Dr. A V Baliga Memorial Hospital

Dr. A V Baliga Memorial Hospital Dr. A. V. Baliga Memorial Hospital at Doddanagudde,was founded in 2003 as a general hospital .

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ನಮ್ಮ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿಯವರು ಆಯ್ಕೆಯಾಗಿರುವುದು ನಮಗೆಲ್ಲ ಸಂತೋಷದ ವಿಷಯವಾಗಿದ್...
13/09/2025

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ನಮ್ಮ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿಯವರು ಆಯ್ಕೆಯಾಗಿರುವುದು ನಮಗೆಲ್ಲ ಸಂತೋಷದ ವಿಷಯವಾಗಿದ್ದು.
ಎಲ್ಲಾ ಸಿಬ್ಬಂದಿಗಳ ಪರವಾಗಿ ಡಾ. ಪಿ. ವಿ. ಭಂಡಾರಿಯವರಿಗೆ ಅಭಿನಂದನೆಗಳು.

ಕರಾವಳಿ ಉಡುಪಿ: ಸಂಗೊಳ್ಳಿ ರಾಯಣ್ಣ ಪುರಸ್ಕಾರ- 2025ಕ್ಕೆ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಆಯ್ಕೆ 13/09/2025 07:00 AM  ಉಡುಪಿ: ಕ್ರಾಂತಿವೀರ ಸಂಗೊಳ್ಳಿ...

12/09/2025
“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ,...
12/09/2025

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರತಿ ಗುರುವಾರ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯುತ್ತಿರುವ ಉಚಿತ ನೇರ ಫೋನ್ ಇನ್ ಕಾರ್ಯಕ್ರಮದ ಧ್ವನಿ ಮುದ್ರಿಕೆ.
ದಿನಾಂಕ: 11-09-2025
ಸಂಚಿಕೆ - 86
ವಿಷಯ: “ಮದ್ಯವ್ಯಸನದಿಂದಾಗುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು”
ಸಂಪನ್ಮೂಲ ವ್ಯಕ್ತಿಗಳು : ಕು. ರತಕ್ಷಿತಾ ಎಮ್. ಆಪ್ತಸಮಾಲೋಚಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪ....

ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ದಿನಾಂಕ 10.09.2025 ರಂದು ಡಾ  ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾ...
10/09/2025

ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ
ದಿನಾಂಕ 10.09.2025 ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯನ್ನು ಆಚರಿಸಲಾಯಿತು. ತನ್ನಿಮಿತ್ತ ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯೋಜನೆಯಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು adolescent mental health ಎಂಬ ವಿಚಾರವಾಗಿ ಮೊದಲ ಅವಧಿಯನ್ನು ತೆಗೆದುಕೊಂಡರು. ನಂತರ ಸಭಾ ಕಾರ್ಯಕ್ರಮವು ಜರುಗಿತು. ಸಭೆಯಲ್ಲಿ ಉದ್ಘಾಟಕರಾಗಿ ಡಾ. ಮಧುಮಾಲಾ(ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಸಮಾಜ ಕಾರ್ಯ ವಿಭಾಗ, ಆಳ್ವಾಸ್ ಕಾಲೇಜ್ ,ಮೂಡುಬಿದರೆ) , ಅಧ್ಯಕ್ಷರಾಗಿ ಡಾ. ಪಿ ವಿ ಭಂಡಾರಿ ( ವೈದ್ಯಕೀಯ ನಿರ್ದೇಶಕರು ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ), ಮುಖ್ಯ ಅತಿಥಿಗಳಾಗಿ ಡಾ. ವರಲಕ್ಷ್ಮೀ ಚಂದ್ರಶೇಖರನ್ ( ಅಸೋಸಿಯೇಟ್ ಪ್ರೊಫೆಸರ್ , ಡಿಪಾರ್ಟ್ಮೆಂಟ್ ಆಫ್ ಗ್ಲೋಬಲ್ ಹೆಲ್ತ್ ಆಂಡ್ ಗವರ್ನೆನ್ಸ್, ಕನ್ವೆನರ್ ಇನ್ಸ್ಟಿಟ್ಯೂಷನಲ್ ರಿವ್ಯೂ ಕಮಿಟಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್. MAHE) ಅಂತಯೇ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ. ದೀಪಕ್ ಮಲ್ಯ ಹಾಗೂ ಡಾ. ಮಾನಸ್ ಈ.ಆರ್ .ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆ ಆರಂಭದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಪೂರ್ಣಿಮಾ ಇವರು ನೆರವೇರಿಸಿದರು, ಶ್ರೀಮತಿ ಪದ್ಮ ರಾಘವೇಂದ್ರ ಇವರು ಎಲ್ಲಾ ಗಣ್ಯರನ್ನು ಸಭೆಗೆ ಸ್ವಾಗತ ಗೈದರು. ಸಭೆಯ ಉದ್ಘಾಟನೆಯ ತದನಂತರ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ ಈ ದಿನದ ಧ್ಯೇಯ ಮತ್ತು ಆಶಯಗಳನ್ನ ತಿಳಿಸಿದರು. ಸಭೆಯಲ್ಲಿದ್ದ ಉದ್ಘಾಟಕರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಸಭಾಧ್ಯಕ್ಷರು ನೆನಪಿನ ಕಾಣಿಕೆ ನಿತ್ತು ಗೌರವಿಸಿದರು. ತದನಂತರ ಸುರೇಶ್ ಎಸ್ ನಾವೂರು ಇವರು ವಂದನಾರ್ಪಣೆ ಮಾಡಿದರು. ಸಭೆಯ ನಂತರದಲ್ಲಿ ಕಮಲ್ ಏ ಬಾಳಿಗ ಚಾರಿಟಬಲ್ ಟ್ರಸ್ಟ್ ಹಾಗೂ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯೂ ಜಂಟಿಯಾಗಿ ನಿರ್ಮಿಸಿದ ಆ ಕ್ಷಣ ಎಂಬ ಕಿರು ಚಿತ್ರವನ್ನು ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಮುಂದಿನ ಅವಧಿಗಳು ಡಾ. ಪಿ ವಿ. ಭಂಡಾರಿ , ಶ್ರೀಮತಿ ಸೌಜನ್ಯ ಶೆಟ್ಟಿ, ಡಾ. ದೀಪಕ್ ಮಲ್ಯ, ಡಾ. ಮಾನಸ ಈ. ಆರ್ ಇವರಿಂದ ಆತ್ಮಹತ್ಯೆ ತಡೆಯ ಕುರಿತಾದಂತಹ ವಿವಿಧ ಅವಧಿಗಳು ನೀಡಲ್ಪಟ್ಟವು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ಜಿ ಶಂಕರ್ ಗೌರ್ಮೆಂಟ್ ಫಸ್ಟ್ ಗ್ರೇಡ್ ವುಮೆನ್ಸ್ ಕಾಲೇಜ್ ಅಜ್ಜರ ಕಾಡು, ಎಸ್ ಆರ್ ಎಸ್ ಎಮ್ ಎಸ್ ಗೌರ್ಮೆಂಟ್ ಫಸ್ಟ್ ಗ್ರೇಡ್ ಕಾಲೇಜ್ ಬಾರ್ಕೂರು, ಆಳ್ವಾಸ್ ಕಾಲೇಜ್ ಮೂಡುಬಿದರೆ ಇಲ್ಲಿನ ಸಮಾಜ ಕಾರ್ಯ ವಿಭಾಗದ ಸ್ನಾತಕೋತ್ತರ ಪದವಿಯ 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರವು ಸದುದ್ದೇಶದೊಂದಿಗೆ ಸಂಪನ್ನವಾಯಿತು.

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ರೇಡಿಯೋ ಮಣಿಪಾಲ್ ಇವರು ಜಂಟಿಯಾಗಿ ಆಯೋಜಿಸುತ್ತಿರುವ ಮನದ ಮಾತು (ಮಾನಸಿಕ ಆರೋಗ್ಯ ಕುರಿತು...
09/09/2025

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ರೇಡಿಯೋ ಮಣಿಪಾಲ್ ಇವರು ಜಂಟಿಯಾಗಿ ಆಯೋಜಿಸುತ್ತಿರುವ ಮನದ ಮಾತು (ಮಾನಸಿಕ ಆರೋಗ್ಯ ಕುರಿತು ಬಾನುಲಿ ಸರಣಿ ಕಾರ್ಯಕ್ರಮ) ಪ್ರತಿ ಶುಕ್ರವಾರ ಸಂಜೆ 5 ಗಂಟೆಗೆ ಮತ್ತು ಮರು ಪ್ರಸಾರ ಪ್ರತಿ ಶನಿವಾರ ಮಧ್ಯಾಹ್ನ 1 ಗಂಟೆಗೆ ರೇಡಿಯೊ ಮಣಿಪಾಲ ಕಂಪನಾಂಕ 90.4 MHz ದಲ್ಲಿ ಪ್ರಸಾರ ವಾಗುತ್ತಿದೆ.
ಸಂಚಿಕೆ 72ರ (ದಿನಾಂಕ 12-09-2025) ಶ್ರೀಮತಿ ಶ್ವೇತಾ ನಾಯಕ್ (ಪರಿಹಾರ ಬೋಧಕರು, ಮಕ್ಕಳ ಮಾರ್ಗದರ್ಶನ ಕೇಂದ್ರ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಇವರು “ಏಕಾಗ್ರತೆಯ ಕೊರತೆ” ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಆಸಕ್ತರು ಕಂಪನಾಂಕ 90.4MHz ದಲ್ಲಿ ಆಲಿಸಬಹುದು.
ಮೊಬೈಲ್ ಆಪ್ ಗಳಲ್ಲಿ ಸಹ ಸಿಗುತ್ತದೆ. ಲಿಂಕ್ https://play.google.com/store/apps/details?id=com.atc.radiomanipal

ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ...
08/09/2025

ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ
ಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ 8:00 ರ ವರೆಗೆ “ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ” ದ ಕುರಿತು “ಉಚಿತ ನೇರ ಪೋನ್ ಇನ್ ಕಾರ್ಯಕ್ರಮ” ನಡೆಯುತ್ತಿದೆ. ದಿನಾಂಕ 11-09-2025 ಸಂಚಿಕೆ 86ರ ಸಂಪನ್ಮೂಲ ವ್ಯಕ್ತಿಯಾಗಿ ʻಕು. ರಕ್ಷಿತಾ ಎಮ್. (ಆಪ್ತಸಮಾಲೋಚಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಇವರು " ಮದ್ಯವ್ಯಸನದಿಂದಾಗುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹೀಗೆ ಭಾಗವಹಿಸಿ.
1. ನಿಮ್ಮ ಯಾವುದೇ ಪೋನ್ ನಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ 01725100960 ನಂಬರ್ ಗೆ ಕರೆ ಮಾಡಿ ಬಳಿಕ 7814434 # ನಂಬರ್ ಅನ್ನು ಒತ್ತಿ.
2. ⁠ಈ ಕರೆಗೆ ಯಾವುದೇ ನೆಟ್ವರ್ಕ್ ನಿಂದಲೂ ಉಚಿತವಾಗಿ, ಯಾವುದೇ ಚಾರ್ಜಸ್ ಇಲ್ಲದೆಯೇ ಸಂಪರ್ಕಿಸಬಹುದು.
ನೀವೂ ಭಾಗವಹಿಸಿ, ಇತರಿಗೂ ತಿಳಿಸಿ.
ಧನ್ಯವಾದಗಳು🙏🏼

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ,...
08/09/2025

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರತಿ ಗುರುವಾರ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯುತ್ತಿರುವ ಉಚಿತ ನೇರ ಫೋನ್ ಇನ್ ಕಾರ್ಯಕ್ರಮದ ಧ್ವನಿ ಮುದ್ರಿಕೆ.
ದಿನಾಂಕ: 04-09-2025
ಸಂಚಿಕೆ - 85
ವಿಷಯ: “ಮದ್ಯಪಾನ ಮತ್ತು ಆರೋಗ್ಯ : ನೀವು ತಿಳಿಯಬೇಕಾದ ವಿಷಯಗಳು”
ಸಂಪನ್ಮೂಲ ವ್ಯಕ್ತಿಗಳು : ಡಾ. ಕಾವ್ಯ ಟಿ. ವೈದ್ಯಾಧಿಕಾರಿಗಳು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪ....

ಆತ್ಮಹತ್ಯೆಗಳನ್ನು ತಡೆಯಬಹುದು - ಲೇ. ಡಾ. ಪಿ. ವಿ. ಭಂಡಾರಿ ಕೃಪೆ: ಟೀಚರ್ ಪತ್ರಿಕೆ‌, ಸೆಪ್ಟೆಂಬರ್
03/09/2025

ಆತ್ಮಹತ್ಯೆಗಳನ್ನು ತಡೆಯಬಹುದು - ಲೇ. ಡಾ. ಪಿ. ವಿ. ಭಂಡಾರಿ ಕೃಪೆ: ಟೀಚರ್ ಪತ್ರಿಕೆ‌, ಸೆಪ್ಟೆಂಬರ್

Job openings at Dr. A. V. Baliga Memorial Hospital
03/09/2025

Job openings at Dr. A. V. Baliga Memorial Hospital

ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಇವರು ಜಂಟಿಯಾಗಿ ಒನ್ ಗುಡ್ ಸ್ಟೆಪ್ ಸಹಯೋಗದೊಂದಿಗೆ ಪ್ರಾ...
02/09/2025

ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಇವರು ಜಂಟಿಯಾಗಿ ಒನ್ ಗುಡ್ ಸ್ಟೆಪ್ ಸಹಯೋಗದೊಂದಿಗೆ ಪ್ರಾರಂಭಿಸಿರುವ ನವಜೀವನ ಲೇ ಕೌನ್ಸಿಲರ್ಗಳ ತರಬೇತಿ ಕಾರ್ಯಾಗಾರ ಕೋರ್ಸಿನ 6 ಬ್ಯಾಚ್ ಗಳು ಈಗಾಗಲೇ ಮುಗಿದಿದ್ದು. 7 ನೇ ಬ್ಯಾಚ್ ಇದೇ 2025 ರ ಅಕ್ಟೋಬರ್ 5 ರಿಂದ ಪ್ರಾರಂಭವಾಗುತ್ತಿದೆ.
7 ನೇ ಬ್ಯಾಚ್ ನ ನೋಂದಾವಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಕೇವಲ 25 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ಆಗಿರುತ್ತದೆ.
ಕೋರ್ಸ್ ಶುಲ್ಕ ಕೇವಲ 2,500 ರೂಪಾಯಿಗಳಾಗಿದ್ದು
ಕೋರ್ಸ್ ಅವಧಿ : 12 ವಾರಗಳು, (ಪ್ರತಿ ಭಾನುವಾರು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30)
ಸ್ಥಳ: ಮಾನಸ ಕ್ಲಿನಿಕ್, ಮೊದಲನೇ ಮಹಡಿ, ಸದಾನಂದ ಟವರ್, ಸಿಟಿ ಬಸ್ಟ್ಯಾಂಡ್ ಹತ್ತಿರ, ಉಡುಪಿ.
(ಮೊದಲ ಮತ್ತು ಕೊನೆಯ ತರಗತಿಗಳು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯಲ್ಲಿ ನಡೆಯುತ್ತದೆ.)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : ಶ್ರೀಮತಿ ಸೌಜನ್ಯ ಶೆಟ್ಟಿ - 9538886291 ಶ್ರೀಮತಿ ಅಮೀತಾ ಪೈ 9986411788

Kamal A. Baliga Charitable Trust
and
Dr. A. V. Baliga Memorial Hospital, in collaboration with One Good Step,
have successfully completed Six batches of the Navajeevana Lay Counsellor Training Workshop Course.

The 7th batch is scheduled to begin on 5th October, 2025.
Registrations for the 7th batch are now open.

Only 25 participants will be admitted.

Course Fee: Only ₹2,500

Course Duration: 12 weeks. (EVERY SUNDAY 09:30 AM TO 1:30 PM)

Venue: Manasa Clinic, First Floor, Sadananda Tower, Near City Bus Stand, Udupi
(The first and last sessions will be held at Dr. A. V. Baliga Memorial Hospital, Doddanagudde)

For more information, contact:
Mrs. Soujanya Shetty 9538886291 Mrs. Amitha Pai 9986411788

Address

6th Main, V. M. Nagar, Doddanagudde
Udupi
576102

Alerts

Be the first to know and let us send you an email when Dr. A V Baliga Memorial Hospital posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category