ್ನಳ್ಳಿ ಗ್ರಾಮದ ಒಂದು ಮಗುವಿನ ತಾಯಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ನೇರಳೆ ಹಣ್ಣನ್ನು ನನಗೂ ಸೇರಿದಂತೆ ನಮ್ಮೆಲ್ಲ ಸಿಬ್ಬಂದಿ ವರ್ಗಕ್ಕೆ ಪ್ರೀತಿಯಿಂದ ತಂದುಕೊಟ್ಟು ಇನ್ನೂ ಬೇಕಾ ಸರ್ ಎಂದು ಕೇಳಿದಾಗ ನಮ್ಮ ಅವರ ಸಂಬಂಧ ವೈದ್ಯ ರೋಗಿ ಸಂಬಂಧಕ್ಕಿಂಥ ಹೆಚ್ಚಿನದ್ದು ಎಂದು ಖುಷಿ ಆಯ್ತು. ಈ ಹಣ್ಣು ಎಷ್ಟು ಉಪಕಾರಿ ನಮ್ಮ ದೇಹಕ್ಕೆ ಎಂದು ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ thanks ಹೇಳಿದೆ.

ಈ ಹಣ್ಣು ಸೇರಿದಂತೆ ಕಾಡಿನಲ್ಲಿ ಬೆಳೆಯುವ ಸೀತಾಫಲ, ನಲ್ಲಿಕಾಯಿ, ಚೇಪೆಹಣ್ಣು, ಮರಸೇಬು, ಗೆಣಸು ಇವೆಲ್ಲ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಣ್ಣುಗಳಲ್ಲಿ ಹೆತ್ತೇಚ್ಛವಾಗಿ ANTIOXIDANTS, VITAMINS, FIBRE, POTASSIUM ಸೇರಿದಂತೆ ಇನ್ನೂ ಹಲವಾರು ಪೋಷಕಾಂಶಗಳು ಇರುತ್ತದೆ. ಈ ಹಣ್ಣು ಸಕ್ಕರೆ ಖಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್ ತೊಂದರೆಗಳಲ್ಲಿ ತುಂಬಾ ಸಹಕಾರಿ. ಈ ಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರಿಂದ ನಾವು ಬೇಗ ಯಾವುದೇ ಖಾಯಿಲೆಗೆ ತುತ್ತಾಗುವುದಿಲ್ಲ. ತುತ್ತಾದರೂ, ಖಾಯಿಲೆ ಬೇಗ ವಾಸಿಯಾಗಲು ಇದು ಸಹಾಯಕಾರಿ. ನಮ್ಮ ದೇಹದಲ್ಲಿ ರಕ್ತಕಣಗಳ ಉತ್ಪತ್ತಿಯನ್ನು ಸಹ ವೃದ್ಧಿಸುತ್ತದೆ. POTASSIUM ಅಂಶ ಹೆಚ್ಚಿರುವುದರಿಂದ ಹೃದಯಕ್ಕೆ ಸಹಕಾರಿ.

ಕಾರಣಾಂತರಗಳಿಂದ ಮಧ್ಯಾಹ್ನದ ಊಟ skip ಆಗಿತ್ತು. ಆ ತಾಯಿಕೊಟ್ಟ ಈ ನೇರಳೆ ಹಣ್ಣಿನ ಚೀಲದಲ್ಲಿ ಅರ್ಧ ಮುಗಿಸಿ ಮಾನಸಿಕವಾಗಿ ಇಷ್ಟೆಲ್ಲ ಪೋಷಕಾಂಶಗಳು ನನ್ನನ್ನು ಸೇರಿತು ಎಂದು ಖುಷಿಪಟ್ಟೆ😄

ಸಿದ್ದೇಶ್ವರ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ನನ್ನ ಆಸ್ಪತ್ರೆಗೆ ಬಂದು ರಾಷ್ಟ್ರೀಯ ವೈದ್ಯರ ದಿನದ ಶುಭಾಶಯ ಕೋರಿದ ಸಂದರ್ಭ❤️  ಈ ನಿಷ್ಕಲ್ಮಶ ಪ್ರೀ...
01/07/2024

ಸಿದ್ದೇಶ್ವರ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ನನ್ನ ಆಸ್ಪತ್ರೆಗೆ ಬಂದು ರಾಷ್ಟ್ರೀಯ ವೈದ್ಯರ ದಿನದ ಶುಭಾಶಯ ಕೋರಿದ ಸಂದರ್ಭ❤️

ಈ ನಿಷ್ಕಲ್ಮಶ ಪ್ರೀತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು😍

When you experience love from tiny hearts at the receiving end, it's such a pure emotion😊❤️

ಸಮಸ್ತ ನಾಡಿನ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು😊
27/06/2024

ಸಮಸ್ತ ನಾಡಿನ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು😊

At ಕುಂತೂರು ಸಂತೆ with my dad😊
09/06/2024

At ಕುಂತೂರು ಸಂತೆ with my dad😊

ವಿಶ್ವ ಪರಿಸರ ದಿನಾಚರಣೆ.ತೊರಲಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ😊
05/06/2024

ವಿಶ್ವ ಪರಿಸರ ದಿನಾಚರಣೆ.

ತೊರಲಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ😊

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕನ...
16/05/2024

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಮತ್ತು ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ಗೆ ಅಭಿನಂದನೆಗಳು.

ರಾಜ್ಯದ ರೈತರು ಕಟ್ಟಿ, ಉಳಿಸಿ, ಬೆಳೆಸಿದ KMF ಇಂದು ಹೈನುಗಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆ❤️

ಕರ್ನಾಟಕದ ಕೋಟ್ಯಂತರ ರೈತರ ಬೆನ್ನೆಲುಬಾಗಿ ಅವರ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಸಹಕಾರಿ ಸಂಸ್ಥೆಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏

ವಿಶ್ವ ತಾಯಂದಿರ ದಿನದ ಶುಭಾಶಯಗಳು.ಮಕ್ಕಳಿಗಾಗಿ ಸದಾ ಮಿಡಿಯುವ ಜೀವ ಅಮ್ಮ.ಆಕೆಯ ಆಶೀರ್ವಾದ, ಪ್ರೇರಣೆಯಿಂದ ಜಗತ್ತನ್ನೇ ಗೆಲ್ಲಬಹುದು.....🙏
12/05/2024

ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಮಕ್ಕಳಿಗಾಗಿ ಸದಾ ಮಿಡಿಯುವ ಜೀವ ಅಮ್ಮ.
ಆಕೆಯ ಆಶೀರ್ವಾದ, ಪ್ರೇರಣೆಯಿಂದ ಜಗತ್ತನ್ನೇ ಗೆಲ್ಲಬಹುದು.....🙏

ಈ ಹೊಸ ವರ್ಷ ನಮ್ಮೆಲ್ಲರಿಗೂ ಹರ್ಷವನ್ನು ತರಲಿ. ಯುಗಾದಿಯ ಈ ದಿನ ನಾವೆಲ್ಲರೂ ಖುಷಿಯಿಂದ ಎಲ್ಲರಿಗೂ ಖುಷಿಯನ್ನು ಹಂಚುತ್ತಾ ಒಳ್ಳೇದನ್ನು ಬಯಸೋಣ. ಯ...
09/04/2024

ಈ ಹೊಸ ವರ್ಷ ನಮ್ಮೆಲ್ಲರಿಗೂ ಹರ್ಷವನ್ನು ತರಲಿ. ಯುಗಾದಿಯ ಈ ದಿನ ನಾವೆಲ್ಲರೂ ಖುಷಿಯಿಂದ ಎಲ್ಲರಿಗೂ ಖುಷಿಯನ್ನು ಹಂಚುತ್ತಾ ಒಳ್ಳೇದನ್ನು ಬಯಸೋಣ. ಯುಗದ ಆದಿಯ ದಿನದಿಂದ ರಾಜ್ಯದಲ್ಲಿ ಒಳ್ಳೆ ಮಳೆ, ಬೆಳೆ ಶುರುವಾಗಲಿದೆ. ರೈತಾಪಿವರ್ಗದ ಜನರಲ್ಲಿ ಸಂತಸ ಮೂಡಿಸಲಿದೆ. ಅದುವೇ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯ ಸಂಕೇತ😊

ತಮ್ಮೆಲ್ಲರಿಗೂ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇರಲೆಂದು ನಿಮ್ಮ ಡಾ. ಕಿರಣ್ ಸೋಮಣ್ಣನ ಹಾರ್ದಿಕ ಶುಭಕಾಮನೆಗಳು💐🙏

ಇಂದು ಮಾಲೂರು ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನೆಡೆದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ವತಿಯಿಂದ...
10/03/2024

ಇಂದು ಮಾಲೂರು ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನೆಡೆದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ವತಿಯಿಂದ ನೆಡೆದ ತಾಲ್ಲೂಕು ಮಟ್ಟದ ಜನಸ್ಪಂದನಾ ಮತ್ತು ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನಮ್ಮ ಜನಪ್ರಿಯ ಶಾಸಕರಾದ ಶ್ರೀ ಕೆ. ವೈ. ನಂಜೇಗೌಡಣ್ಣ ರವರೊಂದಿಗೆ ವೇದಿಕೆ ಹಂಚಿಕೊಂಡು ಮಾತನಾಡಿದೆ.

ಕಾರ್ಮಿಕರ ವಿಚಾರ ಬಂದಾಗ ನಮಗೆಲ್ಲಾ ನೆನಪಾಗಬೇಕಿರುವುದು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರು. ಕಾರ್ಮಿಕ ಕಾಯ್ದೆ ತಂದು ಕೆಲಸದ ಸಮಯವನ್ನು 8 ಗಂಟೆಗೆ ಸೀಮಿತಗೊಳಿಸಿದ್ದು ಅವರು. ಮಹಿಳೆಯರಿಗೂ ಕೆಲಸ ಮಾಡುವ ಸಮಾನ ಅವಕಾಶ ಮಾಡಿಕೊಟ್ಟಿದ್ದು ಅವರು. ಎಲ್ಲರಿಗೂ ಕೆಲಸ ಮಾಡುವ ಹಕ್ಕನ್ನು ನೀಡಿದ್ದು ಸಂವಿಧಾನ.

ಕಾರ್ಮಿಕ ಸಂಘಟನೆ, ಕಾರ್ಮಿಕರಿಗೆ ಪ್ರತಿನಿತ್ಯದ ತೊಂದರೆಗಳು-ಕುಂದು ಕೊರತೆಗಳು, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ಕಾರ್ಯಕ್ರಮಗಳು, ಅಸಂಘಟಿತ ಕಾರ್ಮಿಕರ ಬೇಡಿಕೆಗಳು ಹಾಗೆ ನೋಂದಣಿ ವಿವರಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ವೇದಿಕೆ ಸಹಕಾರಿಯಾಯಿತು. ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿನ ಗ್ರಾಮೀಣ ಭಾಗದ ಯುವಕ ಮಿತ್ರರು ಉದ್ಯೋಗ ಅರಸಿ ಬೇರೆ ಕಡೆ ಹೋಗುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಶಾಸಕರು ಖಂಡಿತಾ ಸೂಕ್ತ ನಿರ್ಧಾರ ಮತ್ತು ಯೋಜನೆ ರೂಪಿಸುತ್ತಾರೆ ಎನ್ನುವ ಅಚಲ ನಂಬಿಕೆ ನನ್ನಲಿದೆ.😊🙏
KY Nanjegowda
Santosh Lad

ನನಗೆ ಇವರ ಪರಿಚಯವಿಲ್ಲ. ಇವರು ಮಾಲೂರಿನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕುಟುಂಬ. ಜೀವನದಲ್ಲಿ ಏನಾದರೂ ಮಾಡಬೇಕು, ದುಡಿದು ಅವರ ಮುಂದಿನ ಜೀವನ...
26/02/2024

ನನಗೆ ಇವರ ಪರಿಚಯವಿಲ್ಲ. ಇವರು ಮಾಲೂರಿನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕುಟುಂಬ. ಜೀವನದಲ್ಲಿ ಏನಾದರೂ ಮಾಡಬೇಕು, ದುಡಿದು ಅವರ ಮುಂದಿನ ಜೀವನ, ಪೀಳಿಗೆ ಒಂದು ಘಟ್ಟ ಮುಂದಕ್ಕೆ ಹೋಗಬೇಕೆನ್ನುವ ಹಸಿವು ಇವರನ್ನು ಒಂದು ಮೆಸ್ ಮಾಡಲು ಉತ್ತೇಜಿಸುತ್ತದೆ. ಆ ಮೆಸ್ಸನ್ನು ನನ್ನಿಂದ open ಮಾಡಿಸಬೇಕು ಎಂದು ಬಂದು ನನ್ನನ್ನು ಕೇಳಿದಾಗ ಖುಷಿಯಿಂದ ಒಪ್ಪಿಕೊಂಡು ಅವರ ಬಳಿ ನಾನೇ ಯಾಕೆ ಎಂದು ಕುತೂಹಲದಿಂದ ಕೇಳಿದೆ “ಮೀರು ಮಂಚಿ ಮನಸುತೋ wish ಚೇಸ್ಥಾರು” ಎಂದು ಮುಗುಳ್ನಗೆಯಿಂದ ಹೇಳಿದಾಗ ಖುಷಿ ಜೊತೆಗೆ ಭಾವುಕನೂ ಆದೆ😊

ಬೆಳ್ಳಿಗ್ಗೆ ಹೋಟೆಲ್, ರಾತ್ರಿ ಕಾರ್ಖಾನೆಯ ಕೆಲಸ ಮಾಡಲು ಮನಸ್ಸು ಮಾಡಿರುವ ಈ ಕುಟುಂಬ ಮಾಲೂರಿನ ರೈಲ್ವೆ ಬ್ರಿಡ್ಜ್ ಬಳಿ ಇರುವ ICICI ಬ್ಯಾಂಕ್ ಪಕ್ಕದಲ್ಲಿ ಹೋಟೆಲ್ ಶುರು ಮಾಡಿದ್ದಾರೆ.

ಶುಚಿಕರವಾದ, ರುಚಿಯಾದ ಊಟ ಕೊಡುವ ದೊಡ್ಡ ಕೇಂದ್ರವಾಗಿ ಬೆಳೆಯಲಿ. ಶುಭವಾಗಲಿ ನಿಮಗೆ😊💐

Address

S/o Malur Anjani Somanna, Anjani Child Care, Near State Bank Of Mysore And Post Office
Malur
563130

Alerts

Be the first to know and let us send you an email when Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category