17/03/2026
ಬಾಳಿಗಾ ಕೊಲೆ ನಡೆದು ಹತ್ತು ವರ್ಷಗಳು, ಬಾಳಿಗಾ ಕೊಲೆ ಗಡುಕರ ವಿರುದ್ಧ ಅಂದು ಮಂಗಳೂರು ಒಂದಾಗಿ ನಿಲ್ಲಲಿದೆ. ಬಿ ಕೆ ಹರಿಪ್ರಸಾದ್ ಜೊತೆಗಿರಲಿದ್ದಾರೆ.
ಏಕೈಕ ಸಹೋದರನ ಆಸರೆಯನ್ನು ಕಳೆದು ಕೊಂಡು, ರಾಜಕೀಯ ಬಲದ ಬಲಾಢ್ಯ ಕೊಲೆಗಡುಕರಿಗೆ ಶಿಕ್ಷೆಕೊಡಿಸಲು ಬೆದರಿಕೆ, ದಬ್ಬಾಳಿಕೆಯ ನಡುವೆ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ದಿವಂಗತ ವಿನಾಯಕ ಬಾಳಿಗಾ ಸಹೋದರಿಯರು ಏಕಾಂಗಿಗಳಲ್ಲ ಎಂದು ಸಾರಿ ಹೇಳಲು ಮಂಗಳೂರಿನ ಪ್ರಜ್ಞಾವಂತರು ಮಾರ್ಚ್ 22 ರಂದು ಮೆರವಣಿಗೆ ನಡೆಸಲಿದ್ದಾರೆ, ಬಾಳಿಗಾ ಕೊಲೆ ನಡೆದ ಸ್ಥಳದಲ್ಲಿ ಸಭೆ ನಡೆಸಲಿದ್ದಾರೆ. ಬಾಳಿಗಾ ಮನೆಗೆ ತೆರಳಿ ಸೋದರಿಯರಿಗೆ ಬಲ ತುಂಬಲಿದ್ದಾರೆ.
ಅಂದು ಹಿರಿಯ ನೇತಾರ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ನಮ್ಮೊಂದಿಗೆ ಇರಲಿದ್ದಾರೆ. ವೆಂಕಟರಮಣ ದೇವಳದ ಮುಂಭಾಗದಿಂದ ಹೊರಡುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೀವೂ ಜೊತೆ ಸೇರಿ. ಮಂಗಳೂರು ಮಾಫಿಯಾಗಳ ವಿರುದ್ಧ, ನ್ಯಾಯದ ಪರ, ದುರ್ಬಲರ ಜೊತೆಗೆ ಎಂಬುದನ್ನು ಸಾರಿ ಹೇಳೋಣ.
ದೇಸಪ್ರೇಮಿ ಸಂಘಟನೆಗಳ ಒಕ್ಕೂಟ, ಮಂಗಳೂರು