DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

*27/10/2025**ನಿವೇಶನ ರಹಿತರಿಂದ ಪ್ರತಿಭಟನಾ ಪ್ರದರ್ಶನ*ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಲ್ಲಾ ವಸತಿರಹಿತರಿಗೆ ನಿವೇಶನ ನೀಡಲು ಒತ್ತಾಯಿಸಿ ...
23/10/2025

*27/10/2025*
*ನಿವೇಶನ ರಹಿತರಿಂದ ಪ್ರತಿಭಟನಾ ಪ್ರದರ್ಶನ*

ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಲ್ಲಾ ವಸತಿರಹಿತರಿಗೆ ನಿವೇಶನ ನೀಡಲು ಒತ್ತಾಯಿಸಿ ......
ಸುರತ್ಕಲ್ ಇಡ್ಯಾದಲ್ಲಿ ನಿರ್ಮಿಸುತ್ತಿರುವ ಮಾದರಿ ಮನೆಗಳನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಲು ಆಗ್ರಹಿಸಿ..
ಶಕ್ತಿನಗರದಲ್ಲಿ ಮತ್ತು ನಿವೇಶನ ರಹಿತರಿಗಾಗಿ ಮೀಸಲಿರುವ ಎಲ್ಲಾ ಜಾಗಗಳಲ್ಲಿ G+3 ಮಾದರಿ ಮನೆಗಳ ನಿರ್ಮಾಣಕ್ಕೆ ಒತ್ತಾಯಿಸಿ...

ನಿವೇಶನರಹಿತರಿಂದ ಧರಣಿ ಸತ್ಯಾಗ್ರಹ

*27/10/2025 ಸೋಮವಾರ ಬೆಳಿಗ್ಗೆ 10 ಗಂಟೆಗೆ*

ಸ್ಥಳ. ಮಂಗಳೂರು ಮಹಾನಗರ ಪಾಲಿಕೆ ಎದುರು. ಮಂಗಳೂರು

9964186050 /6363543910
9449225636/9844306660/

22/10/2025
*🔥❌BIG BREAKING ಚಾಂದಿನಿ ಸಾವಿನ ಸತ್ಯಾಂಶ ಬಿಚ್ಚಿಟ್ಟ ಸಂತೋಷ್ ಬಜಾಲ್..!!**⭕🚫ರಾಜಕೀಯ ನಾಯಕರುಗಳಿಗೆ ಹಿಗ್ಗಾಮುಗ್ಗಾ ಬೈದ ಡಿವೈಎಫ್‌ಐ ಮುಖಂಡ....
22/10/2025

*🔥❌BIG BREAKING ಚಾಂದಿನಿ ಸಾವಿನ ಸತ್ಯಾಂಶ ಬಿಚ್ಚಿಟ್ಟ ಸಂತೋಷ್ ಬಜಾಲ್..!!*

*⭕🚫ರಾಜಕೀಯ ನಾಯಕರುಗಳಿಗೆ ಹಿಗ್ಗಾಮುಗ್ಗಾ ಬೈದ ಡಿವೈಎಫ್‌ಐ ಮುಖಂಡ...!!*

*⭕🛑ಹಿಂದೂ-ಮುಸ್ಲಿ0 ಕೊ #ಲೆಯಾದಾಗ ಓಡೋಡಿ ಬರುವ ನಾಯಕರು ಜೀವ ಉಳಿಸಲು ಬರಲೇ ಇಲ್ಲ...?!!*

https://youtu.be/6bhBWfNbni8
https://youtu.be/6bhBWfNbni8

*🪀Join Ullala Vani WhatsApp Group:* 👇
https://chat.whatsapp.com/FMDJbDKhC1PASaqzbmh76M?mode=ems_share_t

*▶️ಉಳ್ಳಾಲ ವಾಣಿ YouTube chanale subscribe ಮಾಡಿ* 👇
https://youtube.com/?si=0kEBJt3ltMD62s0U

ರಾಜಕೀಯ ನಾಯಕರುಗಳಿಗೆ ಹಿಗ್ಗಾಮುಗ್ಗಾ ಬೈದ ಡಿವೈಎಫ್‌ಐ ಮುಖಂಡ...!!ಹಿಂದೂ-ಮುಸ್ಲಿ0 ಕೊ #ಲೆಯಾದಾಗ ಓಡೋಡಿ ಬರುವ ನಾಯಕರು ಜೀವ ಉಳಿಸಲು ಬರಲ....

21/10/2025
*ಚಾಂದಿನಿ ಸುಳ್ಯ ಅವರ ಸಾವಿಗೆ ಆರೋಗ್ಯ ಇಲಾಖೆ, ಸರಕಾರ ನೇರ ಹೊಣೆ. ಚಿಕಿತ್ಸೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಗ್ಯ ಸಚಿವರು ನೈತಿಕ ಹ...
20/10/2025

*ಚಾಂದಿನಿ ಸುಳ್ಯ ಅವರ ಸಾವಿಗೆ ಆರೋಗ್ಯ ಇಲಾಖೆ, ಸರಕಾರ ನೇರ ಹೊಣೆ. ಚಿಕಿತ್ಸೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ- ಡಿವೈಎಫ್ಐ*

ಸುಳ್ಯದ ನಾವೂರಿನ ಚಾಂದಿನಿ ಎಂಬ ಪರಿಶಿಷ್ಟ ಪಂಗಡ ಕ್ಕೆ ಸೇರಿದ ಮಹಿಳೆಯು ತೀರಾ ಅಪರೂಪದ ಮತ್ತು ವಿರಳ ಕಾಯಿಲೆಗೆ ತುತ್ತಾಗಿ ಸರಿಯಾದ ಚಿಕಿತ್ಸೆ ಹೊಂದಿಸಲು ಜೀವನ್ಮರಣ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆ ಮತ್ತು ಸಹಾಯಕ್ಕೆ ಸರಕಾರದ ಗಮನ ಸೆಳೆದು ಕೊನೆಗೂ ಸರಕಾರದ ಆರೋಗ್ಯ ಇಲಾಖೆಯಿಂದ ಯಾವೊಂದು ಚಿಕಿತ್ಸಾ ಸಹಕಾರವನ್ನು ಪಡೆಯದೆ ಸಂತ್ರಸ್ತೆ ಚಾಂದಿನಿ ಸುಳ್ಯ ನಿನ್ನೆ ರಾತ್ರಿ ಕೊನೆಯುಸಿರೆಳೆದರು. ಚಾಂದಿನಿ ಸುಳ್ಯ ಅವರ ಅನಾರೋಗ್ಯಕ್ಕೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವಲ್ಲಿ ಬೇಜಾವಾಬ್ದಾರಿ ವಹಿಸಿರುವ ಸರಕಾರ, ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡನೆಯನ್ನು ವ್ಯಕ್ತಪಡಿಸುತ್ತದೆ.

ಚಾಂದಿನಿ ಸುಳ್ಯ ಅವರು ಅಪರೂಪದ ಖಾಯಿಲೆಗೆ ಬಳಲುತ್ತಿರುವ ಬಗ್ಗೆ ಆರೋಗ್ಯ ಕ್ದೇತ್ರದಲ್ಲಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯಿಂದ ಹಿಡಿದು ಯಾವೊಂದು ಖಾಸಗೀ ಆಸ್ಪತ್ರೆಗೂ ಪತ್ತೆ ಹಚ್ಚಲು ಸಾಧ್ಯವಾಗದಿರೋದು ದುರಂತ. ಅಲ್ಲದೆ ಆಕೆ ಬಳಲುವ ಖಾಯಿಲೆಗೆ ಸರಿಯಾದ ಚಿಕಿತ್ಸೆ ಒದಗಿಸಲು ಸರಕಾರದ ಮುಂದೆ ಹಲವಾರು ವರುಷಗಳಿಂದ ಮನವಿ ಮೂಲಕ ತಿಳಿಸಲು ಪ್ರಯತ್ನಿಸಿದರು ಅದಕ್ಕೆ ಸರಿಯಾದ ಸ್ಪಂದನೆಗಳು ದೊರಯಲೇ ಇಲ್ಲ. ಇತ್ತೀಚೆಗೆ ಹೆಚ್ಚುವರಿ ಚಿಕಿತ್ಸೆಗೆ ಹೈದರಾಬಾದಿನ ಎಐಜಿ ಆಸ್ಪತ್ರೆಗೆ ದಾಖಲಾದಾಗ ಸಂತ್ರಸ್ತೆ ಬಳಲುತ್ತಿರುವ ಖಾಯಿಲೆ HYPER IGE MEDICATED MAST CELL ACTIVATION SYNDROME ಎಂದು ಪತ್ತೆ ಹಚ್ಚಿದರು. ಆ ಆಸ್ಪತ್ರೆಯು ಚಿಕಿತ್ಸೆಗೆ ವಿಧಿಸಿದ ವೆಚ್ಚವನ್ನು ಕಂಡ ಸಂತ್ರಸ್ತೆ ಅದನ್ನು ಬರಿಸಲು ಸಾಧ್ಯವಾಗದೇ ಇದ್ದಾಗ ಸರಕಾರ ಇನ್ನಾದರೂ ನೆರವಾಗಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ಪತ್ರ ಬರೆದರು. ಅಲ್ಲದೆ ಆರೋಗ್ಯಾಧಿಕಾರಿಗೆ ನನ್ನ ಸಾವಿಗೆ ಆರೋಗ್ಯ ಸಚಿವರು, ಸ್ಥಳೀಯ ಶಾಸಕರು, ಆರೋಗ್ಯ ಇಲಾಖೆ ನೇರ ಹೊಣೆ ಎಂದು ಆತ್ಮಹತ್ಯೆಗೈಯುವ ಎಚ್ಚರಿಕಾ ಸಂದೇಶ ಕಳುಹಿಸಿದ ನಂತರ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಾಡಿನ ಗಮನ ಸೆಳೆದಿದೆ. ಇಷ್ಟೆಲ್ಲಾ ಬೆಳವಣೆಗೆಗಳ ನಂತರವೂ ಸರಕಾರ, ಆರೋಗ್ಯ ಇಲಾಖೆ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಚಿಕಿತ್ಸೆ್ಗೆ ಸ್ಪಂದಿಸುವಲ್ಲಿ ನಿಧಾನಗತಿಯನ್ನು ಅನುಸರಿಸಿದ್ದು ಇದರಿಂದ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದ ಕಾರಣ ಸಂತ್ರಸ್ತೆಯು ಆರೋಗ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ನಿರ್ಣಾಯಕ ಹಂತಕ್ಕೆ ತಲುಪಿ ದುರಂತ ಸಾವನ್ನು ಕಂಡಿರುವುದು ಆಘಾತಕಾರಿ ಅಂಶ.

ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದ ಕಾಲದಲ್ಲಿ ವೈಧ್ಯಕೀಯ ಕ್ಷೇತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವ ಪ್ರಕರಣವನ್ನು ಸರಕಾರ, ಆರೋಗ್ಯ ಇಲಾಖೆ ಗಂಭೀರವಾಗಿ ಮತ್ತು ಸವಾಲಾಗಿ ಸ್ವೀಕರಿಸಬೇಕಿತ್ತು. ಇಷ್ಟೂ ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಟ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಮನವಿಗೆ ಸ್ಪಂದಿಸಿ ಸೂಕ್ತ ಚಿಕಿತ್ತೆ ನೀಡಲು ಮುಂದಾಗಬೇಕಿತ್ತು . ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಸಮುದಾಯ ಅಭಿವೃದ್ದಿ ಹೆಸರಲ್ಲಿ ನೂರಾರೂ ಕೋಟಿ ಮೀಸಲಿಟ್ಟಿವೆ ಎಂದು ಕೊಚ್ಚಿಕೊಳ್ಳುವ ಸರಕಾರಕ್ಕೆ ಕನಿಷ್ಟ 50ಲಕ್ಷ ಬರಿಸಲು ಹಿಂದೇಟು ಹಾಕಿರುವ ನಡೆ ಈ ಸಮುದಾಯದ ಮೇಲಿರುವ ಕಾಳಜಿ ಎಷ್ಟೆಂದು ಜಗಜ್ಜಾಹೀರಾಗಿದೆ. ಸಂತ್ರಸ್ತೆ ಚಾಂದಿನಿ ಸಾವಿನ ಹೊಣೆಯನ್ನು ಸರಕಾರ, ಆರೋಗ್ಯ ಇಲಾಖೆ, ಆರೋಗ್ಯ ಸಚಿವರು ಹೊಣೆ ಹೊರಬೇಕಾಗಿದೆ.

ಅಪರೂಪದ ಖಾಯಿಲೆಗೆ ಸೂಕ್ತ ಚಿಕಿತ್ಸೆ ಒದಗದೆ ಸಾವನ್ನಪ್ಪಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಳ್ಯದ ಚಾಂದಿನಿ ಅವರ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು. ಸಂತ್ರಸ್ತೆ ಗೆ ಸರಕಾರ ಗರಿಷ್ಟ ಮಟ್ಟದ ಆರ್ಥಿಕ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಅಲ್ಲದೆ ರಾಜ್ಯದ ಆರೋಗ್ಯ ಇಲಾಖೆಗೆ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಹಾಗೂ ಸ್ಪಂದಿಸಲು ವಿಫಲರಾದ ಆರೋಗ್ಯ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಸರಕಾರವನ್ನು ಆಗ್ರಹಿಸಿದೆ.

ಇತೀ,
ಬಿ.ಕೆ ಇಮ್ತಿಯಾಜ್
ಜಿಲ್ಲಾ ಅಧ್ಯಕ್ಷರು

ಸಂತೋಷ್ ಬಜಾಲ್
ಜಿಲ್ಲಾ ಕಾರ್ಯದರ್ಶಿ
ಡಿವೈಎಫ್ಐ ದ.ಕ

ತಾ 20-10-25
ಮಂಗಳೂರು

ದೀಪಾವಳಿ ಹಬ್ಬದ ಶುಭಾಶಯಗಳು
20/10/2025

ದೀಪಾವಳಿ ಹಬ್ಬದ ಶುಭಾಶಯಗಳು

ಸುರಿವ ಮಳೆ ನಡುವೆ.... ಮಿಂಚು. ಗುಡುಗು ಮಳೆಯನ್ನು  ಲೆಕ್ಕಿಸದೇ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ 400 ಕ್ಕೂ ಮಿಕ್ಕಿದ ಅಸಹಜ ಸಾವುಗಳಿಗೆ ನ್ಯಾಯ...
19/10/2025

ಸುರಿವ ಮಳೆ ನಡುವೆ....
ಮಿಂಚು. ಗುಡುಗು ಮಳೆಯನ್ನು ಲೆಕ್ಕಿಸದೇ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ 400 ಕ್ಕೂ ಮಿಕ್ಕಿದ ಅಸಹಜ ಸಾವುಗಳಿಗೆ ನ್ಯಾಯಕ್ಕಾಗಿ......
ಧರ್ಮಸ್ಥಳ ದೌರ್ಜನ್ಯವಿರೋಧಿ ವೇದಿಕೆ ವತಿಯಿಂದ ನ್ಯಾಯ ಸಪ್ತಾಹ ದಿನ.
ಮಂಗಳೂರಿನ ಕಾವೂರು ಜಂಕ್ಷನ್ ಬಳಿ ಸೌಜನ್ಯ ಹತ್ಯೆ ಅತ್ಯಾಚಾರ ಆಗಿ ೧೩ ವರುಷ ಸಂಧರೂ ನ್ಯಾಯ ಸಿಗದ ಹಿನ್ನಲೆಯಲ್ಲಿ ಅವಳ ಜನ್ಮದಿನವಾದ ಇಂದು ಅಕ್ಟೂಬರ್ ೧೮ ನ್ಯಾಯ ಸಪ್ತಾಹ ದಿನ ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಮೇಣದ ಬತ್ತಿ ಪ್ರದರ್ಶನ ಕಾರ್ಯಕ್ರಮ ನಡೆಸುವುದರ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಲಾಯಿತು.

ಐತಿಹಾಸಿಕ ಟೋಲ್ ಗೇಟ್ ಮುತ್ತಿಗೆಗೆ ಮೂರು ವರ್ಷ
18/10/2025

ಐತಿಹಾಸಿಕ ಟೋಲ್ ಗೇಟ್ ಮುತ್ತಿಗೆಗೆ ಮೂರು ವರ್ಷ

*ನೇರ ಕಾರ್ಯಾಚರಣೆ ದಿನದ ಶುಭಾಶಯಗಳು*ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ *ನೇರ ಕಾರ್ಯಾಚರಣೆ* ಮುತ್ತಿ...
18/10/2025

*ನೇರ ಕಾರ್ಯಾಚರಣೆ ದಿನದ ಶುಭಾಶಯಗಳು*

ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ *ನೇರ ಕಾರ್ಯಾಚರಣೆ* ಮುತ್ತಿಗೆ ಪ್ರತಿಭಟನೆ ನಡೆದು ಇಂದಿಗೆ (ಅಕ್ಟೋಬರ್ 18) ಮೂರು ವರ್ಷ

ದ.ಕ., ಉಡುಪಿ ಜಿಲ್ಲೆಗಳಲ್ಲಿನ ಎಲ್ಲಾ ಜಾತ್ಯಾತೀತ, ಜನಪರ ಶಕ್ತಿಗಳು, ವ್ಯಕ್ತಿಗಳು ಡಬಲ್ ಇಂಜಿನ್ ಸರಕಾರದ ಎದುರಾಗಿ ಒಂದು ಗೂಡಿ ನಡೆಸಿದ ಈ ಹೋರಾಟ ಎಂದಿಗೂ ಮರೆಯಲಾಗದ ಸವಿ ನೆನಪುಗಳು

ಈ *ನೇರ ಕಾರ್ಯಾಚರಣೆ* ಯಂದು ನೂರಕ್ಕೂ ಹೆಚ್ಚು ಹೋರಾಟಗಾರರ ಮೇಲೆ ಪೊಲೀಸರು ಹೂಡಿದ ಒಂದು ಮೊಕದ್ದಮೆಯನ್ನು‌ ಸರಕಾರ ಇನ್ನೂ ವಪಾಸು‌ ಪಡೆದಿಲ್ಲ ಎಂಬುದು ಬೇಸರದ ಸಂಗತಿ. ಅದೇನೆ ಇದ್ದರೂ, ಟೋಲ್ ಗೇಟ್ ತೆರವು ಹೋರಾಟ, ಅದರ ಪ್ರಮುಖ ಘಟ್ಟವಾದ *ನೇರ ಕಾರ್ಯಾಚರಣೆ* ದಿನ ಮರೆಯಲಾಗದ ರೋಮಾಂಚನಕಾರಿ ದಿನ. ಅಂದು ಭಾಗಿಯಾದ, ಸಂಘರ್ಷ ನಡೆಸಿದ, ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದ ಪ್ರತಿಯೊಬ್ಬ ಗೆಳೆಯ, ಗೆಳತಿಯರಿಗೂ ಮೂರನೆ ವರ್ಷದ ಈ ಸಂದರ್ಭದಲ್ಲಿ‌ ಶುಭಾಶಯಗಳನ್ನು ಕೋರುವೆ.

ಮುನೀರ್ ಕಾಟಿಪಳ್ಳ
ಸಂಚಾಲಕರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

18.10.2025

ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಕೂಡಲೇ ತೆರೆಯಲು ಒತ್ತಾಯಿಸಿ ಬಂದರು ಶ್ರಮಿಕರ ಸಂಘ ಮತ್ತು DYFI ಬಂದರ್...
17/10/2025

ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಕೂಡಲೇ ತೆರೆಯಲು ಒತ್ತಾಯಿಸಿ ಬಂದರು ಶ್ರಮಿಕರ ಸಂಘ ಮತ್ತು DYFI ಬಂದರ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram