DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

ಬಾಳಿಗಾ ಕೊಲೆ ನಡೆದು ಹತ್ತು ವರ್ಷಗಳು, ಬಾಳಿಗಾ ಕೊಲೆ ಗಡುಕರ ವಿರುದ್ಧ ಅಂದು ಮಂಗಳೂರು ಒಂದಾಗಿ ನಿಲ್ಲಲಿದೆ. ಬಿ ಕೆ ಹರಿಪ್ರಸಾದ್ ಜೊತೆಗಿರಲಿದ್ದಾ...
17/03/2026

ಬಾಳಿಗಾ ಕೊಲೆ ನಡೆದು ಹತ್ತು ವರ್ಷಗಳು, ಬಾಳಿಗಾ ಕೊಲೆ ಗಡುಕರ ವಿರುದ್ಧ ಅಂದು ಮಂಗಳೂರು ಒಂದಾಗಿ ನಿಲ್ಲಲಿದೆ. ಬಿ ಕೆ ಹರಿಪ್ರಸಾದ್ ಜೊತೆಗಿರಲಿದ್ದಾರೆ.

ಏಕೈಕ ಸಹೋದರನ ಆಸರೆಯನ್ನು ಕಳೆದು ಕೊಂಡು, ರಾಜಕೀಯ ಬಲದ ಬಲಾಢ್ಯ ಕೊಲೆಗಡುಕರಿಗೆ ಶಿಕ್ಷೆಕೊಡಿಸಲು ಬೆದರಿಕೆ, ದಬ್ಬಾಳಿಕೆಯ ನಡುವೆ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ದಿವಂಗತ ವಿನಾಯಕ ಬಾಳಿಗಾ ಸಹೋದರಿಯರು ಏಕಾಂಗಿಗಳಲ್ಲ ಎಂದು ಸಾರಿ ಹೇಳಲು ಮಂಗಳೂರಿನ ಪ್ರಜ್ಞಾವಂತರು ಮಾರ್ಚ್ 22 ರಂದು ಮೆರವಣಿಗೆ ನಡೆಸಲಿದ್ದಾರೆ, ಬಾಳಿಗಾ ಕೊಲೆ ನಡೆದ ಸ್ಥಳದಲ್ಲಿ ಸಭೆ ನಡೆಸಲಿದ್ದಾರೆ. ಬಾಳಿಗಾ ಮನೆಗೆ ತೆರಳಿ ಸೋದರಿಯರಿಗೆ ಬಲ ತುಂಬಲಿದ್ದಾರೆ.

ಅಂದು ಹಿರಿಯ ನೇತಾರ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ನಮ್ಮೊಂದಿಗೆ ಇರಲಿದ್ದಾರೆ. ವೆಂಕಟರಮಣ ದೇವಳದ ಮುಂಭಾಗದಿಂದ ಹೊರಡುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೀವೂ ಜೊತೆ ಸೇರಿ. ಮಂಗಳೂರು ಮಾಫಿಯಾಗಳ ವಿರುದ್ಧ, ನ್ಯಾಯದ ಪರ, ದುರ್ಬಲರ ಜೊತೆಗೆ ಎಂಬುದನ್ನು ಸಾರಿ ಹೇಳೋಣ.

ದೇಸಪ್ರೇಮಿ ಸಂಘಟನೆಗಳ ಒಕ್ಕೂಟ, ಮಂಗಳೂರು

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಬಜಾಲ್ ಹಾಗೂ ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಸಹಯೋಗದಲ್ಲಿ ನಡೆದ ಸೌಹಾರ್ದ...
17/03/2026

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಬಜಾಲ್ ಹಾಗೂ ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಸಹಯೋಗದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ, ಸಾಮಾಜಿಕ ಕಾರ್ಯಕರ್ತರು, ಸ್ಥಳೀಯ ವಿವಿಧ ಧಾರ್ಮಿಕ ಕೇಂದ್ರದ ಮುಖಂಡರುಗಳು ಭಾಗವಹಿಸಿದ್ದರು. ಪಕ್ಕಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಖತೀಬರುಗಳು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಆಳ್ವ, ಹೋಲಿ ಸ್ಪಿರೀಟ್ ಚರ್ಚ್ ಉಪಾಧ್ಯಕ್ಷರಾದ ದೀಪಕ್ ಡಿಸೋಜ, ಸತ್ಯನಾರಾಯಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್, ಕಾರ್ಮಿಕ ಸಂಘಟನೆಯ ಮುಂದಾಳು ಕೆ. ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ , ಶಾಫೀ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಬಶೀರ್ , ಎನ್.ಎಫ್.ಸಿ ಕ್ರಿಕೇಟರ್ಸ್ ಮುಖಂಡರಾದ ನವಾಝ್, ಜಾತ್ಯಾತೀತ ಪಕ್ಷದ ಮುಖಂಡರಾದ ಹನೀಫ್ ಬಜಾಲ್, ಯುವ ಉದ್ಯಮಿ ಅನ್ವರ್ ಬಜಾಲ್, ಮದರ್ ತೆರೆಜಾ ವಿಚಾರ ವೇದಿಕೆಯ ಡೋಲ್ಫಿ ಡಿಸೋಜ ಎನೆಲ್ಮಾರ್, ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ರಿಯಾಜ್ ಪಕ್ಕಲಡ್ಕ ಮುಂತಾದವರು ಉಪಸ್ಥಿತರಿದ್ದರು.

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳು ವಿಫಲ: ಡಿವೈಎಫ್ಐ ಆರೋಪRead More:
16/03/2026

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳು ವಿಫಲ: ಡಿವೈಎಫ್ಐ ಆರೋಪ
Read More:

ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಪರಿಣಾಮ ದೇಶದಲ್ಲಿ ನಿರುದ್ಯೋಗ ಸಮಸ.....

DYFI ಕುತ್ತಾರು ಬಟ್ಟೆದಡಿ ಘಟಕ ಸಮ್ಮೇಳನ ಬಹಿರಂಗ ಸಭೆಯನ್ನು ಪತ್ರಕರ್ತರಾದ ನವೀನ್ ಸೂರಿಂಜೆ ಉದ್ಘಾಟಿಸಿದರು, DYFI ದಕ ಜಿಲ್ಲಾ ಕಾರ್ಯದರ್ಶಿ ಕಾಂ...
15/03/2026

DYFI ಕುತ್ತಾರು ಬಟ್ಟೆದಡಿ ಘಟಕ ಸಮ್ಮೇಳನ ಬಹಿರಂಗ ಸಭೆಯನ್ನು ಪತ್ರಕರ್ತರಾದ ನವೀನ್ ಸೂರಿಂಜೆ ಉದ್ಘಾಟಿಸಿದರು, DYFI ದಕ ಜಿಲ್ಲಾ ಕಾರ್ಯದರ್ಶಿ ಕಾಂ. ಸಂತೋಷ್ ಬಜಾಲ್ ಪ್ರಮುಖ ಭಾಷಣ ಮಾಡಿದರು, ಜಿಲ್ಲಾ ಮುಖಂಡರಾದ ಕಾಂ .ರಿಜ್ವಾನ್ ಹರೇಕಳ, ಕಾಂ. ನಿತಿನ್ ಕುತ್ತಾರ್ , ಕಾಂ. ಸುನೀಲ್ ತೇವುಲ, ಕಾಂ. ಮಾಧುರಿ ಬೋಳಾರ, ಅಧ್ಯಕ್ಷರಾದ ಕಾಂ. ಮಿಥುನ್ ಕುತ್ತಾರ್, ಕಾರ್ಯದರ್ಶಿ ಕಾಂ. ವಿಕಾಸ್ ಕುತ್ತಾರ್ ಉಪಸ್ಥಿತರಿದ್ದರು, ಸಭಾ ಕಾರ್ಯಕ್ರಮದ ನಂತರ ಸೌಹಾರ್ದ ಕಲಾವಿದರು ಕುತ್ತಾರ್ ಹಾಗೂ ಸಮುದಾಯ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ವಿನಾಯಕ ಬಾಳಿಗಾ ಕೊಲೆ ಪ್ರಕರಣ ಬಯಲಿಗೆ ಎಳೆಯುವುದರಲ್ಲಿ ಪ್ರೊ. ನರೇಂದ್ರ ನಾಯಕ್ ಪ್ರಧಾನ ಪಾತ್ರ ವಹಿಸಿದ್ದರು. ಹತ್ತನೇ ವರ್ಷದ ನೆನಪಿನ ಮೆರವಣಿಗೆ...
15/03/2026

ವಿನಾಯಕ ಬಾಳಿಗಾ ಕೊಲೆ ಪ್ರಕರಣ ಬಯಲಿಗೆ ಎಳೆಯುವುದರಲ್ಲಿ ಪ್ರೊ. ನರೇಂದ್ರ ನಾಯಕ್ ಪ್ರಧಾನ ಪಾತ್ರ ವಹಿಸಿದ್ದರು. ಹತ್ತನೇ ವರ್ಷದ ನೆನಪಿನ ಮೆರವಣಿಗೆಯಲ್ಲಿ‌ ಅವರು ಹೆಜ್ಜೆ ಹಾಕಲಿದ್ದಾರೆ.

ಮಾರ್ಚ್ 22. 2026 ಸಂಜೆ 4.00 ಗಂಟೆಗೆ.

ದೇಶಪ್ರೇಮಿ ಸಂಘಟನೆಗಳ ಒಕ್ಕೂಟ, ಮಂಗಳೂರು

DYFI ಕುತ್ತಾರು ಬಟ್ಟೆದಡಿ ಘಟಕ ಸಮ್ಮೇಳನ ಉದ್ಘಾಟನಾ ಸಮಾರಂಭ DYFI ಬಟ್ಟೆದಡಿ ಕುತ್ತಾರು ಬಟ್ಟೆದಡಿ ಘಟಕದ ಸಮ್ಮೇಳನವನ್ನು ಜಿಲ್ಲಾಧ್ಯಕ್ಷರಾದ B.K...
15/03/2026

DYFI ಕುತ್ತಾರು ಬಟ್ಟೆದಡಿ ಘಟಕ ಸಮ್ಮೇಳನ ಉದ್ಘಾಟನಾ ಸಮಾರಂಭ

DYFI ಬಟ್ಟೆದಡಿ ಕುತ್ತಾರು ಬಟ್ಟೆದಡಿ ಘಟಕದ ಸಮ್ಮೇಳನವನ್ನು ಜಿಲ್ಲಾಧ್ಯಕ್ಷರಾದ B.K ಇಮ್ತಿಯಾಜ್ ಉದ್ಘಾಟಿಸಿದರು, ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ಜೀವನ್ ರಾಜ್ ಕುತ್ತಾರ್, Adv.ನಿತಿನ್ ಕುತ್ತಾರ್, ಸುನೀಲ್ ತೇವುಲ ಉಪಸ್ಥಿತರಿದ್ದರು

ರಾಜಕೀಯ, ಸಾಮಾಜಿಕವಾಗಿ ಪ್ರಬಲರಾದ ಮಂಗಳೂರಿನ ಮಾಫಿಯಾ ಮಾಫಿಯಾ ಕಿಂಗ್ ಪಿನ್ ಗಳಿಂದ ವಿನಾಯಕ ಬಾಳಿಗಾ ಹತ್ಯೆ ನಡೆದು 10 ವರ್ಷ ತುಂಬುತ್ತಿದೆ. ಕೊಲೆ...
14/03/2026

ರಾಜಕೀಯ, ಸಾಮಾಜಿಕವಾಗಿ ಪ್ರಬಲರಾದ ಮಂಗಳೂರಿನ ಮಾಫಿಯಾ ಮಾಫಿಯಾ ಕಿಂಗ್ ಪಿನ್ ಗಳಿಂದ ವಿನಾಯಕ ಬಾಳಿಗಾ ಹತ್ಯೆ ನಡೆದು 10 ವರ್ಷ ತುಂಬುತ್ತಿದೆ. ಕೊಲೆಗಡುಕರ ಕೃತ್ಯವನ್ನು ಖಂಡಿಸಿ, ವಿನಾಯಕ ಬಾಳಿಗಾ ನೆನಪಿನಲ್ಲಿ ಮಾರ್ಚ್ 22 ರಂದು ಮಂಗಳೂರಿನಲ್ಲಿ ಬೃಹತ್ ಮೆರವಣಿಗೆಯನ್ನು "ದೇಶಪ್ರೇಮಿ ಸಂಘಟನೆಗಳ ಒಕ್ಕೂಟ" ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರಿನ ವಿವಿಧ ಸಮಾನ ಮನಸ್ಕ ಜನಪರ ಸಂಘಟನೆಗಳು ಇಂದು ನಗರ ಸಮತಾ ಕಚೇರಿಯಲ್ಲಿ ಸಭೆ ನಡೆಸಿದವು. ಈ ಸಂದರ್ಭ ಮೆರವಣಿಗೆಯ ಕರಪತ್ರ ಬಿಡುಗಡೆಗೊಳಿಸಲಾಯಿತು.

ದೇಶಪ್ರೇಮಿ‌ ಸಂಘಟನೆಗಳ ಒಕ್ಕೂಟ, ಮಂಗಳೂರು

ಮಂಗಳೂರಿನಲ್ಲಿ ಗೃಹ ಬಳಕೆಯ LPG ಪೂರೈಕೆಯೂ ಭಾದಿತಗೊಂಡಿದೆ. ವಾರದಿಂದ ಆನ್ ಲೈನ್ ಬುಕ್ಕಿಂಗ್ ತೆಗೆದುಕೊಳ್ಳುವುದು ಬಹುತೇಕ ವಿರಳಗೊಂಡಿದೆ. ಹೊಟೇಲ್...
14/03/2026

ಮಂಗಳೂರಿನಲ್ಲಿ ಗೃಹ ಬಳಕೆಯ LPG ಪೂರೈಕೆಯೂ ಭಾದಿತಗೊಂಡಿದೆ. ವಾರದಿಂದ ಆನ್ ಲೈನ್ ಬುಕ್ಕಿಂಗ್ ತೆಗೆದುಕೊಳ್ಳುವುದು ಬಹುತೇಕ ವಿರಳಗೊಂಡಿದೆ. ಹೊಟೇಲ್ ಉದ್ಯಮ ಈಗಾಗಲೆ ಏದುಸಿರು ಬಿಡುತ್ತಿದೆ. ಇನ್ನೊಂದು ವಾರ ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಆಹಾರ ಉದ್ಯಮ ಪೂರ್ತಿ ಸ್ಥಗಿತಗೊಳ್ಳಬಹುದು. CNG ಆಟೋಗಳಿಗೂ ಇದು ಪೆಟ್ಟು ನೀಡಿದೆ. ಆನ್ ಲೈನ್ ಆಹಾರ ಒದಗಿಸುವ ಗಿಗ್ ಕಾರ್ಮಿಕರ ಮೇಲೂ ಇದು ಪರಿಣಾಮ ಬೀರಿದೆ.

ಮಂಗಳೂರಿನಂತಹ ಸಣ್ಣ ನಗರದ ಆರ್ಥಿಕತೆಗೆ ಇದು ಮಾರಣಾಂತಿಕ ಆಗಬಹುದು. ದುಡಿಮೆಗೆ ಅವಕಾಶಗಳು ಕೊರತೆಯಾಗಬಹುದು. ಯುದ್ದವನ್ನು ಆನ್ ಲೈನ್ ಗೇಮಿಂಗ್ ತರಹ ಆನಂದಿಸುವವರಿಗೆ, ಧರ್ಮದ ಕಾರಣಕ್ಕೆ ಯುದ್ದದ ನೆಪದಲ್ಲಿ ನಡೆಯುವ ಮಾರಣ ಹೋಮಗಳನ್ನು ಸಮರ್ಥಿಸುವವರಿಗೆ ಇದೆಲ್ಲಾ ಅರ್ಥ ಆಗುವ ದಿನಗಳು ಬೇಗ ಬರಲಿ ಎಂದು ಹಾರೈಸಬಹುದಷ್ಟೆ.

ಮುನೀರ್ ಕಾಟಿಪಳ್ಳ

*ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್**DYFI**ಕುತ್ತಾರು ಬಟ್ಟೆದಡಿ ಘಟಕ**ಘಟಕ ಸಮ್ಮೇಳನ*ದಿನಾಂಕ 15.03.2026 ಆದಿತ್ಯವಾರ ಸಂಜೆ 4. ಗಂಟೆಗೆ...
14/03/2026

*ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್*
*DYFI*

*ಕುತ್ತಾರು ಬಟ್ಟೆದಡಿ ಘಟಕ*

*ಘಟಕ ಸಮ್ಮೇಳನ*

ದಿನಾಂಕ 15.03.2026 ಆದಿತ್ಯವಾರ

ಸಂಜೆ 4. ಗಂಟೆಗೆ ಕುತ್ತಾರಿನಿಂದ ಐನ್ ಕಲ್ ವರೆಗೆ ಮೆರವಣಿಗೆ

*4.30ಕ್ಕೆ*
*ಬಹಿರಂಗ ಸಭೆ*
*ಸಾಂಸ್ಕೃತಿಕ ಕಾರ್ಯಕ್ರಮ*

*ಕಾಂ. ಯೋಗೀಶ್ ಕುತ್ತಾರು ವೇದಿಕೆ*

*ಪ್ರಮುಖ ಭಾಷಣಗಾರರು*

*ನವೀನ್ ಸೂರಿಂಜೆ*
ಪತ್ರಕರ್ತರು
*ಕಾಂ ಸಂತೋಷ್ ಬಜಾಲ್*
ಕಾರ್ಯದರ್ಶಿ ,DYFI ದಕ ಜಿಲ್ಲಾ ಸಮಿತಿ.

ಉಪಸ್ಥಿತಿ

*ಕಾಂ ರಿಜ್ವಾನ್ ಹರೇಕಳ*
ಕಾರ್ಯದರ್ಶಿ DYFI ಉಳ್ಳಾಲ ತಾಲೂಕು ಸಮಿತಿ.
*ಕಾಂ. ಸುನೀಲ್ ತೇವುಲ*
DYFI ಜಿಲ್ಲಾ ಮುಖಂಡರು

Congratulations team India 🇮🇳
08/03/2026

Congratulations team India 🇮🇳

*ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್**DYFI**ಕುತ್ತಾರು ಬಟ್ಟೆದಡಿ ಘಟಕ**ಘಟಕ ಸಮ್ಮೇಳನ*ದಿನಾಂಕ 15.03.2026 ಆದಿತ್ಯವಾರ *ಪ್ರತಿನಿಧಿ ಅಧಿ...
08/03/2026

*ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್*
*DYFI*

*ಕುತ್ತಾರು ಬಟ್ಟೆದಡಿ ಘಟಕ*

*ಘಟಕ ಸಮ್ಮೇಳನ*

ದಿನಾಂಕ 15.03.2026 ಆದಿತ್ಯವಾರ

*ಪ್ರತಿನಿಧಿ ಅಧಿವೇಶನ*
ಬೆಳಿಗ್ಗೆ 9.30ಕ್ಕೆ

*ಕಾಂ. ಮನೋಜ್ ವೇದಿಕೆ*
ಸ್ಥಳ: ತೇವುಲ ಪರಿಸರ

*ಉದ್ಘಾಟಕರು: ಕಾಂ. ಬಿ ಕೆ ಇಮ್ತಿಯಾಜ್* dyfi ದಕ ಜಿಲ್ಲಾಧ್ಯಕ್ಷರು

ಉಪಸ್ಥಿತಿ
*ಕಾಂ. Adv.ನಿತಿನ್ ಕುತ್ತಾರ್*
ಅಧ್ಯಕ್ಷರು, DYFI ಉಳ್ಳಾಲ ತಾಲೂಕು ಸಮಿತಿ

*ಕಾಂ. ಮನೋಜ್ ವಾಮಂಜೂರು*
DYFI ದ.ಕ ಜಿಲ್ಲಾ ಮುಖಂಡರು

ಸಂಜೆ 4. ಗಂಟೆಗೆ ಕುತ್ತಾರಿನಿಂದ ಐನ್ ಕಲ್ ವರೆಗೆ ಮೆರವಣಿಗೆ

*4.30ಕ್ಕೆ*
*ಬಹಿರಂಗ ಸಭೆ*
*ಸಾಂಸ್ಕೃತಿಕ ಕಾರ್ಯಕ್ರಮ*

*ಕಾಂ. ಯೋಗೀಶ್ ಕುತ್ತಾರು ವೇದಿಕೆ*

*ಪ್ರಮುಖ ಭಾಷಣಗಾರರು*

*ನವೀನ್ ಸೂರಿಂಜೆ*
ಪತ್ರಕರ್ತರು
*ಕಾಂ ಸಂತೋಷ್ ಬಜಾಲ್*
ಕಾರ್ಯದರ್ಶಿ ,DYFI ದಕ ಜಿಲ್ಲಾ ಸಮಿತಿ.

ಉಪಸ್ಥಿತಿ

*ಕಾಂ ರಿಜ್ವಾನ್ ಹರೇಕಳ*
ಕಾರ್ಯದರ್ಶಿ DYFI ಉಳ್ಳಾಲ ತಾಲೂಕು ಸಮಿತಿ.
*ಕಾಂ. ಸುನೀಲ್ ತೇವುಲ*
DYFI ಜಿಲ್ಲಾ ಮುಖಂಡರು

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram