Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

  • Home
  • India
  • Malur
  • Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು

Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು 1. For updating health related issues
2. Social service. Upliftment of poor and downtrodden.

11/10/2025

ಈ ಸಮಾಜದಲ್ಲಿ ಮದುವೆಯಾಗಿ ಮಕ್ಕಳಾಗಿಲ್ಲ ಎನ್ನುವುದು ಗಂಡ,ಹೆಂಡತಿ ಹಾಗೂ ಮನೆಯ ಎಲ್ಲಾ ಸದಸ್ಯರುಗಳಿಗೆ ಒಂದು ಮಾನಸಿಕ ಒತ್ತಡ. ಬದಲಾಗುತ್ತಿರುವ ತಿಂಡಿ ತಿನಿಸುಗಳು, ಕೆಟ್ಟ ಅಭ್ಯಾಸಗಳು, ಪರಿಸರ ಮಾಲಿನ್ಯ, ಗಂಡು ಹಾಗೂ ಹೆಣ್ಣಿನ hormones ಗಳಲ್ಲಿ ವ್ಯತಿರಿಕ್ತವಾದ ಬದಲಾವಣೆಗೆ ಕಾರಣವಾಗುತ್ತಿದೆ. ಇದರಿಂದಾಗಿ ಕೆಲವರಲ್ಲಿ ಮಕ್ಕಳಾಗುವುದು ನಿಧಾನವಾಗಿ ಬಂಜೆತನದಿಂದ ಬಳಲುವ ಪರಿಸ್ಥಿತಿ ಬರುತ್ತಿದೆ.

ಆ ನಿಟ್ಟಿನಲ್ಲಿ ಇದೆ ಭಾನುವಾರ, 12ನೆ ಅಕ್ಟೋಬರ್ 2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾಲೂರಿನ ಅಂಜನಿ ಆಸ್ಪತ್ರೆ ಆವರಣದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಡಾ. ಕಿರಣ್ ಸೋಮಣ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನುರಿತ infertility specialists ರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿ ಉಚಿತವಾಗಿ tests ಮಾಡುವ ಒಂದು ವ್ಯವಸ್ಥೆಯನ್ನು ಮಾಡಿದ್ದೇವೆ.

ನನ್ನ ಮಾಲೂರು ತಾಲ್ಲೂಕಿನ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ😊🙏

ನನ್ನ ಹಿತೈಷಿಗಳು, ಕುಟುಂಬ ಹಾಗೂ ತಾಲ್ಲೂಕಿನ ಜನರಿಂದ ನಮ್ಮ ಆತ್ಮವಿಶ್ವಾಸ ಪ್ರತಿನಿತ್ಯವೂ ಹೆಚ್ಚುತ್ತಿದೆ.  ಒಂದು ಸಿದ್ಧಾಂತವನ್ನು ನಂಬಿ ಪ್ರತಿಪ...
10/10/2025

ನನ್ನ ಹಿತೈಷಿಗಳು, ಕುಟುಂಬ ಹಾಗೂ ತಾಲ್ಲೂಕಿನ ಜನರಿಂದ ನಮ್ಮ ಆತ್ಮವಿಶ್ವಾಸ ಪ್ರತಿನಿತ್ಯವೂ ಹೆಚ್ಚುತ್ತಿದೆ. ಒಂದು ಸಿದ್ಧಾಂತವನ್ನು ನಂಬಿ ಪ್ರತಿಪಾದಿಸುತ್ತಿರುವ ನಾನು ಸದಾ ಅದರೊಂದಿಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲುತ್ತೇನೆ✊

Every day is another chance at growing stronger, wiser and working towards the goal😊

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡 ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿ...
22/04/2025

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡

ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪ್ರವಾಸಿಗರ ಮೇಲೆ ಭಯೋತ್ಪಾದಕರಿಂದ ನಡೆದಿರುವ ಹೀನ ಕೃತ್ಯದಿಂದ ನನ್ನ ಕರುನಾಡಿನ ಇಬ್ಬರು ಸೇರಿ ದೇಶದ 30ಕ್ಕೂ ಹೆಚ್ಚು ನಾಗರೀಕರು ಅಸುನೀಗಿರುವುದು ನಮ್ಮೆಲ್ಲರಿಗೂ ಅತ್ಯಂತ ನೋವುಂಟು ಮಾಡಿದೆ.

ಈ ಕೃತ್ಯಕ್ಕೆ ಕಾರಣಕರ್ತರಾದ ಉಗ್ರಗಾಮಿಗಳಿಗೆ ಯಾವುದೇ ಕರುಣೆ ಇಲ್ಲದೆ ಅತ್ಯಂತ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಇಡೀ ಭಾರತ ದೇಶ ಒತ್ತಾಯಿಸುತ್ತಿದೆ.

ಈ ಧಾರ್ಮಿಕ ಮೂಲಭೂತವಾದಿಗಳನ್ನು ಪಕ್ಷಾತೀತವಾಗಿ ಯಾವುದೇ COURTESY ಇಲ್ಲದೆ ಹತ್ತಿಕ್ಕುವ ಕೆಲಸ ಆಗಲೇ ಬೇಕು. THEY SHOULD NOT BE SPARED.

ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ, ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ತುಂಬಾ ನೋವಿನಿಂದ ಹೇಳಲು ಇಚ್ಚಿಸುತ್ತೇನೆ.

ನೇರಳೆ ಹಣ್ಣು😊ಈ ದಿನ ಆಸ್ಪತ್ರೆಯಲ್ಲಿ ಬೈರ್ನಳ್ಳಿ ಗ್ರಾಮದ ಒಂದು ಮಗುವಿನ ತಾಯಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ನೇರಳೆ ಹಣ್ಣನ್ನು ನನಗೂ ಸೇರಿದಂತೆ...
08/07/2024

ನೇರಳೆ ಹಣ್ಣು😊

ಈ ದಿನ ಆಸ್ಪತ್ರೆಯಲ್ಲಿ ಬೈರ್ನಳ್ಳಿ ಗ್ರಾಮದ ಒಂದು ಮಗುವಿನ ತಾಯಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ನೇರಳೆ ಹಣ್ಣನ್ನು ನನಗೂ ಸೇರಿದಂತೆ ನಮ್ಮೆಲ್ಲ ಸಿಬ್ಬಂದಿ ವರ್ಗಕ್ಕೆ ಪ್ರೀತಿಯಿಂದ ತಂದುಕೊಟ್ಟು ಇನ್ನೂ ಬೇಕಾ ಸರ್ ಎಂದು ಕೇಳಿದಾಗ ನಮ್ಮ ಅವರ ಸಂಬಂಧ ವೈದ್ಯ ರೋಗಿ ಸಂಬಂಧಕ್ಕಿಂಥ ಹೆಚ್ಚಿನದ್ದು ಎಂದು ಖುಷಿ ಆಯ್ತು. ಈ ಹಣ್ಣು ಎಷ್ಟು ಉಪಕಾರಿ ನಮ್ಮ ದೇಹಕ್ಕೆ ಎಂದು ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ thanks ಹೇಳಿದೆ.

ಈ ಹಣ್ಣು ಸೇರಿದಂತೆ ಕಾಡಿನಲ್ಲಿ ಬೆಳೆಯುವ ಸೀತಾಫಲ, ನಲ್ಲಿಕಾಯಿ, ಚೇಪೆಹಣ್ಣು, ಮರಸೇಬು, ಗೆಣಸು ಇವೆಲ್ಲ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಣ್ಣುಗಳಲ್ಲಿ ಹೆತ್ತೇಚ್ಛವಾಗಿ ANTIOXIDANTS, VITAMINS, FIBRE, POTASSIUM ಸೇರಿದಂತೆ ಇನ್ನೂ ಹಲವಾರು ಪೋಷಕಾಂಶಗಳು ಇರುತ್ತದೆ. ಈ ಹಣ್ಣು ಸಕ್ಕರೆ ಖಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್ ತೊಂದರೆಗಳಲ್ಲಿ ತುಂಬಾ ಸಹಕಾರಿ. ಈ ಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರಿಂದ ನಾವು ಬೇಗ ಯಾವುದೇ ಖಾಯಿಲೆಗೆ ತುತ್ತಾಗುವುದಿಲ್ಲ. ತುತ್ತಾದರೂ, ಖಾಯಿಲೆ ಬೇಗ ವಾಸಿಯಾಗಲು ಇದು ಸಹಾಯಕಾರಿ. ನಮ್ಮ ದೇಹದಲ್ಲಿ ರಕ್ತಕಣಗಳ ಉತ್ಪತ್ತಿಯನ್ನು ಸಹ ವೃದ್ಧಿಸುತ್ತದೆ. POTASSIUM ಅಂಶ ಹೆಚ್ಚಿರುವುದರಿಂದ ಹೃದಯಕ್ಕೆ ಸಹಕಾರಿ.

ಕಾರಣಾಂತರಗಳಿಂದ ಮಧ್ಯಾಹ್ನದ ಊಟ skip ಆಗಿತ್ತು. ಆ ತಾಯಿಕೊಟ್ಟ ಈ ನೇರಳೆ ಹಣ್ಣಿನ ಚೀಲದಲ್ಲಿ ಅರ್ಧ ಮುಗಿಸಿ ಮಾನಸಿಕವಾಗಿ ಇಷ್ಟೆಲ್ಲ ಪೋಷಕಾಂಶಗಳು ನನ್ನನ್ನು ಸೇರಿತು ಎಂದು ಖುಷಿಪಟ್ಟೆ😄

ಸಿದ್ದೇಶ್ವರ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ನನ್ನ ಆಸ್ಪತ್ರೆಗೆ ಬಂದು ರಾಷ್ಟ್ರೀಯ ವೈದ್ಯರ ದಿನದ ಶುಭಾಶಯ ಕೋರಿದ ಸಂದರ್ಭ❤️  ಈ ನಿಷ್ಕಲ್ಮಶ ಪ್ರೀ...
01/07/2024

ಸಿದ್ದೇಶ್ವರ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ನನ್ನ ಆಸ್ಪತ್ರೆಗೆ ಬಂದು ರಾಷ್ಟ್ರೀಯ ವೈದ್ಯರ ದಿನದ ಶುಭಾಶಯ ಕೋರಿದ ಸಂದರ್ಭ❤️

ಈ ನಿಷ್ಕಲ್ಮಶ ಪ್ರೀತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು😍

When you experience love from tiny hearts at the receiving end, it's such a pure emotion😊❤️

ಸಮಸ್ತ ನಾಡಿನ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು😊
27/06/2024

ಸಮಸ್ತ ನಾಡಿನ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು😊

At ಕುಂತೂರು ಸಂತೆ with my dad😊
09/06/2024

At ಕುಂತೂರು ಸಂತೆ with my dad😊

ವಿಶ್ವ ಪರಿಸರ ದಿನಾಚರಣೆ.ತೊರಲಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ😊
05/06/2024

ವಿಶ್ವ ಪರಿಸರ ದಿನಾಚರಣೆ.

ತೊರಲಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ😊

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕನ...
16/05/2024

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಮತ್ತು ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ಗೆ ಅಭಿನಂದನೆಗಳು.

ರಾಜ್ಯದ ರೈತರು ಕಟ್ಟಿ, ಉಳಿಸಿ, ಬೆಳೆಸಿದ KMF ಇಂದು ಹೈನುಗಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆ❤️

ಕರ್ನಾಟಕದ ಕೋಟ್ಯಂತರ ರೈತರ ಬೆನ್ನೆಲುಬಾಗಿ ಅವರ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಸಹಕಾರಿ ಸಂಸ್ಥೆಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏

ವಿಶ್ವ ತಾಯಂದಿರ ದಿನದ ಶುಭಾಶಯಗಳು.ಮಕ್ಕಳಿಗಾಗಿ ಸದಾ ಮಿಡಿಯುವ ಜೀವ ಅಮ್ಮ.ಆಕೆಯ ಆಶೀರ್ವಾದ, ಪ್ರೇರಣೆಯಿಂದ ಜಗತ್ತನ್ನೇ ಗೆಲ್ಲಬಹುದು.....🙏
12/05/2024

ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಮಕ್ಕಳಿಗಾಗಿ ಸದಾ ಮಿಡಿಯುವ ಜೀವ ಅಮ್ಮ.
ಆಕೆಯ ಆಶೀರ್ವಾದ, ಪ್ರೇರಣೆಯಿಂದ ಜಗತ್ತನ್ನೇ ಗೆಲ್ಲಬಹುದು.....🙏

Address

S/o Malur Anjani Somanna, Anjani Child Care, Near State Bank Of Mysore And Post Office
Malur
563130

Alerts

Be the first to know and let us send you an email when Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr.Kiran Somanna, Malur ಡಾ. ಕಿರಣ್ ಸೋಮಣ್ಣ, ಮಾಲೂರು:

Share

Category