Manasiri Counselling Centre

Manasiri Counselling Centre Manasiri means "mana" mind , "Siri" means rich. Mind must be full of richness. Our motto is to enable everyone concerned to grow rich mentally. You're not alone.

Struggling with stress and anxiety? Millions of people around the world struggle with these problems everyday. That's where Manasiri offers counseling to help you address your stress and anxiety disorders. Don't suffer any longer - contact us today to get started! We want to help you get your life back on track. With our counseling services, you can finally start feeling like yourself again.

ನಿನ್ನೆಯ ಮುಂದುವರಿಕೆ...ಭಾಗ -೨ಬ್ಯಾಂಕಿನ (ಸಹಕಾರಿ ಸಂಘ) ಸಮೀಪದವರಲ್ಲಿ ವಿಚಾರಿಸಿ, ಸನಿಹದಲ್ಲಿಯೇ ಇದ್ದ  ಸಂಘದ ಮ್ಯಾನೇಜರ್ ಮನೆಗೆ ಹೋದೆವು. ಅಲ...
22/10/2025

ನಿನ್ನೆಯ ಮುಂದುವರಿಕೆ...
ಭಾಗ -೨
ಬ್ಯಾಂಕಿನ (ಸಹಕಾರಿ ಸಂಘ) ಸಮೀಪದವರಲ್ಲಿ ವಿಚಾರಿಸಿ, ಸನಿಹದಲ್ಲಿಯೇ ಇದ್ದ ಸಂಘದ ಮ್ಯಾನೇಜರ್ ಮನೆಗೆ ಹೋದೆವು. ಅಲ್ಲಿ ವಿಚಾರಿಸಿದರೆ, ಈಗ ತಾನೇ ಮ್ಯಾನೇಜರ್ ತುರ್ತಾಗಿ ಶಿವಮೊಗ್ಗಕ್ಕೆ ಹೋಗಿದ್ದಾರೆ ಎಂದಳು ಮನೆಯೊಡತಿ. ಪಿಗ್ಮಿಯವರು ಗಂಗಮ್ಮನ ಹಣ ಕೊಟ್ಟಿಲ್ಲವೆಂದು, ಅವಳಿಗೆ ಹಣ ಬೇಕಾಗಿದೆ, ಪಿಗ್ಮಿ ಏಜೆಂಟರು ಫೋನಿಗೆ ಉತ್ತರಿಸುತ್ತಿಲ್ಲವೆಂದು ತಿಳಿಸಿದೆವು. ಆ ಮಹಿಳೆಯು ಕೂಡಲೇ ಅವನನ್ನು ಸಂಪರ್ಕಿಸಿ, ನಮಗೆ ಮಾತನಾಡಲು ಅವಕಾಶ ಒದಗಿಸಿದರು. ಗಂಗಮ್ಮನಿಗೆ ಹಣ ಅರ್ಜೆಂಟ್ ಬೇಕಾಗಿದೆಯೆಂದು, ಕೂಡಲೇ ಅವಳ ಪಿಗ್ಮಿ ಹಣ ಕೊಟ್ಟರೆ ಉಪಕಾರವಾಗುವುದೆಂದು, ನನ್ನ ಬಂಧುಗಳು ಏಜೆಂಟರಲ್ಲಿ ನಯವಾಗಿ ವಿನಂತಿಸಿದರು. ಅವನು ಕೂಡಲೇ, ಇಂದಿನ ಪಿಗ್ಮಿ ಹಣ ಸಂಗ್ರಹವಾದ ಕೂಡಲೇ ಸಂಜೆಯೊಳಗೆ ನಮಗೆ ತಲುಪಿಸುತ್ತೇನೆಂದು ಹೇಳಿದ. ಅವನ ಮತ್ತೊಂದು ಫೋನ್ ನಂಬರ್ ತೆಗೆದುಕೊಂಡು ಮನೆಗೆ ವಾಪಸ್ಸಾದೆವು. ಹಣ ಸಿಗುತ್ತದೆಯೆಂಬ ಭರವಸೆ ಮೂಡಿತು. ಗಂಗಮ್ಮನೂ ನಾಳೆ ಬರ್ತೀನೆಂದು ಮನೆಗೆ ವಾಪಸ್ಸಾದಳು.
ಮನೆಗೆ ಬಂದು ನಾವೆಲ್ಲರೂ ಅದೇ ವಿಷಯ ಚರ್ಚಿಸಿ, ಊಟದ ಮೊದಲು, ಗಂಟೆ 8.30 ಆದರೂ ಪಿಗ್ಮಿ ಏಜೆಂಟ್ ಬಾರದ ಕಾರಣ, ಅವನಿಗೆ ಫೋನ್ ಮಾಡಿದೆವು. ಆಗ ಉತ್ತರವಿಲ್ಲ. ಕೂಡಲೇ ಊಟ ಮುಗಿಸುವ ವೇಳೆಗೆ, ಏಜೆಂಟರೇ ಕರೆ ಮಾಡಿ, ಇನ್ನರ್ಧ ಗಂಟೇಲಿ ಬರುವುದಾಗಿ ತಿಳಿಸಿದರು.
ಗಂಟೆ 9.30, ಮನೆಯ ಗೃಹಸ್ಥರ ನೆಚ್ಚಿನ ಹನುಮಕ್ಕನವರ ಸೀರಿಯಲ್ ನೋಡುತ್ತಿರುವಾಗ, ಜೋರು ಮಳೆ ಶುರುವಾಯಿತು. ಅದೇ ಸಮಯಕ್ಕೆ ಸರಿಯಾಗಿ, ಗೇಟಿನ ಬಳಿ ಸದ್ದಾಯಿತು. ನೋಡಿದರೆ ಆತನೇ ಪಿಗ್ಮಿ ಏಜೆಂಟ್ ನಾಗಿದ್ದ. ಅತನನ್ನು ಒಳಕರೆದು, ಕುಳ್ಳರಿಸಿ, ಮಾತನಾಡಿಸಿದೆವು. ಆತನು ಗಂಗಮ್ಮನ ನಲ್ವತ್ತು ಸಾವಿರ ರೂಪಾಯಿ, ನಮ್ಮ ಬಂಧುಗಳ ಕೈಯಲ್ಲಿರಿಸಿದ. " ನಾನು ಗಂಗಮ್ಮನ ಮನೆ ಕಡೆ ಹಣ ಸಂಗ್ರಹಕ್ಕೆ ಹೋಗಲ್ಲ, ಅಲ್ಲಿ ಮೊದಲಿನ ಪಿಗ್ಮಿ ಏಜೆಂಟ್ ಕೆಲಸ ಬಿಟ್ಟಿದ್ದರಿಂದ, ನಾನು ಅನಿವಾರ್ಯವಾಗಿ ಅವರ ಮನೆಗೆ ಹೋಗ್ತಿದ್ದೆ. ನಮಗೆ ಆಯಾ ದಿನದ ಹಣ ಸಂಗ್ರಹವಾದ ನಂತರವೇ, ಈ ಪೇಮಂಟ್ ಕೊಡಲು ಸಾಧ್ಯ, ಈಗ ತಾನೇ ನನ್ನ ಡೂಟಿ ಮುಗಿಯಿತೆಂದು" ಪಿಗ್ಮಿ ಏಜೆಂಟರು ವಿಷಯವನ್ನು ತಿಳಿಸಿದರು. ನಮಗೆಲ್ಲಾ ಹುಳ್ಳ ಹುಳ್ಳಗಾಯಿತು.
ಗಂಗಮ್ಮನಿಗೆ ಬಂಗಾರ ಬಿಡಿಸಲು ತುರ್ತಾಗಿ ಹಣದ ಅಗತ್ಯವಿತ್ತು, ಆದ್ದರಿಂದ ನಾವು ಅನೇಕ ಬಾರಿ ನಿಮಗೆ ಹಲವು ಕರೆ ಮಾಡಿದೆವು ಎಂದು ಸಮಜಾಯಿಷಿ ಕೊಟ್ಟೆವು. "ನೀವು ಗಿರಾಕಿಗಳಿಗೆ ಮೊದಲೇ ಸರಿಯಾಗಿ ತಿಳಿಸಿ, ಇದರಿಂದ ಗಾಬರಿಗೊಳಗಾಗುವ ಸಂದರ್ಭ ಉಂಟಾಗುವುದಿಲ್ಲವೆಂದು" ಏಜೆಂಟರಿಗೆ ತಿಳಿಸಿದೆವು.
ಸುಖಾಂತ್ಯವಾಗಿತ್ತು. ಇಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ.
"ಫೋನ್ ಕರೆ ಸ್ವೀಕರಿಸಲಿಲ್ಲ, ಖಾಲಿ ಪೇಪರ್ ನಲ್ಲಿ ಸಹಿ ತೆಗೆದುಕೊಂಡಿದ್ದಾರೆ, ಎನ್ನುವ ಸುದ್ದಿಯು, ಈ ವ್ಯಕ್ತಿ ಹಣ ಲಪಟಾಯಿಸುವ ಹೊಂಚು ಹಾಕಿದ್ದಾನೆಂದು" ನನ್ನನ್ನು ಆಲೋಚನೆಗೆಳೆಯಿತು. ನನ್ನ ಬಂಧುಗಳು ಸಹ " ಹಣ ಸಿಗುವುದು ಕಷ್ಟ, ಗಂಗಮ್ಮನಿಗೆ ತೊಂದರೆ ಖಂಡಿತ" ಅನ್ನೋ ಅಭಿಪ್ರಾಯಕ್ಕೆ ಬಂದರು. ಮೊದಲು ಸಹಿ ಹಾಕಬಾರದಿತ್ತೆಂದರು. "ಆತನಿಗೆ ದೇವರು ಒಳ್ಳೇದು ಮಾಡಲ್ಲವೆಂಬುದು" ಗಂಗಮ್ಮನ ನಂಬಿಕೆ. ಹೀಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ದಿಕ್ಕಿನಲ್ಲಿತ್ತು.

ಪಿಗ್ಮಿಯವನ ಮಾತು ಕೇಳಿದ ನಂತರ, ನಾವೆಲ್ಲ ಆತಂಕದಿಂದ ದುಡುಕಿದೆವು ಎನ್ನಿಸಿತು.
ಅಲ್ಲಲ್ಲಿ ಮೋಸ, ಸೈಬರ್ ವಂಚನೆಗಳು ಹೆಚ್ಚುತ್ತಿರುವುದರಿಂದ ನಾವು ಬಲುಬೇಗ ಆತಂಕಕ್ಕೆ ಒಳಗಾಗುತ್ತೇವೆ. ಬೇರೆಯವರ ದೃಷ್ಟಿಯಿಂದ ಆಲೋಚನೆ ಮಾಡದಷ್ಟು, ವ್ಯವಧಾನ ನಮ್ಮಲ್ಲಿ ಇರುವುದಿಲ್ಲ. ಹಣ ಕಾಸಿನ ವ್ಯವಹಾರಸ್ಥರು, ಬ್ಯಾಂಕಿನವರು ಹೆಚ್ಚಿನ ಸಂದರ್ಭದಲ್ಲಿ ನಿಷ್ಠಯಿಂದಲೇ ಇರ್ತಾರೆ‌. ಆದರೆ ಸರಿಯಾಗಿ ಗಿರಾಕಿಗಳಿಗೆ ತಿಳುವಳಿಕೆ ಕೊಡುವುದು ಕೂಡ ಅಗತ್ಯ, ನಮ್ಮ ದೃಷ್ಟಿಯಿಂದ ಅವರೂ ಸಹ ವಿಚಾರ ಮಾಡುವುದಗತ್ಯ.
ಮರುದಿನ ಬೆಳಿಗ್ಗೆ ಹಣ ಗಂಗಮ್ಮನ ಕೈ ಸೇರಿತು.

ಕಳೆದ ಮಳೆಗಾಲದಂದು ಸಾಗರದಲ್ಲಿ ನನ್ನ ಬಂಧುಗಳ ಮನೆಯಲ್ಲಿ ವಸತಿ ಮಾಡಿದ್ದೆ. ಅವರ ಮನೆಯ ಸಹಾಯಕಿಗಂಗಮ್ಮ, ಬೆಳಿಗ್ಗೆ  ಕೆಲಸಕ್ಕೆ ಬಂದವಳೇ, ಅಮ್ಮಾವರ್...
21/10/2025

ಕಳೆದ ಮಳೆಗಾಲದಂದು ಸಾಗರದಲ್ಲಿ ನನ್ನ ಬಂಧುಗಳ ಮನೆಯಲ್ಲಿ ವಸತಿ ಮಾಡಿದ್ದೆ. ಅವರ ಮನೆಯ ಸಹಾಯಕಿ
ಗಂಗಮ್ಮ, ಬೆಳಿಗ್ಗೆ ಕೆಲಸಕ್ಕೆ ಬಂದವಳೇ, ಅಮ್ಮಾವರ್ರೇ, ನಾನು ಬರೋದು ತಡವಾಯ್ತು, ಬ್ಯಾಂಕಿನ ಪಿಗ್ಮಿಯವನು ನನ್ನ ಹಣ ನಲವತ್ತು ಸಾವಿರದಲ್ಲಿ, ಈಗ ಇಪ್ಪತ್ತು ಕೊಡ್ತೇನೆಂದ, ಉಳಿದದ್ದು ಕಡೆಗೆ ಅಂದ. ಬೇಡ, ಒಟ್ಟಿಗೆ ಕೊಡಪ್ಪ ಅಂದೆ. ಮಧ್ಯಾಹ್ನದ ನಂತರ ಕೊಡ್ತೇನೆ ಅಂದ. ನಿಮ್ಮ ಮನೇಲಿ ಕೊಡಲಿಕ್ಕೆ ಹೇಳಿದ್ದೇನೆ, ಆದರೆ ಅವನು ಖಾಲಿ ಪೇಪರ್ ನಲ್ಲಿ ಸಹಿ ತಗೊಂಡಿದಾನೆ ಎಂದಳು.
ನೀನು, ಹಣ ಕೊಟ್ಟ ನಂತರ ಸಹಿ ಹಾಕಬೇಕಿತ್ತಲ್ಲಮ್ಮ ಅಂದಳು ಮನೆಯ ಗೃಹಿಣಿ.‌ ಅವನ ಫೋನ್ ನಂ ಕೊಟ್ಟಿದಾನೆ, ಫೋನ್ ಮಾಡಿ ಒಂದ್ಸರಿ ಕೇಳಿ ಅಂದ್ಳು. ನನ್ನ ಬಂಧುಗಳು ಎರಡು/ ಮೂರು ಬಾರಿ ಫೋನ್ ಮಾಡಿದ್ರು, ಉತ್ತರವಿರಲಿಲ್ಲ. ಮಧ್ಯಾಹ್ನದವರೆಗೆ ನೋಡೋಣ ಅವನು ಹಣ ತಂದುಕೊಡಬಹುದೆಂದು, ಸುಮ್ಮನಾದರು.
ಮಧ್ಯಾಹ್ನ ಮೂರು ಗಂಟೆಗೆ
ಗಂಗಮ್ಮ ಫೋನ್ ಮಾಡಿ ಪಿಗ್ಮಿ ಹಣ ಸಿಕ್ಕಿತಾ ಕೇಳಿದ್ಳು. ಆಗ ನನ್ನ ಬಂಧುಗಳು ಅವಳು ಕೊಟ್ಟ ಪಿಗ್ಮಿ ಏಜೆಂಟ್ ನಿಗೆ ಫೋನಾಯಿಸಿದರು. ಉತ್ತರವೂ ಇಲ್ಲ, ನಂತರ ಸ್ವಿಚ್ ಆಫ್ ಬರತೊಡಗಿತು. ನಮಗೆಲ್ಲರಿಗೂ ಗಾಬರಿಯಾಯ್ತು. ಕೂಡಲೇ
ಗಂಗಮ್ಮನೂ ಹಾಜರಾದಳು. ಎಷ್ಟು ಬಾರಿ ಫೋನ್ ಮಾಡಿದೆವು, ಪ್ರಯೋಜನವಾಗಲಿಲ್ಲ.
ಅವಳ ಬಳಿಯಿರುವ, ಒಂದು ಮೂರು ಅಂಗುಲದ ಪ್ರಿಂಟೆಡ್ ರಸೀದಿಯಲ್ಲಿ, ಅವಳ ಹೆಸರು, 40 ಸಾವಿರ, ಸಹಕಾರಿ ಸಂಘದ ಹೆಸರು ಮುದ್ರಿತವಾಗಿದ್ದವು. ಆದರೆ ಈ ವ್ಯಕ್ತಿಯು ಸಂಜೆ ನಾಲ್ಕು ಗಂಟೆಯಾದರೂ ಹಣ ತರಲಿಲ್ಲ, ಖಾಲಿ ಪೇಪರ್ ನಲ್ಲಿ ಅವಳ ಸಹಿ ತಗೊಂಡಿದಾನೆ, ಫೋನ್ ಗೆ ಉತ್ತರವಿಲ್ಲ. ಆದ್ದರಿಂದ ಈ ವ್ಯಕ್ತಿಯೊಂದು ಮೋಸಗಾರನೇ ಅನ್ನಿಸಲು ಶುರುವಾಯ್ತು. ಇಂಥಾ ವಿದ್ಯೆಯಿಲ್ಲದ ಶ್ರಮಿಕರಿಗೆ ಮೋಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂಬ ವಿಚಾರ ಬಲವಾಗತೊಡಗಿತು, ನನ್ನಲ್ಲಿ. ಮರುದಿನ ಎರಡನೇ ಶನಿವಾರ, ಭಾನುವಾರ ಆದ್ದರಿಂದ ತಡಮಾಡಬಾರದೆಂದು ತೀರ್ಮಾನಿಸಿದೆವು.
ಗಂಗಮ್ಮನಂತು ನನ್ನ ದುಡ್ಡಿಗೆ ಚಕ್ರ ಹಾಕಿದವನ ಮನೆ ಉದ್ಧಾರವಾಗಲ್ಲ, ದೇವರು ಅವನಿಗೆ ತಕ್ಕ ಶಿಕ್ಷೆ ಕೊಡ್ತಾನೆ., ಅವನ ಮನೆ ಹಾಳಾಗಿ ಹೋಗಲೆಂದು ಶಪಿಸ ತೊಡಗಿದಳು. ಸಹಕಾರಿ ಸಂಘದ ಫೊನ್ ನಂ ನೆಟ್ ನಲ್ಲಿ ಹುಡುಕಿದರೂ ಸಿಗಲಿಲ್ಲ.

ಗಂಗಮ್ಮ ಜೀವನದಲ್ಲಿ ಬಹಳ ಕಷ್ಟ ನಷ್ಟ ಅನುಭವಿಸಿದವಳು, ದೂರದಲ್ಲಿರುವ ಮಗಳಿಗೆ ಹಣ ಸಹಾಯ ಮಾಡಬೇಕು, ತನ್ನ ಅಡವಿಟ್ಟ ಬಂಗಾರ ಬಿಡಿಸಬೇಕಿತ್ತು.
ನನ್ನ ಬಂಧುಗಳಿಗೀರ್ವರೀಗೂ ಬಹಳ ದಿಗಿಲಾಯ್ತು.
ಕೂಡಲೇ, ಮನೆಯ ಸದ್ಗೃಹಸ್ಥರು ಅವಳ ಬೆಂಬಲಕ್ಕೆ ನಿಂತಿದ್ದು, ನನಗೆ ಕೂಡ ಸಮಾಧಾನ ತಂದಿತು. ನಾನೂ ಕೂಡ ನಿಮ್ಮೊಂದಿಗೆ ಬರ್ತೇನೆಂದೆ. ನಾವು ಮೂವರು ಕಾರಿನಲ್ಲಿ ಹೊರಟೆವು. ನಾನು ಪೋಲಿಸ್ ಠಾಣೆಗೆ ಹೋಗುವುದೆಂದು ತೀರ್ಮಾನಿಸಿದ್ದೆ. ಆದರೆ, ನನ್ನ ಬಂಧುಗಳು ಸಹಕಾರಿ ಸಂಘದ ಆಫೀಸ್ ಗೆ ಹೊಗೋಣ ಎಂದರು, ಆದರೆ ಗಂಟೆ ಐದಾಗಿತ್ತು. ಆಫೀಸಿನ ಷಟರ್ಸಗೆ ಬೀಗ ಮುದ್ರೆಯಿತ್ತು.
( ಮುಂದುವರಿಯುವುದು, ನಾಳೆ ಸಂಚಿಕೆಯಲ್ಲಿ..., )

Fake news spreads like a wild fire; truth comes limping after it..,
21/10/2025

Fake news spreads like a wild fire; truth comes limping after it..,

16/10/2025
ನಾವು ಸಂಘಜೀವಿಗಳು. ಆದ್ದರಿಂದ ನಾವು, ನಮ್ಮ ಕ್ರಿಯೆಗೆ ಬೇರೆಯವರ ಪ್ರತಿಕ್ರಿಯೆಯ  ನಿರೀಕ್ಷೆಯಲ್ಲಿರುತ್ತೇವೆ.  ನಮ್ಮ ಸುಖ,  ಸಂತೋಷ ಅನ್ಯರ ಪ್ರತಿ...
16/10/2025

ನಾವು ಸಂಘಜೀವಿಗಳು. ಆದ್ದರಿಂದ ನಾವು, ನಮ್ಮ ಕ್ರಿಯೆಗೆ ಬೇರೆಯವರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುತ್ತೇವೆ. ನಮ್ಮ ಸುಖ, ಸಂತೋಷ ಅನ್ಯರ ಪ್ರತಿಕ್ರಿಯೆಯನ್ನು ಅವಲಂಬಿಸುತ್ತವೆ, ಎಂದಾಯ್ತು. ನಮ್ಮ ನಿರೀಕ್ಷೆಯ ಮಟ್ಟದಲ್ಲಿ ತಕ್ಕ ಸ್ಪಂದನೆ ಇಲ್ಲದಾಗ ಬೇಸರಿಸುತ್ತೇವೆ.
ಇದು ಸರಿಯೇ?
ಸ್ವಲ್ಪ ಆಲೋಚಿಸಿ, ನಮ್ಮ ಸಂತೋಷಕ್ಕೆ ಪರಾವಲಂಬನೆ ಅಗತ್ಯವೇ ? ಸಂತೋಷವೆಂಬುದು
ನಮ್ಮ ಮನಸ್ಸಿನ ಸ್ಥಿತಿಯಷ್ಟೆ. ಅದು ನಮ್ಮ ಕೈಯಲ್ಲಿಯೇ ಇದೆ.
ಕೆಳಗಿನ ಚಿತ್ರ ನೋಡಿ:

One of my clients asked for a trick.My Tip:Be busy like a busy bee
13/10/2025

One of my clients asked for a trick.
My Tip:
Be busy like a busy bee

ಮೊನ್ನೆ ಶುಕ್ರವಾರ ಅಕ್ಟೋಬರ್ 10 ಜಾಗತಿಕ ಮಾನಸಿಕ ಆರೋಗ್ಯ ದಿನಾಚರಣೆ. ಮಾನಸಿಕ ಆರೋಗ್ಯದ ಬಗ್ಗೆ ಅಂತರಜಾಲದಲ್ಲಿ ಜನರ  ಹುಡುಕಾಟ ಶೇಕಡಾ 41 ಹೆಚ್ಚ...
12/10/2025

ಮೊನ್ನೆ ಶುಕ್ರವಾರ ಅಕ್ಟೋಬರ್ 10 ಜಾಗತಿಕ ಮಾನಸಿಕ ಆರೋಗ್ಯ ದಿನಾಚರಣೆ.

ಮಾನಸಿಕ ಆರೋಗ್ಯದ ಬಗ್ಗೆ ಅಂತರಜಾಲದಲ್ಲಿ ಜನರ ಹುಡುಕಾಟ ಶೇಕಡಾ 41 ಹೆಚ್ಚಾಗಿದೆ. ಇದೊಂದು ಉತ್ತಮ ಬೆಳವಣಿಗೆ ಆಗಿರಬಹುದಾ? ಏಕೆಂದರೆ ಜನಸಾಮಾನ್ಯರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ಜಾಗೃತಿಯಾಗಿದೆಯಾ? ಆದರೆ ಹಾಗಿಲ್ಲ, ಕಾರಣ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ, ನೇರವಾಗಿ ಸಂಬಂಧಪಟ್ಟವರಲ್ಲಿ ಅಲ್ಲ.
ನನಗೇಕೆ ನಿದ್ರೆ ಬರುವುದಿಲ್ಲ? ನಾನೇಕೆ ಯಾವಾಗಲೂ ಆತಂಕದಲ್ಲಿರ್ತೇನೆ? ಯಾವಾಗಲೂ ಆಯಾಸವೇಕೆ? ಹೀಗೆ ನಮ್ಮಲ್ಲುಂಟಾಗುವ ಪ್ರಶ್ನೆಗಳಿಗೆ, ನಮ್ಮ ಸ್ನೇಹಿತರಲ್ಲಿ, ಬಂಧುಗಳಲ್ಲಿ ಹಂಚಿಕೊಂಡಿದ್ದೇವಾ, ಅಥವಾ ಡಾಕ್ಟರಲ್ಲಿ ಹೇಳಿದ್ದೇವಾ ಇಲ್ಲ. ಕೆಲವರು ತುಂಬಾ ಕೆಲಸದ ಹೊರೆ, ಅದಕ್ಕೆ ನನಗೆ ಸುಸ್ತಾಗತ್ತೆ ಎಂದುಕೊಳ್ಳುತ್ತಾರೆ. ಪದೇ ಪದೇ ಸುಸ್ತೆಂದು ಯಾವಾಗಲೂ ಒಂದು ಹಣೆಪಟ್ಟಿಯನ್ನೆ ಅಂಟಿಸಿಕೊಳ್ಳುತ್ತಾರೆ?

ಗೂಗಲ್ ನಲ್ಲಿ ಈ ಪ್ರಶ್ನೆಗಳ ಉತ್ತರಕ್ಕೆ ಹುಡುಕಾಟ ನಡೆದಿದೆ. , ಆದರೆ ಅದಕ್ಕೆ ತಕ್ಕನಾಗಿ ಆಪ್ತ ಸಮಾಲೋಚಕರಲ್ಲಿ, ಜನರು ಹೋಗ್ತಾಯಿಲ್ಲ. ಗಂಭೀರವಾದ ಸಮಸ್ಯೆಯಿರುವವರು ಮಾತ್ರ ಆಪ್ತಸಮಾಲೋಚಕರಲ್ಲಿ ಹೋಗ್ತಾರೆ, "ನಾನೇಕೆ" ಎಂದುಕೊಳ್ಳುತ್ತೇವೆ. ಮಾನಸಿಕ ಆರೋಗ್ಯದ ಬಗ್ಗೆ ಹೇಳಿಕೊಳ್ಳೂವುದು ನಮ್ಮ ದೌರ್ಬಲ್ಯವೆಂದುಕೊಳ್ಳುತ್ತಾರೆ. ಆದರೆ ಸತ್ಯಸಂಗತಿ ಬೇರೇನೇ ಇದೆ.

1. ಮಾನಸಿಕ ಆರೋಗ್ಯವನ್ನು ಉದಾಸೀನ ಮಾಡಿದರೆ, ಸಮಸ್ಯೆ ಮಾಯವಾಗುವುದಿಲ್ಲ, ಹೆಚ್ಚಾಗಬಹುದು.

2. ಆತಂಕದಿಂದ ನಿದ್ರೆ ದೂರವಾಗಬಹುದು, ಆಯಾಸಕ್ಕೆ ಪರಿಹಾರ ಸಿಗುವುದಿಲ್ಲ.

3. ಪದೇಪದೇ ಈ ಭವನೆಗಳು ನಮ್ಮನ್ನು ಅಧೀರರನ್ನಾಗಿ ಮಾಡುತ್ತವೆ, ಕೊನೆಯೇ ಇಲ್ಲವೆಂಬ ಭಾವನೆ ಬೇರೂರಬಹುದು.
ಆದ್ದರಿಂದ ಗೂಗಲ್ ನಲ್ಲಿ ಹುಡುಕಾಡುವುದಕ್ಕಿಂತ ಅಗತ್ಯವಾದ ಸಹಾಯ ಕೇಳುವುದುತ್ತಮವಲ್ಲವೇ?

4. ಸ್ನೇಹಿತರೊಂದಿಗೆ ಮಾತನಾಡಿ. ಮೊಬೈಲನ್ನು ಮನೆಯಲ್ಲಿಟ್ಟು, ಹವಾ ಸೇವನೆಗೆ ಹೋಗಿ.
ಸಮಾಧಾನ ಸಿಗದಿದ್ದಲ್ಲಿ, ಒಮ್ಮೆ, ಆಪ್ತ ಸಮಲೋಚಕರಲ್ಲಿ ಮಾತನಾಡಿ.

Ignoring mental health does not make it disappear: it makes it multiply.
12/10/2025

Ignoring mental health does not make it disappear: it makes it multiply.

A talk on " Gaslighting"On 4 th Oct 2025 @ The American College, Madurai.
07/10/2025

A talk on " Gaslighting"
On 4 th Oct 2025 @ The American College, Madurai.

Different Perspectives.. "When we look at a picture through the lens, what do we see?we usually focus on the flaws, if  ...
05/10/2025

Different Perspectives..
"When we look at a picture through the lens, what do we see?
we usually focus on the flaws, if we can focus on the beauty in between, the thing turns beautiful. Life is how we look at a thing. When you shift your view, the image of the picture may change. Sometimes the blur isn’t a mistake; it’s an invitation to pause, refocus, and find something new in the moment. What you choose to see determines how your life's story will be"
Have a good day...,

"It is by nature that people become good, others that it is by habit and others that it is by instruction" ಕೆಲವರು ಸ್ವಭಾವ...
28/09/2025

"It is by nature that people become good,
others that it is by habit and
others that it is by instruction"
ಕೆಲವರು ಸ್ವಭಾವತಃ ಒಳ್ಳೇಯ ವರ್ತನೆಯುಳ್ಳವರು,
ಇನ್ನು ಕೆಲವರು , ತಮ್ಮ ಸತತ ಅಭ್ಯಾಸದಿಂದ ಒಳ್ಳೆಯ ವರ್ತನೆ ಮೈಗೂಡಿಸಿಕೊಳ್ಳುತ್ತಾರೆ,
ಉಳಿದವರು ಬೇರೆಯವರ ಸಲಹೆ/ ಸೂಚನೆಯಿಂದ ಒಳ್ಳೇ ವರ್ತನೆ ಕಲಿಯುತ್ತಾರೆ.

Address

Prakash N, Manasiri Counselling Centre, Gurunagar I Main Road, Near AJ Nursing Hostel, Maryhill Konchady
Mangalore
575008

Opening Hours

Monday 11am - 6pm
Tuesday 4pm - 6:30pm
Wednesday 4pm - 6:30pm
Thursday 4pm - 6:30pm
Friday 4pm - 6:30pm
Saturday 11am - 6:30pm
Sunday 11am - 6pm

Alerts

Be the first to know and let us send you an email when Manasiri Counselling Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Manasiri Counselling Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram