26/12/2025
Varadi 25th
ಡಿಸೆಂಬರ್ 25 ಗುರುವಾರದಂದು , ಸಂಜೆ 4.30 ಗಂಟೆಗೆ ನರಿಮೊಗರು ಗ್ರಾಮ ಪಂಚಾಯತ್ ಸಮೀಪದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ , ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಪ್ರಕಾಶನದಲ್ಲಿ ಪ್ರಕಟವಾದ , ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಬರೆದ "ಆಯುರ್ವೇದ - ಆಶಾವಾದ " ಕೃತಿ ಲೋಕಾರ್ಪಣಾ ಸಮಾರಂಭ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಡೆಯಿತು . ದೀಪ ಪ್ರಜ್ವಲನೆಯನ್ನು ಶ್ರೀಮತಿ ಕಾಂಚನಮಾಲಾ , ಸಿಂದೂರ ಮನೆ, ನಡೆಸಿಕೊಟ್ಟರು . ಅಧ್ಯಕ್ಷತೆಯನ್ನು ಪುತ್ತೂರು ಉಮೇಶ್ ನಾಯಕ್, ಅಧ್ಯಕ್ಷರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು ವಹಿಸಿಕೊಂಡಿದ್ದರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ . ಬಂಗಾರಡ್ಕ ಇವರ ಈ ಕೃತಿ ಅತ್ಯಮೂಲ್ಯ ಕೊಡುಗೆ ಎಂದರು . ಶ್ರೀ ಅವಿನಾಶ್ ಕೊಡೆಂಕಿರಿ , ಸರಸ್ವತಿ ವಿದ್ಯಾಸಂಸ್ಥೆ, ನರಿಮೊಗರು ಇವರು ಮಾತನಾಡಿ " ಡಾ . ಬಂಗಾರಡ್ಕ ಇವರ ವೈದ್ಯಕೀಯ ಕೌಶಲ್ಯ , ಬರಹ ಮತ್ತು ವಾಗ್ಮಿತೆ ಒಂದು ಅಪರೂಪದ ಸಂಯೋಗ " ಎಂದರು .ಶ್ರೀ ಕೆ.ಪದ್ಮನಾಭ ಪ್ರಭು ಬೀರ್ನಹಿತ್ಲು ,ಅದ್ಯಕ್ಷರು, ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ, ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್ . ಹೆಚ್ . ಬಿ . ಇವರು ಉಪಸ್ಥಿತರಿದ್ದು ಶುಭನುಡಿಗಳನ್ನಾಡಿದರು . ಕೃತಿ ಲೋಕಾರ್ಪಣೆಯನ್ನು ಡಾ . ಸೀತಾರಾಮ ಭಟ್ ಕಲ್ಲಮ
ವೈದ್ಯರು , ರೋಟರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಹಾಗೂ ಆಡಳಿತ ವ್ಯವಸ್ಥಾಪಕರು , ಶ್ರೀ ಗುರು ರಾಘವೇಂದ್ರ ಮಠ , ಕಲ್ಲಮ ನೆರವೇರಿಸಿ ಮಾತನಾಡಿದರು -" ಮಕ್ಕಳ , ಮಹಿಳೆಯಯರ , ವೃದ್ಧರ ವಿವಿಧ ಕಾಯಿಲೆಗಳ ಬಗ್ಗೆ , ಆಯುರ್ವೇದ ಪರಿಹಾರ ಹಾಗೂ ಆರೋಗ್ಯ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವರಿಸುವ ಮಹೋನ್ನತ ಪುಸ್ತಕ ಇದಾಗಿದೆ " ಎಂದರು .. ಕೃತಿಕಾರರ ಮತ್ತು ಅತಿಥಿಗಳ ಪರಿಚಯವನ್ನು ಶ್ರೀಮತಿ ಶರಾವತಿ ರವಿನಾರಾಯಣ , ಆರ್ಟ್ ಆಫ್ ಲಿವಿಂಗ್ ತರಬೇತುದಾರರು ,
ಪ್ರಾರ್ಥನೆಯನ್ನುಕು .ಸುದಿಕ್ಷ ಮತ್ತು ಕು .ಸುನಿಧಿ, ಸ್ವಾಗತ ಭಾಷಣವನ್ನು ಶ್ರೀ ನಾರಾಯಣ ಬನ್ನಿಂತಾಯ , ನರಿಮೊಗರು ನಡೆಸಿಕೊಟ್ಟರು . ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕ ಮಾತಾಡಿ "ಹೊರಗಿನ ಆರೋಗ್ಯವು ಒಳಗಿನ ಸ್ಥಿತಿಯನ್ನು ಅವಲಂಬಿಸಿದೆ . ಹೊರಗಿನ ಸಂಗತಿಗಳ ಮೇಲೆ ನಮ್ಮ ನಿಯಂತ್ರಣ ಇಲ್ಲ . ಆದರೆ ಒಳಗಿನ ವಿಷಯಗಳ ಮೇಲೆ ಹಿಡಿತ ಸಾಧ್ಯ . ಪ್ರಸಾದಿನೀ ಆಯುರ್ನಿಕೇತನ ಆಸ್ಪತ್ರೆ ಆಯುರ್ವೇದ ಚಿಕಿತ್ಸೆಯಲ್ಲಿ ವಿವಿಧ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ " ಎಂದರು .
ನಿವೃತ್ತ ಯೋಧ ವಳಲಂಬೆ ಗಣಪಯ್ಯ ಭಟ್ ಕುಕ್ಕುಜೆ ಇವರನ್ನು ಸನ್ಮಾನಿಸಲಾಯಿತು .
ವಂದನಾರ್ಪಣೆ ಯನ್ನು ಡಾ . ಶ್ರುತಿ . ಎಂ . ಎಸ್ ., ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ತಾರಾನಾಥ್ ಸವಣೂರು , ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಮುಖ್ಯ ಗುರುಗಳು , ಪಿ. ಎಂ . ಶ್ರೀ . ಶಾಲೆ , ವೀರಮಂಗಲ ನಡೆಸಿಕೊಟ್ಟರು. ಶ್ರೀಶ , ಪ್ರದೀಪ ಕೃಷ್ಣ ಬಂಗಾರಡ್ಕ , ಸುಲೋಚನಾ . ಪಿ. ಕೆ ., ಟಿ . ಎಸ್ . ಆಚಾರ್ , ಮುಖ್ಯ ಜೀವವಿಮಾ ಸಲಹೆಗಾರ ಎಂ. ಎಸ್. ಭಟ್ ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು . ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಎಕ್ಕಡ್ಕ ಗಣಪತಿ ಭಟ್ , ಸಂಗೀತಗಾರರಾದ ದತ್ತಾತ್ರೇಯ ರಾವ್ ,ಕುಟ್ಟಿಗದ್ದೆ ಜನಾರ್ಧನ ಜೋಯಿಸ್ , ಗೋಪಾಲಕೃಷ್ಣ ಭಟ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು .