11/10/2025
ಈ ಸಮಾಜದಲ್ಲಿ ಮದುವೆಯಾಗಿ ಮಕ್ಕಳಾಗಿಲ್ಲ ಎನ್ನುವುದು ಗಂಡ,ಹೆಂಡತಿ ಹಾಗೂ ಮನೆಯ ಎಲ್ಲಾ ಸದಸ್ಯರುಗಳಿಗೆ ಒಂದು ಮಾನಸಿಕ ಒತ್ತಡ. ಬದಲಾಗುತ್ತಿರುವ ತಿಂಡಿ ತಿನಿಸುಗಳು, ಕೆಟ್ಟ ಅಭ್ಯಾಸಗಳು, ಪರಿಸರ ಮಾಲಿನ್ಯ, ಗಂಡು ಹಾಗೂ ಹೆಣ್ಣಿನ hormones ಗಳಲ್ಲಿ ವ್ಯತಿರಿಕ್ತವಾದ ಬದಲಾವಣೆಗೆ ಕಾರಣವಾಗುತ್ತಿದೆ. ಇದರಿಂದಾಗಿ ಕೆಲವರಲ್ಲಿ ಮಕ್ಕಳಾಗುವುದು ನಿಧಾನವಾಗಿ ಬಂಜೆತನದಿಂದ ಬಳಲುವ ಪರಿಸ್ಥಿತಿ ಬರುತ್ತಿದೆ.
ಆ ನಿಟ್ಟಿನಲ್ಲಿ ಇದೆ ಭಾನುವಾರ, 12ನೆ ಅಕ್ಟೋಬರ್ 2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾಲೂರಿನ ಅಂಜನಿ ಆಸ್ಪತ್ರೆ ಆವರಣದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಡಾ. ಕಿರಣ್ ಸೋಮಣ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನುರಿತ infertility specialists ರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿ ಉಚಿತವಾಗಿ tests ಮಾಡುವ ಒಂದು ವ್ಯವಸ್ಥೆಯನ್ನು ಮಾಡಿದ್ದೇವೆ.
ನನ್ನ ಮಾಲೂರು ತಾಲ್ಲೂಕಿನ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ😊🙏