Manasiri Counselling Centre

Manasiri Counselling Centre Manasiri means "mana" mind , "Siri" means rich. Mind must be full of richness. Our motto is to enable everyone concerned to grow rich mentally. You're not alone.

Struggling with stress and anxiety? Millions of people around the world struggle with these problems everyday. That's where Manasiri offers counseling to help you address your stress and anxiety disorders. Don't suffer any longer - contact us today to get started! We want to help you get your life back on track. With our counseling services, you can finally start feeling like yourself again.

ಉಚಿತ ಆನ್ ಲೈನ್ ಮೈಂಡ್ ಫುಲ್ ನೆಸ್ ತರಗತಿಗಳಿಗೆ, ಇಂದೇ ಸಂಪರ್ಕಿಸಿ: ವಾಟ್ಸಪ್ ಸಂಖ್ಯೆ9482023327.ಬೆಳಿಗ್ಗೆ 7 ರಿಂದ 7.30 am ವರೆಗೆ.ಮೈಂಡ್ ಫ...
19/08/2025

ಉಚಿತ ಆನ್ ಲೈನ್ ಮೈಂಡ್ ಫುಲ್ ನೆಸ್ ತರಗತಿಗಳಿಗೆ, ಇಂದೇ ಸಂಪರ್ಕಿಸಿ: ವಾಟ್ಸಪ್ ಸಂಖ್ಯೆ9482023327.
ಬೆಳಿಗ್ಗೆ 7 ರಿಂದ 7.30 am ವರೆಗೆ.
ಮೈಂಡ್ ಫುಲ್ನೆಸ್ ಎಂದರೇನು? ಕನ್ನಡದಲ್ಲಿ ಪ್ರಜ್ಞಾಪೂರ್ವಕ ಮನಸ್ಥಿತಿ.‌
ಅತಿಯಾಗಿ ಪ್ರತಿಕ್ರಿಯಿಸದೆ ಅಥವಾ ಆಲೋಚನೆಗಳಲ್ಲಿ ಮುಳುಗದೆ - ಸಂಪೂರ್ಣವಾಗಿ ಪ್ರಸ್ತುತವಾಗಿರುವ ಮತ್ತು ನಿಮ್ಮ ಪ್ರಸ್ತುತ ಅನುಭವದ ಬಗ್ಗೆ ತಿಳಿಯುವ ಅಭ್ಯಾಸ.
ಈ ಅಭ್ಯಾಸವು, ಮನಸ್ಸಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಸ್ವಯಂ ಒಳನೋಟವನ್ನು ಗಾಢಗೊಳಿಸುತ್ತದೆ ಮತ್ತು ತನ್ನ ಬಗ್ಗೆ ಮತ್ತು ಇತರರ ಬಗ್ಗೆ ಅನುಭೂತಿಯನ್ನು ಬೆಳೆಸುತ್ತದೆ.

Have you heard about Mindfulness?
Are you genuinely interested in learning Mindfulness?
If yes, please join the Free online mindfulness class in the morning @ 7 am or in the evening @ 6.30 pm.
Please contact me on whatsup 9482023327.
Admission: subject to conditions.

19/08/2025

Judge nothing, you will be happy;
Forgive everything, you will be happier;
Love everything, you will be the happiest.

17/08/2025

೨೫. ತೊದಲು ಮಾತು.
ವೀರೇಶ 20 ವಯಸ್ಸಿನ, ಸದೃಢ ವ್ಯಕ್ತಿ. ಈತನ ಸಮಸ್ಯೆಯೇನೆಂದರೆ, ಮಾತನಾಡುವಾಗ ಸಲೀಸಾಗಿ ಮಾತನಾಡಲಾರ. ಮಾತನಾಡುವಾಗ ಕೆಲವು ಪದಗಳನ್ನು ಉಚ್ಛರಿಸುವಾಗ ತೊದಲು ಅಥವಾ ಉಗ್ಗುತ್ತಾನೆ. ಈತನಿಗೆ ಅಪರಿಚಿತರೊಂದಿಗೆ ಮಾತನಾಡಲು ತುಂಬಾ ಹಿಂಜರಿಕೆ. ಆದ್ದರಿಂದ ಮಾತನಾಡುವುದನ್ನೇ ಕಡಿಮೆ ಮಾಡಿದ್ದನು. ಕೆಲವೊಮ್ಮೆ ತುಂಬಾ ಕಷ್ಟ ಪಡುತ್ತಾನೆ. ಪೇಟೆಯಿಂದ ತನ್ನೂರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಗೆ ತನ್ನ ಊರಿನ ಹೆಸರು ಹೇಳಿ, ಟಿಕೇಟ್ ತೆಗೆಯುವುದು ದುಸ್ತರವಾಗಿತ್ತು. ಏಕೆಂದರೆ ಅವನೂರಿನ ಹೆಸರಿನ ಮೊದಲು ಅಕ್ಷರದಲ್ಲಿ ಅವನಿಗೆ ಉಗ್ಗು ಬರುತ್ತಿತ್ತು. ಮುಂದಿನ ಊರಿನ ಹೆಸರಿನಲ್ಲಿ ಟಿಕೆಟ್ ಪಡೆದು, ತನ್ನೂರಿನ ಬಸ್ ಸ್ಟಾಪ್ ನಲ್ಲಿ ಇಳಿಯುತ್ತಿದ್ದ. ಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾರಣ, ನೆರೆಹೊರೆಯವರು, ವೀರೇಶನು ತೊದಲು ಮಾತನಾಡುತ್ತಾನೆಂದು ಹಣೆ ಪಟ್ಟಿಯನ್ನು ಹಚ್ಚಿದ್ದರು. ಶಾಲೆಯಲ್ಲಿರುವಾಗ ಕೆಲವು ಕಿಡಿಗೇಡಿಗಳು, ಅವನಿಗೆ ಉಚ್ಛರಿಸಲಾಗದ ಹೆಸರನ್ನು ಕೇಳಿ, ಅವನ ಅಸಹಾಯಕತೆಯನ್ನು ನೋಡಿ , ತಮಾಷೆ ಮಾಡುತ್ತಿದ್ದರು. ಇವುಗಳಿಂದಾಗಿ ವೀರೇಶ ತುಂಬಾ ಹತಾಶಗೊಂಡಿದ್ದ. ಅವನಲ್ಲಿ ಕೀಳರಿಮೆ ಮನೆ ಮಾಡಿತ್ತು. ಹಾಗಾಗಿ ತುಂಬಾ ಚುರುಕಿನವನಾಗಿದ್ದರೂ , ಹೆಚ್ಚು ಓದು, ಅಭ್ಯಾಸ ಸಾಧ್ಯವಾಗಲಿಲ್ಲ. ಹಲವು ಬಾರಿ ಆಪ್ತಸಲಹೆಗೆ ಬಂದನು. ಅವನಿಗೆ ಎಲ್ಲಾ ಪದಗಳನ್ನು ಸ್ಪಷ್ಟವಾಗಿ ಹೇಳುವ ಸಾಮರ್ಥ್ಯವಿತ್ತು. ಆದರೆ ಜನರೊಡನೆ ಮಾತನಾಡುವಾಗ ಸಮಸ್ಯೆಯಾಗುತ್ತಿತ್ತು. ಈ ರೀತಿಯ ವ್ಯಕ್ತಿಗಳಿಗೆ ತುಂಬಾ ಬೆಂಬಲ ಕೊಡಬೇಕು. ಆಗ ಸರಿ ಮಾಡಲು ಸಾಧ್ಯವೆನಿಸಿತು.
ಸಾಮಾನ್ಯವಾಗಿ ತೊದಲು ಅಥವಾ ಉಗ್ಗು ಆರಂಭವಾಗುವುದು ಬಾಲ್ಯದಲ್ಲಿಯೇ. ಈ ತೊಂದರೆಯು ಮಗುವು ಬೆಳೆಯುವ ವಾತಾವರಣದಿಂದ ಉಂಟಾಗಬಹುದು ಅಥವಾ ನರಮಂಡಲದ ಸಮಸ್ಯೆ, ಅನುವಂಶೀಯವಾಗಿರುವ ಸಾಧ್ಯತೆಯಿದೆ. ಮಗುವು ಹೊಸದಾಗಿ ಮಾತನ್ನು ಕಲಿಯುವಾಗ ತೊದಲು ನುಡಿಗಳನ್ನಾಗಿಯೇ ಕಲಿಯುತ್ತದೆ. ನಂತರ ಹೊಸ ಪದಗಳನ್ನು ಕಲಿಯುವಾಗ ಮಗು ಆಲೋಚನೆ ಮಾಡಿ ಉಚ್ಛರಿಸುತ್ತದೆ, ಆಗ ಸ್ವಲ್ಪ ಅನುಮಾನದಿಂದ ನಿಧಾನವಾಗಿ ಹೇಳುತ್ತದೆ. ಆಗ ಮನೆಯ ಸದಸ್ಯರು, ಗಾಬರಿಯಿಂದ ತಿದ್ದುತ್ತಾರೆ, ಅಪಹಾಸ್ಯ ಮಾಡುತ್ತಾರೆ ಇದರಿಂದ ಮಗುವು ಗಾಬರಿಗೊಂಡು ಹೆಚ್ಚು ತೊದಲುತ್ತದೆ. ಕೆಲವು ಹಿರಿಯರು ಮಕ್ಕಳಿಗೆ ಗದರಿಸುತ್ತಾರೆ ಅಥವಾ ಬೇಗ ಮಾತನಾಡಬೇಕೆಂದು ಒತ್ತಡ ಹೇರುತ್ತಾರೆ. ಇವೆಲ್ಲವೂ ಮಗುವನ್ನು ಆತಂಕ, ಒತ್ತಡಕ್ಕೆ ತಳ್ಳುವುದರಿಂದ ಉಗ್ಗಾಲಾರಂಭಿಸುವ ಸಾಧ್ಯತೆ ಹೆಚ್ಚು. ನಂತರ ಆ ಮಗು ಉಗ್ಗತ್ತದೆಯೆಂದು ಹಣೆಪಟ್ಟಿ ಹಚ್ಚುವುದರಿಂದ, ಮಗುವು ಉಚ್ಛರಿಸುವಾಗ ತುಂಬಾ ಕಷ್ಟ ಪಡುತ್ತದೆ, ಜನರು ತನ್ನನ್ನು ಅಣಕಿಸುತ್ತಾರೆಂದು ಮಾತನಾಡುವುದನ್ನು ಕಡಿಮೆ ಮಾಡ್ತದೆ ಮತ್ತು ಜನರೊಡನೆ ಬೆರೆಯಲಾರದು. ಮೊಟ್ಟ ಮೊದಲಾಗಿ ಪೋಷಕರು, ಮನೆಯ ಸದಸ್ಯರು ಮಗುವಿಗೆ ಅವಸರ ಮಾಡದೇ, ಮೂದಲಿಸದೇ, ಮಾತನಾಡುವಾಗ ಸಾಕಷ್ಟು ಕಾಲಾವಕಾಶ ಕೊಟ್ಟು, ಹಿತಕರವಾದ ವಾತಾವರಣ ಕಲ್ಪಿಸುವುದು ಮುಖ್ಯ. ಅಗತ್ಯವಿದ್ದಲ್ಲಿ, ವಾಕ್ಶ್ರವಣ ಚಿಕಿತ್ಸಕರನ್ನು (speech and hearing) ಭೇಟಿಯಾಗಬಹುದು. ಆಗ ಈ ರೀತಿಯ ತೊಂದರೆಯನ್ನು ತಡೆಗಟ್ಟಲು ಸಾಧ್ಯ.

೨೪.ಉಚಿತ ಮಕ್ಕಳ ಸಹಾಯವಾಣಿ 1098.    ಸುನೀತಾ ಪಿಯುಸಿ ಅಭ್ಯಾಸ ‌ಮಾಡುತ್ತಿದ್ದಾಳೆ. ಅವಳು ಮತ್ತು ಅವಳ ತಮ್ಮ ಅಮ್ಮನೊಂದಿಗೆ ಇದ್ದಾಳೆ. ತಾಯಿಯ ದುಡ...
04/08/2025

೨೪.ಉಚಿತ ಮಕ್ಕಳ ಸಹಾಯವಾಣಿ 1098.

ಸುನೀತಾ ಪಿಯುಸಿ ಅಭ್ಯಾಸ ‌ಮಾಡುತ್ತಿದ್ದಾಳೆ. ಅವಳು ಮತ್ತು ಅವಳ ತಮ್ಮ ಅಮ್ಮನೊಂದಿಗೆ ಇದ್ದಾಳೆ. ತಾಯಿಯ ದುಡಿಮೆಯಲ್ಲಿಯೇ ಇವರ ಜೀವನ ಸಾಗುತ್ತಿದೆ.‌
ಅವಳು ತಂದೆಯ ಪ್ರೀತಿಯಿಂದ ವಂಚಿತಳು. ತಂದೆ ಬೇರೆ ಕಡೆ ವಸತಿ ಮಾಡಿದ್ದಾರೆ. ಸುನೀತಾನ ಸ್ನೇಹಿತರು ತಂದೆಯ ಬಗ್ಗೆ ಹೇಳುವಾಗ, ತಾನು ತಂದೆಯ ಒಡನಾಟ ಅನುಭವಿಸಲು ಆಗಲಿಲ್ಲವೆಂಬ ಕೊರಗು. ಈ ವಿಷಯ ಅವಳನ್ನು ಆಗಾಗ್ಗೆ ಬಾಧಿಸುತ್ತಿತ್ತು. ಆದ್ದರಿಂದ ಆಪ್ತ ಸಲಹಾಕೇಂದ್ರಕ್ಕೆ ಭೇಟಿ ನೀಡಿದಳು.
ತಂದೆ ತಾಯಿಯ ವ್ಯಾಜ್ಯ
ಕೋರ್ಟಿನಲ್ಲಿದೆ. ತಂದೆ, ತಾಯಿ ಕೋರ್ಟಿನ ಹಿಯರಿಂಗ್ ಗಳಿಗೆ ಹೋಗ್ತಾರೆ. ಕೋರ್ಟ್ ತಿಂಗಳಿಗೊಮ್ಮೆ ಮಕ್ಕಳನ್ನು ನೋಡಲು ತಂದೆಗೆ ಅನುಮತಿ ಕೊಟ್ಟಿದೆ. ತಿಂಗಳಿಗೊಮ್ಮೆ ಮನೆಗೆ ಬರುವ ತಂದೆ, ತಮ್ಮನನ್ನು ಮಾತ್ರ ಮಾತನಾಡಿಸುತ್ತಾರೆ, ಆದರೆ ಸುನೀತಾಳನ್ನು ಮಾತನಾಡಿಸುವುದಿಲ್ಲ.‌ ಇವಳಿಗದು ಬೇಸರದ ಸಂಗತಿ. ತಂದೆ ಮೊದಲು ಇವರ ಜೊತೇನೆ ಇದ್ದರು, ಸುನೀತಾಳ ತಾಯಿಗೆ ತೊಂದರೆ ಕೊಡುತ್ತಿದ್ದರು. ಹಲವು ಬಾರಿಯ ತೊಂದರೆಗಳು, ದೈಹಿಕ ಹಿಂಸೆಯ ರೂಪ
ತಾಳುತ್ತಿತ್ತು. ಹೀಗೆ ಹಲವು ಬಾರಿ ಇಂತಹ ಘಟನೆಗಳನ್ನು ಗಮನಿಸಿದ, ಸುನೀತಾ, ಸಹಿಸಲಾಗದೆ , ಒಂದು ದಿನ ಮಕ್ಕಳ ಉಚಿತ ಸಹಾಯವಾಣಿಗೆ (೧೦೯೮) ಕರೆ ಮಾಡಿ, ತಂದೆಯ ಬಗ್ಗೆ ದೂರು ಕೊಡುವುದು ಅನಿವಾರ್ಯ ವಾಯಿತು. ಈ ದೂರಿನಿಂದ ತಂದೆ ಇವರಿಂದ ದೂರವಾದರು.
ಆದರೆ ತಾನು ತಂದೆಯ ಬಗ್ಗೆ ದೂರು ಕೊಟ್ಟಿದ್ದು ತಪ್ಪೋ ಸರಿಯೋ ಎಂಬ ಗೊಂದಲವು ಸುನೀತಾಳಿಗೆ ಬಾಧೆ ಕೊಡುತ್ತಿತ್ತು. ತಾನು ತಪ್ಪಿತಸ್ಥೆಯೇ ಎಂಬ ಗೊಂದಲ ಕಾಡುತ್ತಿತ್ತು. ( ಸುನೀತಾಳೆ ದೂರು ಕೊಟ್ಟಿದ್ದಂತ ತಂದೆಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ.) ಸುನೀತಾಳು ತನ್ನ ತಾಯಿಯು ದಿನನಿತ್ಯ ಅನುಭವಿಸುತ್ತಿದ್ದ ಹಿಂಸೆಗೆ ತೆರೆಯೆಳೆದಿದ್ದು, ಒಂದು ಪ್ರಬುದ್ಧ ನಡೆಯೇ ಅಲ್ಲವೇ? ಎಂದಾಗ ಸುನೀತಾಗೆ ಸಮಾಧಾನವಾಯಿತು.‌ ಆದರೆ, ತಂದೆಯ ಬಗ್ಗೆ ಅವಳಿಗೆ ಪ್ರೀತಿಯಿಲ್ಲವೆಂದಲ್ಲ, ಅವರ ದುರ್ವರ್ತನೆಯನ್ನು ಮಾತ್ರ ಸಹಿಸಳು.
ಪ್ರಕಾಶ ಎನ್
ಮಂಗಳೂರು

When we are in majority, we tend to think that is correct, others are wrong. But if we want to know the reality, we shou...
02/08/2025

When we are in majority, we tend to think that is correct, others are wrong. But if we want to know the reality, we should understand the other side.

Today's world, we need to learn soft skill, whatever job we are doing. If our  behaviour is soft and pleasant, it pays r...
02/08/2025

Today's world, we need to learn soft skill, whatever job we are doing. If our behaviour is soft and pleasant, it pays rich dividend. Do you want to learn soft skills.?

29/07/2025

೨೩. ಹಳ್ಳಿ ಶಾಲೆಯಲ್ಲಿ ಓದುತ್ತಿರುವ ಕೃತ್ತಿಕಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ. ಅವಳ ಅಭ್ಯಾಸ ಚೆನ್ನಾಗಿತ್ತು. ಆದರೆ ಟೆಸ್ಟಿನಲ್ಲಿ 4-5 ಕಡಿಮೆ ಅಂಕ ಗಳಿಸಿದಾಗಲೆಲ್ಲಾ, ಶಾಲೆಯ ಹೆಡ್ ಮಾಸ್ತರ್, ಆಫೀಸ್ ಉದ್ಯೋಗಿಯು ಕೂಡ,
"ಕೃತ್ತಿಕಾ ಏನಾಯಿತು, ಏಕೆ ಕಡಿಮೆ ಅಂಕ ಬಂತು, ಒಳ್ಳೇ ಅಂಕ ಗಳಿಸಿ, ನಮ್ಮ ಶಾಲೆಗೆ ಹೆಸರು ತರಬೇಕಲ್ಲ!"..ಎಂದು ಹೇಳುತ್ತಿದ್ದರು. ಇದರಿಂದ ಕೃತ್ತಿಕಾಗೆ ಒತ್ತಡ ಉಂಟಾಗಿ, ಮುಂದಿನ ಟೆಸ್ಟಗಳಲ್ಲಿ, ಚಿಕ್ಕ‌ಪುಟ್ಟ ತಪ್ಪುಗಳು ಹೆಚ್ಚಾಗ ತೊಡಗಿತು.
ಅವಳ ಆತಂಕದ ನಿವಾರಣೆಗಾಗಿ, ಅವಳು ಆಪ್ತಸಲಹೆ ಸಹಾಯ ಪಡೆದಳು. ಭಯ, ಆತಂಕದ ನಿವಾರಣೆಯಾ ಯಿತು. ಅಂತಿಮ ಪರೀಕ್ಷೆಯಲ್ಲಿ, ಶಾಲೆಯಲ್ಲಿ
ಪ್ರಥಮ ಸ್ಥಾನಗಳಿಸಿದಳು.

ಅನೇಕ ವಿದ್ಯಾರ್ಥಿಗಳಿಗೆ
ಒತ್ತಡ, ಅವಮಾನ ಹೆಚ್ಚಿದಾಗ, ಅವರು ಸಹಿಸಕೊಳ್ಳಲು ಸಾಧ್ಯವಾಗದೆ, ಆತ್ಮಹತ್ಯೆ ಮೊರೆ ಹೋಗುತ್ತಾರೆ ಅಥವಾ ಖಿನ್ನತೆಗೆ ಒಳಗಾಗುತ್ತಾರೆ.

ಪ್ರತಿ ಬಾರಿಯೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಸಿಇಟಿ, ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷಾ ಫಲಿತಾಂಶ ಬರುತ್ತಿದ್ದಂತೆಯೇ ಕೆಲವು
ವಿದ್ಯಾರ್ಥಿಗಳ ಆತ್ಮಹತ್ಯೆ ಇಂದು ಸಾಮಾನ್ಯವಾಗಿದೆ. ಇತ್ತೀಚೆಗೆ, ವಿದ್ಯಾರ್ಥಿಗಳ ಕೋಚಿಂಗ್ ಸೆಂಟರ್ ಗಳ, ಕಾಲೇಜಿನ, ಪೋಷಕರ, ನೆಂಟರಿಷ್ಟರ ಒತ್ತಡ ಕೂಡ ಹೆಚ್ಚಿದೆ. ರ್ಯಾರಿಂಗ್ (ragging),
ಲೈಂಗಿಕ ದೌರ್ಜನ್ಯ, ಜಾತಿ, ವರ್ಗ, ಲಿಂಗಬೇಧ ಇವೆಲ್ಲವೂ ಸಹ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಿಸುತ್ತಿವೆ, ಅಪಮಾನಕ್ಕೆ ಕಾರಣವಾಗುತ್ತಿವೆ.‌ ಶಿಕ್ಷಣ ಸಂಸ್ಥೆಗಳು,
ಶೈಕ್ಷಣಿಕ ಸಾಧನೆ ಅಥವಾ ಅಂಕವನ್ನು ಆಧಾರವಾಗಿಟ್ಟು ವರ್ಗೀಕರಣ ಅಥವಾ ತಂಡಗಳನ್ನಾಗಿ ವಿಂಗಡಿಸುವುದು ಕಂಡು ಬರುತ್ತಿವೆ. ನಿಜವಾಗಿ,
ಎಲ್ಲಾ ಬಗೆಯ ವಿದ್ಯಾರ್ಥಿಗಳು ಒಟ್ಟು ಸೇರಿ ಕಲಿಯುವುದರಿಂದ, ಸಮಾನ ವಯಸ್ಕರ ಗುಂಪಿನಲ್ಲಿ ಕಲಿಕೆ ಬಹಳ ಉತ್ತಮವಾಗಿರುತ್ತದೆ.
ಈ ದಿಶೆಯಲ್ಲಿ, ಸುಪ್ರೀಂ ಕೋರ್ಟ್ ವಿದ್ಯಾರ್ಥಿ ಸಮೂಹದ ಮಾನಸಿಕ ಆರೋಗ್ಯ ಸುಧಾರಿಸಲು ೧೫ ಅಂಶದ
ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇನ್ನಾದರೂ ಶಿಕ್ಷಣ ಸಚಿವಾಲಯ ಸೂಕ್ತ ಕ್ರಮಗಳನ್ನು ಕೈಕೊಂಡು,
ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್ ಗಳು, ವಿದ್ಯಾರ್ಥಿಗಳಿಗೆ ಒತ್ತಡ ಉಂಟು ಮಾಡದಂತೆ, ಕಾರ್ಯ ನಿರ್ವಹಿಸಲು, ಆದೇಶ ನೀಡುವರೆಂದು
ಆಶಿಸೋಣ. ಅದೇಶದ ಪಾಲನೆಯೂ ಮುಖ್ಯ.

Do you want to improve  your  relationship?
29/07/2025

Do you want to improve your relationship?

Do you know about Triangles in life.., When we are two persons in a situation, and in disagreement  or in conflict, one ...
29/07/2025

Do you know about Triangles in life..,
When we are two persons in a situation, and in disagreement or in conflict, one tends to approach a third person, that forms a triangle. what happens in a triangle..., it is an interesting phenomenon.

Webinar on Role of stress / trauma in our life was on 25 th july 25. Many of us would have undergone some kind of trauma...
29/07/2025

Webinar on Role of stress / trauma in our life was on 25 th july 25. Many of us would have undergone some kind of trauma and are undergoing stress everyday. We should know how either trauma or stress affect us emotionally, socially, physically. Do you want to connect to me?

22/07/2025

A friend in need is a friend indeed!!!
೨೨. ಇತ್ತೀಚಿಗೆ ನಮ್ಮೋರ್ವ ಸನ್ಮಿತ್ರರಾದ ಉಮೇಶ ಭಟ್ಟರು ನಮ್ಮನ್ನ ಅಗಲಿದರು. ಸ್ವಲ್ಪಕಾಲದ ಅನಾರೋಗ್ಯದಿಂದ ಬಳಲಿದರು. ಇವರ ನನ್ನ ಸ್ನೇಹ ಸುಮಾರು ೪೨ ವರ್ಷಗಳ ದೀರ್ಘಾವಧಿಯದ್ದು. ನಾವು ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವಾಗ, ಅವರು ಶಿರಶಿಯಲ್ಲಿ ನನ್ನ ಸಹೋದ್ಯೋಗಿ. ನಂತರ ಬಡ್ತಿಹೊಂದಿ, ನಾವು ಗೋವಾ ರಾಜ್ಯದಲ್ಲಿ ಸಮೀಪದ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದೆವು. ಗೋವಾದಲ್ಲಿ ಒಂದೆರಡು ತಿಂಗಳು ನನ್ನೊಟ್ಟಿಗೆ ವಾಸವಾಗಿದ್ದರು. ಆಗಾಗ್ಗೆ ಭೇಟಿಯಾಗಿ ಸುಖ ದುಃಖ ಮಾತಾಡುತ್ತಿದ್ದೆವು. ಮುಂಬೈಯಲ್ಲಿ ಕೂಡ ಒಂದು ವರ್ಷ ಒಟ್ಟಿಗೆ ಕೆಲಸ ಮಾಡಿದ್ದೆವು. ಉಮೇಶ ಭಟ್ಟರು ಮಿತಭಾಷಿ, ಮೃದುಭಾಷಿ, ಹಾಸ್ಯ ಪ್ರವೃತ್ತಿವುಳ್ಳವರು ಕೂಡ. ಉಮೇಶ ಭಟ್ರು ಚುಟುಕುಗಳನ್ನು ಬರೆಯುತ್ತಿದ್ದರು. ಇತ್ತೀಚೆಗೆ ನಾಲ್ಕು ವರ್ಷದಿಂದ ತಮ್ಮದೇ ವಿಶಿಷ್ಟ ಶೈಲಿಯಲ್ಲಿ , ಯಕ್ಷಗಾನದ ಹಾಡಿನ ದಾಟಿಯಲ್ಲಿ ಭಜನೆ ಹೇಳುತ್ತಿದ್ದರು. ಬಹುತೇಕ ದಿನವೂ ಕನಿಷ್ಠ ಮೂರ್ನಾಲ್ಕು ಭಜನೆಗಳನ್ನು ಹಾಡಿ, ಭಜನಾ ಗುಂಪಿನಲ್ಲಿ ಹರಿಬಿಡುತ್ತಿದ್ದರು. ೧೦೦೦ ಮೇಲ್ಪಟ್ಟು ಭಜನೆ ಹೇಳಿದ್ದಾರೆ.
ನಾವಿಬ್ಬರೂ ಮನೆಯ ಸಮಸ್ತ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆವು.

ಇನ್ನೋರ್ವ ಸಜ್ಜನರಾದ ಗುಲಬರ್ಗಾದ ಡಾ.ದೇಶಪಾಂಡೆಯೆನ್ನುವವರು ಇತ್ತೀಚೆಗೆ ನಿಧನರಾದರು. ಗುಜರಾತಿನ ನವಸಾರಿಯಲ್ಲಿ, ನಾನು ಕೆಲಸ ಮಾಡುವಾಗ , ರೇಲ್ವೇ ಸ್ಟೇಷನ್ ಕನ್ನಡದಲ್ಲಿ ಮಾತನಾಡುತ್ತಿದ್ದ ಕುಟುಂಬವೊಂದನ್ನು ಕಂಡೆ. ಬಹಳ ಖುಷಿಯಾಗಿ, ನಾನೇ ಮುಂದಾಗಿ ಅವರ ಪರಿಚಯ ಮಾಡಿಕೊಂಡೆ. ಅವರು ಡಾ ಧನಂಜಯ ದೇಶಪಾಂಡೆ ಕುಟುಂಬ, ಅವರ ಶ್ರೀಮತಿ, ಎರಡು ಹೆಣ್ಣು ಮಕ್ಕಳಿದ್ದರು.‌ ಅವರು ನವಸಾರಿ ಬಳಿಯ ಅಂಬಾಡಾ ಎಂಬ ಹಳ್ಳಿಯಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಗಣೇಶನ ಹಬ್ಬದಂದು ಅವರ ಮನೆಗೆ ಭೇಟಿ ನೀಡಿದೆವು. ಆಗ ಮೊಬೈಲ್ ಅಥವಾ ದೂರವಾಣಿ ಇಲ್ಲದ ಕಾಲ. ಅದೇ ರೀತಿ ನಮ್ಮ ಕುಟುಂಬ ಸ್ನೇಹ ಮುಂದುವರಿದು, ನವಸಾರಿ ಸರ್ವೀಸಿನ ಮೂರು ವರ್ಷಗಳ ಅವಧಿಯಲ್ಲಿ , ಅವರೊಡನೆ ಅನೇಕ ಬಾರಿ ಸೇರಿ, ನಾವೆಲ್ಲಾ ಒಟ್ಟಿಗೆ ಕಾಲ ಕಳೆಯುತ್ತಿದ್ದೆವು.
ನಮ್ಮೊಡನೆ ಯಾವಾಗಲೂ
ಹಾಸ್ಯ ಸಂಭಾಷಣೆಯಲ್ಲಿಯೇ ತೊಡಗುತ್ತಿದ್ದರು. ಇವರು ನಿಗರ್ವಿ. ೩೫ ವರ್ಷದ ಸ್ನೇಹ ನಮ್ಮದು. ಸೂರತ್ ನ ಬಬೂನಿಕ್ ಪ್ಲೇಗ್ ಸಂದರ್ಭದಲ್ಲಿ, ಅವರೇ ಮಾತೇ ನಮಗೆ ಶ್ರೀ ರಕ್ಷೆ. ಸಣ್ಣ ಸಮಸ್ಯೆಗಳಿಗೆ ಅವರ ಹಿತನುಡಿ, ಬೆಂಬಲ ನಮಗೆ ಬಹಳ ಸಮಾಧಾನವುಂಟು ಮಾಡುತ್ತಿತ್ತು. ನವಸಾರಿಯಲ್ಲಿ ನಮಗೊಂದು ಓಯಸಿಸ್ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ!! ಅವರು ನಮ್ಮೂರಿಗೂ ಬಂದಿದ್ದರು. ನಾವು ಹುಬ್ಳಿಯಲ್ಲಿ, ಮುಂಬಯಿಯಲ್ಲಿದ್ದಾಗ ಅವರು ನಮ್ಮಲ್ಲಿಗೆ ಬಂದಿದ್ದರು. ಆದರೆ ಅವರು ಸಹ ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದರೆಂಬುದು ತಿಳಿದು ಬಹಳ ದುಃಖವಾಯಿತು.
ನಮ್ಮ ನೆಚ್ಚಿನ ಸ್ನೇಹಿತರು, ಬಂಧುಗಳು ನಮ್ಮನ್ನು ಅಗಲಿದಾಗ ಬಹಳ ಬೇಸರ ಸಹಜ. ಅವರ ಸಾವು ನಮ್ಮನ್ನು ಅಧೀರರನ್ನಾಗಿ ಮಾಡುತ್ತದೆ. ಅವರೊಡನೆ ಕಳೆದ ತಮಾಷೆಯ ಕ್ಷಣಗಳು , ಸುಖವಾಗಿ ಕಳೆದ ದಿನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಕಳೆದ ಸುಖದ ದಿನಗಳನ್ನು ನೆನಪಿಸುತ್ತಾ, ಅವರೊಟ್ಟಿಗೆ ಮತ್ತೊಮ್ಮೆ ಮಾತನಾಡೋಣವೆನಿಸುತ್ತದೆ. ಆದರೆ ಅವರು ಇನ್ನೆಂದೂ ಸಿಗಲಾರರು!!! ಈ ಭಾವನೆ ನಮ್ಮಲ್ಲಿ ಶೂನ್ಯವನ್ನುಂಟು ಮಾಡುತ್ತದೆ.
ಹೀಗೆ ಗೆಳೆಯರನ್ನು ಸಂಪಾದಿಸುವುದು, ಅವರೊಡನೆ ಕಾಲ ಕಳೆಯುವುದು, ಬಹಳ ಮುಖ್ಯ. ಅವರೊಡನೆ ನಡೆಸುವ ಸುಧೀರ್ಘ ಪಯಣ ನಮ್ಮ ಪ್ರಯತ್ನ ಮತ್ತು ಅದೃಷ್ಟವನ್ನು ಅವಲಂಬಿಸಿರುತ್ತದೆ. ಗೆಳೆಯರು ಸಾಮಾನ್ಯವಾಗಿ ಜಡ್ಜಮೆಂಟಲ್ ಆಗಿರುವುದಿಲ್ಲ, ಸಲಹೆ ಅಥವಾ ಸಮಯಕ್ಕೆ ಸ್ಪಂದಿಸುತ್ತಾರೆ.
ಗೆಳೆಯರ ಅಗಲಿಕೆ, ನಮಗೆ ಮುಂದೆ ಬರಲಿರುವ ನಮ್ಮ ಸಾವನ್ನು ನೆನಪಿಸುತ್ತದೆ, ಅವರ ಜೀವನವು ನಮಗೊಂದು ಪಾಠವೂ ಆಗಬಹುದು. ಯಾವುದೇ ವ್ಯಕ್ತಿಯು ಇಲ್ಲದಾಗ, ಅವರ ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ!!

Address

Prakash N, Manasiri Counselling Centre, Gurunagar I Main Road, Near AJ Nursing Hostel, Maryhill Konchady
Mangalore
575008

Opening Hours

Monday 11am - 6pm
Tuesday 4pm - 6:30pm
Wednesday 4pm - 6:30pm
Thursday 4pm - 6:30pm
Friday 4pm - 6:30pm
Saturday 11am - 6:30pm
Sunday 11am - 6pm

Alerts

Be the first to know and let us send you an email when Manasiri Counselling Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Manasiri Counselling Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram