Dr. A V Baliga Memorial Hospital

Dr. A V Baliga Memorial Hospital Dr. A. V. Baliga Memorial Hospital at Doddanagudde,was founded in 2003 as a general hospital .

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ,...
10/10/2025

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರತಿ ಗುರುವಾರ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯುತ್ತಿರುವ ಉಚಿತ ನೇರ ಫೋನ್ ಇನ್ ಕಾರ್ಯಕ್ರಮದ ಧ್ವನಿ ಮುದ್ರಿಕೆ.
ಸಂಚಿಕೆ –90
ದಿನಾಂಕ: 09-10-2025
ವಿಷಯ: “ಕುಡಿತ ಮರುಕಳಿಸದಂತೆ ತಡೆಗಟ್ಟುವ ಮಾರ್ಗೋಪಾಯಗಳು”
ಸಂಪನ್ಮೂಲ ವ್ಯಕ್ತಿಗಳು : ಶ್ರೀಮತಿ ಸೌಮ್ಯ, ಆಪ್ತಸಮಾಲೋಚಕರು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ

“ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು” ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಮತ್ತು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪ....

ದಿನಾಂಕ 10.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ  ಪ್ರಯುಕ್ತ  ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ...
10/10/2025

ದಿನಾಂಕ 10.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಸರಣಿ ಕಾರ್ಯಕ್ರಮದ ಭಾಗವಾಗಿ ನರ್ಸಿಂಗ್ ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಸ್ವಪ್ನ ಸುರೇಶ್ (ಜಿಲ್ಲಾ ಗವರ್ನರ್, ಲಯನ್ಸ್ dist. 317C), ಮತ್ತು ಶ್ರೀ ಮಟಪಾಡಿ ಪ್ರಭಾತ್ ಕಲ್ಕೂರ ,ವಿಪತ್ತು ನಿರ್ವಹಣಾ ಮತ್ತು ತುರ್ತು ಸೇವಾ ತಜ್ಞರು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಡಾ. ನಿಶಾಂತ್ ಭಟ್ (ಅಧ್ಯಕ್ಷರು,ಲಯನ್ಸ್ ಕ್ಲಬ್ ,ಮಣಿಪಾಲ),MJF ಲಯನ್ ಜಯಕರ ಶೆಟ್ಟಿ ಇಂದ್ರಾಳಿ (ಗ್ಲೋಬಲ್ ಸರ್ವೀಸ್ ಟೀಮ್ ಎಂ ಡಿ 317). ಲಯನ್ ಕೇಶವ್ ಅಮೀನ್ (ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್), ಲಯನ್ ಡಾ. ಎಚ್ ಗಣೇಶ್ ಪೈ (ಸಂಯೋಜಕರು ಮೆಂಟಲ್ ಹೆಲ್ತ್ ಅಂಡ್ ವೆಲ್ ಬೀಯಿಂಗ್ ವೀಕ್)ಡಾ ಅಶೋಕ್ ಕುಮಾರ್ ಅಧ್ಯಕ್ಷರು ಐ ಎಂ ಎ ಉಡುಪಿ ಕರಾವಳಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ (ನಿರ್ದೇಶಕರು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ) ಇವರು ವಹಿಸಿದ್ದರು, ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಡಾ. ಮಾನಸ್ ಈ.ಆರ್, ಮನೋವೈದ್ಯರು,ಕಾರ್ಯದರ್ಶಿಗಳು. IMA ಉಡುಪಿ- ಕರಾವಳಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು ,ಆಪ್ತಸಮಲೋಚಕರಾದ ಶ್ರೀ ವಿಶ್ವೇಶ್ವರ ಹೆಗಡೆ ಇವರು ಸರ್ವರನ್ನು ಸ್ವಾಗತಿಸಿದರು,ಆಪ್ತಸಮಲೋಚಕರಾದ ಶ್ರೀಮತಿ ಪದ್ಮ ರಾಘವೇಂದ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಆಪ್ತಸಮಲೋಚಕರಾದ ಶ್ರೀಮತಿ ದೀಪಶ್ರೀ ವಂದಿಸಿದರು,
ಸಭಾ ಕಾರ್ಯಕ್ರಮದ ನಂತರ ಮೊದಲ ಅವಧಿಯನ್ನು ಶ್ರೀಯುತ ಮಟಪಾಡಿ ಪ್ರಭಾತ್ ಕಲ್ಕೂರ ಇವರು ವಿಪತ್ತು ನಿರ್ವಹಣಾ ಮತ್ತು ಮಾನಸಿಕ ಆರೋಗ್ಯದ ಕುರಿತಾಗಿ ಮಾತಾಡಿದರು,ಎರಡನೆಯ ಅವಧಿಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ ಪಿವಿ ಭಂಡಾರಿ ಇವರು ಆಘಾತಕಾರಿ ಘಟನೆಗಳ ಮತ್ತು ಒತ್ತಡ ಕಾಯಿಲೆಗಳು ಹಾಗೂ ಪರಿಹಾರದ ಕುರಿತಾಗಿ ಮಾತನಾಡಿದರು,ಮೂರನೆಯ ಅವಧಿಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ತೆಗೆದುಕೊಂಡು ಆತ್ಮಹತ್ಯೆ ಹಾಗೂ ಅದರ ತಡೆಗಟ್ಟುವಿಕೆ ಕುರಿತಾಗಿ ವಿವರಿಸಿದರು.ಹಾಗೂ ನಾಲ್ಕನೆಯ ಅವಧಿಯಲ್ಲಿ ಮಾನಸಿಕ ರೋಗದ ತುರ್ತು ಚಿಕಿತ್ಸೆ ಕುರಿತಾಗಿ ಮನಶಾಸ್ತ್ರಜ್ಞರಾದ ಶ್ರೀ ನಾಗರಾಜ ಮೂರ್ತಿ ಇವರು ಮಾಹಿತಿ ನೀಡಿದರು.ಕಾರ್ಯಕ್ರಮದ ಸೌಖ್ಯ ಕಾಲೇಜ್ ಆಫ್ ನರ್ಸಿಂಗ್, ಕೆನರಾ ಕಾಲೇಜ್ ಆಫ್ ನರ್ಸಿಂಗ್ ಮತ್ತು ರುಕ್ಮಿನಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಸರಕಾರಿ ಸಮಾಜ ಕಾರ್ಯ ಇಲ್ಲಿನ 135 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದರು.

07/10/2025
ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ...
07/10/2025

ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ
ಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ 8:00 ರ ವರೆಗೆ “ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ” ದ ಕುರಿತು “ಉಚಿತ ನೇರ ಪೋನ್ ಇನ್ ಕಾರ್ಯಕ್ರಮ” ನಡೆಯುತ್ತಿದೆ. ದಿನಾಂಕ 09-10-2025 ಸಂಚಿಕೆ 90ರ ಸಂಪನ್ಮೂಲ ವ್ಯಕ್ತಿಯಾಗಿ ʻಶ್ರೀಮತಿ ಸೌಮ್ಯ (ಆಪ್ತಸಮಾಲೋಚಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಇವರು " ಕುಡಿತ ಮರುಕಳಿಸದಂತೆ ತಡೆಗಟ್ಟುವ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹೀಗೆ ಭಾಗವಹಿಸಿ.
1. ನಿಮ್ಮ ಯಾವುದೇ ಪೋನ್ ನಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ 01725100960 ನಂಬರ್ ಗೆ ಕರೆ ಮಾಡಿ ಬಳಿಕ 7814434 # ನಂಬರ್ ಅನ್ನು ಒತ್ತಿ.
2. ⁠ಈ ಕರೆಗೆ ಯಾವುದೇ ನೆಟ್ವರ್ಕ್ ನಿಂದಲೂ ಉಚಿತವಾಗಿ, ಯಾವುದೇ ಚಾರ್ಜಸ್ ಇಲ್ಲದೆಯೇ ಸಂಪರ್ಕಿಸಬಹುದು.
ನೀವೂ ಭಾಗವಹಿಸಿ, ಇತರಿಗೂ ತಿಳಿಸಿ.
ಧನ್ಯವಾದಗಳು

ದಿನಾಂಕ 7.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ...
07/10/2025

ದಿನಾಂಕ 7.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಸರಣಿ ಕಾರ್ಯಕ್ರಮದ ಭಾಗವಾಗಿ ನರ್ಸಿಂಗ್ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ನಿಶಾಂತ್ ಭಟ್ ಅಧ್ಯಕ್ಷರು ಲಯನ್ಸ್ ಮಣಿಪಾಲ, ಲಯನ್ ಡಾ. ಎಚ್. ಗಣೇಶ್ ಪೈ , ಸಂಯೋಜಕರು ವರ್ಲ್ಡ್ ಮೆಂಟಲ್ ಹೆಲ್ತ್ ಅವೇರ್ನೆಸ್ ಅಂಡ್ ವಿಲ್ ಬಿಯಿಂಗ್ ವೀಕ್. ಡಾ. ವಿರೂಪಾಕ್ಷ ದೇವರ ಮನೋವೈದ್ಯರು, ಡಾ. ಮಾನಸ್ ಈ. ಆರ್. ಮನೋವೈದ್ಯರು,ಕಾರ್ಯದರ್ಶಿಗಳು. IMA ಉಡುಪಿ- ಕರಾವಳಿ, ಶ್ರೀಮತಿ ಸೌಜನ್ ಶೆಟ್ಟಿ ಆಡಳಿತಾಧಿಕಾರಿಗಳು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ. ಇವರುಗಳು ಭಾಗವಹಿಸಿದ್ದರು. ದೀಪ ಪ್ರಜ್ವಲಸಿ ಮಾತನಾಡಿದ ಡಾ ನಿಶಾಂತ್ ಭಟ್ ಇವರು ಕಾರ್ಯಕ್ರಮಕ್ಕೆ ಶುಭಕೋರಿದರು, ನಂತರ ಮಾತನಾಡಿದ ಲಯನ್. ಡಾ. ಹೆಚ್. ಗಣೇಶ್ ಪೈ ಅವರು ಕಾರ್ಯಕ್ರಮದ ಸದುದ್ದೇಶ ತಿಳಿಸಿದರು. ತದನಂತರ ಮಾತನಾಡಿದ ಡಾ. ವಿರೂಪಾಕ್ಷ ದೇವರಮನೆ ಇವರು ಮಾತನಾಡಿ ಸಮಾಜದಲ್ಲಿ ಶುಶ್ರೂಷಕರೇ ಪಾತ್ರವನ್ನು ತಿಳಿಸಿದರು. ಕಿರು ಉದ್ಘಾಟನೆಯ ನಂತರ ಮೂರು ಅವಧಿಗಳ ಕಾರ್ಯಾಗಾರ ನೆರವೇರಿತು. ಮೊದಲ ಅವಧಿಯಲ್ಲಿ ಮನೋರೋಗದ ಕುರಿತಾದ ಅಪನಂಬಿಕೆಗಳು ಎಂಬ ವಿಷಯದ ಮೇಲೆ ಶ್ರೀ ವಿಶ್ವೇಶ್ವರ ಹೆಗಡೆ ಇವರು ಮಾಹಿತಿಗಳನ್ನು ನೀಡಿದರು. ಎರಡನೆಯ ಅವಧಿಯಲ್ಲಿ ಮಾನಸಿಕ ರೋಗದ ತುರ್ತು ಚಿಕಿತ್ಸೆ ಕುರಿತಾಗಿ ಶ್ರೀಮತಿ ದೀಪಶ್ರೀ ಇವರು ಮಾಹಿತಿ ನೀಡಿದರು. ಮೂರನೆಯ ಅವಧಿಯನ್ನು ಡಾ. ಎವಿ ಬಾಳಿಗಾ ಸ್ಮಾರಕ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಸುನಿಲ್ ಕುಮಾರ್ ಜಿ ಅವರು ತೆಗೆದುಕೊಂಡು ಮಧ್ಯ ಹಾಗೂ ಮಾದಕ ವ್ಯಸನಗಳ ಕುರಿತಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜ್ ಕಾರ್ಕಳ, ಸರ್ಕಾರಿ ನರ್ಸಿಂಗ್ ಕಾಲೇಜ್ ಕಾರವಾರ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನವಜೀವನ ಲೇ  ಕೌನ್ಸಿಲರ್ ನ 7ನೇ ತರಬೇತಿ ಕಾರ್ಯಾಗಾರದ   ಉದ್ಘಾಟನೆ 05-10-2025ದಿನಾಂಕ 5/10/2025 ಅದಿತ್ಯವಾರದಂದು  ಡಾ. ಎ. ವಿ. ಬಾಳಿಗ ಸ್ಮಾರ...
06/10/2025

ನವಜೀವನ ಲೇ ಕೌನ್ಸಿಲರ್ ನ 7ನೇ ತರಬೇತಿ ಕಾರ್ಯಾಗಾರದ ಉದ್ಘಾಟನೆ 05-10-2025
ದಿನಾಂಕ 5/10/2025 ಅದಿತ್ಯವಾರದಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್ ನ 7ನೇ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ಎನ್ ವಿ ಕಾಮತ್ , ಲೇ ಪರ್ಸನ್,ಕೊಲಂನಿಸ್ಟ್, ಕೌನ್ಸಿಲರ್ ರಿಟೈರ್ಡ್ ಸೀನಿಯರ್ ಡಿವಿಷನಲ್ ಆಫೀಸರ್, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ ವಿ ಭಂಡಾರಿ, ವೈದ್ಯಕೀಯ ನಿರ್ದೇಶಕರು, ಡಾ. ಎ ವಿ ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು,ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ ದೀಪಕ್ ಮಲ್ಯ ಇವರು ಉಪಸ್ಥಿತರಿದ್ದರು,ನವಜೀವನ ಲೇ ಕೌನ್ಸಿಲರ್ ನ ತರಬೇತಿ ಕಾರ್ಯಾಗಾರದ ಕೋರ್ಡಿನೇಟರ್ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು, ಶ್ರೀಮತಿ ನಾಗವೇಣಿ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು,ಆಪ್ತ ಸಮಾಲೋಚಕರಾದ ಶ್ರೀಮತಿ ದೀಪಶ್ರೀ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಸ್ಪತ್ರೆಯ ಸ್ವಾಗತಗಾರರಾದ ಶ್ರೀ ಐ. ಕೆ. ಅನಿಲ್ ಇವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ತರಬೇತಿಯ ಮೊದಲ ತರಗತಿಯು ನಡೆಯಿತು, ಮಾನಸಿಕ ಕಾಯಿಲೆಗಳ ಕುರಿತಾದ 12 ವಾರಗಳ ಈ ತರಬೇತಿಯ ಪ್ರಯೋಜನವನ್ನು 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ.

ದಿನಾಂಕ 4.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ...
04/10/2025

ದಿನಾಂಕ 4.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಭಯ ಪುನರ್ವಸತಿ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬೆಳಿಗ್ಗೆ 10 ಗಂಟೆಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಒಂಬತ್ತು ದಿನಗಳು ನಿರಂತರವಾಗಿ ನಡೆಯುವ ಈ ಸರಣಿ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಸ್ವಪ್ನ ಸುರೇಶ್ (ಜಿಲ್ಲಾ ಗವರ್ನರ್, ಲಯನ್ಸ್ dist. 317C), ಅಧ್ಯಕ್ಷರಾಗಿ ಡಾ. ನಿಶಾಂತ್ ಭಟ್ (ಅಧ್ಯಕ್ಷರು,ಲಯನ್ಸ್ ಕ್ಲಬ್ ,ಮಣಿಪಾಲ) ಮುಖ್ಯ ಅತಿಥಿಗಳಾಗಿ ಡಾ. ಅನಿಲ್ ಕುಮಾರ್ ಎಂ ಎನ್ (ಅಧ್ಯಕ್ಷರು, ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್), ಡಾ. ಪಿ. ವಿ. ಭಂಡಾರಿ (ನಿರ್ದೇಶಕರು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ) , ಲಯನ್ ಕೇಶವ್ ಅಮೀನ್ (ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್), ಲಯನ್ ಡಾ. ಎಚ್ ಗಣೇಶ್ ಪೈ (ಸಂಯೋಜಕರು ಮೆಂಟಲ್ ಹೆಲ್ತ್ ಅಂಡ್ ವೆಲ್ ಬೀಯಿಂಗ್ ವೀಕ್), ಲಯನ್ ಸುದರ್ಶನ್ ನಾಯಕ್ (ಪ್ರಾಂತೀಯ ಮುಖ್ಯಸ್ಥರು) ಇವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ಅಭಯ ಪುನರ್ವಸತಿ ಕೇಂದ್ರದ ನಿವಾಸಿಗಳಾದ ನಾಗವೇಣಿ ಮತ್ತು ಶಶಿಪ್ರಭಾ ಇವರು ನಡೆಸಿಕೊಟ್ಟರು. ಈ ಒಂಬತ್ತು ದಿನದ ಕಾರ್ಯಕ್ರಮಗಳನ್ನ ವಿವರಿಸುತ್ತಾ ಸಭೆಯಲ್ಲಿ ಇರುವಂತಹ ಗಣ್ಯರನ್ನು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾಗಿರುವಂತಹ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಸ್ವಾಗತಿಸಿದರು. ದೀಪ ಪ್ರಜ್ವಲನೆಯ ಮುಖಾಂತರ ಕಾರ್ಯಕ್ರಮದ ವಿದ್ಯುಕ್ತ ಆರಂಭವಾಯಿತು. ತದನಂತರ ಉದ್ಘಾಟಕರ ಮಾತುಗಳನ್ನಾಡಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ರೀಮತಿ ಸ್ವಪ್ನ ಸುರೇಶ್ ಅವರು ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾದ ಡಾ. ಅನಿಲ್ ಕುಮಾರ್ ಎಂ ಎನ್ ಇವರು ಮಾತನಾಡಿ ಈ ಕಾರ್ಯಕ್ರಮದ ಪ್ರಸ್ತುತತೆಯ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿಗಳಲ್ಲಿ ಓದುವರಾದ ಕಾರ್ಯಕ್ರಮದ ಮುಖ್ಯ ರೂವಾರಿಗಳಲ್ಲಿ ಒಬ್ಬರಾದ ಡಾ. ಟಿವಿ ಭಂಡಾರಿ ಇವರು ಮಾತನಾಡಿ ಒಂಬತ್ತು ದಿನಗಳ ಕಾರ್ಯಕ್ರಮದ ರೂಪರೇಷೆ ಸಂಯೋಜನೆಗೊಂಡ ಬಗೆಯ ಬಗ್ಗೆ ತಿಳಿಸಿದರು. ತದನಂತರ ಮತ್ತೂರು ಮುಖ್ಯ ಅತಿಥಿಗಳು ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಲಯನ್ ಡಾಕ್ಟರ್ ಎಚ್ ಗಣೇಶ್ ಪೈವರು ಮಾತನಾಡಿ ಕಾರ್ಯಕ್ರಮದ ಆ ಯೋಜನೆಯನ್ನು ಶ್ಲಾಘಿಸುತ್ತಾ ಪ್ರತೀ ವರ್ಷವೂ ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸುವುದಾಗಿ ಘೋಷಿಸಿದರು. ಲಯನ್ ಕೇಶವ್ ಅಮೀನ್ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೂ ಬಂಧು ದೀರ್ಘಕಾಲೀನ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರದ ಸದಸ್ಯರುಗಳಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ನಿಶಾಂತ ಭಟ್ ಇವರು ಕಾರ್ಯಕ್ರಮದ ಧ್ಯೇಯವನ್ನು ತಿಳಿಸಿ ಶುಭಕೋರಿದರು. ಶ್ರೀಮತಿ ಪದ್ಮ ರಾಘವೇಂದ್ರ ಇವರು ಎಲ್ಲಾ ಗಣ್ಯರಿಗೂ ವಂದನೆಗಳನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಅಭಯ ಪುನರ್ವಸತಿ ಕೇಂದ್ರ ಹಾಗೂ ಬಂಧು ದೀರ್ಘಕಾಲಿನ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ಇವರ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊನೆಯಲ್ಲಿ ಲಘು ಉಪಹಾರದೊಂದಿಗೆ ಸಂಪೂರ್ಣ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Address

6th Main, V. M. Nagar, Doddanagudde
Udupi
576102

Alerts

Be the first to know and let us send you an email when Dr. A V Baliga Memorial Hospital posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category