SPYSS Chytra Shake Mysuru

SPYSS Chytra Shake Mysuru An organization spearheading a movement for social enrichment through Yoga Sadhana

ದಿನಾಂಕ 15-07-2024 ರಂದು ಆಶಾಡ ಶುಕ್ರವಾರ ಪ್ರಯುಕ್ತ ಚೖತ್ರ ಶಾಖೆಯಲ್ಲಿ ನಡೆದ ಅಗ್ನಿ ಹೋತ್ರ ಮತ್ತು ಅಭ್ಯಾಸ ಕಾಯ೯ಕ್ರಮದ ಕೆಲವು ಚಿತ್ರಗಳು.
15/07/2024

ದಿನಾಂಕ 15-07-2024 ರಂದು ಆಶಾಡ ಶುಕ್ರವಾರ ಪ್ರಯುಕ್ತ ಚೖತ್ರ ಶಾಖೆಯಲ್ಲಿ ನಡೆದ ಅಗ್ನಿ ಹೋತ್ರ ಮತ್ತು ಅಭ್ಯಾಸ ಕಾಯ೯ಕ್ರಮದ ಕೆಲವು ಚಿತ್ರಗಳು.

09/01/2024

*ಹರಿ ಓಂ 🙏*
*💫ಸಂಸ್ಕಾರ 💫ಸಂಘಟನೆ 💫ಸೇವೆ*
SPYSS, SPYS&RC
Free yoga since 1980
🛕💫🛕💫🛕💫🛕💫🛕💫🛕

*ಸಂಪೂರ್ಣ ರಾಮಾಯಣವನ್ನು ಪ್ರಶ್ನೋತ್ತರಗಳ ಮುಖಾಂತರ ಕಲಿಯುವ ಬನ್ನಿ ಬಂಧುಗಳೇ....*

1) ರಾಮಾಯಣ ರಚಿಸಿದವರು ಯಾರು?
ಉತ್ತರ: ವಾಲ್ಮೀಕಿ ಮಹರ್ಷಿಗಳು
2) ವಾಲ್ಮಿಕಿ ಯಾವ ವಂಶಜರು?
ಉತ್ತರ: ಭೃಗುವಂಶ
3) ವಾಲ್ಮಿಕಿಯ ತಂದೆಯ ಹೆಸರೇನು?
ಉತ್ತರ: ಪುಚೇತನ ಮಹರ್ಷಿಗಳು
4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?
ಉತ್ತರ: ಹುತ್ತ
5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?
ಉತ್ತರ: ೦೮
6)ರಾಮಾಯಣದ ಕಾಂಡಗಳು ಯಾವುವು?
ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ,
7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು?
ಉತ್ತರ : ರಾಷ್ಟ್ರಕವಿ ಕುವೆಂಪು
8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?
ಉತ್ತರ : ಕಂಬನ್
9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?
ಉತ್ತರ : ಯುದ್ದಕಾಂಡ
10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು?
ಉತ್ತರ : ತ್ರೇತಾಯುಗ
11) ರಾಮನ ವಂಶ ಯಾವುದು ?
ಉತ್ತರ : ಸೂರ್ಯವಂಶ
12) ಸೂರ್ಯವಂಶದ ಮೊದಲ ರಾಜನ ಹೆಸರು ?
ಉತ್ತರ : ಇಕ್ಷ್ವಾಕು
13) ಇಕ್ಷ್ವಾಕುವಿನ ತಂದೆ ಯಾರು ?
ಉತ್ತರ : ಸೂರ್ಯದೇವ
15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?
ಉತ್ತರ : ರಘುವಂಶ
16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?
ಉತ್ತರ : ಸತ್ಯ ಹರಿಶ್ಚಂದ್ರ
17) ದಶರಥನ ಮೂವರು ಪಟ್ಟ ಮಹಿಷಿಯರು
ಯಾರು ?
ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ
18) ದಶರಥ ಮಹಾರಜನ ತಂದೆ ಯಾರು ?
ಉತ್ತರ : ಅಜ ಮಹಾರಾಜ
19) ಕೌಶಲ್ಯೆಯ ತಂದೆ ಯಾರು ?
ಉತ್ತರ : ಭಾನುವಂತ
20) ಸುಮಿತ್ರೆಯ ತಂದೆ ಯಾರು ?
ಉತ್ತರ: ಶೂರರಾಜ
21) ಕೈಕೆಯ ತಂದೆ ಯಾರು?
ಉತ್ತರ : ಅಶ್ವಪತಿ ರಾಜ
22) ದಶರಥನು ಪ್ರಾಣಿಯನ್ನು ಕೊಲ್ಲಲೆಂದು ಹುಡಿದ್ದ ಬಾಣ ಯಾರಿಗೆ ನಾಟಿತು ?
ಉತ್ತರ : ಶ್ರವಣಕುಮಾರ
23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?
ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?
ಉತ್ತರ : ಪುತ್ರಕಾಮೇಷ್ಟಿ ಯಾಗ
25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?
ಉತ್ತರ : ಶೃಂಗಿ ಋಷಿಗಳು
26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು?
ಉತ್ತರ : ಅಗ್ನಿದೇವ
27) ರಾಮನು ಜನಿಸಿದ್ದು ಯಾವಾಗ ?
ಉತ್ತರ: ಚೈತ್ರಮಾಸದ 9ನೇ ದಿನ
28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?
ಉತ್ತರ : ಪುನರ್ವಸು
29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು?
ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
30) ದಶರಥ ಮಹಾರಾಜನ ರಾಜಗುರು ಯಾರು ?
ಉತ್ತರ : ವಶಿಷ್ಠ ಮಹರ್ಷಿಗಳು
31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?
ಉತ್ತರ : ಸುಮಂತ
32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?
ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?
ಉತ್ತರ : ಬಲ ಹಾಗೂ ಅತಿಬಲಾ
34) ತಾಟಕಿಯನ್ನು ಕೊಂದಿದ್ದು ಯಾರು?
ಉತ್ತರ : ಶ್ರೀರಾಮ
35) ಸುಬಾಹುವನ್ನು ಕೊಂದಿದ್ದು ಯಾರು?
ಉತ್ತರ : ಲಕ್ಷ್ಮಣ
36) ಸುಮಿತ್ರೆಯ ಅವಳಿ ಮಕ್ಕಳು ಯಾರು?
ಉತ್ತರ : ಲಕ್ಷ್ಮಣ, ಶತ್ರುಘ್ನ
37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ?
ಉತ್ತರ : ಮಹರ್ಷಿ ವಸಿಷ್ಠರು
38) ಕೈಕೆಯಿ ಯಾರ ಮಗಳು?
ಉತ್ತರ : ಕೈಕಯ ರಾಜನ‌ ಮಗಳು
39) ಕೌಶಲ್ಯ ಯಾವ ದೇಶದವಳು ?
ಉತ್ತರ : ಕೋಸಲ ದೇಶ
40) ವಿದೇಹದ ರಾಜಧಾನಿ ಯಾವುದು?
ಉತ್ತರ : ಮಿಥಿಲೆ
46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು?
ಉತ್ತರ : ಶಿವ ಧನಸ್ಸು
47) ಭರತನ ಹೆಂಡತಿ ಯಾರು?
ಉತ್ತರ : ಮಾಂಡವಿ
48) ಶತ್ರುಘ್ನನ ಹೆಂಡತಿ ಯಾರು?
ಉತ್ತರ : ಶೃತಕಿರ್ತಿ
49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?
ಉತ್ತರ : ಕ್ಕುಷದ್ವಜನ ಮಕ್ಕಳು
50) ಪರಶುರಾಮರು ಯಾವ ವಂಶದವರು?
ಉತ್ತರ : ಭೃಗು ವಂಶ
41) ಜನಕ ಮಹಾರಾಜನ ಪತ್ನಿ ಯಾರು ?
ಉತ್ತರ : ಸುನಯನಾ ದೇವಿ
42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ?
ಉತ್ತರ : ವಿದೇಹ
43) ವೈದೇಹಿ ಯಾರು ?
ಉತ್ತರ : ಸೀತಾಮಾತೆ
44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?
ಉತ್ತರ : ಊರ್ಮಿಳಾ
45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?
ಉತ್ತರ : ಭೂಮಿಯಲ್ಲಿ
51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?
ಉತ್ತರ : ಗೌತಮ ಮಹರ್ಷಿಗಳು
52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?
ಉತ್ತರ: ಶ್ರೀರಾಮನಿಂದ
53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?
ಉತ್ತರ : ಶತಾನಂದ
54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?
ಉತ್ತರ : 21 ಬಾರಿ
55) ಚಿರಂಜೀವಿಗಳು ಎಷ್ಟು ಮಂದಿ?
ಉತ್ತರ : 7 ಜನ
56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?
ಉತ್ತರ : ಎರಡನೆಯ ಭಾಗ
57) ರಾಮಾಯಣದ ಮೊದಲ ಭಾಗದ ಹೆಸರೇನು ?
ಉತ್ತರ : ಬಾಲಕಾಂಡ
58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?
ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?
ಉತ್ತರ : ಶಂಬರಾಸುರ
60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?
ಉತ್ತರ : ದಶರಥ ಮಹಾರಾಜ
61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?
ಉತ್ತರ : ದೇವೇಂದ್ರ
62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?
ಉತ್ತರ: 2
63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?
ಉತ್ತರ : ಸೌಮಿತ್ರಿ
64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು?
ಉತ್ತರ : ಅಂದಿನ ಸೂರ್ಯಾಸ್ತ
65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?
ಉತ್ತರ : ಶೃಂಗವೇರಪುರ
66) ಶೃಂಗವೆರಪುರ ಎಲ್ಲಿದೆ ?
ಉತ್ತರ: ಗಂಗಾನದಿಯ ತಟದಲ್ಲಿ
67) ನಿಷಾದದ ರಾಜನ ಹೆಸರೇನು ?
ಉತ್ತರ : ಗುಹ
68) ಗುಹನ ವೃತ್ತಿ ಏನು?
ಉತ್ತರ: ಅವನೊಬ್ಬ ಬೇಡ
69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?
ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ
70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?
ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
76) ಬೃಹಸ್ಪತಿಯ ಮಗ ಯಾರು?
ಉತ್ತರ : ಭಾರದ್ವಾಜ ಋಷಿಗಳು
77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು?
ಉತ್ತರ : ಚಿತ್ರಕೂಟ ಪರ್ವತದ ಬಳಿ
79) ದಶರಥನ ಅಂತ್ಯ ಹೇಗಾಯಿತು?
ಉತ್ತರ : ಪುತ್ರ ವಿರಹದಿಂದ
80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?
ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.
71) ದೋಣಿ ನಡೆಸುವ ಅಂಬಿಗನ ಹೆಸರೇನು ?
ಉತ್ತರ : ಕೇವತ
72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?
ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
73) ಕೇವತನ ಭಯ ನಿಜವಾದುದೇ?
ಉತ್ತರ : ಇಲ್ಲ
74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?
ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ
75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು
ಉತ್ತರ : ಪಾದಗಳನ್ನು ಯೊಳೆದದ್ದು
81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?
ಉತ್ತರ : ಭಾರತ
82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?
ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?
ಉತ್ತರ : ರಾಮನ ಪಾದುಕೆಗಳು
84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?
ಉತ್ತರ : ರಾಜಗುರು ವಶಿಷ್ಠರು
85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ?
ಉತ್ತರ: ನಂದಿಗ್ರಾಮ
101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?
ಉತ್ತರ : ಗೋದಾವರಿ
102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?
ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ
103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?
ಉತ್ತರ : ದಶರಥನ ಸ್ನೇಹಿತ ಎಂದು
104) ಪುಲಸ್ತ್ಯರು ಯಾರ ಮಗ?
ಉತ್ತರ : ಬ್ರಹ್ಮದೇವರ ಮಾನಸಪುತ್ರರು
105) ಪುಲಸ್ತ್ಯರ ಮಗ ಯಾರು ?
ಉತ್ತರ : ವಿಶ್ರವಸು
106) ವಿಶ್ರವಸುವಿನ ಪತ್ನಿ ಯಾರು?
ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ
107) ವೀಶ್ರವಸುವಿನ ಮಗ ಯಾರು?
ಉತ್ತರ : ವೈಶ್ರವನ
108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?
ಉತ್ತರ : ಕುಭೇರ
109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?
ಉತ್ತರ : ಪುಷ್ಪಕ ವಿಮಾನ
110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?
ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ
111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?
ಉತ್ತರ : ಕುಭೆರ
112) ವಿಶ್ರವಸು ಹಾಗು ಕೈಕಸಿಯ ಮಗ ಯಾರು?
ಉತ್ತರ : ರಾವಣ
113) ಕೈಕಸಿ ಯಾರ ಮಗಳು?
ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
114) ಸುಮಾಲಿಯ ಸೋದರರು ಎಷ್ಟು ಮಂದಿ?
ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ)
115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು?
ಉತ್ತರ: ಸುಖೇಶನೆಂಬ ರಾಕ್ಷಸ
116) ರಾವಣನ ಮೂಲ ಹೆಸರೇನು?
ಉತ್ತರ : ದಶಕಂಠ/ ದಶಾನನ
117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು?
ಉತ್ತರ: ತನಗೆ ಸಾವು ಬರಬಾರದು ಎಂದು
118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?
ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
118) ರಾವಣ ಕೇಳಿದವರ ದೊರೆಯಿತೇ?
ಉತ್ತರ : ಇಲ್ಲ
119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು?
ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ
120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?
ಉತ್ತರ : ಮನುಷ್ಯ
121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ?
ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು
123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?
ಉತ್ತರ : ಸರಸ್ವತಿ ದೇವಿ
124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?
ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
126) ರಾವಣನಿಗೆ ಕುಬೇರನು ಏನಾಗಬೇಕು?
ಉತ್ತರ : ಅಣ್ಣ
127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ?
ಉತ್ತರ : ಕುಬೇರನ ಮೇಲೆ
128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ?
ಉತ್ತರ : ಕೈಕಸಿ
129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?
ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ
130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು
ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
131) ಮಂಡೋದರಿ ಯಾರ ಮಗಳು ?
ಉತ್ತರ : ಮಯ ಎಂಬ ರಾಕ್ಷಸನ ಮಗಳು
132) ಮಂಡೋದರಿಯ ತಾಯಿ ಯಾರು?
ಉತ್ತರ : ಹೇಮಾ ಎಂಬ ಅಪ್ಸರೆ
133) ಕುಂಭಕರ್ಣನ ಹೆಂಡತಿ ಯಾರು?
ಉತ್ತರ : ವಿದ್ಯುಜ್ಜಿಹ್ವೆ
134) ವಿಭೀಷಣನ ಪತ್ನಿ ಯಾರು?
ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
135) ವಿಭೀಷಣನ ಮಾವ ಯಾರು ?
ಉತ್ತರ : ಶೈಲೂಷ
136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?
ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?
ಉತ್ತರ : ಅಲ್ಕ ನಗರಿಯಲ್ಲಿ
138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?
ಉತ್ತರ : ಮಂದಾಕಿನಿ
139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?
ಉತ್ತರ : ನಂದಿಕೇಶ್ವರ
140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?
ಉತ್ತರ : ಶಿವನಿಂದ
141) ಕುಬೇರನ ಮಗ ಯಾರು?
ಉತ್ತರ : ನಳಕೂಬರ
142) ಹಿಮ ಪರ್ವತದಲ್ಲಿ
ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?
ಉತ್ತರ : ವೇದವತಿ
143) ವೇದವತಿ ಯಾರ ಅವತಾರ ?
ಉತ್ತರ : ಲಕ್ಷ್ಮೀದೇವಿ
144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?
ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ
145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ?
ಉತ್ತರ : ರಾವಣ
151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು?
ಉತ್ತರ : ಖರ ದೂಷಣರೆಂಬ ರಾಕ್ಷಸರು
152) ಖರ ದೂಷಣರ ಸಂಹರಿಸಿದ್ದು ಯಾರು ?
ಉತ್ತರ‌: ಶ್ರೀರಾಮ‌
153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು?
ಉತ್ತರ : 14,000
154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ?
ಉತ್ತರ : ಶ್ರೀರಾಮ ಒಬ್ಬನೆ
155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ?
ಉತ್ತರ : ಅಕಂಪನ ಎಂಬ ರಾಕ್ಷಸ
146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?
ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು
147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?
ಉತ್ತರ : ಸೀತೆಯಾಗಿ
148) ಶೂರ್ಪನಕಿಯ ಪತಿ ಯಾರು?
ಉತ್ತರ : ಕಾಲಕೇಯನೆಂಬ ರಾಕ್ಷಸ‌
149) ಕಾಲಕೇಯನನ್ನು ಕೊಂದಿದ್ದು ಯಾರು ?
ಉತ್ತರ : ರಾವಣ
150) ರಾವಣ ಕಾಲಕೇಯನನ್ನು ಕೊಂದಿದ್ದು ಏಕೆ?
ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ ಪ್ರಯೋಗಿಸಿಬಿಟ್ಟಿದ್ದ
156) ಮಾರಿಚ ಯಾರು ?
ಉತ್ತರ : ರಾವಣನ ಸೋದರ ಮಾವ
157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?
ಉತ್ತರ : ಮಾಯಾಮೃಗದ ರೂಪ
158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?
ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು
159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?
ಉತ್ತರ : ಹಾ ಲಕ್ಷ್ಮಣ ಹಾ ಸಿತಾ
160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?
ಉತ್ತರ : ವಾನರ‌ ಸೈನ್ಯ
161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು?
ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ
162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ?
ಉತ್ತರ: ಕಬಂಧ
೧೬೩) ಕಬಂಧನ ತಲೆಯು ಎಲ್ಲಿತ್ತು?
ಉತ್ತರ : ಹೊಟ್ಟೆಯಲ್ಲಿ
೧೬೪) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ?
ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ
೧೬೫) ಕಬಂಧನನ್ನು ಸಂಹರಿಸಿದ್ದು ಯಾರು?
ಉತ್ತರ : ಶ್ರೀರಾಮ
೧೬೬) ಪಂಪಾ ಸರೋವರದಲ್ಲಿ ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ?
ಉತ್ತರ : ಶಬರಿ
೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ?
ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ
೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು?
ಉತ್ತರ : ಬಾರಿ ಅಥವಾ ಬೋರೆಹಣ್ಣು
೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ?
ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು
೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು?
ಉತ್ತರ : ಸುಗ್ರೀವನನ್ನು ಬೇಟಿಯಾಗುವ ಸಲಹೆ ನೀಡಿದಳು
೧೭೧) ಸುಗ್ರಿವ ಎಲ್ಲಿದ್ದ?
ಉತ್ತರ : ಋಷ್ಯಮೂಕ ಪರ್ವತದಲ್ಲಿ.
೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು?
ಉತ್ತರ : ಹನುಮಂತ
೧೭೩) ಹನುಮಂತನ ಇನ್ನಿತರ ಹೆಸರುಗಳೇನು ?
ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ
೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ?
ಉತ್ತರ : ಅಗ್ನಿ ಪ್ರವೇಶದ ಮೂಲಕ
೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು?
ಉತ್ತರ : ಅರಣ್ಯಕಾಂಡ
೧೭೬) ಹನುಮಂತನ ತಂದೆ ಯಾರು?
ಉತ್ತರ : ಕೆಸರಿ
೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು?
ಉತ್ತರ : ವಾಯುದೇವನ ವರದಿಂದ
೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು?
ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ
೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು?
ಉತ್ತರ: ಇಂದ್ರ
೧೮೦) ಹನು ಎಂದರೆ ಅರ್ಥ ಏನು?
ಉತ್ತರ : ದವಡೆ
೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು?
ಉತ್ತರ : ಋಷ್ಯಮೂಕ ಪರ್ವತ
೧೮೨) ಸುಗ್ರೀವನ ಅಣ್ಣ ಯಾರು?
ಉತ್ತರ : ವಾಲಿ
೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ?
ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ
೧೮೪) ವಾಲಿ-ಸುಗ್ರೀವರ ತಂದೆ ಯಾರು?
ಉತ್ತರ: ವೃಕ್ಷ ಶಿರಸು
೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ
ಉತ್ತರ : ಮಾತಂಗ ಮುನಿಗಳು
೧೮೬) ಸುಗ್ರೀವನ ಪತ್ನಿ ಯಾರು?
ಉತ್ತರ: ರುಮೆ
೧೮೭) ವಾಲಿಯ ಪತ್ನಿ ಯಾರು?
ಉತ್ತರ : ತಾರಾ
೧೮೮) ತಾರಾಳನ್ನು ಯಾರು?
ಉತ್ತರವ: ತಾರ
೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು?
ಉತ್ತರ : ಸುಷೇಣನೆಂಬ ವಾನರನ ಮಕ್ಕಳು
೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು?
ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ
೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು?
ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು
೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು ಯಾರು?
ಉತ್ತರ: ರಾಮ
೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು?
ಉತ್ತರ : ವಾಲಿ
೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ?
ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!
೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ?
ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ
೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು?
ಉತ್ತರ : ಸೀತಾಮಾತೆಯ ಕಾಲುಂಗುರದಿಂದ
೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ?
ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ
೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ?
ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು
೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ?
ಉತ್ತರ: ಮಾಯಾವಿ
೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು?
ಉತ್ತರ : ವಾಲಿ
೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು?
ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು.
೨೦೨) ವಾಲಿಯ ಮಗ ಯಾರು?
ಉತ್ತರ: ಅಂಗದ
೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು?
ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)
೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು?
ಉತ್ತರ: ಸುಗ್ರೀವ
೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು?
ಉತ್ತರ: ಯುವರಾಜನ ಪಟ್ಟ
೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು?
ಉತ್ತರ : ತನ್ನ ಉಂಗುರ
೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ?
ಉತ್ತರ : ಆಂಜನೆಯ
೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ?
ಉತ್ತರ : ಆಂಜನೆಯ
೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ?
ಉತ್ತರ : ಆಂಜನೆಯ
೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು?
ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು.
೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು?
ಉತ್ತರ : ನಾಲ್ಕು ದಿಕ್ಕುಗಳಿಗೆ
೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು?
ಉತ್ತರ : ವಾನರರ ಮುಖ್ಯಸ್ಥ ವಿನತ
೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ತಾರಾಳ ತಂದೆ ಸುಷೇಣ
೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ
೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು?
ಉತ್ತರ : ಆಂಜನೆಯ
೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ?
ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)
೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು?
ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ
೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು?
ಉತ್ತರ: ಸಂಪಾತಿ
೨೧೯) ಸಂಪಾತಿ ಯಾರ ಅಣ್ಣ ?
ಉತ್ತರ : ಜಟಾಯು
೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ?
ಉತ್ತರ : ಅರುಣನ ಮಕ್ಕಳು
೨೨೭) ಸುಂದರಕಾಂಡ ಅವಧಿ ಎಷ್ಟು?
ಉತ್ತರ: ಒಂದು ರಾತ್ರಿಯ ಕಥೆಯಾಗಿದೆ
೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು?
ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ
೨೨೯) ಮೈನಾಕನು ಯಾರ ಮಗ?
ಉತ್ತರ: ಹಿಮವಂತನ ಮಗ
೨೨೧) ಅರುಣ ಯಾರು?
ಉತ್ತರ : ಸೂರ್ಯನ ಸಾರಥಿ
೨೨೨) ವೃದ್ಧ ಸಂಪಾತಿಯ ಮಗ ಯಾರು?
ಉತ್ತರ: ಸುಪಾರ್ಶ್ವ
೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?
ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.
೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ?
ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.
೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ?
ಉತ್ತರ : 100 ಯೋಜನೆಗಳಷ್ಟು
೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು?
ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು
೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು?
ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)
೨೩೨) ಸರ್ಪಗಳ ತಾಯಿ ಯಾರು?
ಉತ್ತರ : ಸುರಸೆ
೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು?
ಉತ್ತರ : ಸುರಸೆ
೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು?
ಉತ್ತರ : ರಾಕ್ಷಸಿಯ ರೂಪದಲ್ಲಿ
೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು?
ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು.
೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು?
ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು
೨೩೭) ರಾಹುವಿನ ತಾಯಿ ಯಾರು?
ಉತ್ತರ : ಸಿಂಹಿಕೆ
೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?
ಉತ್ತರ ‌: ಸಿಂಹಕ್ಕೆಯನ್ನು
೨೩೯)ಸಿಂಹಿಕೆಯ ಕೆಲಸವೇನು?
ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!
೨೪೦) ನೆರಳನ್ನು ತಿಂದಾಗ ಏನಾಗುತ್ತದೆ?
ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.
೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ?
ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ
೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು?
ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ
೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ?
ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ
೨೪೪) ಲಂಕೆಯ ಪುರ ದೇವತೆ ಯಾರು ?
ಉತ್ತರ : ಲಂಕಿಣಿ
೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು?
ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು
೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ?
ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು.
೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ?
ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು.
೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು?
ಉತ್ತರ : ವಿಭಿಷಣ
೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?
ಉತ್ತರ : ಮಂಡೋದರಿ
೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?
ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.
೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?
ಉತ್ತರ : ರಾವಣನ ಅಶೋಕವನ
೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು?
ಉತ್ತರ : ನಂದನವನ
೨೫೩) ನಂದನವನ ಯಾರಿಗೆ ಸೇರಿದ್ದು?
ಉತ್ತರ : ದೇವೇಂದ್ರನಿಗೆ
೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?
ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು
೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?
ಉತ್ತರ :ಬಿಳಿಯ ಬಣ್ಣದ ಹೂಗಳು
೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?
ಉತ್ತರ : ಬಿಳಿಯ ಬಣ್ಣದ ಹೂಗಳು
೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?
ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.
೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ?
ಉತ್ತರ : ಕೇವಲ ಹಾಲನ್ನವನ್ನು
೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು?
ಉತ್ತರ‌: ಸ್ವತಃ ದೇವೆಂದ್ರ
೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು?
ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು.
೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ ಸೇವಿಸುವುದನ್ನು ಕಂಡ ಪಕ್ಷಿ ಯಾವುದು ?
ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ
೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?
ಉತ್ತರ: ಅಶೋಕವನದಲ್ಲಿ
೨೬೩) ಅಶೋಕವನ ಎಂದರೇನು?
ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ
೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?
ಉತ್ತರ : ಶಿಂಶಪಾವೃಕ್ಷ
೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು?
ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ.
೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು?
ಉತ್ತರ : ತ್ರಿಜಟೆ ಎಂಬ ವೃದ್ದೆ.
೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ?
ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು.
೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ?
ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ.
೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು?
ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ.
೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು?
ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ.
೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು?
ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ
೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು?
ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು
೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ?
ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು.
೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು?
ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ
೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ?
ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ.
೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು?
ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು
೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ?
ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು
೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು?
ಉತ್ತರ : ಗೇಣುದ್ದ ಮಾತ್ರ
೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು?
ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು.
೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು ದ್ವಂಸ ಏಕೆ ಮಾಡಿದ ?
ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!
೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?
ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ
೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು?
ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ
೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು?
ಉತ್ತರ: ಇಂದ್ರಜಿತ್
೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?
ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು

ಜನವರಿ 22, 2024 ರ ಹೊತ್ತಿಗೆ ಎಲ್ಲರು ಇದನ್ನು ಕಲಿತು ದಿನ ನಿತ್ಯ ಮನನ ಮಾಡಿಕೊಳ್ಳೋಣ...

ಮೈಸೂರಿನ ರಾಜೀವನಗರದ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯದಲ್ಲಿರುವ 13 ಅಡಿ ಎತ್ತರದ ಶ್ರೀ ದೇವರ ಅಲಂಕೃತ ವಿಗ್ರಹ.
08/01/2024

ಮೈಸೂರಿನ ರಾಜೀವನಗರದ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯದಲ್ಲಿರುವ 13 ಅಡಿ ಎತ್ತರದ ಶ್ರೀ ದೇವರ ಅಲಂಕೃತ ವಿಗ್ರಹ.

ದಿನಾಂಕ 7/1/2024 ರ ಭಾನುವಾರ  ರಾಜೀವ್ ನಗರದ ಸೂರ್ಯ ದೇವಸ್ಥಾನ ದ ಅವರಣದಲ್ಲಿ ಮೈಸೂರು ಕೆ. ಆರ್. ಉಪನಗರ ಮತ್ತು ಚಾಮರಾಜ ಉಪನಗರದ ಯೋಗಬಂದು ಗಳು ...
08/01/2024

ದಿನಾಂಕ 7/1/2024 ರ ಭಾನುವಾರ ರಾಜೀವ್ ನಗರದ ಸೂರ್ಯ ದೇವಸ್ಥಾನ ದ ಅವರಣದಲ್ಲಿ ಮೈಸೂರು ಕೆ. ಆರ್. ಉಪನಗರ ಮತ್ತು ಚಾಮರಾಜ ಉಪನಗರದ ಯೋಗಬಂದು ಗಳು ಆಯೋಜಿಸಿದ್ದ ಸೂರ್ಯನಮಸ್ಕಾರ ಕಾರ್ಯ ಕ್ರಮದ ಹಾಗು ಭಾಗವಹಿಸಿದ್ದ ಚೈತ್ರ ಶಾಖೆ ಯೋಗಬಂಧು ಗಳ ಚಿತ್ರ ಗಳು.

08/01/2024
ಇಂದು ಚೈತ್ರ ಶಾಖೆಯಲ್ಲಿ ಗುರು ಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಯೋಗ ಬಂದುಗಳು.ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯ ಗಳು🙏
03/07/2023

ಇಂದು ಚೈತ್ರ ಶಾಖೆಯಲ್ಲಿ ಗುರು ಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಯೋಗ ಬಂದುಗಳು.
ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯ ಗಳು🙏

15/06/2023

*🙏ಹರಿ ಓಂ🙏*

*SPYS&RC*
*FREE YOGA SINCE 1980*

*ಅಗ್ನಿಹೋತ್ರ ಮಂತ್ರ*

⚜️ *ಸೂರ್ಯೋದಯದ ಸಮಯದಲ್ಲಿ*⚜️

🌅 *ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ* 🌄

🕉️ *ಪ್ರಜಾಪತಯೆ ಸ್ವಾಹಾ, ಪ್ರಜಾಪತಯೆ ಇದಂ ನ ಮಮ* 🔯

🔱 *ಸೂರ್ಯಾಸ್ತದ ಸಮಯದಲ್ಲಿ* 🔱

🔯 *ಅಗ್ನಯೇ ಸ್ವಾಹಾ, ಅಗ್ನಯೇ ಇದಂ ನ ಮಮ* 🔯
🕉️ *ಪ್ರಜಾಪತಯೆ ಸ್ವಾಹಾ, ಪ್ರಜಾಪತಯೆ ಇದಂ ನ ಮಮ* 🔯

(ಸಮಯವಕಾಶವಿದ್ದಲ್ಲಿ / ಸಮಯಾವಕಾಶ ಮಾಡಿಕೊಂಡು ಕೆಳಗಿನ ಮಂತ್ರಗಳನ್ನು ಜೋಡಿಸಿಕೊಳ್ಳಬವುದು.)

ಶ್ರೀ ಗುರುಭ್ಯೋನಮಃ

ಹರಿ ಓಂ

*ಪ್ರಾರ್ಥನೆ*:

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ।
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ॥

*ಗುರು ಪ್ರಾರ್ಥನೆ*:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಸ್ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥

*ಓಂ ಅಪವಿತ್ರ*

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ ।
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶ್ಶುಚಿಮ್ ॥

(ಶಿರಸ್ಸಿಗೂ ಮತ್ತು ಶರೀರಕ್ಕೂ ಪ್ರೋಕ್ಷಿಸಿಕೊಳ್ಳುವುದು)

*ಆಚಮನ*:

ಓಂ ಕೇಶವಾಯ ಸ್ವಾಹಾ।
ಓಂ ನಾರಾಯಣಾಯ ಸ್ವಾಹಾ।
ಓಂ ಮಾಧವಾಯ ಸ್ವಾಹಾ:।

(ಎಡಗೈ ಯಿಂದ ಉದ್ದರಣೆ ಯಲ್ಲಿ ನೀರು ತೆಗೆದುಕೊಂಡು ಒಂದೊಂದು ಮಂತ್ರ ಹೇಳಿ ಕುಡಿಯುವುದು)

ಓಂ ಗೋವಿಂದಾಯ ನಮಃ

(ಅರ್ಘ್ಯ ಪಾತ್ರೆ ಯಲ್ಲಿ ಅರ್ಘ್ಯ ಬಿಡುವುದು)

*ಪ್ರಾಣಾಯಾಮ*:

ಓಂ ಪ್ರಣವಸ್ಯ ಪರಬ್ರಹ್ಮ
ಋಷಿಃ ಪರಮಾತ್ಮಾ ದೇವತಾ । ದೈವೀ ಗಾಯತ್ರೀ ಛಂದಃ ಪ್ರಾಣಾಯಾಮೇ ವಿನಿಯೋಗಃ ॥

ಓಂ ಭೂಃ ಓಂ ಭುವಃ ಓಂ ಸುವಃ ಓಂ ಜನಃ ಓಂ ತಪಃ ಓಂ ಸತ್ಯಂ !!
ಓಂ ತತ್ಸವಿತರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ !!

ಓಂಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭೋವಸ್ಸುವರೋಂ:

*ಸಂಕಲ್ಪ*:

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇತೀರೇ ಶಾಲಿವಾಹನಶಕೆ ಬೌದ್ಧಾವತಾರೇ ಶ್ರೀ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರ ಮಾನೇನ ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ- - - ಸಂವತ್ಸರೇ - - - ಆಯನೇ - - - ಖುತೌ - - - ಮಾಸೇ - - - ಪಕ್ಷೇ - - - ತಿಥೌ - - - ವಾಸರ ಯುಕ್ತಾಯಾಂ ಶುಭ ನಕ್ಷತ್ರ ಶುಭ ಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ
ಶುಭತಥೌ ಮಮಉಪಾತ್ತಸಮಸ್ತಮಸ್ತದುರಿತಕ್ಷಯದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ ಗೋತ್ರ - - - ನಕ್ಷತ್ರ - - - ರಾಶಿ - - - ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಅಭಯ ಆಯುಃ ಆರೋಗ್ಯ ಐಶ್ವರ್ಯಾಭಿವೃದ್ದ್ಯರ್ಥಂ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ ಸಕಲ ಮನೋರಥ ಪ್ರಾಪ್ಯಾರ್ಥಂ ಶ್ರೀ ಅಗ್ನಿಹೋತ್ರ ಪೂಜಾ ಅಹಂ ಕರಿಶ್ಯೇ:

*ಅಗ್ನಿ ಪ್ರಾರ್ಥನೆ*

ದ್ವಿಶೇರ್ಷಕಂ ಸಪ್ತಹಸ್ತಂ ಚ ತ್ರಿಪಾದಂ ಸಪ್ತಜಿಹ್ವಕಂ । ವರದಂ ಶಕ್ತಿ ಹಸ್ತಂಚ ಭಿಬ್ರಾಣಂ ಸ್ರುಕಸ್ರಾಪೌತಥಾ ॥ ಅಭೀತದಂ ಚರ್ತುಧರಂ ವಾವೇಚಾಜ್ಯಧರಂ ಕರೇಃ
ಇತಿಪ್ರತ್ಯಕ್ಷಂ ಅಗ್ನಿಧ್ಯಾತ್ವ.

*ಗಣಪತಿ*

ಓಂ *ಏಕದಂತಾಯ* ವಿದ್ಮಹೇ ವಕ್ರತುಂಡಾಯ ಧೀಮಹಿ। ತನ್ನೋ ದಂತಿ ಪ್ರಚೋದಯಾತ್: ಸ್ವಾಹಾ॥
ಓಂ *ಗಣಪತಿ ದೇವಾಯ* ಇದಂ ನಮಮ:

*ಸೂರ್ಯ*

ಓಂ *ಭಾಸ್ಕರಾಯ* ವಿದ್ಮಹೇ, ಮಹಾದ್ಯುತಿಕರಾಯ ಧೀಮಹಿ। ತನ್ನೋ ಆದಿತ್ಯ ಪ್ರಚೋದಯಾತ್ ಸ್ವಾಹಾ ॥
ಓಂ *ಸೂರ್ಯ ದೇವಾಯ* ಇದಂ ನಮಮ:

*ಪಂಚ ಭೂತಗಳು*

*1*. *ಪೃಥ್ವಿ*

ಓಂ *ಪೃಥ್ವೀದೇವ್ಯೈಚ* ವಿದ್ಮಹೇ, ಸಹಸ್ರ ಮೂರ್ತಾಯ
ಧೀಮಹಿ। ತನ್ನೋ *ಪೃಥ್ವಿ* ಪ್ರಚೋದಯಾತ್ ಸ್ವಾಹಾ:॥
ಓಂ *ಪೃಥ್ವಿ ದೇವಾಯ* ಇದಂ ನಮಮ:

*2*. *ವರುಣ*

ಓಂ *ಜಲಬಿಂಬಾಯ* ವಿದ್ಮಹೇ, ನೀಲ ಪುರುಷಾಯ ಧೀಮಹಿ। ತನ್ನೋ *ವರುಣ* ಪ್ರಚೋದಯಾತ್ ಸ್ವಾಹಾ:॥
ಓಂ *ವರುಣ ದೇವಾಯ* ಇದಂ ನಮಮ:

*3*. *ಅಗ್ನಿ*

ಓಂ *ವೈಶ್ವಾನರಾಯ* ವಿದ್ಮಹೇ, ಲಾಲೀಲಾಯ ಧೀಮಹಿ। ತನ್ನೋ *ಅಗ್ನಿ* ಪ್ರಚೋದಯಾತ್ ಸ್ವಾಹಾ:॥
ಓಂ *ಅಗ್ನಿ ದೇವಾಯ* ಇದಂ ನಮಮ:

*4*. *ವಾಯು*

ಓಂ *ಪವನ ಪುರುಷಾಯ* ವಿದ್ಮಹೇ। ಸಹಸ್ರಮೂರ್ತಯೇಚ ಧೀಮಹಿ, ತನ್ನೋ *ವಾಯು* ಸ್ವಾಹಾ:॥
ಓಂ *ವಾಯು ದೇವಾಯ* ಇದಂ ನಮಮ:

*5*. *ಆಕಾಶ*

ಓಂ *ಆಕಾಶಾಯಚ* ವಿದ್ಮಹೇ, ನಭೋದೇವಾಯ ಧೀಮಹಿ। ತನ್ನೋ *ಗಗನಂ* ಪ್ರಚೋದಯಾತ್ ಸ್ವಾಹಾ:॥
ಓಂ *ಆಕಾಶ ದೇವಾಯ* ಇದಂ ನಮಮ:

*ನವಗ್ರಹಗಳು*

*1*. *ಸೂರ್ಯ*

ಓಂ *ಆದಿತ್ಯಾಯ* ವಿದ್ಮಹೇ, ಸಹಸ್ರಕಿರಣಾಯ ಧೀಮಹಿ। ತನ್ನೋ ಭಾನು ಪ್ರಚೋದಯಾತ್ ಸ್ವಾಹಾ:॥
ಓಂ *ಸೂರ್ಯಗ್ರಹ ದೇವಾಯ* ಇದಂ ನಮಮ:

*2*. *ಚಂದ್ರ*

ಓಂ *ಪದ್ಮಧ್ವಜಾಯ* ವಿದ್ಮಹೇ, ಹೇಮರೂಪಾಯ ಧೀಮಹಿ। ತನ್ನೋಚಂದ್ರ ಪ್ರಚೋದಯಾತ್ ಸ್ವಾಹಾ:
ಓಂ *ಚಂದ್ರಗ್ರಹ ದೇವಾಯ* ಇದಂ ನಮಮ:

*3*. *ಅಂಗಾರಕ*

ಓಂ *ವೀರಧ್ವಜಾಯ* ವಿದ್ಮಹೇ, ವಿಘ್ನಹಸ್ತಾಯ ಧೀಮಹಿ। ತನ್ನೋಭೌಮ ಪ್ರಚೋದಯಾತ್ ಸ್ವಾಹಾ:
ಓಂ *ಅಂಗಾರಕ ಗ್ರಹ ದೇವಾಯ* ಇದಂ ನಮಮ:

*4*. *ಬುಧ*

ಓಂ *ಗಜಧ್ವಜಾಯ* ವಿದ್ಮಹೇ, ಸುಖಹಸ್ತಾಯ ಧೀಮಹಿ। ತನ್ನೋ ಬುಧ ಪ್ರಚೋದಯಾತ್ ಸ್ವಾಹಾ॥
ಓಂ *ಬುಧಗ್ರಹ ದೇವಾಯ* ಇದಂ ನಮಮ:

*5*. *ಗುರು*

ಓಂ *ವೃಷಭಾಧ್ವಜಾಯ* ವಿದ್ಮಹೇ, ಕ್ರುನಿಹಸ್ತಾಯ ಧೀಮಹಿ। ತನ್ನೋಗುರು ಪ್ರಚೋದಯಾತ್ ಸ್ವಾಹಾ:
ಓಂ *ಗುರುಗ್ರಹ ದೇವಾಯ* ಇದಂ ನಮಮ:

*6*. *ಶುಕ್ರ*

ಓಂ *ಭೃಗುಸುತಾಯ* ವಿದ್ಮಹೇ, ದಿವ್ಯದೇಹಾಯ ಧೀಮಹಿ। ತನ್ನೋಶುಕ್ರ ಪ್ರಚೋದಯಾತ್ ಸ್ವಾಹಾ:॥
ಓಂ *ಶುಕ್ರ ಗ್ರಹ ದೇವಾಯ* ಇದಂ ನಮಮ:

*7*. *ಶನಿ*

ಓಂ *ಶನೈಶ್ಚರಾಯ* ವಿದ್ಮಹೇ, ಸೂರ್ಯ ಪುತ್ರಾಯ ಧೀಮಹಿ। ತನ್ನೋ ಮಂದ ಪ್ರಚೋದಯಾತ್ ಸ್ವಾಹಾ॥
ಓಂ *ಶನೈಶ್ಚರ ಗ್ರಹ ದೇವಾಯ* ಇದಂ ನಮಮ:

*8*. *ರಾಹು*

ಓಂ *ನಾಕಧ್ವಜಾಯ* ವಿದ್ಮಹೇ, ಪದ್ಮ ಹಸ್ತಾಯ ಧೀಮಹಿ। ತನ್ನೋರಾಹು ಪ್ರಚೋದಯಾತ್ ಸ್ವಾಹಾ॥
ಓಂ *ರಾಹುಗ್ರಹ ದೇವಾಯ* ಇದಂ ನಮಮ:

*9*. *ಕೇತು*

ಓಂ *ಗದಾಹಸ್ತಾಯ* ವಿದ್ಮಹೇ, ಅಮೃತೇಶಾಯ ಧೀಮಹಿ। ತನ್ನೋಕೇತು ಪ್ರಚೋದಯಾತ್ ಸ್ವಾಹಾ॥
ಓಂ *ಕೇತುಗ್ರಹ ದೇವಾಯ* ಇದಂ ನಮಮ:

*ನವಗ್ರಹಗಳಿಗೆ ಒಂದೇ ಮಂತ್ರ*

ಓಂ *ತತ್ಕಾರಕಾಯ* ವಿದ್ಮಹೇ, ನವಗ್ರಹಾಯ ಧೀಮಹಿ। ತನ್ನೋಭವ ಪ್ರಚೋದಯಾತ್ ಸ್ವಾಹಾ॥
ಓಂ *ನವಗ್ರಹ ದೇವಾಯ* ಇದಂ ನಮಮ:

*ಧನ್ವಂತರಿ ಮಂತ್ರ*

ಓಂ *ವಾಸುದೇವಾಯ* ವಿದ್ಮಹೇ, ವೈದ್ಯರಾಜಾಯ ಧೀಮಹಿ।
ತನ್ನೋ ಧನ್ವಂತರಿ ಪ್ರಚೋದಯಾತ್ ಸ್ವಾಹಾ॥
ಓಂ *ಧನ್ವಂತರಿ ದೇವಾಯ* ಇದಂ ನಮಮ:

*ಗಾಯತ್ರಿ ಮಂತ್ರ*

ಓಂ ಭೂರ್ಭವಸ್ವಃ ತತ್ಸವಿತುರ್ವರೇಣ್ಯಂ । ಭರ್ಗೋದೇವಸ್ಯ ಧೀಮಹಿ, ಧಿಯೋಯೋನಃ ಪ್ರಚೋದಯಾತ್ ಸ್ವಾಹಾ॥
ಓಂ *ಗಾಯತ್ರಿ ದೇವ್ಯೈ* ಇದಂ ನಮಮ॥

*ಯೋಗ ನಮಸ್ಕಾರಗಳು*

1. *ಗಣಪತಿ*

ಓಂ *ಏಕದಂತಾಯ* ವಿದ್ಮಹೇ, ವಕ್ರತುಂಡಾಯ ಧೀಮಹಿ। ತನ್ನೋ ದಂತಿ ಪ್ರಚೋದಯಾತ್ ಸ್ವಾಹಾ॥
ಓಂ *ಗಣಪತಿ ದೇವಾಯ* ಇದಂ ನಮಮ:

2. *ಷಣ್ಮುಖ*

ಓಂ *ತತ್ಪುರುಷಾಯ* ವಿದ್ಮಹೇ, ಮಹಾಸೇನಾಯ ಧೀಮಹಿ। ತನ್ನಃ ಷಣ್ಮುಖ ಪ್ರಚೋದಯಾತ್ ಸ್ವಾಹಾ॥
ಓಂ *ಷಣ್ಮುಖ ದೇವಾಯ* ಇದಂ ನಮಮ:

3. *ಚಂದ್ರ*
ಓಂ ಕ್ಷೀರ ಪುತ್ರಾಯ ವಿದ್ಮಹೆ ಅಮೃತತ್ಮಾಯ ಧಿಮಹಿ ತನ್ಹ ಚಂದ್ರ ಪ್ರಚೋದಯಾತ್ ಸ್ವಾಹಾ॥
ಓಂ *ಚಂದ್ರ ದೇವಾಯ* ಇದಂ ನಮಮ:

4. *ದುರ್ಗಾ*

ಓಂ *ಮಹಾ ದೇವ್ಯೈ ಚ* ವಿದ್ಮಹೇ, ದುರ್ಗಾಯೈಚ ಧೀಮಹಿ। ತನ್ನೋದೇವಿ ಪ್ರಚೋದಯಾತ್ ಸ್ವಾಹಾ॥
ಓಂ *ದುರ್ಗಾ ದೇವಿಯೇ* ಇದಂ ನಮಮ:

5. *ಶಿವ*

ಓಂ *ತತ್ಪುರುಷಾಯ* ವಿದ್ಮಹೇ, ಮಹಾದೇವಯ ಧೀಮಹಿ। ತನ್ನೋರುದ್ರ ಪ್ರಚೋದಯಾತ್ ಸ್ವಾಹಾ॥
ಓಂ *ರುದ್ರ ದೇವಾಯ* ಇದಂ ನಮಮ:

6. *ಆಂಜನೇಯ*

ಓಂ *ಆಂಜನೇಯಾಯ* ವಿದ್ಮಹೇ, ವಾಯುಪುತ್ರಾಯ ಧೀಮಹಿ। ತನ್ನೋಹನುಮ ಪ್ರಚೋದಯಾತ್ ಸ್ವಾಹಾ॥
ಓಂ *ಆಂಜನೇಯ ದೇವಾಯ* ಇದಂ ನಮಮ:

7. *ಸೂರ್ಯ*

ಓಂ *ಪ್ರಭಾಕರಾಯ*
ವಿದ್ಮಹೇ, ದಿನಕರಾಯ
ಧೀಮಹಿ। ತನ್ನೋ ಸೂರ್ಯ ಪ್ರಚೋದಯಾತ್ ಸ್ವಾಹಾ॥
ಓಂ *ಸೂರ್ಯ ದೇವಾಯ* ಇದಂ ನಮಮಃ

8. *ವಿಷ್ಣು*

ಓಂ *ನಾರಾಯಣಾಯ* ವಿದ್ಮಹೇ, ವಾಸುದೇವಾಯ ಧೀಮಹಿ। ತನ್ನೋವಿಷ್ಣು ಪ್ರಚೋದಯಾತ್ ಸ್ವಾಹಾ॥
ಓಂ *ವಿಷ್ಣು ದೇವಾಯ* ಇದಂ ನಮಮ:

*ಪೂಜೆ*

*ಹರಿದ್ರಾಚೂರ್ಣಂ ಕುಂಕುಮಚೂರ್ಣಂ ಸಮರ್ಪಯಾಮಿ*
(ಹರಿಶಿಣ ಕುಂಕುಮ);

*ಅಕ್ಷತಾನ್ ಸಮರ್ಪ ಯಾಮಿ*
(ಅಕ್ಷತೆ);

*ಪುಷ್ಪಂ ಸಮರ್ಪಯಾಮಿ*
(ಪುಷ್ಪ)

*'ಧೂಪಂ' ಮಾಘ್ರಾಪಯಾಮಿ*
(ಗಂಧದ ಕಡ್ಡಿಯನ್ನು ಹಚ್ಚಿ ಸಮರ್ಪಿಸುವುದು)

*ದೀಪಂ ಸಮರ್ಪಯಾಮಿ*
(3 ಬತ್ತಿಯ ದೀಪವನ್ನು ಹಚ್ಚಿ ಆರತಿ ಮಾಡುವುದು)

*ನೈವೇದ್ಯ*
(ನಾರಿಕೇಲ ಫಲಂ ಕದಲೀ ಫಲಂ ನೀವೇದಯಾಮಿ।)

*ಮಂಗಳಾರತಿ*

*ಪೂರ್ಣಾಹುತಿ ಮಂತ್ರ*

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಚತೇ । ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವವಶಿಷ್ಯತೇ ॥

*ಪ್ರದಕ್ಷಿಣಾ ಮಂತ್ರ*

ಯಾನಿಕಾನಿ ಚ ಪಾಪಾನಿ ಜನ್ಮಂತರ ಕೃತಾನಿ ಚ । ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ॥

*ಕ್ಷಮಾಪಣಾ ಮಂತ್ರ*

ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ, ಜನಾರ್ಧನ । ಯತ್ ಪೂಜಿತಂ ಮಹಾದೇವ ಪರಿಪೂರ್ಣಂ ತಥಾಸ್ತು ಮೇ ॥

*ಫಲಶ್ರುತಿ ಮಂತ್ರ*

ಸ್ವಸ್ತಿ:

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ಬುದ್ಧಿಂ ಶ್ರಿಯಂ ಬಲಮ್ ಆಯುಷ್ಯಂ ತೇಜಂ ಆರೋಗ್ಯಂ ದೇಹಿಮೇ ಹವ್ಯವಾಹನ। ಶ್ರಿಯಂ ದೇಹಿಮೇ ಹವ್ಯವಾಹನ। ಓಂ ನಮೋ ನಮಃ ।

25/05/2023

*ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ:*

*ನಿಮ್ಮ ಜೀವನ ಸಂಗಾತಿ ಯಾರು?*

ಅಮ್ಮ?
ಅಪ್ಪ?
ಹೆಂಡತಿ?
ಮಗ?
ಗಂಡ?
ಮಗಳು?
ಸ್ನೇಹಿತರು?
ಇಲ್ಲವೇ ಇಲ್ಲ !

*ನಿಮ್ಮ ನಿಜ ಜೀವನದ ಸಂಗಾತಿ ನಿಮ್ಮ ದೇಹ.*

*ನಿಮ್ಮ ದೇಹವು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ನಂತರ ಯಾರೂ ನಿಮ್ಮೊಂದಿಗೆ ಇಲ್ಲ.*

*ನೀವು ಮತ್ತು ನಿಮ್ಮ ದೇಹವು ಹುಟ್ಟಿನಿಂದ ಸಾವಿನವರೆಗೆ ಒಟ್ಟಿಗೆ ಇರುತ್ತಿರಿ.*

*ನಿಮ್ಮ ದೇಹಕ್ಕೆ ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಜವಾಬ್ದಾರಿ.*

*ನಿಮ್ಮ ದೇಹದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಿದ್ರೆ ನಿಮ್ಮ ದೇಹವೂ ನಿಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸುತ್ತದೆ.*

*ನೀವು ಏನು ತಿನ್ನುತ್ತೀರಿ, ಫಿಟ್‌ ಆಗಿರುವುದಕ್ಕಾಗಿ ನೀವು ಏನು ಮಾಡುತ್ತೀರಿ, ನೀವು ಒತ್ತಡವನ್ನು ಹೇಗೆ ಎದುರಿಸುತ್ತೀರಿ, ಅದಕ್ಕೆ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.*

*ನೀವು ವಾಸಿಸುವ ಏಕೈಕ ಶಾಶ್ವತ ವಿಳಾಸ ನಿಮ್ಮ ದೇಹ ಎಂದು ನೆನಪಿಡಿ.*

*ನಿಮ್ಮ ದೇಹವು ನಿಮ್ಮ ಆಸ್ತಿ / ಹೊಣೆಗಾರಿಕೆ, ಅದನ್ನು ಬೇರೆ ಯಾರೂ ಹಂಚಿಕೊಳ್ಳಲಾಗುವುದಿಲ್ಲ. ನಿಮ್ಮ ದೇಹವು ನಿಮ್ಮ ಜವಾಬ್ದಾರಿ ಮತ್ತು ನಿಮ್ಮ ನಿಜ ಜೀವನದ ಸಂಗಾತಿ.*

*ನಿಮ್ಮ ದೇಹ ಶಾಶ್ವತವಾಗಿ ಫಿಟ್ ಆಗಿರವಂತೆ ನೋಡಿಕೊಳ್ಳಿ. ಯಾಕಂದರೇ ಹಣ ಸಂಬಂಧಿಕರು ಮತ್ತು ಸ್ನೇಹಿತರು ಯಾರೂ ಶಾಶ್ವತವಲ್ಲ.*

*ನಿಮ್ಮನ್ನು ಹೊರತುಪಡಿಸಿ ನಿಮ್ಮ ದೇಹಕ್ಕೆ ಯಾರೂ ಸಹಾಯ ಮಾಡಲಾರರು ಎಂಬುದನ್ನು ನೆನಪಿಡಿ.*

*ಪ್ರಾಣಾಯಾಮ -* ಶ್ವಾಸಕೋಶಕ್ಕೆ
*ಧ್ಯಾನ* - ಮನಸ್ಸಿಗೆ
*ಯೋಗಾಸನ* - ದೇಹಕ್ಕಾಗಿ
*ವಾಕಿಂಗ್* - ಹೃದಯಕ್ಕಾಗಿ
*ಉತ್ತಮ ಆಹಾರ* - ಕರುಳಿಗೆ
*ಒಳ್ಳೆಯ ಆಲೋಚನೆಗಳು -* ಆತ್ಮಕ್ಕಾಗಿ
*ಒಳ್ಳೆಯ ಕರ್ಮ* - ಜಗತ್ತಿಗೆ

*ಸರ್ವೇ ಜನಾಃ ಸುಖಿನೋ ಭವಂತು.*
🙏🙏🙏🙏🙏

24/05/2023

🔯 ಆಧ್ಯಾತ್ಮಿಕ ವಿಚಾರ.📖🔯

*ಅಗ್ನಿಹೋತ್ರ ಹೋಮ: ಮಾಡುವುದು ಹೇಗೆ..? ಇಲ್ಲಿದೆ ಇದರ ಪ್ರಯೋಜನ ಮತ್ತು ಮಹತ್ವ..!*

ಸನಾತನ ಕಾಲದಿಂದಲೂ ರೂಢಿಸಿಕೊಂಡು ಬಂದ ಹೋಮಗಳಲ್ಲಿ ಅಗ್ನಿಹೋತ್ರ ಹೋಮ ಕೂಡ ಒಂದು. ಸರ್ವರೋಗಕ್ಕೂ ಮದ್ದು ಎನ್ನುತ್ತಾರೆ ವಿಜ್ಞಾನಿಗಳು. ಕಡಿಮೆ ಸಮಯದಲ್ಲಿ ಮಾಡಬಹುದಾದ ಅಗ್ನಿ ಹೋತ್ರ ಹೋಮವನ್ನು ಮಾಡುವುದು ಹೇಗೆ..? ಇದರ ಪ್ರಯೋಜನಗಳೇನು ನೋಡಿ.

ಭಾರತದಲ್ಲಿ ಸನಾತನ ಕಾಲದಿಂದಲೂ ಹೋಮ, ಹವನಾದಿಗಳನ್ನು, ಯಜ್ಞ, ಯಾಗಾದಿಗಳನ್ನು ಮೂಗೂಡಿಸಿಕೊಂಡು ಬರಲಾಗಿದೆ. ಹೋಮ, ಯಾಗಗಳೆಂದರೆ ಕೇವಲ ನಮ್ಮ ಬಯಕೆಗಳನ್ನು, ಆಸೆ, ಆಕಾಂಕ್ಷೆಗಳನ್ನು ದೇವರ ಮುಂದಿಟ್ಟು ನೆರವೇರಿಸು ದೇವರೇ ಎಂದು ಬೇಡಿಕೊಳ್ಳುವುದಲ್ಲ, ಬದಲಾಗಿ, ಯಾಗ - ಯಜ್ಞವೆಂದರೆ ತ್ಯಾಗ. ನೀನು ನನಗೆ ಜೀವನದಲ್ಲಿ ನೀಡಿದ ಪ್ರತಿಯೊಂದು ವಸ್ತುಗಳು, ಅಂಶಗಳು ನನ್ನದಲ್ಲ. ಎಲ್ಲವೂ ನಿನ್ನದೇ. ಹಾಗಾಗಿ ಎಲ್ಲವನ್ನು ನಿನಗೆ ಅರ್ಪಿಸುತ್ತೇನೆಂದು ಹೇಳಿ ತ್ಯಾಗ ಮಾಡುವ ಮನೋಭಾವ.

ವೈದಿಕ ಪರಂಪರೆಯಲ್ಲಿ ಯಾವಾಗಲೂ ಯಾಗ, ಹೋಮ, ಹವನಾದಿಗಳು ನಡೆಯುತ್ತಿತ್ತು. ಆದರೆ ದಿನಕಳೆದಂತೆ ಯಜ್ಞ, ಹೋಮಗಳನ್ನು ಮಾಡಲು ಸಮಯವಿಲ್ಲವೆಂದು ಅವುಗಳನ್ನು ಅಲ್ಲಗಳೆಯುತ್ತಿದ್ದೇವೆ. ಆದರೆ ಈ ಹೋಮವನ್ನು ನೀವು ಯಾವುದೇ ಬ್ರಾಹ್ಮಣರ ಸಹಾಯವಿಲ್ಲದೇ, ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದು. ಅದುವೇ 'ಅಗ್ನಿ ಹೋತ್ರ ಹೋಮ'. ಈ ಹೋಮದ ಮಹತ್ವ, ಪ್ರಯೋಜನಗಳನ್ನು ಕೇಳಿದರೆ ನೀವು ಮನೆಯಲ್ಲಿ ಮಾಡದೇ ಇರಲಾರಿರಿ.

ಅಗ್ನಿ ಹೋತ್ರ ಹೋಮದ ಮಹತ್ವ:
ಅಗ್ನಿ ಹೋತ್ರ ಹೋಮವನ್ನು ಸಾಮಾನ್ಯವಾಗಿ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಾಡಲಾಗುತ್ತದೆ. ಅಗ್ನಿ ಹೋತ್ರ ಹೋಮವು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಾಕಷ್ಟು ಮಹತ್ವವನ್ನು ಪಡೆದಿದೆ. ಭೋಪಲ್‌ ಅನಿಲ ದುರಂತದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಡಿಸೆಂಬರ್ 3, 1984ರಲ್ಲಿ ನಡೆದ ಆ ದುರಂತದಲ್ಲಿ ಸುಮಾರು 10 ಕಿಲೋಮೀಟರ್‌ ದೂರದಲ್ಲಿ ವಾಸವಾಗಿದ್ದವರು ಮರಣ ಹೊಂದಿದರು ಆದರೆ 1 ಕಿಲೋಮೀಟರ್‌ ದೂರದಲ್ಲಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನು ಆಗಲಿಲ್ಲ. ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರ ಮನೆಯನ್ನು ಅಧ್ಯಯನ ಗೊಳಿಸಿದಾಗ ಅವರು ಮನೆಯಲ್ಲಿ ದಿನನಿತ್ತಯ 2 ಹೊತ್ತು ಅಗ್ನಿಹೋತ್ರ ಹೋಮವನ್ನು ಮಾಡುತ್ತಿದ್ದರು.

ನಂತರ ಸಂಶೋಧಕರು ಈ ಹೋಮವನ್ನು ರೋಗಿಗಳ ಮೇಲೆ ಪ್ರಯೋಗಿಸಿದರು. ಇದರಿಂದ ರೋಗಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಗುಣಮುಖರಾದರು.

ಅಗ್ನಿಹೋತ್ರ ಹೋಮದ ಪ್ರಯೋಜನ:
ಸರಳ ಹೋಮ ಪದ್ಧತಿ ಇದಾಗಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಕೇವಲ 15 ನಿಮಿಷಗಳಲ್ಲಿ ಈ ಹೋಮವನ್ನು ಮಾಡಬಹುದು. ಮನೆಯಲ್ಲಿ ಯಾರು ಬೇಕಾದರೂ ಈ ಹೋಮವನ್ನು ಮಾಡಬಹುದು. ವಯಸ್ಸಿನ ಭೇದ - ಭಾವವಿಲ್ಲದೇ ಎಲ್ಲರೂ ಈ ಹೋಮವನ್ನು ಮಾಡಬಹುದು.

1) ಮನಸ್ಸು ಶಾಂತವಾಗುತ್ತದೆ.
2) ಒತ್ತಡದಿಂದ ನಿವಾರಣೆ ನೀಡುತ್ತದೆ.
3) ಹೋಮದಿಂದ ನರಮಂಡಲವು ಹೊಸ ಚೈತನ್ಯವನ್ನು ಪಡೆದುಕೊಂಡು ದೇಹ ಮತ್ತು ಮನಸ್ಸನ್ನು ಲವಲವಿಕೆಯಿಂದಿಡುತ್ತದೆ.
4) ಪರಿಸರ ಮಾಲಿನ್ಯವು ಕಡಿಮೆಯಾಗುತ್ತದೆ.
5) ಅಗ್ನಿಹೋತ್ರ ಹೋಮದ ಬೂದಿಯಿಂದ ಅನೇಕ ಕಾಯಿಲೆಗಳು ಗುಣವಾಗುತ್ತದೆ.
6) ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
7) ಹೋಮದಿಂದ ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿಗಳು ನಾಶವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುತ್ತದೆ.
8) ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸದಂತೆ ರಕ್ಷಿಸುತ್ತದೆ.
9) ಹೋಮ ನಡೆಸಿದ ಸುತ್ತಲಿನ ಪರಿಸರದಲ್ಲಿ ರೋಗಾಣು, ನಂಜುಕಾರಕ ಜಂತುಗಳು ಹಾಗೂ ಅನಾರೋಗ್ಯ ಸೃಷ್ಟಿಸುವ ಸೂಕ್ಷ್ಮ ಜೀವಿಗಳ ನಾಶ ಉಂಟಾಗುವುದು.
10) ನಮ್ಮಲ್ಲಿನ ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸುತ್ತದೆ.
11) ಆರೋಗ್ಯಕರ ಮತ್ತು ಸಂತೋಷದಾಯಕ ಜೀವನಕ್ಕೆ ಮನೆಯಲ್ಲಿ ಅಗ್ನಿಹೋತ್ರ ಹೋಮವನ್ನು ಮಾಡಬೇಕು.
12) ಹೋಮ ಮಾಡಿದ ಪರಿಸರದಲ್ಲಿ ಹೆಚ್ಚು ಸತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ.
13) ಹೋಮದಿಂದ ಮಕ್ಕಳಲ್ಲಿನ ಕೋಪವು ಕಡಿಮೆಯಾಗಿ, ಶಾಂತ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಉತ್ತಮ ಜ್ಞಾನ ಹಾಗೂ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.
14) ಹೋಮದಲ್ಲಿ ಹೊರ ಹೊಮ್ಮುವ ಹೊಗೆಯು ಮೆದುಳು, ನರವ್ಯೂಹಗಳ ಮೇಲೆ ಉತ್ತಮ ಪ್ರಭಾವ ಬೀರುತ್ತವೆ. ಇದರಿಂದ ವ್ಯಕ್ತಿ ಉತ್ತಮ ಇಚ್ಛಾಶಕ್ತಿ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವನು.
15) ಹೋಮ ಆಚರಿಸಿದ ಪರಿಸರದಲ್ಲಿ ಶಾಂತತೆ ಹಾಗೂ ಧ್ಯಾನ ಕೈಗೊಳ್ಳಲು ಅನುಕೂಲಕರವಾದ ವಾತಾವರಣ ದೊರೆಯುವುದು.

ಅಗ್ನಿಹೋತ್ರ ಹೋಮಕ್ಕೆ ಬೇಕಾಗುವ ಸಾಮಾಗ್ರಿಗಳು:
1) ತಾಮ್ರದ ಹೋಮಕುಂಡ
2) ಬೆರಣಿ
3) ಕೆಂಪು ಬಣ್ಣದ ಅಕ್ಕಿ ( ಹೋಮಕ್ಕೆ ಬಳಸುವ ಅಕ್ಕಿ ತುಂಡಾಗಿರಬಾರದು ಮತ್ತು ಪಾಲಿಶ್‌ ಮಾಡಿರಬಾರದು)
4) ಹಸುವಿನ ತುಪ್ಪ

ಅಗ್ನಿಹೋತ್ರ ಹೋಮದ ವಿಧಾನ:
ಮೊದಲಿಗೆ ಬೆರಣಿಯನ್ನು ತ್ರಿಕೋನಾಕೃತಿಯಲ್ಲಿ ತುಂಡರಿಸಿಕೊಳ್ಳಿ. ನಂತರ ಬೆರಣಿಯ ತುಂಡುಗಳಿಗೆ ತುಪ್ಪವನ್ನು ಸವರಿ ತ್ರಿಕೋನಾಕೃತಿಯಲ್ಲಿ ಕುಂಡದಲ್ಲಿಡಿ. ಒಂದು ಬೆರಣಿಯ ತುಂಡಿಗೆ ತುಪ್ಪವನ್ನು ಸವರಿ ಅದಕ್ಕೆ ಬೆಂಕಿಯನ್ನು ಹಚ್ಚಿ ಕುಂಡದಲ್ಲಿನ ಎಲ್ಲಾ ಬೆರಣಿಯು ಉರಿಯುವಂತೆ ಮಾಡಿ. ಹಾಗೂ ಅಕ್ಕಿಗೆ ಸ್ವಲ್ಪ ತುಪ್ಪವನ್ನು ಬೆರೆಸಿ, ನಂತರ ನಿಮ್ಮ ಹೆಬ್ಬೆರಳು, ತೋರ್ಬೆರಳು ಮತ್ತು ಉಂಗುರ ಬೆರಳನ್ನು ಸೇರಿಸಿ. ಗೋ ಮುಖ ಮುದ್ರೆಯ ಸಹಾಯದಿಂದ ತುಪ್ಪ ಬೆರೆಸಿದ ಅಕ್ಕಿಯನ್ನು ತೆಗೆದುಕೊಂಡು ಅಗ್ನಿಗೆ ಅಥವಾ ಹೋಮ ಕುಂಡಕ್ಕೆ ಹಾಕಬೇಕು. ಅಕ್ಕಿಯನ್ನು ಅಗ್ನಿ ಕುಂಡಕ್ಕೆ ಹಾಕುವಾಗ ಈ ಕೆಳಗಿನ ಮಂತ್ರಗಳನ್ನು ತಪ್ಪದೇ ಪಠಿಸಬೇಕು.

ಸೂರ್ಯೋದಯದ ಅಗ್ನಿಹೋತ್ರ ಹೋಮದ ಮಂತ್ರಗಳು:
1) ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನ ಮಮ ||
2) ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ ||

ಸೂರ್ಯಾಸ್ತದ ಅಗ್ನಿಹೋತ್ರ ಹೋಮದ ಮಂತ್ರಗಳು:
1) ಅಗ್ನಿಯೇ ಸ್ವಾಹಾಃ ಅಗ್ನಿಯೇ ಇದಂ ನ ಮಮ ||
2) ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ ||

ಈ ಸಗ್ನಿ ಹೋತ್ರ ಮಂತ್ರಗಳನ್ನು ಪಠಿಸಿದ ನಂತರ ಭಕ್ತಿಯಿಂದ ಅಗ್ನಿ ಕುಂಡಕ್ಕೆ ನಮಸ್ಕರಿಸಿ. ನಿಮಗಿಷ್ಟವಾದ ಮಂತ್ರವನ್ನು ಅದರಲ್ಲೂ ಸರ್ಯದೇವನಿಗೆ ಸಮರ್ಪಿತವಾದ ಮಂತ್ರವನ್ನು ಪಠಿಸಿ, ನೀವು ಕೈಗೊಂಡ ಅಗ್ನಿಹೋತ್ರ ಹೋಮವನ್ನು ಮುಕ್ತಾಯಗೊಳಿಸಬಹುದು.

ಒಂದು ಅಧ್ಯಯನದ ಪ್ರಕಾರ, ನಾವು ಯಾವ ಜಾಗದಲ್ಲಿ ಅಥವಾ ಸ್ಥಳದಲ್ಲಿ ಅಗ್ನಿಹೋತ್ರ ಹೋಮವನ್ನು ಮಾಡುತ್ತೇವೋ ಆ ಸ್ಥಳದಲ್ಲಿ ಜಲ ಶುದ್ಧವಾಗುತ್ತದೆ ಎಂದು ತಿಳಿದು ಬಂದಿದೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ಸೇರಿದಂತೆ ಇನ್ನು ಹೆಚ್ಚಿನ ರೋಗಗಳ ನಿಯಂತ್ರಣಕ್ಕೆ ಅಗ್ನಿಹೋತ್ರ ಹೋಮ ಪ್ರಯೋಜನಕಾರಿ.🙏

Address

Mysore

Opening Hours

Monday 5:30am - 7am
Tuesday 5:30am - 7am
Wednesday 5:30am - 7am
Thursday 5:30am - 7am
Friday 5:30am - 7am
Saturday 5:30am - 7am
Sunday 5:30am - 7am

Telephone

9611666754

Website

Alerts

Be the first to know and let us send you an email when SPYSS Chytra Shake Mysuru posts news and promotions. Your email address will not be used for any other purpose, and you can unsubscribe at any time.

Contact The Practice

Send a message to SPYSS Chytra Shake Mysuru:

Share